~
ಕುಮಾರವ್ಯಾಸ ಭಾರತ
ಕುಮಾರವ್ಯಾಸ ಭಾರತ ಒಂದು ಸಮಗ್ರ ಕನ್ನಡ ಪುರಾಣ ಕಾವ್ಯ. ಇದರಲ್ಲಿ ಎಲ್ಲ ಸಂದರ್ಭಗಳನ್ನು ರಸವತ್ತಾಗಿ ವರ್ಣಿಸಿ ಪ್ರತಿಯೊಂದು ಘಟನಾವಳಿಗಳ ಹಿನ್ನೆಲೆ ಯನ್ನು ಅದರ ಕಾರಣ ಸಮೇತ ವರ್ಣಿಸಿದ್ದಾನೆ ಕವಿ. ಆದರೂ ಕರ್ನಾಟಕದಲ್ಲಿ ಕುಮಾರವ್ಯಾಸ ಭಾರತ ಕೇವಲ ಗಮಕವಾಚನಕಾರರಿಗೆ ಮಾತ್ರ ಸೀಮಿತವಾಗಿದೆಯೇನೋ ಅನ್ನಿಸುತ್ತದೆ. ಅಲ್ಲೊಬ್ಬರು ಇಲ್ಲೊಬ್ಬರು (ಶತಾವಧಾನಿ ಗಣೇಶ್, ಪಾವಗಡ ಪ್ರಕಾಶರಾವ್) ಹೆಚ್ಚು ಕನ್ನಡ ಪಾಂಡಿತ್ಯವಿದ್ದವರು ಬಿಟ್ಟರೆ ಇತರ ವಿಧ್ವತ್ ಜನರ ನಡುವೆ ಇದು ಅಷ್ಟೊಂದು ಪ್ರಚಾರ ಪಡೆದುಕೊಂಡಿಲ್ಲ. ಪ್ರೊ.ಕೆ.ಎಸ್.ನಾರಾಯಣಾಚಾರ್ಯರು ಬರೆದಿರುವ ’ಆ ಹದಿನೆಂಟು ದಿನಗಳು’ ಸಹ ಮಹಾಭಾರತವನ್ನಾದರಿಸಿದ ಕೃತಿ. ಇದು ಹಿಂದೆ ತರಂಗದಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತ್ತು.
ಕನ್ನಡದಲ್ಲಿ ಮಹಾಭಾರತವನ್ನಾದರಿಸಿ ಬರೆದ ಮಹತ್ತಾದ ಕೃತಿಗಳು ಇನ್ಯಾವುವು?

- madhava_hs ರವರ ಬ್ಲಾಗ್
- Login or register to post comments
- 405 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಪ್ರತಿಕ್ರಿಯೆಗಳು
ಉ: ಕುಮಾರವ್ಯಾಸ ಭಾರತ
ಪರ್ವ
ಉ: ಕುಮಾರವ್ಯಾಸ ಭಾರತ
ಎಸ್ ಎಲ್ ಭೈರಪ್ಪನವರ ಕಾದಂಬರಿ. ತುಂಬಾ ಚೆನ್ನಾಗಿದೆ.
ಕೀರ್ತಿ ಕಿರಣ್ ಎಂ
ಉ: ಕುಮಾರವ್ಯಾಸ ಭಾರತ
ಗದಾಯುದ್ಧ/ಸಾಹಸಭೀಮವಿಜಯ
ವಿಕ್ರಮಾರ್ಜುನ ವಿಜಯ
ಉ: ಕುಮಾರವ್ಯಾಸ ಭಾರತ
ಇವು ವೀರ ಕನ್ನಡಿಗರು ಓದಬಾರದ ಕಬ್ಬಗಳು
ಉ: ಕುಮಾರವ್ಯಾಸ ಭಾರತ
ಯಾಕೆ ಓದಬಾರದು?
ಉ: ಕುಮಾರವ್ಯಾಸ ಭಾರತ
ಯಾಕೆಂದರೆ ಈ ಕಬ್ಬಗಳಲ್ಲಿ ಹೇರಳವಾದ ಕನ್ನಡದವಲ್ಲದ ಒರೆಗಳಿವೆ.
ಉ: ಕುಮಾರವ್ಯಾಸ ಭಾರತ
ಇದ್ದರೇನು?
ಉ: ಕುಮಾರವ್ಯಾಸ ಭಾರತ
ಅದ್ಯಾವ್ದೋ ಪ್ರಸಿದ್ಧ ಕನ್ನಡ ಕಾವ್ಯ ಅಂತೆ ... ಅದ್ರಲ್ಲಿನ ಕನ್ನಡ ಪ್ರತ್ಯಯ ಎಲ್ಲ ತೆಗೆದು ಹಾಕಿದರೆ .... ಉಳಿವುದೆಲ್ಲಾ ಮರಾಠೀ ಅಂತೆ !
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಕುಮಾರವ್ಯಾಸ ಭಾರತ
ವಿಕ್ರಮಾರ್ಜುನ ವಿಜಯದ ಕೆಲವು ತುಣುಕುಗಳನ್ನು ಓಎಲ್ಎನ್.ಸ್ವಾಮಿಗಳು ಇಲ್ಲಿ ಪರಿಚಯ ಮಾಡಿಸಿದ್ದರು.
ಉ: ಕುಮಾರವ್ಯಾಸ ಭಾರತ
"ದ್ರೌಪದಿಯ ಸ್ವಗತ" ಅಂತಲೋ ಏನೋ ಸುಧಾದಲ್ಲಿ ಬರ್ತಾ ಇತ್ತು.
ಉ: ಕುಮಾರವ್ಯಾಸ ಭಾರತ
ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಪ್ರಾಧ್ಯಾಪಕರಾಗಿದ್ದ ಡಾ. ಎ. ಆರ್. ಕೃಷ್ಣಶಾಸ್ತ್ರಿಯವರು ೧೯೫೦ನೇ ಇಸವಿಯಲ್ಲಿ ತಮ್ಮ "ವಚನ ಭಾರತ" ಕೃತಿಯನ್ನು ಪ್ರಕಟಿಸಿದರು.
ಪ್ರಕಾಶಕರು: ಗೀತಾ ಬುಕ್ಹೌಸ್, ಮೈಸೂರು.
ಮೊದಲ ಮುದ್ರಣ: ೧೯೫೦
ಎಂಟನೆಯ ಮುದ್ರಣ: ೧೯೯೩
ಬೆಲೆ ರೂ: ೧೨೫.೦೦
೧೯೫೦ರ ದಶಕದಲ್ಲಿ ನಾವುಗಳು ಎಂಟನೆಯ ತರಗತಿಯ ಪಠ್ಯಪುಸ್ತಕವಾಗಿ "ವಚನಭಾರತ"ದ ಒಂದು ಅಧ್ಯಾಯ "ಅರಣ್ಯ ಪರ್ವ" ಓದಿದ್ದೆವು.
-ನವರತ್ನ ಸುಧೀರ್
ಉ: ಕುಮಾರವ್ಯಾಸ ಭಾರತ
"ವಚನ ಭಾರತ" ಗಾಂಧೀಬಜಾರ್ನ ಅಂಕಿತ ಪುಸ್ತಕದಂಗಡಿಯಲ್ಲೂ ದೊರಕುತ್ತೆ. ನಾನಂತೂ ನನ್ನ ಪ್ರತಿಯನ್ನು ಕೊಂಡದ್ದು ಅಲ್ಲೇ.
-ನವರತ್ನ ಸುಧೀರ್
ಉ: ಕುಮಾರವ್ಯಾಸ ಭಾರತ
ವಚನ ಬಾರತ ತುಂಬಾ ಚನ್ನಾಗಿದೆ ಚಕ್ಕೊಟವಾಗಿದೆ..
ಮಹಾಬಾರತ ಮೊದಲು ಓದೋರಿಗೆ ಒಳ್ಳೇ ಹೊತ್ತಗೆ
ಉ: ಕುಮಾರವ್ಯಾಸ ಭಾರತ
ಮತ್ತೊಂದು ಮಹತ್ವದ ಪುಸ್ತಕ ಅಂದರೆ ಯುಗಾಂತ . ಇದು ಮೂಲ ಕನ್ನಡವಲ್ಲ , ಮರಾಠಿ ( ಮೂಲ ಲೇಖಕಿ : ಇರಾವತಿ ಕರ್ವೆ) . ಆದರೆ ಇದರ ಕನ್ನಡ ಅನುವಾದ ಬಹಳ ಹಿಂದೆ ಓದಿದ್ದೆ . ಚೆನ್ನಾಗಿದೆ.
ಭೈರಪ್ಪನವರ ಪರ್ವ ಹೊರಬಂದಾಗ ಅದು ಯುಗಾಂತದಿಂದ ಪ್ರಭಾವಿತವಾಗಿದೆ ಅಂತ ಯಾರೋ ಬರೆದಿದ್ದ ನೆನಪು. (ಹಾಗಿರಲಿಕ್ಕಿಲ್ಲ ಅಂತ ಪರ್ವ ಓದಿದ ಮೇಲೆ ಅನ್ನಿಸಿತು)
ಉ: ಕುಮಾರವ್ಯಾಸ ಭಾರತ
ತಮ್ಮ ವಚನಭಾರತಕ್ಕಾಗಿ ೧೯೫೦ರಲ್ಲಿ ಮೊದಲ ಮುದ್ರಣದ ಪೀಠಿಕೆಯಲ್ಲಿ ಕೃಷ್ಣಶಾಸ್ತ್ರಿಗಳು ಈ ಕೆಳಕಂಡ ಮಾಹಿತಿ ಕೊಟ್ಟಿದ್ದಾರೆ.
"ಮಹಾಭಾರತವು ಬಹು ದೊಡ್ಡ ಗ್ರಂಥ; ಹರಿವಂಶವೂ ಸೇರಿದರೆ ಒಂದು ಲಕ್ಷಶ್ಲೋಕಗಳಿಗಿಂತ ಹೆಚ್ಚಾಗುತ್ತದೆ......... ಸಂಸ್ಕೃತ ತಿಳಿದವರೂ ಅದನ್ನು ಆಮೂಲಾಗ್ರವಾಗಿ ಓದಿ ಜೀರ್ಣಿಸಿಕೊಳ್ಳುವುದು ಸುಲಭಸಾಧ್ಯವಲ್ಲ........ ಲೋಕೋಪಕಾರಬುಧ್ಧಿಯೂ, ಭಗವದ್ಭಕ್ತಿಯೂ, ಸರಸ್ವತೀ ಪ್ರಸಾದವೂ ಉಳ್ಳ"ಕುಮಾರವ್ಯಾಸ" ನಂಥವರು ಅದನ್ನು ಕನ್ನಡಿಸಿದರು. ನಾರಣಪ್ಪನ ಭಾರತ ಕನ್ನಡ ಸಾಹಿತ್ಯದ ಗೋಪುರಕ್ಕೆ ಇಟ್ಟಿರುವ ಬಂಗಾರದ ಕಳಶಗಳಲ್ಲಿ ಒಂದು. ಆದರೂ ಅದು ಪದ್ಯ; ಅದರ ಭಾಷೆ ನಡುಗನ್ನಡ; ಸಾಮಾನ್ಯಜನಕ್ಕೆ ಅದನ್ನು ಓದುವಷ್ಟೂ ತಾಳ್ಮೆ ಭಾಷಾಜ್ನಾನಗಳು ಇಲ್ಲ.
ಪಂಪಭಾರತವಂತೂ ಪ್ರೌಢ ಚಂಪೂಕಾವ್ಯ; ಅದನ್ನು ಓದುವುದಕ್ಕೆ ಪಾಂಡಿತ್ಯ ಬೇಕು. ಇದನ್ನು ಕಂಡು ಮುಮ್ಮಡಿ ಕೃಷ್ನರಾಜ ಒಡೆಯರವರು ಸಂಸ್ಕೃತ ಮಹಾಭಾರತವನ್ನು ಅಕ್ಷರಶಃ ಭಾಷಾಂತರ ಮಾಡಿಸಿದರು*. ಆದರೆ ಅದು ಹಲವು ದೊಡ್ಡ ಸಂಪುಟಗಳಲ್ಲಿದೆ; ಆದ್ದರಿಂದ ಬೆಲೆ ಹೆಚ್ಚು; ಅವು ಎಷ್ಟೋ ವರ್ಷಗಳ ಹಿಂದೆಯೇ ಮುಗಿದು ಹೋಗಿ ಪುಸ್ತಕಭಂಡಾರಗಳಲ್ಲಿ ಅಲ್ಲೊಂದುಇಲ್ಲೊಂದು ಸಿಕ್ಕುವ ಪ್ರತಿಯೂ ತುಂಬಾ ಜೀರ್ಣವಾಗಿರುತ್ತದೆ. ಈಚೆಗೆ ದಿ. ದೇವಶಿಖಾಮಣಿ ಅಳಸಿಂಗರಾಚಾರ್ಯರು ಮಹಾಸಾಹಸ ಮಾಡಿ ಅದನ್ನು ಆಮೂಲಾಗ್ರವಾಗಿ ಭಾಷಾಂತರಿಸಿ ಪ್ರಕಟಿಸಿದರು** ಇದು ಮುಖ್ಯವಾಗಿ ದಾಕ್ಷಿಣಾತ್ಯ ವಿಸ್ತಾರ ಪಾಠವನ್ನು ಅನುಸರಿಸಿದೆ; ಏಕರೂಪವಾದ, ಸುಲಭವಾದ, ಶುಧ್ಧವಾದ, ಹೊಸಗನ್ನಡದಲ್ಲಿದೆ; ಸಚಿತ್ರವಾಗಿ ಹಿಡಿತವಾಗಿ ಇದೆ. ಆದರೂ ಹಲವು ಸಂಪುಟಗಳಲ್ಲಿರುವುದರಿಂದ, ಹೆಚ್ಚು ವಿವರಗಳನ್ನು ಅಪೇಕ್ಷಿಸದೆ ಕಥೆಯನ್ನು ಓದಿಕೂಂಡುಹೋಗಬೇಕೆನ್ನುವರಿಗೆ ಇದು ತುಂಬಾ ಭಾರವಾಗುತ್ತದೆ............................................................................................................
........................................................................................................................
......ಇನ್ನೂ ಸ್ವಲ್ಪ ವಿಸ್ತಾರವಾಗಿ, ಉಪಕಥೆ, ನೀತಿ ಧರ್ಮ ಎಲ್ಲವನ್ನೂ ಒಳಕೊಂಡು, ಸರಳವಾದ ಗದ್ಯದಲ್ಲಿ ಬರೆದ, ಒಂದು ಸಂಪುಟದಲ್ಲಿರುವ, ಜನಸಾಮಾನ್ಯಕ್ಕೆ ನಿಲುಕುವಂಥ ಒಂದು ಕನ್ನಡ ಭಾರತ ಬೇಕಾಗಿತ್ತು; ಈ ಅಭಿಪ್ರಾಯ ನಾನು ವಿದ್ಯಾರ್ಥಿಯಾಗಿದ್ದಾಗಲೇ ಇತ್ತು; ಉಪಾಧ್ಯಾಯನಾಗಿದ್ದಾಗ ಅದರ ಅವಶ್ಯಕತೆ ಆಗಾಗ್ಗೆ ತೋರುತ್ತಲೇ ಇತ್ತು. ಆದ್ದರಿಂದ ಸ್ಪಷ್ಟವಾದ ಸೂಚನೆ ಬಂದ ಕೂಡಲೆ ಅದನ್ನು ಮನಸಾರೆ ಕೈಗೊಂಡೆ..."
___________________________________________________________________
* - "ಕೃಷ್ನರಾಜ ವಾಣೀವಿಲಾಸವೆಂಬ ಮಹಾಭಾರತದ ಕನ್ನಡ ಟೀಕು"- ರಚನೆ ಕ್ರಿ. ಶ. ೧೮೨೦
** - " ಶ್ರೀ ಮಹಾಭಾರತವು -ಕರ್ಣಾಟಕ ವಚನವು" -ರಚನೆ ೧೯೩೨-೩೩
__________________________________________________________________
ನವರತ್ನಸುಧೀರ್
ಉ: ಕುಮಾರವ್ಯಾಸ ಭಾರತ
ಅರರೆ!!! ಒಂದು ಬಿಟ್ಟೇಬಿಟ್ವಲ್ಲ, ಜೈಮಿನಿ ಭಾರತ !!! ಇದು ಗಮಕಿಗಳ ನಡುವೆ ಸಿಕ್ಕಾಪಟ್ಟೆ ಹೆಸರುವಾಸಿಯಾಗಿತ್ತಂತೆ
ಉ: ಕುಮಾರವ್ಯಾಸ ಭಾರತ
ನಿಮ್ಮ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು.
ವಚನ ಭಾರತ ವನ್ನು ಒಂದಷ್ಟು ಭಾಗ ಪಠಿಸಿದ್ದೆ.. ಚೆನ್ನಾಗಿದೆ.