Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › mahesha ರವರ ಬ್ಲಾಗ್

ಪಕ್ಕದ ಮನೆಯವರ ಅಂಗಳವನ್ನು ಹಂಬಲಿಸಿಕೊಂಡು, ತಮ್ಮ ಮನೆಯ ಹಿತ್ತಿಲು ಕಳೆದುಕೊಳ್ಳುವ ಪೆದ್ದುಜಾಣ್ಮೆ

September 6, 2007 - 7:24pm — mahesha

ಈ ಸಂಗತಿ ನಮ್ಮ ಪಕ್ಕದ ಎರಡು ರಾಜ್ಯಗಳಿಗೆ ಚನ್ನಾಗಿ ಹೊಂದುವುದು.

ನಾವು ಕನ್ನಡದೊರು, ನಾವಾಯ್ತು ನಮ್ ಮನೆ, ಕನ್ನಡ ನೆಲವಾಯ್ತು. ನಮ್ಮ ಸಿಟ್ಟುಪಟ್ಟು ಏನಿದ್ರೂ ನಮ್ಮ ಮನೆಯೊಳಕ್ಕೆ ಬಂದು ಗೊಡವೆ ಮಾಡೊರ ಮೇಲೆ ಅಷ್ಟೇ. ನಾವು ಕಾಸರಗೋಡು, ನೀಲಗಿರಿ, ಇಂತ ನೆಲಗಳನ್ನು ಬಿಟ್ಟಾಯ್ತು, ಸುಮ್ನೆ ಯಾಕೆ ಮತ್ತೆ ತರಲೆ ಅಂತ, ಅದರ ಬಗ್ಗೆ ತುಟಿಕ್-ಪಿಟಿಕ್ ಅಂದೇ ಇರೋ ಮಂದಿ.

ಆದ್ರೆ ನಮ್ ಬಡಗಕ್ಕೆ ಇರೋ ರಾಜ್ಯದವರಿಗೆ ಅದ್ಯಾಕೋ ನಮ್ ನೆಲದ ಮೇಲೇ ಹೊಂಚುಗಣ್ಣು. ಒಂದು ಮಹಾರಾಷ್ಟ್ರ ಅಂತ ಈಟುದ್ದಗಲ ರಾಜ್ಯ. ಇನ್ನೊಂದು ಗೋವೆ ಅಂತ ಪುಟಾಣಿ ರಾಜ್ಯ. ಇವರಿಬ್ರೂ ನಮ್ಮ ನಲೆದ ಬಗ್ಗೆ ಗೊಡವೆ ತಗೆದಿದ್ದಾರೆ. ಆದ್ರೆ ಇವರು ಏನೋ ಅಶ್ವಮೇಧಯಾಗ, ದಿಗ್ವಿಜಯ ಮಾಡೊರ ಹಂಗೆ ಆಡಿಕೊಂಡು ನಮ್ಮ ಕೂಟ ಗೊಡವೆಗೆ ನಿಂತಿಹರಾದ್ರು, ಅವರವರ ನೆಲಗಳಲ್ಲೇ ಅವರವರ ನುಡಿನಡೆ ಉಳಿಸಿಕೊಳ್ಳುವದರಲ್ಲಿ ತಿಣುಕಾಡ್ತಿದ್ದಾರೆ. ನಾವು ಕನ್ನಡದೊರು ಬಿಡಿ, ಬೇರೆಯೊರ ನೆಲವೂ ನಮಗೆ ಬೇಡ, ನಮ್ಮದೇ "ಎತ್ತು ಏರ್ಗೀಳೀತು, ಕ್ವಾಣ ನೀರ್ಗೀಳೀತು" ಅನ್ನೋ ಪಾಡು ಆಗಿದೆ.

ಮಹಾರಾಷ್ಟ್ರದಲ್ಲಿ ಮರಾಟಿ ಎಲ್ಲಿದೆ? ನಮ್ಮ ಕನ್ನಡನೆಲದಲ್ಲಿ ನಾವು ಇದು ಕನ್ನಡ, ಇದು ತೆಲುಗು, ಇದು ತಮಿಳು, ಇದು ಅದು, ಇದು ಇದು ಅಂತ ಬೇರೆ ಬೇರೆಯಾಗಿ ಕಾಣುವ ಹಾಗೇ ನುಡಿಗಳ ನಡುವೆ ಗಡಿಗೆರೆ ಇದ್ದೇ ಇದೆ. ಆದ್ರೆ ಅಲ್ಲಿ ಏನಾಗಿ ಹೋಗಿದೆ ಅಂದ್ರೆ, ಎಲ್ಲಾ ಅಂದ್ರೆ ಹಲವು ಮರಾಟಿ ಮಂದಿ ಹಿಂದಿ ಮಾತಾಡ್ತಾರೋ, ಮರಾಟಿ ಮಾತಾಡ್ತಾರೋ, ಅವರಿಗೆ ಹೇಳಕ್ಕೆ ಆಗಲ್ವಂತೆ. ಮಾರಾಷ್ಟ್ರದಲ್ಲಿ ಹಳ್ಳಿ ಹಳ್ಳಿಯಲ್ಲೂ ಅಚ್ಚಕಟ್ಟಾಗೇ ಹಿಂದಿ ಮಾತಾಡ್ತಾರಂತೆ, ಇನ್ನು ಹಿಂದಿ ಮತ್ತು ಮರಾಟಿ ಒಂದೇ ಲಿಪಿಯಲ್ಲಿ ಬರೆಯೋದ್ರಿಂದ ಇನ್ನೂ ಸಲೀಸು, ಒಂತೆರ ಮಹಾಮರಾಟರ ಮಾಮೂಲಿ ಮಾತೇ ಹಿಂದಿ ಆಗಿ ಹೋಗಿದೆಯಂತೆ. ಇದು ಬರೀ ಮುಂಬಯಿ, ಪುಣೆ, ಅಂತ ದೊಡ್ಡದೊಡ್ಡ ಹೊಳಲುಗಳಲ್ಲಿ ಅಲ್ಲ, ಸಣ್ಣಪುಟ್ಟ ಊರು ಕೇರಿ ಪಾಡು ಹಿಂಗೇ ಅಂತೆ. ಇದಕ್ಕೆ ಕನ್ನಡಿ ಹಿಡಿದಂತೆ, ಬಾಲಿವುಡ್ನ ಹಿಂದಿಹೊಡೆತಕ್ಕೆ ಮಹಾರಾಷ್ಟ್ರದಂತ ದೊಡ್ಡರಾಜ್ಯದ ನುಡಿ ಮರಾಠಿ ಸಿನಿಮ ಮಣ್ಣು ಮುಕ್ಕಿದೆ. ಈ ಮರಾಟಿ ಸಿನಿಮಕ್ಕಿಂತ, ನಮ್ಮ ಮಳಯಾಳಿ ಸಿನಿಮವೇ ಹೆಚ್ಚು ದುಡ್ಡು ಮಾಡ್ತದಂತೆ.

ಇನ್ನು ಗೋವೆ ಇವರು ಹಾಗೇ, ತಮ್ಮ ನೆಲದಲ್ಲಿ ಕೊಂಕಣಿಯನ್ನು ಗಟ್ಟಿ ಮಾಡೇ ಇಲ್ಲ. ಇನ್ನೂ ಗೋವೆಯಲ್ಲಿ ಕೊಂಕಣಿ ಯಾವ ಲಿಪಿಯಲ್ಲಿ ಬರೆಯಬೇಕು ಅನ್ನೋ ಗೊಡವೇ ತೀರೇ ಇಲ್ಲ. ಅಲ್ಲಿ ಮರಾಟಿಯೂ ಒಂದು ನುಡಿಯಾಗಿರುವದರಿಂದ, ಅಲ್ಲಿ ಸರಕಾರದ ಹೆಚ್ಚು ಕೆಲಸ ಮರಾಟಿಯಲ್ಲೇ ನಡೆಯೋದು. ಇನ್ನು ಕೊಂಕಣಿ ಸಿನಿಮ ಗಿನಿಮ, ಇಲ್ವೇ ಇಲ್ಲ.

ಆದ್ರೆ ಇವರಿಬ್ರಿಗೂ ನಮ್ಮ ಕನ್ನಡದ ನೆಲಬೇಕು ಅಂತ ಗೊಡವೆ ತೆಗೆದಿರೋದ್ರಿಂದ, ನಮ್ಮ ಕನ್ನಡದವರಿಗೆ ಬಲು ನೆರವೇ ಆಗಿದೆ. ಹೇಗೆ ಗೊತ್ತಾ? ಹೀಗಾದ್ರು ನಾವು ಅವರು ಬೇರೆ ಬೇರೆ ಅನ್ನೋದು ನಮ್ಮ ಕನ್ನಡದೊರಿಗೆ ಅರಿತವಾಗ್ತದೆ. ಹಾಗೇ, ನಮ್ಮ ನೆಲವನ್ನು ಕಸಿದುಕೊಳ್ತಾರೆ ಎಂಬ ಅಂಜಿಕೆಯಿಂದಾದ್ರು, ನೆಲದ ಮೇಲೆ ಎಚ್ಚರ ಇರ್ತದೆ. ಅದಕ್ಕೆ ಇರಬೇಕು, ನಾವು ನಮ್ಮ ಹಿತ್ತಿಲು, ಅಂಗಳಗಳಿಗೆ ಈಗೀಗ ಸಿಕ್ಕಾಪಟ್ಟೆ ಎಚ್ಚರ, ಒತ್ತು ಕೊಟ್ಟು ಕಾಪಾಡ ತೊಡಗಿರೋದು.

ಒಟ್ನಲ್ಲಿ, ತಮ್ಮನೆ ಹಿತ್ಲು ಹಾಳಾದ್ರೂ, ನಮ್ಮನಯೆ ಬೇಲಿ ಮುಚ್ಚಕ್ಕೆ ನೆರವಾದ ಇವರಿಗೆ ನಾವು ಕನ್ನಡದೊರು ನನ್ನಿ ಹೇಳ್‌ಬೇಕು. Smiling

Ornamental seperator
  • mahesha ರವರ ಬ್ಲಾಗ್
  • Login or register to post comments
  • 448 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 7, 2007 - 6:25pm — Khavi

ಉ: ಪಕ್ಕದ ಮನೆಯವರ ಅಂಗಳವನ್ನು ಹಂಬಲಿಸಿಕೊಂಡು, ತಮ್ಮ ಮನೆಯ ಹಿತ್ತಿಲು ಕಳೆದುಕೊಳ್ಳುವ ಪೆದ್ದುಜಾಣ್ಮೆ

Khavi's picture

ರಾಜ್ಯದ ಎಲ್ಲ ಗಡಿಗಳಲ್ಲೂ ಮೊದಲು ಕನ್ನಡ ಶಾಲೆಗಳನ್ನು ಸರಿಯಾಗಿ ನಡೆಸಬೇಕು...
ಅವರಿಗೆ ಎಲ್ಲವೂ ಕನ್ನಡದಲ್ಲಿ ಸಿಗುವ ಹಾಗೆ ಮಾಡಬೇಕು...
ಸರಕಾರ ಅಲ್ಲಿಯ ಎಲ್ಲ ಸಮಸ್ಯೆಗಳಿಗೆ ದನಿ ಕೊಡಬೇಕು, ಅಲ್ಲಿಯ ಯುವ ಜನರಿಗೆ ಉದ್ಯೋಗ ಸಿಗುವಂತಾಗಬೇಕು...
ಇಲ್ಲದಿದ್ದರೆ ಅವರು ಪಕ್ಕದ ರಾಜ್ಯಗಳಿಗೆ ಒಲಸೆ ಹೋಗ ಬೇಕಾಗುತ್ತೆ...
ಅವರಿಗೆ ಕನ್ನಡ ಸರಕಾರ ಹತ್ತಿರವಿದೆ ಅನಿಸಬೇಕು... ಅಯ್ಯ ಬೆಂಗಳೂರಿನಲ್ಲಿರೋರಿಗೆ ನಮ್ಮ ಚಿಂತೆ ಇಲ್ಲ ಅನ್ನೋ ಹಾಗೆ ಆಗಬಾರದು.
ಆವಾಗಾವಗ ಅಲ್ಲಿ ಕನ್ನಡ ಉಳಿಸೋ (ಬೆಳೆಸೋ Smiling) ಕೆಲಸಗಳು ನಡೀಬೇಕು... ಹೀಗಾದರೆ ಮಾತ್ರ ಅಲ್ಲಿ ಕನ್ನಡ ಉಳಿಯುತ್ತೆ...

  • Login or register to post comments
  • link
  • Email this ಪ್ರತಿಕ್ರಿಯೆ
September 7, 2007 - 6:27pm — mahesha

ಉ: ಪಕ್ಕದ ಮನೆಯವರ ಅಂಗಳವನ್ನು ಹಂಬಲಿಸಿಕೊಂಡು, ತಮ್ಮ ಮನೆಯ ಹಿತ್ತಿಲು ಕಳೆದುಕೊಳ್ಳುವ ಪೆದ್ದುಜಾಣ್ಮೆ

mahesha's picture

ಕನ್ನಡದೊರು ಪಕ್ಕ ರಾಜ್ಯಕ್ಕೆ ಹೋಗಲಿ, ಆದ್ರೆ ಪಕ್ಕದೊರು ಇಲ್ಲಿಗೆ ಬರೆದಿದ್ದರೆ ಸೈ! Smiling

  • Login or register to post comments
  • link
  • Email this ಪ್ರತಿಕ್ರಿಯೆ
September 7, 2007 - 8:50pm — ಶ್ರೀನಿಧಿ

ಉ: ಪಕ್ಕದ ಮನೆಯವರ ಅಂಗಳವನ್ನು ಹಂಬಲಿಸಿಕೊಂಡು, ತಮ್ಮ ಮನೆಯ ಹಿತ್ತಿಲು ಕಳೆದುಕೊಳ್ಳುವ ಪೆದ್ದುಜಾಣ್ಮೆ

ಶ್ರೀನಿಧಿ's picture

ಮಹಾರಾಷ್ಟ್ರದಲ್ಲಿ ಎಲ್ಲರೂ ಹಿಂದಿ ಮಾತಾಡುತ್ತಾರೆ ಅನ್ನೋದು ನಿಜ ಅಲ್ಲ. ನನ್ನ ಮರಾಠಿ ಗೆಲೆಯರೆಲ್ಲ ಜೊತೆಯಾದಾಗ ಮರಾಠಿ ಅನ್ನೇ ಮಾತಾಡೋದು. ಮುಂಬಯಿ, ಪುಣೆ ಬಿಟ್ಟರೆ ಬೇರೆ ಊರು ಹಳ್ಲಿಗಳಲ್ಲಿ ಮರಾಠಿಯೇ ಇಂದಿಗೂ ಅವರ ನುಡಿ. ಎಲ್ಲರಿಗೂ ಹಿಂದಿ ಬರೋದಿಲ್ವಂತೆ. ಅವರಿಗೂ ಹಿಂದಿ ಮರಾಠಿಯನ್ನು ನುಂಗಿಹಾಕೋ ಬಗ್ಗೆ ಸಿಟ್ಟು ಇದೆ.

ಆದರೆ ಮರಾಠಿ ಸಿನಿಮಾ-ನಾಟಕ ಸ್ವಲ್ಪ ಹೊಡೆತ ತಿಂದಿರೋದಂತೂ ನಿಜ.

ಇದೆಲ್ಲಾ ಒಳ್ಳೆಯದೇ ಆದರೆ ನಮ್ಮ ಬೆಳಗಾವಿ ಮೇಲೆ ಮರಾಠಿಗರು ಕಣ್ಣು ಹಾಕಿರೋದು ಚೆನ್ನಾಗಿಲ್ಲ.
ಮೇಲೆ ಮಹಾರಾಷ್ಟ್ರ- ಗೋವೆ, ಪಕ್ಕಕ್ಕೆ ಆಂಧ್ರ, ಕೆಲಗಡೆ ತಮಿಳುನಾಡು ಬರೀ ಕಾಟಗಳೇ.

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

  • Login or register to post comments
  • link
  • Email this ಪ್ರತಿಕ್ರಿಯೆ
September 8, 2007 - 3:44am — hamsanandi

ಉ: ಪಕ್ಕದ ಮನೆಯವರ ಅಂಗಳವನ್ನು ಹಂಬಲಿಸಿಕೊಂಡು, ತಮ್ಮ ಮನೆಯ ಹಿತ್ತಿಲು ಕಳೆದುಕೊಳ್ಳುವ ಪೆದ್ದುಜಾಣ್ಮೆ

hamsanandi's picture

ಬಹುಶಃ ಮುಂಬಯಿ, ಠಾಣೆ ಜಿಲ್ಲೆಗಳು , ಮತ್ತು ವಿದರ್ಭದ ಭಾಗಗಳು ( ನಾಗ್‍ಪುರ್ ಇತ್ಯಾದಿ) ಗಳಲ್ಲಿ ಮಾತ್ರ ಹಿಂದೆ ನಡೆಯುತ್ತೆ. ಪುಣೆ ನಗರದ ಕೆಲವು ಕಡೆ ಹಿಂದೆ ನಡೆಯುತ್ತಾದರೂ, ಅಲ್ಲಿ ಇನ್ನೂ ಮರಾಠಿ ಸಂಸ್ಕೃತಿ ಜೀವಂತವಾಗಿದೆ.

ಮರಾಠಿಯಲ್ಲಿ ಸಿನೆಮಾರಂಗ ಹಿಂದಿಯ ಹೊಡೆತದಿಂದ ಹಿಂದೆ ಬಿದ್ದಿರಬಹುದು. ಆದರೆ, ಮರಾಠಿ ನಾಟಕಗಳು ಪುಣೆಯಲ್ಲಿ ಬಹಳ ಚೆನ್ನಾಗಿ ನಡೆಯುತ್ತವೆ. ವರ್ಷದ ಮುನ್ನೂರರವತ್ತೈದು ದಿನವೂ ನಾಟಕಳು ನಡೆಯುವ ಊರದು. ಮತ್ತೆ, ಅಲ್ಲಿನ ಮರಾಠಿ ಮಂದಿಗೆ ತಮ್ಮ ಭಾಷೆಯ ಬಗ್ಗೆ ಬಹಳ ಕಾಳಜಿ ಮತ್ತು ಹೆಮ್ಮೆ ಎರಡೂ ಇದೆ.

-ಹಂಸಾನಂದಿ

  • Login or register to post comments
  • link
  • Email this ಪ್ರತಿಕ್ರಿಯೆ
September 8, 2007 - 11:18am — kpbolumbu

ಉ: ಪಕ್ಕದ ಮನೆಯವರ ಅಂಗಳವನ್ನು ಹಂಬಲಿಸಿಕೊಂಡು, ತಮ್ಮ ಮನೆಯ ಹಿತ್ತಿಲು ಕಳೆದುಕೊಳ್ಳುವ ಪೆದ್ದುಜಾಣ್ಮೆ

kpbolumbu's picture

Quote:
ನಾವು ಕಾಸರಗೋಡು, ನೀಲಗಿರಿ, ಇಂತ ನೆಲಗಳನ್ನು ಬಿಟ್ಟಾಯ್ತು, ಸುಮ್ನೆ ಯಾಕೆ ಮತ್ತೆ ತರಲೆ ಅಂತ, ಅದರ ಬಗ್ಗೆ ತುಟಿಕ್-ಪಿಟಿಕ್ ಅಂದೇ ಇರೋ ಮಂದಿ.

ನಿಮಗೆ ಸರಿಕ೦ಡ೦ತೆ ಮಾಡಿ, ಆದರೆ ಕಾಸರಗೋಡಿನವನದ್ದು ಕನ್ನಡಾಭಿಮಾನವಲ್ಲ, ಏನಿದ್ದರೂ ತನ್ನ ಬ೦ಧುಗಳ ಜೊತೆ ಇರುವ ಹ೦ಬಲವಷ್ಟೇ ಎನ್ನುವುದು ಯಾವ ಜಾಣತನ?

_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನಮನ-೦೪: ಕನ್ನಡಿಗರ ಉದಾರತೆ - ಬಗ್ಗೋ? ಫೀಚರ್ರೋ?
  • ULFA ಕೋಪಕ್ಕೆ ಕಾರಣ ನಮಗೆ ಗೊತ್ತ ?
  • ಸಮ್ಮಿಶ್ರ ಎಂಬ ಕಲಸುಮೇಲೊಗರ.
  • ಆಡಳಿತ ಭಾಷೆ vs ರಾಷ್ಟ್ರಭಾಷೆ
  • ನಂಬಿಕೆಯೇ ಆಧಾರ.. ಎಂಬ ದೊಡ್ಡ ಸಮಸ್ಯೆ.
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಹೇಶ

ಪರಿಚಯ

ನನಗೆ ಎಲ್ಲ ಗೊತ್ತಿಲ್ಲ!!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಒಂದು affair
  • ಅಕ್ಷರೋದಿ ಸೂತ್ರ
  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
  • ಕಟಪಯಾದಿ ಸೂತ್ರ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 6 ಅತಿಥಿಗಳು ಆನ್ಲೈನ್ ಇರುವರು.

ಅಖಂಡ ಕರ್ನಾಟಕ:
ಅಲ್ತೊ ನಮ್ಮ ಬೂಟಾಟದ ರಾಜಕೀಯ ನಾಟಕ!

ಇಂದು ಬಂದು ನಾಳೆ ಸಂದು
ಹೋಹ ಸಚಿವ ಮಂಡಲ
ರಚಿಸುವುದು ಕೃತಕವಲ್ತೊ
ಸಿರಿಗನ್ನಡ ಸರಸ್ವತಿಯ
ವಜ್ರ ಕರ್ಣಕುಂಡಲ!

— ಕುವೆಂಪು

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator