ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › mahesha ರವರ ಬ್ಲಾಗ್

ವ್ಯಾಕರಣದಿಂದ ಬಯಸಿದ ಮುಕ್ತಿ ದೊರೆಯುವುದು

June 4, 2007 - 3:12pm — mahesha

ವ್ಯಾಕರಣದಿನ್ ಆಕಾಂಕ್ಷಿಪ ಮುಕ್ತಿಯಕ್ಕುಂ Smiling

ಶಬ್ದಮಣಿದರ್ಪಣದ ಈ ಪದ್ಯ!

ವ್ಯಾಕರಣದಿಂದೆ ಪದಮಾ
ವ್ಯಾಕರಣದ ಪದದಿನರ್ಥಮರ್ಥದೆ ತತ್ವಾ|
ಲೋಕಂ ತತ್ವಾಲೋಕದಿ
ನಾಕಾಂಕ್ಷಿಪ ಮುಕ್ತಿಯಕ್ಕುಮಿದೆ ಬುಧರ್ಗೆ ಫಲಂ||

ವ್ಯಾಕರಣದಿಂದೆ ಪದಂ, ಆ ವ್ಯಾಕರಣದದ ಪದದಿನ್ ಅರ್ಥಂ, ಅರ್ಥದೆ ತತ್ವಾಲೋಕಂ( ತತ್ವ + ಆಲೋಕಂ ) , ತತ್ವಾಲೋಕದಿನ್ ಆಕಾಂಕ್ಷಿಪ ಮುಕ್ತಿ ಅಕ್ಕುಂ ಇದೆ ಬುಧರ್ಗೆ ಫಲಂ

ವ್ಯಾಕರಣದಿಂದ ಪದಸಿದ್ಧಿಯಾಗುವುದು, ಪದಸಿದ್ಧಿಯಿಂದ ಅರ್ಥಜ್ಞಾನ ಬರುವುದು. ಅರ್ಥಜ್ಞಾನದಿಂದ ತತ್ವವಿಚಾರ ತಿಳಿಯುವುದು. ತತ್ವಜ್ಞಾನದಿಂದ ಮುಕ್ತಿ ದೊರೆತುಕೊಳ್ಳಬಹುದು. !!

ಚೆನ್ನಾಗಿ ವ್ಯಾಕರಣ ಕಲಿತವರಿಗೆ ಮುಕ್ತಿ easy ಆಗಿ ಸಿಗುತ್ತಂತೆ!! Smiling

  • ಶಬ್ದಮಣಿದರ್ಪಣ
~.~
  • mahesha ರವರ ಬ್ಲಾಗ್
  • Login or register to post comments
  • 315 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 4, 2007 - 3:14pm — ವೈಭವ

ಉ: ವ್ಯಾಕರಣದಿಂದ ಬಯಸಿದ ಮುಕ್ತಿ ದೊರೆಯುವುದು

ವೈಭವ's picture

ಯಾವುದರಿಂದ ಮುಕುತಿ? ಯಾಕೆ? ಹೇಗೆ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 4, 2007 - 6:03pm — mahesha

ಉ: ವ್ಯಾಕರಣದಿಂದ ಬಯಸಿದ ಮುಕ್ತಿ ದೊರೆಯುವುದು

mahesha's picture

ಒಳ್ಳೆಯ ಕೇಳ್ಮೆ !

ಇಲ್ಲಿ ಒಂದು ಸಂಗತಿ ಗಮಸಿಸಬೇಕು.
೧) ಶಬ್ದಮಣಿದರ್ಪಣದ ಕೇಶಿರಾಜ ಜಿನಿಗ. ಜಿನ-ದರುಮದಲ್ಲಿ ಮುಕುತಿ ಅಂದ್ರೆ ಏನೋ, ನಂಗಂತೂ ಗೊತ್ತಿಲ್ಲ.
೨) ಇಲ್ಲಿ "ಬಯಸಿದೆ ಮುಕುತಿ" ಎಂದು ಹೇಳಿದ್ದಾನೆ. ಹಾಗಂದ್ರೆ? ಅದೂ ಗೊತ್ತಿಲ್ಲ.

"ಬುರ್ಧಗೆ ಫಲಂ" ಅಂದ್ರೆ ಪಂಡಿತರು ಗೊಂದಲಗಳನ್ನು ತೀರಿಸಲು ವ್ಯಾಕರಣವನ್ನು ಬಳಸಬಹುದು ಎಂದಿರಬಹುದು!

ಒಟ್ಟಿನಲ್ಲಿ "ವ್ಯಾಕರಣದಿಂದ ಪದಜ್ಞಾನ, ಪದಜ್ಞಾನದಿಂದ ತತ್ವ/ವಿಚಾರ ಜ್ಞಾನ, ವಿಚಾರಜ್ಞಾನದಿಂದ ಮುಕುತಿ" ಅಂತ ನಿಟ್ಟೂರು ನಂಜಯ್ಯ ಬರೆದಿದ್ದಾರೆ.

- ಮಾಯ್ಸ !!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 4, 2007 - 6:03pm — mahesha

ಉ: ವ್ಯಾಕರಣದಿಂದ ಬಯಸಿದ ಮುಕ್ತಿ ದೊರೆಯುವುದು

mahesha's picture

ಗಮಸಿಸಬೇಕು. = ಗಮನಿಸಬೇಕು
- ಮಾಯ್ಸ !!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 4, 2007 - 3:41pm — ASHOKKUMAR

ಉ: ವ್ಯಾಕರಣದಿಂದ ಬಯಸಿದ ಮುಕ್ತಿ ದೊರೆಯುವುದು

ASHOKKUMAR's picture

ಸ್ವರ್ಗದಲ್ಲಿ ವ್ಯಾಕರಣ ಪಂಡಿತರೇ ತುಂಬಿರುತ್ತಾರೋ? Smiling
ಸಂಪದಿಗರು ವ್ಯಾಕರಣಪ್ರಿಯರು-ಮುಕ್ತಿ ಸಿಗುತ್ತೆ ಎಲ್ಲರಿಗೂ. Smiling
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 5, 2007 - 6:14am — hamsanandi

ಉ: ವ್ಯಾಕರಣದಿಂದ ಬಯಸಿದ ಮುಕ್ತಿ ದೊರೆಯುವುದು

hamsanandi's picture

[quote ] ಸ್ವರ್ಗದಲ್ಲಿ ವ್ಯಾಕರಣ ಪಂಡಿತರೇ ತುಂಬಿರುತ್ತಾರೋ?
ಸಂಪದಿಗರು ವ್ಯಾಕರಣಪ್ರಿಯರು-ಮುಕ್ತಿ ಸಿಗುತ್ತೆ ಎಲ್ಲರಿಗೂ.
*ಅಶೋಕ್

ಅಯ್ಯೋ ಅಶೋಕರೆ, ಮೊದಲ ವೈಯಾಕರಣಿ ಪಾಣಿನಿಯನ್ನು ಸಿಂಹ ಕೊಂದು ತಿಂದಿತಂತೆ! ಸದ್ಯದ ಸಂಪದದ ವ್ಯಾಕರಣಪ್ರಿಯರಿಗೆ ಆ ಸ್ಥಿತಿ ಬರುವುದಿಲ್ಲ ಸದ್ಯ! ಏಕೆಂದರೆ, ಇರುವ ಮೂರು ಮತ್ತೊಂದು ಸಿಂಹಗಳೆಲ್ಲ ಗುಜರಾತಿನ ಗಿರ್ ನಲ್ಲಿವೆ Smiling
-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮುಕ್ತಿ
  • ಎಲ್ಲಿದೆ ಮುಕ್ತಿ
  • ಇದರಿಂದ ಮುಕ್ತಿ ಎಂದು
  • ಒಂದೇ ಒಂದು ಪ್ರಶ್ನೆ, ಉತ್ತರದಿಂದ ನಿಮಗೆ ನಗು ಬರುತ್ತದೆಯೋ ಅಥವಾ ಕೋಪವೋ ?
  • ಲಾಲೂ ರಾಜ್ಯಭಾರ ಅಂತ್ಯ
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಾಯ್ಸ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ನಶಿಸುತ್ತಿರುವ ಗದ್ದೆಗಳು

(ಫೋಟೊ: ವಸಂತ ಕಜೆ.)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ರೀ ಮತ್ತು ಸಾರೀ ಮತ್ತು ಸುರೆ
  • ಚಂದ ಮಾಮಾ
  • ಅರಳೀ ವೃಕ್ಷದ ವಾತಾನುಕೂಲ ಕಕ್ಷ
  • ಸತ್ಯಹರಿಶ್ಚ೦ದ್ರದ ವೀರಭಾಹು ಇನ್ನಿಲ್ಲ.......................
  • ಭಾಷೆ ಒಂದು means of communication ಅಷ್ಟೆ
  • ಛಾಯಾಚುಂಬನ
  • ಹಾಗೇ ಸುಮ್ ಸುಮ್ನೆ.... :)
  • ಕನ್ನಡಿಗರೇ ನಿಮ್ಮ ಮಕ್ಕಳನ್ನು ಕನ್ನಡ ಮಾಧ್ಯಮಶಾಲೆಯಲ್ಲಿ ವ್ಯಾಸಂಗಿಸಿ ಕನ್ನಡ ಸೇವೆ ಮಾಡಿರಿ.
  • ರಾಜರಲ್ಲೊಬ್ಬ ರತ್ನ
  • ಕುಡುಕರ ರಾಜ್ಯ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • anivaasi
    ಉ: ಛಾಯಾಚುಂಬನ
    July 19, 2008 - 4:37am
  • anivaasi
    ಉ: ಅವನು ಇವನು ನೀಲುಗಳು
    July 19, 2008 - 4:35am
  • sushil
    ಉ: ಕನ್ನಡಿಗರೇ ನಿಮ್ಮ ಮಕ್ಕಳನ್ನು ಕನ್ನಡ ಮಾಧ್ಯಮಶಾಲೆಯಲ್ಲಿ ವ್ಯಾಸಂಗಿಸಿ ಕನ್ನಡ ಸೇವೆ ಮಾಡಿರಿ.
    July 19, 2008 - 1:46am
  • venkatesh
    ಉ: ಲ೦ಡನ್ ಪ್ರವಾಸಕಥನ ಭಾಗ ೧೧: ಓಡುವ ಟ್ಯೂಬಿನಿ೦ದ ದಿನವೂ ಧುಮುಕುವ ಕೆ೦ಪು ನಿಲುವ೦ಗಿಯಾಕೆ!
    July 19, 2008 - 12:36am
  • ಗಣೇಶ
    ಉ: ಕಾಯ್
    July 19, 2008 - 12:00am
  • hamsanandi
    ಉ: ಛಾಯಾಚುಂಬನ
    July 18, 2008 - 11:31pm
  • hamsanandi
    ಉ: ಕಾಯ್
    July 18, 2008 - 11:18pm
  • srinivasps
    ಉ: ದೇವೇ....ಗೌಡ ಯಾಕೆ?
    July 18, 2008 - 11:17pm
  • ಗಣೇಶ
    ಉ: ದೇವೇ....ಗೌಡ ಯಾಕೆ?
    July 18, 2008 - 11:12pm
  • ಗಣೇಶ
    ಉ: ದೇವೇ....ಗೌಡ ಯಾಕೆ?
    July 18, 2008 - 11:01pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 12 ಅತಿಥಿಗಳು ಆನ್ಲೈನ್ ಇರುವರು.


ಕೆಂಡದ ಗಿರಿಯ ಮೇಲೊಂದು
ಅರಗಿನ ಕಂಭವಿದ್ದಿತ್ತು ನೋಡಾ ಅಯ್ಯಾ!
ಅರಗಿನ ಕಂಭದ ಮೇಲೊಂದು ಹಂಸೆಯಿದ್ದಿತ್ತು
ಕಂಭ ಬೆಂದು ಹಂಸೆ ಹಾರಿತ್ತು ಗುಹೇಶ್ವರಾ!

- ಅಲ್ಲಮಪ್ರಭು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator