ಸಮ್ಮಿಶ್ರ ಎಂಬ ಕಲಸುಮೇಲೊಗರ.
ಯಾಕೋ ನಮ್ಮ ತೆನೆಹೊತ್ತಹೆಂಗಸಿಗೆ ತಾವರೆಯ ಕಡುಗಂಪು ಹಿಡಿಸಲಿಲ್ಲ... ಅದಕ್ಕೆ ಮುಡಿಯುವ ಮೊದಲೇ ಉಡಿಯಿಂದ ಕೆಳಗೆ ಬೀಳಿಸಿ ಬಿಟ್ಟಿತು. ಇಲ್ಲಿ 'ಸತ್ಯ', 'ವಚನಭ್ರಷ್ಟ', ಮುಂತಾದ ದೊಡ್ಡದೊಡ್ಡ ಮಂದಿಗಳ ತಲೆಗಿಳಿಯದ ಹೆಗ್ಗಂಟು-ಕಗ್ಗಂಟಾದ ಒರೆಗಳನ್ನು ಬಿಟ್ಟು, ಒಮ್ಮೆ ಒಬ್ಬ ಮಾಮೂಲಿ ಕನ್ನಡದವನಂತೆ ತುಸು ತಲೆಯಾಡಿಸಿದ್ರೆ, ನಮಗೆ ಈ ಪಾಡಿನ ತಿಳಿ ತಿಳಿಯುವುದು.
ಈಗೇನೋ ತಾವರೆಪಡೈ ಊರೂರು ಸುತ್ತಿ, ತನೆಹೊತ್ತವಳ ಪಡೆಯವರ ಮೋಸ-ದಗ-ವಂಚನೆ-ಬಿಂಕು ಹೀಗೆ ಅವರನ್ನು ಉಗಿದು ಉಪ್ಪಿನಕಾಯಿ ಹಾಕುವ ಹವಣಿಕೆ ನಡೆಸಿದೆ.. ಸರಿ.. ಒಳ್ಳೆಯದು. ಆದ್ರೆ.. ಇದರಿಂದ ದಿಟವಾಗಲೂ ಅವರಿಗೆ ಲಾಬ ಇದ್ಯಾ? ಅದು ಅವರಿಗೆ ಗಿಟ್ಟುವ ನಡೆಯೇ? ಕಾದು ನೋಡುಮ.
ಆದ್ರೆ.. ಕುವರಸಾಮಿ, ರೇವಣ್ಣರು ತಮ್ಮ ಜಾಗಗಳಿಗೆ ಕೆಳದ ಇಪ್ಪತ್ತು ತಿಂಗಳುಗಳೊಳಗೆ ಮಾಡಿಕೊಂಡ ಸವಲತ್ತು ಸಕ್ಕತ್ತಾಗಿದೆ.. ಜೊತೆಗೆ ಅವರವರ ನೆಲೆಗಳನ್ನು ಅವನು ಬಲು ಗಟ್ಟಿ ಮಾಡಿಕೊಂಡಿರುವುದಂತೂ ನಿಕ್ಕುವ ಎಂಬಂತೆ ಕಾಣ್ತಿದೆ.. ಹಾಗೇ ಹಲವಾರು ತನೆಹೊತ್ತವಳ ಪಡೆಯ ಶಾಸಕರು ತಮ್ಮ ತಮ್ಮ ಊರಲ್ಲಿ ಸಕ್ಕತ್ ಗಟ್ಟಿಯಾಗಿದ್ದಾರೆ.
ಇನ್ನು ತಾವರೆಪಡೆಯೇನು ಕಮ್ಮಿಯೇ.. ಕರಾವಳಿ-ಹುಬ್ಬಳ್ಳಿ/ದಾರವಾದ-ಮಲೆನಾಡಲ್ಲಿ ಈ ಮಿಂದಾವರೆಯ ಕದುರು ಬಲು ಜೋರಾಗಿದೆ.
ಇವರ ನಡುವೆ ನಮ್ಮ ಹಳೇ ಕಾಂಗ್ರೆಸ್ಸೂ ತಕ್ಕಮಟ್ಟಿಗಾದ್ರೂ ಗಟ್ಟಿಯಾಗಿದೆ.
ಈಗ ಇಸಾರ ಏನಂದ್ರೆ, ಮುಂದಿನ ಚುನಾವಣೆಯಾಗೂ ಈ ತೆರ ಎಡಬಿಡಂಗಿ ಪಾಡು ಬರೋದೇ ನಿಕ್ಕುವದಂತೆ ತೋರ್ತಾ ಐತಲ್ಲ. ಹಿಂಗೆ ನಮ್ಮ ಕನ್ನಡನಾಡನ್ನು ಗಟ್ಟಿಯಾಗಿ ಆಳಕ್ಕೆ ಆಗದೇ ಸುಮ್ನೆ ಹೊತ್ತುಪೋಲು ಆಗ್ತಾ ಹೋದ್ರೆ ನಮ್ಮ ಪಾಡು, ನಾಯಿಪಾಡು.
ಅದಕ್ಕೆ ತಾವರೆಯೋ, ತನೆಹೊತ್ತವಳೋ, ಇಲ್ವೇ ಬರಿಯಂಗೈಯ್ಯೋ, ಯಾವುದಾದ್ರೂ ಒಂದು ಪಾರಟಿಗೆ ನಾವೆಲ್ಲು ಓಟಿಕ್ಕಿ ಗೆಲ್ಲಿಸಬೇಕು. ಸುಮ್ನೆ ಈ ಸಮ್ಮಿಸ್ರ ಅನ್ನೋದು ಕಲಸುಮೇಲೊಗರ ಹೊರತು ಹದದ ಹದುಳದ ಕೂಳಲ್ಲ.
ನೀವೇಂನಂತೀರ? ವಸಿ ಯೋಸ್ಸಿ(ಚ್ಸಿ) ಬುದ್ದಿಗಳೇ.!

- mahesha ರವರ ಬ್ಲಾಗ್
- Login or register to post comments
- 273 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS: