ಕೊನೆಯ ಮಾತು
ಬದುಕು ಅಂದ ಮೇಲೆ ಬದಲಾವಣೆ ಬೇಕು.
ಬದಲಾವಣೆ ಅಂದ ಮೇಲೆ ಕೆಲವು ಹೊಸತು ಬರುವುದು, ಹಲವು ಹಳತು ಹೋಗುವುವು ಹಾಗೇ ಕೆಲವು ಹಳತು ಹೊಸತಾಗಿ ಉಳಿಯುವುವು.
ಹಾಗೆ ನಮ್ಮ ಬದುಕಿನ ಬದಲಾವಣೆಯ ಹಂತ ಹಂತಕ್ಕೂ ಇಂತವು ಆಗುತ್ತಲೇ ಇರುವುವು.
ಈಗ ನನ್ನ ಬದುಕಿನ ಮಾರ್ಪಿನ ಹಂತ..... ಅದಕ್ಕೀ ಕೊನೆಯ ಮಾತುಗಳು....
೧) ತನ್ನ ಗುರುತಿನ ಪ್ರಶ್ನೆ ಎಲ್ಲರಿಗೂ ಇರುವುದು. ನನ್ನ ಗುರುತು ಹೇಗೇ ಇರಲಿ ಅದು ನನ್ನದು, ತನ್ನ ನಂಬಿಕೆಗಳನ್ನು, ಗುರುತನ್ನು ಉಳಿಸಿಕೊಳ್ಳಲು ಹೋರಾಡುವ ಮಂದಿ ಮತ್ತು ಒಂದು ಸಮಾಜದಲ್ಲಿ ಉನ್ನತ, ಮೇಲ್ಮಟ್ಟದ ಗುರುತು ಇಂದು ಹಲವರ ಮಾತಿನಂತೆ ಆ ಸೊ ಕಾಲ್ಡ್ ’ಸಂಸ್ಕೃತಿ’ಗೆ ಜೋತು ಬಿದ್ದು ಅದು ತನ್ನ ಗುರುತನ್ನಾಗಿಸಿಕೊಳ್ಳಲು ಎಳಸಿ.. ಅದೇ ಸರಿಯಾದುದು ಎಂಬ ಕಟ್ಟರ್ ಮಂದಿ.
ಇವುಗಳ ಗದ್ದಲದಲ್ಲಿ ಯಾವಾಗಲೂ ಗೆಲುವು ಎಂದು ಜಯಘೋಷ ಮಾಡೋದು ’ಉನ್ನತ’ ಎಂದು ಹಲವರು ಹೇಳಿ ಜೋತು ಬಿದ್ದ ಮಂದಿ. ಆದರೆ ದಿಟವಾಗಲು ಗೆಲುವು ಅವರದಾಗಿರಲ್ಲ.
೨) ನಾವು ಎಶ್ಟು ಏನನ್ನೇ ಓದಿದ್ದರೂ, ನಮಗೆ ಏನು ಅನ್ನಿಸಿದ್ದರು.. ಹಲವು ಸಂಗತಿಗಳ ಸರಿತಪ್ಪುಗಳು ಎಂದು ತೀಮಾರ್ನವಾಗವು. ಆದರೂ ಎಲ್ಲದರಲ್ಲಿ ಸರಿತಪ್ಪು ಹುಡುಕುವ ಮಂದಿಯಿಂದ ಮಾಮೂಲಿ ಮಂದಿಯ ’ತಪ್ಪು’ಅನ್ನು ಮಾಡಿದವರಾಗಿ, ಕಶ್ಟಪಡುವುದು ಎಂದೂ ತಪ್ಪಲ್ಲ.
೩) ಹಲವು ಸರತಿ, ಹಾಲೆಂದು ಬೇರೆಯವರು, ಹೆಚ್ಚಿನವರು ನೀಡುವುದು, ಕುಡಿಯುವುದು ಹಾಲಗಿರಲ್ಲ.. ಅದನ್ನು ತಿಳಿದೂ ಅದೇ ’ಹಾಲ’ನ್ನು ಕುಡಿಯುವುದರ ಬದಲು ಎಲ್ಲೆಡೆ ಸಲ್ಲುವ, ಸಿಕ್ಕುವ ’ನೀರು’ಕುಡಿಯುವುದೇ ಲೇಸು.. ಎಶ್ಟೇ ಆದರೂ ಹಾಲಿಲ್ಲದೇ ಬದುಕಬೋದು, ನೀರಿಲ್ಲದೇ ಇಲ್ಲ. ಏನು ಮಾಡೋಣ.. ಹಾಲುಕುಡಿಯುವ ಬಯಕೇ, ಆದರೆ ಹಾಲಿನ ಹೆಸರಿನಲ್ಲಿ ಬೇರೇನು ಕೊಡುವರಲ್ಲ.
೪) ಗೆಳೆಯರು ಬರುವರು ಹೋಗುವರು. ಉಳಿಯುವವರು ಉಳಿಯುವರು. ಗೆಳೆತನ, ಒಲವು ಎಂಬುದು ೨-ವೇ ಆಗಿರಬೇಕು. ಎಂದು ೧-ವೇ ಆಯಿತೋ ಅಂದೇ ಆ ’ವೇ’ಅನ್ನು ನಾವು ಮುಚ್ಚಿಬಿಟ್ಟು.. ಅದು ಇನ್ನು ಇಲ್ಲ ಎಂದು ನೆಮ್ಮದಿಪಡಬೇಕು.
ಒಟ್ಟಿನಲ್ಲಿ...
ಕೆಲವನ್ನು ಮುಗಿಸುವ ಹೊತ್ತು ಬಂದಿದೆ... ಮುಗಿಸಿ ಬಿಡುವೆನು...
ಒಳ್ಳೇದಾಗಲಿ!
- mahesha's blog
- Login or register to post comments
- 705 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: ಕೊನೆಯ ಮಾತು
ಅಯ್ಯೋ ಬರೆಯೋದು ನಿಲ್ಲಿಸ ಬೇಡಿ.
ಉ: ಕೊನೆಯ ಮಾತು
ಯಾಕೆ ಮಹೇಶ್ ಏನಾಯ್ತು ?
http://thereda-mana....
ರೂಪ
ಉ: ಕೊನೆಯ ಮಾತು
ಇಲ್ಲಿ ಬರೆಯದಿದ್ದರೂ ಆಗಾಗ ಇಣುಕುತ್ತಿರಿ (ಇಣುಕುತ್ತಿರುತ್ತೀರಿ ಎಂಬ ಅನುಮಾನ ನನ್ನದು :) )
ಬೇಕಾದಾಗ ಬಂದು ಬರೆಯಲೇ ಬಹುದಲ್ಲ...
ಆಯಿತು... ಸುತ್ತಾಡಿಕೊಂಡು ಬನ್ನಿ... ಬರುವಿರಾದರೆ...
ಉ: ಕೊನೆಯ ಮಾತು
ಮಹೇಶರೆ,
ಹಾಗೇ ಕೆಲವು ಹಳತಾದವು ಹೊಸರೂಪದಲ್ಲಿ ಮತ್ತೆ ಮತ್ತೆ ಮರಳುವುದು!
ಮತ್ತೆ ಮರಳುವಾಗ ಪೂರ್ತಿ ಜೋಶ್ ನಲ್ಲಿ ಬನ್ರೀ :))
-ಹಂಸಾನಂದಿ
ಪುರಂದರ ದಾಸರ ರಚನೆಗಳಿಗಾಗಿ ಇಲ್ಲಿ ಚಿಟಕಿಸಿ :- http://purandara.wor...
ಉ: ಕೊನೆಯ ಮಾತು
:)
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಕೊನೆಯ ಮಾತು
:)
ಉ: ಕೊನೆಯ ಮಾತು
ಮಹೇಶರ ಪ್ರತಿಕ್ರಿಯೆಗಳು ಉಗ್ರವೆನಿಸಿದರೂ ಅವುಗಳಲ್ಲೊಂದು ಹೊಸ ಒಳಹು ನಾನು ಗಮನಿಸಿದ್ದೇನೆ. ಸುಪ್ರೀತರ ಯೋಚನಾ ಲಹರಿ ತಣ್ಣಗೆ ಕೊರೆಯುವ ಮಂಜಿನ ತೀಕ್ಷ್ಣತೆ ಇದ್ದರೆ ಮಹೇಶರದ್ದು ಜೋರಾಗಿ ಸದ್ದು ಮಾಡುತ್ತಾ ಬರುವ ಬುಲ್ಡೊಝರದಂತೆ.
ಈ ಬುಲ್ಡೋಜರ್ ನ ತಾಕತ್ತಿಗೆ ಹಲವು ಹೊಸ ದಾರಿಗಳು ಹುಟ್ಟಿದ್ದರೂ, ಸದ್ದಿನಿಂದ ಕೊಂಚ ಶಬ್ದ ಮಾಲಿನ್ಯ ಆಗಿದೆ ಎನ್ನುವುದು ನಿಜ. ಈ ಮಾಲಿನ್ಯಕ್ಕೆ ತಮ್ಮ ದನಿ ಅಡಗದಿರಲೆಂದು ಇಕ್ಕೆಲಗಳಲ್ಲಿ ನಿಂತು ಗಟ್ಟಿ ಮಾತನಾಡುವವರ ಪಾಲೂ ಇದೆ. ಆದರೂ ಹೊಸ ದಾರಿಗಳು ನಿರ್ಮಾಣ ಆದ ಮೇಲೆ ಅದರಲ್ಲಿ ಎಲ್ಲರೂ ಪಯಣಿಗರೇ ಆದುದರಿಂದ ಮಾಲಿನ್ಯದ ಮಿತಿ ಎಷ್ಟು ಇರಬೇಕು ಎನ್ನುವುದು ಪ್ರಶ್ನೆ.
ಬಹುಶ ಈ ಪಯಣದಲ್ಲಿ ಅವರಿಗೆ ಏಕಾಂಗಿ ಭಾವ ಕಾಡಿರಬಹುದು. ಏಕೆಂದರೆ ಅವರು ನಡೆದದ್ದೇ ಹಾದಿ ಆಗಿರುವುದರಿಂದ ಅಲ್ಲಿ ಜೊತೆಗಾರರೆ ಇಲ್ಲ.
ಕನ್ನಡ ಒರೆಗಳ ಬಳಕೆ ಬಗ್ಗೆ ಮಾಯ್ಸರಿಂದ ನಾನು ಪ್ರಭಾವಿತನಾಗಿದ್ದೇನೆ. ಅದಕ್ಕೆ ನನ್ನಿ.
ಉ: ಕೊನೆಯ ಮಾತು
http://www.hariharap...
ಬರಹದ ದಿನಾಂಕ ನೋಡಿದಿರಾ? ಮಹೇಶ್ ಕಿಲಾಡಿ[ ಎರಡು ಅರ್ಥವಿದೆ, ಅದರಲ್ಲಿ ತುಂಟನೆಭುದು ನನ್ನ ಅಭಿಪ್ರಾಯ]
ಹರಿಹರಪುರಶ್ರೀಧರ್
ಉ: ಕೊನೆಯ ಮಾತು
:-) ಅರೆ! ಹೌದಲ್ಲ!
ಉ: ಕೊನೆಯ ಮಾತು
http://www.hariharap...
ಬರಹದ ದಿನಾಂಕ ನೋಡಿದಿರಾ? ಮಹೇಶ್ ಕಿಲಾಡಿ[ ಎರಡು ಅರ್ಥವಿದೆ, ಅದರಲ್ಲಿ ತುಂಟನೆಂಬುದು ನನ್ನ ಅಭಿಪ್ರಾಯ]
ಹರಿಹರಪುರಶ್ರೀಧರ್
ಉ: ಕೊನೆಯ ಮಾತು
ಕುಱೈಯೊನ್ಱುಮಿಲ್ಲೈ ಮರೆಮೂರ್ತಿ ಕಣ್ಣ!
ಕೊರಗೊಂದೂ ಇಲ್ಲ ಮರೆಮೂರ್ತಿ ಕೃಷ್ಣ
ಕಣ್ಣಿಗೆ ತಿಳಿಯದಂತೆ ಮರೆಯಲ್ಲಿಹೆ ಕೃಷ್ಣ
ಗುಡ್ಡದ ಮೇಲ್ ಕಲ್ಲಾಗಿ ನಿಂತಿಹೆ ವರದ
ಮಣಿವಣ್ಣ ಮಲೆಯಪ್ಪ ಗೋವಿಂದ ಗೋವಿಂದ
ಈ ಕಲಿಯುಗದಲ್ಲಿ ವೆಂಕಟೇಶಾ
ಗುಡಿಯಲ್ಲಿ ನೆಲೆಸಿಹೆ ಕೇಶವ
ಕೊರಗೊಂದು ಇಲ್ಲ ಮರೆಮೂರ್ತಿ ಕೃಷ್ಣ
ನಿನ್ನಾ ಕರುಣೆಗಡಲಲ್ಲಿ ಮುಳಿಗಿಸೋ ಕೃಷ್ಣ
ಓದಿ ಅರಿತ ಜ್ಞಾನಿಗಳು ಮರೆ
ಸರಿಸಿ ಕಾಣ್ಪರೋ ನಿನ್ನಾ ಕೃಷ್ಣ
ಕೊರಗೊಂದೂ ಇಲ್ಲವೆನಗೆ ಮರೆಮೂರ್ತಿ ಕೃಷ್ಣ
ಮಣಿವಣ್ಣ ಮಲೆಯಪ್ಪ ಗೋವಿಂದ ಗೋವಿಂದ
=====================
ಗುರು ನಿಮಗೆ!
ಉ: ಕೊನೆಯ ಮಾತು
http://www.hariharap...
ನೀವು ಯಾರಿಗೆ ಬರೆದರೂ ಆಸಕ್ತರೆಲ್ಲ ಓದೇ ಓದುತ್ತಾರೆ.
ಹರಿಹರಪುರಶ್ರೀಧರ್
ಉ: ಕೊನೆಯ ಮಾತು
ಹರಿತ ಬುದ್ಧಿಯ ಬಗ್ಗೆ ಹುಷಾರಾಗಿರ್ಬೇಕು . ಯಾರ್ಗಾದ್ರೂ ತಾಗಬಹುದು .
:(
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಕೊನೆಯ ಮಾತು
ಮಹೇಶರೆ,
ಮರಳಿ ಮತ್ತೆ ಬನ್ನಿ. ಅಚ್ಚುಕಟ್ಟಾದ ಊಟಕ್ಕೆ ಕಳಿತು ಖಾರ ತುಸು ಕಡಿಮೆಯಾದ ಉಪ್ಪಿನಕಾಯಿ ಇರಲೇ ಬೇಕು :)
-ಅಚಲ