ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯ |
ತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ ||
ಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆ |
ಕೊನೆಯೆಲ್ಲಿ? ಚಿಂತಿಸೆಲೊ -- ಮಂಕುತಿಮ್ಮ ||

— ಡಿ. ವಿ. ಜಿ.

ಸಂಪದ ಆರ್ಕೈವಿನಿಂದ

ಲೇಖಕರು

Madhu Appekere's picture

ಪೂರ್ಣ ಹೆಸರು
ಮಧು ಹೆಗಡೆ ಅಪ್ಪೆಕೆರೆ

ಪರಿಚಯ

ಬದುಕು ಮತ್ತು ಬರೆಹ ಎರಡರ ಬಗ್ಗೆ ಪ್ರೀತಿ ಇದೆ.ಸಂಗೀತ ಸಾಹಿತ್ಯದ ಬಗ್ಗೆ ಆಸಕ್ತಿ. ಮಕ್ಕಳ ಕನಸುಗಳಿಗೆ ಸ್ಫೂರ್ತಿ ತುಂಬುವದು

ಅಪ್ಪಾ....ದಾರಿ ಬಿಡು

 

    ಅಪ್ಪಾ..ಈ ಕತ್ತಲಿನೊಳಗೆ

    ನನ್ನನ್ನೇಕೆ  ಬಂಧಿಸಿಟ್ಟೆ ?

 

     ಭವಿಷ್ಯದ ಬೆಳಕೆಡೆಗೆ

     ಹೆಜ್ಜೆಯಿಡುವ ಕನಸು

     ಹೊಸಕಿ ಹಾಕಿ ನನ್ನ

     ಮುಗ್ಧತೆಗೆ ಕಾವಲಿನ ಬೇಲಿ

 

     ಹಿಂದಿನ  ಎಂಜಲು ಉಳಿಸಿ

     ಅಮೃತವೆಂದು ಕೈಯಲ್ಲಿ ಹಿಡಿಸಿ

     ನಿನಗಿಷ್ಟವೋ ಕಷ್ಟವೋ  ಎಂದು

     ಎಂದೂ  ಕೇಳದ  ಕಿವುಡನಾದೆಯೇಕೆ?

 

     ಈ ಕತ್ತಲಿನಲ್ಲೆ ಬೆಳಕಿದೆಯೆಂದು

     ನಂಬಿಸಿ..

     ಧರ್ಮದ ಗೋಡೆ ಕಾವಲಿಟ್ಟು

     ಸಂಪ್ರದಾಯದ ಛಾವಣಿ ಹೊದೆಸಿ ಬಿಟ್ಟೆ ಏಕೆ ?

 

      ಆದರೆ  ....ಇನ್ನು ಕಾಯುವದಿಲ್ಲ

      ನಿಮ್ಮ ನಂಬಿಕೆಯ   ಈ ಗೂಡ

      ಹರಿದೊಗೆದು  ಬೆಳಕಿಗೆ ಮೈಯೊಡ್ಡುವ

       ತವಕ !  ನನಗೆ   ದಾರಿಬಿಡು

 

 

 

Your rating: None Average: 5 (2 votes)

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಅಪ್ಪಾ....ದಾರಿ ಬಿಡು

asuhegde's picture

ಸುಳ್ಳಲ್ಲ ಮಗು ನಿನ್ನ ಮಾತು
ಅಪ್ಪಂದಿರ ಆಂತರಿಕ ಆತಂಕ
ಇಂದಿನ ಮಗುವಿಗೆ ಹೇಗೆ ಅರಿವಾಗಬೇಕು

ಮಗೂ ಸ್ವಾತಂತ್ರ್ಯ ಬೇಕು
ಸ್ವತಂತ್ರಳಿಗೂ ಬೇಲಿ ಬೇಕು
ಸ್ವಾತಂತ್ರ್ಯದ ಪರಿಧಿಯಲಿ ಅಪ್ಪನಿರಬೇಕು

ಎಲ್ಲವನೂ ಹರಿದೊಗೆದು
ಒದ್ದು ನಡೆದರೆ ಮುಂದೆ
ಸಮಾಜದ ಮುಂದೆ ಬತ್ತಲಾಗಿ ನಿಲಬೇಕು

ನಿನ್ನ ಅರಿವಿನ ಮಟ್ಟ
ನೀನರಿತದ್ದೇ ಅಲ್ಲ ಆ ಅಪ್ಪನೂ
ಅರಿಯಬೇಕು ಅರಿತಂದು ನಿನಗಾತ ದಾರಿ ಬಿಡಬೇಕು

- ಆಸು ಹೆಗ್ಡೆ

ಉ: ಅಪ್ಪಾ....ದಾರಿ ಬಿಡು

Madhu Appekere's picture

ಆಸು ಹೆಗ್ಡೆಯವರೆ
ನಿಮ್ಮ ಕವನವೂ ಇಷ್ಟವಾಯಿತು.

ಉ: ಅಪ್ಪಾ....ದಾರಿ ಬಿಡು

gopinatha's picture

ಮಧು ಅವರೇ
ಮನೋಜ್ಞ ಕವನ

ಉ: ಅಪ್ಪಾ....ದಾರಿ ಬಿಡು

Madhu Appekere's picture

ಧನ್ಯವಾದಗಳು ಗೋಪಿನಾಥಣ್ಣ.