ಮನ್ಮಥ - ಒಳಮನಸಿನ ಚೆಲುವು
ಈ ಸಿನಿಮವನ್ನು ನೆಂನೆ ನೋಡಿದೆನು. ನಂನ ಚೊತೆಗೆ ನಂನ ಚಂನೈ ಗೆಳೆಯನೂ ಇದ್ದ.
ನಮಗೆ ಈ ಸಿನಿಮ ಬಲು ಹಿಡಿಸಿತು. ಚಂನಾಗಿದೆ.
ಕತೆ ಹಾಡು ಇದರ ಬಗ್ಗೆ ಹೆಚ್ಚಿಗೆ ಹೇಳಲ್ಲ. ಆದರೆ ಮಾತುಕತೆಗಳು ಬಲು ಮೋಜಾಗಿದೆ.
ನಂನಿ!

- mahesha ರವರ ಬ್ಲಾಗ್
- Login or register to post comments
- 374 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ಉ: ಮನ್ಮಥ - ಒಳಮನಸಿನ ಚೆಲುವು
ಇದು ತಮಿಳಿನ ಪೇರಳಗನ್ ರೀಮೇಕ್ ಅಲ್ಲವೇ?
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಉ: ಮನ್ಮಥ - ಒಳಮನಸಿನ ಚೆಲುವು
ಆದರೇನೀಗ? ಜಗ್ಗೇಸ ಚಂನಾಗೇ ಮಾಡವ್ರೆ.
ಚಂನಾಗಿದೆ ಸಿನಿಮ! ಒಳ್ಳೊಳ್ಳೆ ಸಂಗತಿ ಹೇಳುವುದು.!!
ನಮ್ಮರೇ ಸೊಂತ ಅಂತ ಮಾಡಿದ 'ಕ್ಚಣಕ್ಚಣ'/'ಮೀರಾ ಮಾಧವ ರಾಘವ'ಕ್ಕಿಂತ ಏಸೋ ಮೇಲು!!
============================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ಮನ್ಮಥ - ಒಳಮನಸಿನ ಚೆಲುವು
ಇಲ್ಲ ಮಾರಾಯ ನಂಗೆ ಎಲ್ಲೋ ಇದೇ ಥರ scene ನೋಡಿದ ನೆನಪು ಬಂತು. ಅದಕ್ಕೇ ಕೇಳಿದೆ ಅಷ್ಟೆ. ತೀರ್ಪು ಹೇಳಲಿಲ್ಲ! ಯಾಕೆಂದರೆ ನಾನಿನ್ನೂ ಮನ್ಮಥ ಅಥವಾ ಪೇರಳಗನ್ ಎರಡನ್ನೂ ನೋಡಿಲ್ಲ.
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಉ: ಮನ್ಮಥ - ಒಳಮನಸಿನ ಚೆಲುವು
ಶ್ರೀನಿಧಿ, ಇದು ಮಲೆಯಾಳದ (ಕುಂಜಿಕ್ಕೋಣಮ್) ಹಾಗೂ ತಮಿಳಿನ(ಪೇರಳಗನ್) ನಂತರ ಕನ್ನಡಕ್ಕೆ ಬಂದಿರುವ ಚಿತ್ರವಂತೆ, ಪ್ರಜಾವಾಣಿ ಪುಟ೬. ರೀಮೇಕೋ ಸ್ವಮೇಕೋ ಚಿತ್ರ ಚೆನ್ನಾಗಿದ್ದರೆ ಸಾಕು.
ಉ: ಮನ್ಮಥ - ಒಳಮನಸಿನ ಚೆಲುವು
ಚಿತ್ರ ಚೆನಾಗಿ ಮಾಡಿದ್ದರೆ ಸರಿಯೇ.
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಉ: ಮನ್ಮಥ - ಒಳಮನಸಿನ ಚೆಲುವು
ಸಿರಿನಿದಿ ಅಯ್ಯ.
ನಾನು ನೀವು ತೀರ್ಪಿತ್ತಿರಿ ಅಂತ ಹೇಳಲಿಲ್ಲ. ಆದರೆ ಹಲ-ಕನ್ನಡಿಗರಿಗೆ ಕನ್ನಡ ಸಿನಿಮಗಳನ್ನು ತೆಗಳಲು ಒಂದು ನೆವ ಬೇಕು. ಅದರಲ್ಲಿ ಈ ರಿಮೆಕು ಒಂದು.
ನೀವು ಒಳ್ಳೆಯವರೆಂದೇ ನನ್ನ ಅನಿಸು!
ಒಳ್ಳೇದಾಗಲಿ!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ಮನ್ಮಥ - ಒಳಮನಸಿನ ಚೆಲುವು
ಹೊಗಳಿ ಹೊನ್ನ ಶೂಲಕ್ಕೇರಿಸುವುದಕ್ಕಿಂತ ತೆಗಳಿ ತಿದ್ದುವುದು ಲೇಸು ಎಂದು ನನ್ನ ಅನಿಸಿಕೆ.
ಆದ್ರೂ ರೀಮೇಕ್ ಮಾಡುವಾಗ ಕಥೆಯ ಹಂದರ ತೆಗೆದುಕೊಂಡು ಮಾಡಬೇಕು - scene-scene ಅಚ್ಚಿಳಿಸಬಾರದು. ಸ್ವಲ್ಪ ಸ್ವಂತಿಕೆ ಇದ್ದರೆ ಚೆನ್ನ. ಅಥವಾ ಮೂಲ ಚಿತ್ರ ಹೊರಬೀಳುವ ಹೊತ್ತಿಗೇ ಅಚ್ಚಿಳಿಸಿದ ರೀಮೇಕ್ ಮಾಡಿದರೆ ಅದೂ ಪರವಾಗಿಲ್ಲ. ಅಚ್ಚಿಳಿಸಿದ ಚಿತ್ರಗಳಲ್ಲಿ ನಟನ-ನಿರ್ದೇಶನಗಳ ಛಾಲೆಂಜ್ ಕಮ್ಮಿ ಅಂತ ನನ್ನಂಥ ಸಾಮಾನ್ಯ ನೋಡುಗನಿಗೆ ಅನಿಸುತ್ತೆ. (ಅನಿವಾಸಿ & ಅಭಯ ಸಿಂಹ ಅವರು ಇದಕ್ಕಿಂತ ಬಲಿತ ಅನಿಸಿಕೆ ಕೊಡಬಹುದೇನೋ). ತೆಲುಗಿನಲ್ಲಿ ಅನೇಕ ಚಿತ್ರಗಳು ತಮಿಳು-ತೆಲುಗು ಎರಡೂ ಭಾಷೆಗಳಲ್ಲಿ ಹೆಚ್ಚು ಕಡಿಮೆ ಒಂದೇ ಸಮಯಕ್ಕೆ ಬರುತ್ತದೆ. ಯಾವುದು ಮೊದಲು ಬಂದದ್ದು ಎಂದು ನನ್ನ ಗೆಳೆಯರು (ತಮಿಳು-ತೆಲುಗು) ಜಗಳ ಆಡೋದನ್ನೇ ನೋಡಿ ಮಜ ತಗೋಂಡಿದ್ದೇನೆ.
ಇದರ ಇನ್ನೋಂದು ಮುಖ - ಹಿಟ್ ಆದ ರೀಮೇಕ್ ಚಿತ್ರಗಳಿಂದ ನಮ್ಮ ಕನ್ನಡ ಚಿತ್ರರಂಗಕ್ಕೆ ದುಡ್ಡು ಬರುತ್ತದೆ. ಇದರಿಂದ ಒಂದು ರೀತಿಯ cushion ಸಿಕ್ಕಂತಾಗಿ ಸ್ವಂತ ಚಿತ್ರ ಮಾಡಲು ಬೇಕಾದ ಹಣ ಸಿಗುತ್ತೆ . ಅಷ್ಟಕ್ಕೂ ಜನ ಚೆನ್ನಾಗಿದೆ ಅಂತ ಇಷ್ಟಪಟ್ಟರೆ ಸಾಕಲ್ಲವೇ ಅಂತ ಎಷ್ಟೋ ಬಾರಿ ಅನಿಸಿದ್ದಿದೆ. ಹೀಗಾಗಿ ನನಗೆ ಈ ರೀಮೇಕ್ ಬಗ್ಗೆ ಒಂದೇ ನಿಲುವಿಲ್ಲ.
ಅಂದಹಾಗೆ ಮೊನ್ನೆ ಎಲ್ಲೋ ಜೋಗಿಯ ರೀಮೇಕ್ ನೋಡಿದೆ. ತಮಿಳಿನವರೂ ಹಾಗೇ ಅಚ್ಚಿಳಿಸಿದ್ದಾರೆ!! ನಾನು ಜೋಗಿ ನೋಡಿದ್ದರಿಂದ ಈ ಚಿತ್ರ (ಹೆಸರು ಗೊತ್ತಿಲ್ಲ) ನೋಡಲು ಮನಸ್ಸು ಬರಲಿಲ್ಲ.
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಉ: ಮನ್ಮಥ - ಒಳಮನಸಿನ ಚೆಲುವು
ಸಿರಿನಿದಿ
ಮೊದಲು ಮನ್ಮಥ ನೋಡಿ, ಆಮೇಲೆ ಮಾತಾಡುಮ. ಸುಮ್ನೆ ಎಲ್ಲೆಲ್ಲೋ ಮಾತು ಹೊರಳಿಸಿಕೊಂಡು ಹೋಗುವುದು ಬೇಡ!
ನಿಮ್ಮ general ಕಮೆಂಟುಗಳಿಗೆ, ಕನ್ನಡ ಸಿನಿಮ ಚನ್ನಾಗಿದ್ದರು ತೆಗಳುವವರ ಬಗ್ಗೆ ನಾನು ಹೇಳಿದ್ದು.!! ಅಸ್ಟೆ!!
ಮುಂಗಾರು ಮಳೆ, ದುನಿಯ ಬಗ್ಗೆ ಹಲವರ ಟೀಕೆ ಸೋತಿದೆ, ಅಂತ ಚಿತ್ರ ಜಸ ಹೇಳಿದೆ.
ಇರಲಿ ಬಿಡಿ.
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ಮನ್ಮಥ - ಒಳಮನಸಿನ ಚೆಲುವು
ಇದೇನಿದು ಮಹೇಶರೇ,
ನಂನ, ನೆಂನೆ, ನಂನಿ ? ತುಸು ಬಿಡಿಸಿ.
ಉ: ಮನ್ಮಥ - ಒಳಮನಸಿನ ಚೆಲುವು
ನಂನ = ನನ್ನ
ನೆಂನೆ = ನೆನ್ನೆ
ನಂನಿ = ನನ್ನಿ
ಹಿನ್ದಿ = ಹಿಂದಿ
ಅಮ್ಮ = ಅಂಮ
ದಿನಾಙ್ಕ = ದಿನಾಂಕ
ಅನ್ನ = ಅಂನ
ಹೀಗೆ!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ಮನ್ಮಥ - ಒಳಮನಸಿನ ಚೆಲುವು
ಹೌದು.
... ]
ಸಂಸ್ಕೃತದಲ್ಲಿ ಪದವೊಂದರ ನಡುವೆ ಬರುವ ಅನುನಾಸಿಕ ಒತ್ತಕ್ಷರಗಳಿಗೆ ಬದಲಾಗಿ ಅನುಸ್ವಾರ ಬಳಸುವ ಕ್ರಮ ಇದೆ.
ಪಾಣಿನಿಯ ಒಂದು ಸೂತ್ರವೂ ಇದೆ ಅದಕ್ಕೆ. [ನಾನು ಅದನ್ನು ಮರೆತಿದ್ದೇನೆ.
ಆ ಕ್ರಮ ಕನ್ನಡ ಪದಗಳನ್ನು ಬರೆಯುವಾಗಲೂ ಇದೆಯಾ? ಬೇರೆ ಕೆಲವು ಸಾಮಾನ್ಯ ಉದಾಹರಣೆಗಳಿದ್ದರೆ ಹೇಳಿ.
ಉ: ಮನ್ಮಥ - ಒಳಮನಸಿನ ಚೆಲುವು
ಕಂನಡದಲ್ಲಿ ಹೀಗೆ ಬರೆಯಬಾರದು ಅಂತ ಇಲ್ಲ ಅಲ್ವಾ!!
ಬರೆವಣಿಕೆ ಸರಿಯಾಗಿ ಓದಲು ಬಂದರೆ ಸರಿ!!
ಕಂನಡದಲ್ಲಿ ಅಂದ, ಚಂದ, ಮಿಂದು, ಇವಂನು ಅನ್ದ, ಚನ್ದ, ಮಿನ್ದು, ಹೀಗೆ ಬರೆಯಬಹುದು, ಹೀಗೆ ಓದುವುದು.
ನಂನಿ!!( ಸುಮ್ನೆ ಚಮಕ್)
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !