ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಸಂಪದ ಫೌಂಡೇಶನ್ನಿಗೆ ನೆರವಾಗಿ

ಸಂಪದ › Sampada Blogs › mahesha ರವರ ಬ್ಲಾಗ್

ಕಂನಡ ಸಂಗಗಳು ಯಾಕೆ ಇಷ್ಟೊಂದು?

August 8, 2007 - 9:52pm — mahesha

ನಾನು ಊ ಕನ್ನಡದ ಸಂಗದಲ್ಲಿಲ್ಲ ಅಂದ್ರೆ ನೀವು ನಂಬಲ್ಲ, ಆದ್ರು ಅದು ದಿಟ. ನನಗೆ ಕನ್ನಡ ಸಂಗಗಳನ್ನು ಸೇರಬಾರದು ಅಂತ ಹಟವಿಲ್ಲ. ಆದ್ರೂ ಸೇರಕ್ಕೆ ಆಗಿಲ್ಲ.

ನಾನು ಬೆಂಗಳೂರಿಗೆ ಬಂದ ಮೇಲೆ, ಅದೂ ಸಂಪದದಲ್ಲಿ ಬರೆಯ-ತೊಡಗಿದ ಮೇಲೆ, ನಂನಂನು ಹಲವರು ತಂಮ ಕಂನಡ ಕೂಟಕ್ಕೆ ಕರೆದುದುಂಟು, ನಾನು ಒಂದೆರಡು ಸರತಿ ಹೋಗಿದ್ದೂ ಉಂಟು. ಎಲ್ಲರ ಮಾತೂ ಒಂದೇ ಅದರ ಸಾರ ಹೀಗಿದೆ

"ಕನ್ನಡವು ಅತಿ ಪ್ರಾಚೀನವಾದ, ಅದ್ಭುತ, ಸಂಪದ್ಭರಿತ ಭಾಷೆ. ಕನ್ನಡವು ನಮ್ಮ ಮಾತೃಭಾಷೆ, ಅದಕ್ಕೆ ನಾವು ಕನ್ನಡದ ಸೇವೆ ಮಾಡಬೇಕು. ಕನ್ನಡರಿಗರು ಎಲ್ಲ ರಂಗದಲ್ಲೂ ಮುಂದೆ ಬರಬೇಕು..."

ಈ ಮಾತುಗಳನ್ನು ಕೇಳಿದೇಟಿಗೆ "ಅಯ್ಯೋ ಮಾರಾಯ, ಕನ್ನಡ ಬಲು ಹಳೆಯ, ತುಂಬುಸಿರಿಯ, ಸೋಜಿಗದ ನುಡಿ. ಅದು ನಮ್ಮ ತಾಯ್ನುಡಿ, ಅದಕ್ಕೆ ನಾವು ಕನ್ನಡಕ್ಕೆ ದುಡಿಯಬೇಕು.. ಹೀಗೆ ಹೇಳು, ಕನ್ನಡ ಅಂತ ಕನ್ನಡಕ್ಕಿಂತ ಹೆಚ್ಚು ಸಂಸ್ಕೃತದ ಒರೆಗಳನ್ನು ತಪ್ಪು ತಪ್ಪಾಗಿ "ಅದುಬುತ, ಮಾತ್ರುಬಾಶೆ, ಸಂಪತ್‌ಬರಿತ" ಅಂತ ಹೇಳಬೇಡ" ಎಂದು ಹೇಳೋಣ ಅನ್ನಿಸಿಬಿಡ್ತದೆ.

ನನಗೆ ಸಂಸ್ಕೃತದ ಮೇಲೆ ಹಗೆಯಿಲ್ಲ, ಆದರೆ ಏನೋ ದೊಡಸ್ತಿಕೆ ಎಂದು ತಪ್ಪು ತಪ್ಪು ಸಂಸ್ಕೃತೋಚ್ಚಾರಣೆಗೆ ಇರುಸುಮುರುಸು. ಹಾಗಂತ ನಾನು ಬಲು ಚಂನಾಗಿ ಸಂಸ್ಕೃತ ಉಲಿಯಲಾರುವೆ ಎಂದಲ್ಲ. ತಕ್ಕ ಮಟ್ಟಿಗೆ ಬರುವುದು.

ಆದ್ರೆ ಇರಲಿ ಮುಂದೆ ನೋಡೋಣ ಅಂತ ಸುಮ್ನೆ ಕುಳಿತು, ಎಲ್ಲದಕ್ಕೂ ಸುಮ್ಮನಿದ್ದು ಬರುವೆ. ಮುಂದಿನ ಸರತಿ ಹೋದಾಗಲೂ ಇದೇ, ಇದನ್ನು ಬಿಟ್ರೇ ಕಾವೇರಿ ಹೆಸರಲ್ಲಿ ತಮಿಳರನ್ನು ಜರಿಯುವುದು, ಮತ್ತು ರಾಜಕೀಯ ರಾಜಕೀಯ ರಾಜಕೀಯ!!.

ಕೊನೆಗೆ ನಾನು ಏನೋ ಒಂದು ಕುಂಟುನೆವಗಳನ್ನು ಹೇಳಿ ತಪ್ಪಿಸಿಕೊಂಡು ಬರಬೇಕು.

ನನಗೆ ಬೇಸರವಾದ ಸಂಗತಿಯೆಂದರೆ ಈ ಹಲವು ಸಂಗಗಳಿಗೆ ಕನ್ನಡ ಸಾಹಿತ್ಯದಲ್ಲಾಗಲಿ, ಕನ್ನಡ ವ್ಯಾಕರಣದಲ್ಲಾಗಲಿ ಇಲ್ವೇ ಕನ್ನಡ ಇತಿಹಾಸದಲ್ಲಾಗಲಿ ಆಸಕ್ತಿ/ಹುರುಪು ತೀರಾ ಕಡಮೆ. ಇವರಿಗೆ ಗೊತ್ತಿರುವವರು "ರಾಜಕುಮಾರ, ಕುವೆಂಪು" ಈಸೇ. ನನಗೂ ಈ ಇಬ್ಬರು ನಮ್ಮ ಕನ್ನಡಕ್ಕೆ ದೊಡ್ಡ ಹಿರಿಮೆ ತಂದವರು, ಎಂದು ಗೊತ್ತು, ಆದರೆ ಇನ್ನೂ ಹಲವು ಮಂದಿ ಇದ್ದಾರಲ್ಲ, ಅವರ ಬಗ್ಗೂ ತುಸು ತಿಳಿಯಬೇಕಲ್ಲ.

"ಕವಿರಾಜಮಾರ್ಗ" ಅಂತ ಇದೆ ಅಂತ ಗೊತ್ತು, ಆದರೆ ಅದರ ಒಂದು ಪದ್ಯವನ್ನೂ ಓದಿಲ್ಲ. ಪುಲಿಕೇಶ ಎಲ್ಲೋ ಕೇಳಿದ್ದೇನೆ. ಇನ್ನು ಆಂಡಯ್ಯ, ರಾಘವಾಂಕ, ಇವರೆಲ್ಲ ಎಲ್ಲಿ ಗೊತ್ತಿರುವುದು.

ಈ ಅಲ್ಲಿಇಲ್ಲಿ ಕಂನಡ ಮಾತಾಡೋ ಬೆಂಗಳೂರಲ್ಲಂತೂ ಒಂದು ಮಣ ಕಂನಡ ಸಂಗಗಳು. ಊ ಸರ್ಕಲ್ಲಲ್ಲೂ, ಕಂನಡ ಸಂಗದ ಚಿತ್ರಪಟಗಳು, ಕಂನಡ ತೆಕ್ಕೆ/ಬಾವುಟಗಳು. ಇರಲಿ ಒಳ್ಳೇದು.
ಆದರೆ ....

============================
ಇದು ನಂನ ಒಳನಿಸಿಕೆ. ಊ ಗುಂಪನ್ನು ಕುರಿತಲ್ಲ.

~.~
  • mahesha ರವರ ಬ್ಲಾಗ್
  • Login or register to post comments
  • 338 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಬಾರತೀಯರು ಬಾರತೀಯರು ಯಾಕೆ? ಉದ್ಯೋಗಿಗಳು ಉದ್ಯೋಗಿಗಳು ಯಾಕೆ?
  • ತಪ್ಪು ಒಪ್ಪಿಕೊಳ್ಳುವ ದೊಡ್ಡಗುಣ - ಇದು ನಮ್ಮಲ್ಲಿ ಇಲ್ಲ!
  • ನುಡಿಗೆ ಬರವಣಿಕೆ ಕಟ್ಟುಪಾಡು ಬೇಡ!
  • Avestan ವೇದ-ಭಾಷೆಯ ಮಾತೃಭಾಷೆ.
  • ನಮ್ಮ ಕನ್ನಡವನ್ನು develop ಮಾಡಿ.
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಾಯ್ಸ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಜೋಹದ್ (ನಂದುವಾಲಿ ನದಿ ಪ್ರದೇಶ), ರಾಜಸ್ಥಾನ

(ಚಿತ್ರ: Farhad Contractor.)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಮುಂಬಯಿ ಮುಖಗಳು ಭಾಗ ೧.....
  • ಗುಟ್ಟು - ಸ್ಫೂರ್ತಿ ಸೆಲೆ ೬
  • ಕಣ್ಣೀರು - ಸ್ಫೂರ್ತಿ ಸೆಲೆ ೫
  • ಜೀವನ - ಸ್ಫೂರ್ತಿ ಸೆಲೆ ೪
  • ಸಾಲ - ಸ್ಫೂರ್ತಿ ಸೆಲೆ ೩
  • ಸಂತೋಷ - ಸ್ಫೂರ್ತಿ ಸೆಲೆ ೨
  • ಹಣ - ಸ್ಫೂರ್ತಿ ಸೆಲೆ ೧
  • ಆ ರಾತ್ರಿ...(ನೈಜ ಘಟನೆ ಆಧಾರಿತ ಕಥೆ)
  • ಮನಸ್ಸಿಗೂ ಅಂಗಿ. . ?
  • ನಿನ್ನ ನಗುವಿಗೆ ನನ್ನ ಕನಸನರ್ಪಿಸುವೆ..
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • anivaasi
    ಉ: ಹಸಿವು - ಮಾಯ್ಸನ ಕಂತೆ ೧೨
    August 8, 2008 - 2:20am
  • anivaasi
    ಉ: ಮನಸ್ಸಿಗೂ ಅಂಗಿ. . ?
    August 8, 2008 - 2:15am
  • anivaasi
    ಉ: ಕ್ರೌರ್ಯ ಮತ್ತು ಬಲಿ
    August 8, 2008 - 2:13am
  • anivaasi
    ಉ: ಕ್ರೌರ್ಯ ಮತ್ತು ಬಲಿ
    August 8, 2008 - 2:06am
  • kalpana
    ಉ: Abroad ಅನ್ನೋ ಮಾಯೆ...
    August 8, 2008 - 12:11am
  • kannada.kanteerava
    ಉ: ಕನ್ನಡ ಮಾತನಾಡದ ಶಾಸಕ
    August 7, 2008 - 11:33pm
  • Rajeshwari
    ಉ: ಸ೦ಪದದಲ್ಲಿ ಜಾಣೆಯರು
    August 7, 2008 - 10:59pm
  • Jayalaxmi.Patil
    ಉ: ಮುಂಬಯಿ ಮುಖಗಳು ಭಾಗ ೧.....
    August 7, 2008 - 10:33pm
  • hamsanandi
    ಉ: ಆ ರಾತ್ರಿ...(ನೈಜ ಘಟನೆ ಆಧಾರಿತ ಕಥೆ)
    August 7, 2008 - 9:56pm
  • shreedevikalasad
    ಉ: ಮನಸ್ಸಿಗೂ ಅಂಗಿ. . ?
    August 7, 2008 - 9:09pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 90 ಅತಿಥಿಗಳು ಆನ್ಲೈನ್ ಇರುವರು.


"ರಕ್ತಕ್ರಾಂತಿಯಿಂದ ನಮಗೆ ಸ್ವಾತಂತ್ರ್ಯ ಬಂದಿದ್ದರೆ ಯಾರು ಯಾರು ಶ್ಮಶಾನದಲ್ಲಿರಬೇಕಾಗುತ್ತಿತ್ತೋ ಅವರೆಲ್ಲಾ ಈಗ ನಮ್ಮ ಭವಿಷ್ಯದ ಚುಕ್ಕಾಣಿ ಹಿಡಿದು ಕುಳಿತಿದ್ದಾರೆ. ಈ ಪಟ್ಟಭದ್ರರೂ ಆತ್ಮವಂಚಕರೂ ಸೇರಿ ಸಾಧಿಸುವುದು ಬರೀ ಕಾಲವಂಚನೆಯಷ್ಟೇ"
(ಕುವೆಂಪುರವರಿಗೆ ಅರುವತ್ತು ವರ್ಷ ತುಂಬಿದ ಸಂದರ್ಭದಲ್ಲಿ ತೇಜಸ್ವಿಯವರು ಪ್ರಜಾವಾಣಿಗಾಗಿ ನಡೆಸಿದ ಸಂದರ್ಶನದ ಪ್ರಶ್ನೆಯೊಂದಕ್ಕೆ ಉತ್ತರ ನೀಡುತ್ತ)

— ಕುವೆಂಪು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator