ಆವರಣಾಭಿಮಾನ
ಭೈರಪ್ಪನವರ 'ಆವರಣ' ಒಳ್ಳೆ ಕಡಲೇ ಪುರಿ ಮಾರಾಟವಾದ ಹಂಗೆ ಮಾರಾಟವಾಯ್ತಾ ಇದೆ.
ಅದನ್ನು ಜಾಸ್ತಿ ಸೇಲ್ ಮಾಡಲೂ ಕೆಲವು ಸಂಸ್ಥೆಗಳು ಟೊಂಕ ಕಟ್ಟಿ ನಿಂತ ಹಂಗೆ ಕಾಣತ್ತೆ.
ಅದರ ಸೇಲ್ ಇನ್ನೂ ಹೆಚ್ಚಿಸಲು ಅದು ರದ್ದಾಗುತ್ತೆ ಅಂತ ಗಾಳಿಮಾತು ಜೋರಾಗಿ ಬೀಸ್ತಾ ಇದೆ.
ಅದನ್ನು ಮೆಚ್ಚಿ ಗೋಷ್ಠಿಗಳು ನಡೈತಾ ಇದೆ.
ಇದನ್ನೆಲ್ಲ ನೋಡಿ, ಭೈರಪ್ಪನವರ ಹಲವು ಕಾದಂಬರಿಗಳನ್ನು ಓದಿದವರು ಹಸಿ ಹಸಿ ಹುಮ್ಮಸ್ಸಿನಿಂದ ಮುನ್ನುಗಿ ಹೋಗಿ ಅದನ್ನು ಓದಿದರೆ, ಇದು ಯಾಕೆ ಇಷ್ಟು ಬೇರೆ ತೆರದಲ್ಲಿದೆ ಎಂದು ಅನ್ನಿಸಬಹುದು.
ನನಗಂತು ಅದರಲ್ಲಿ ಕೆಲವು ವಿಚಾರಗಳು ಚರಿತ್ರೆಯ ಪುಸ್ತಕವನ್ನು ಓದಿಷ್ಟು ಡ್ರೈ ಎನಿಸಿತು.
ಪರ್ವ ಮತ್ತು ಸಾರ್ಥಗಳ ಹದವಿಲ್ಲ. ಈ ಕಾದಂಬರಿ ಅರ್ಜೆಂಟಲ್ಲಿ ಓಡಿ ಓಡಿ ಹೋಗುತ್ತೆ.
ಈ ಕಾದಂಬರಿ ಚೆನ್ನಾಗಿಲ್ಲ ಅಂತ ಅಲ್ಲ. ಆದರೆ ಪರ್ವ ಮತ್ತು ಸಾರ್ಥದ ಹದದಲ್ಲಿಲ್ಲ.
ನಾನು ಓದಿದುವು ಅವರ ಆರುವರೆ ಕಾದಂಬರಿ(ಮಂದ್ರಾ ಇನ್ನು ಬಾಕಿ ಇದೆ) ಮತ್ತು ನೋಡಿದುವು ಅವರ ಕತೆಯ ಮೇಲೆ ಆದ ಎರಡು ಸಿನಿಮಾ.
ಅವಲ್ಲಿ ನನಗೆ 'ಪರ್ವ' ಮತ್ತು 'ತಬ್ಬಲಿ ನೀನಾದೆ ಮಗನೇ'(ಸಿನಿಮಾ) ಬಹಳ ಮೆಚ್ಚು.
'ಪರ್ವ'ವನ್ನು ಬ್ಯಾನಿದ್ದರಂತೆ( ಬ್ಯಾನ್ ಮಾಡಿದ್ದರಂತೆ
), ಅದೇಕೆ ಅಂತ ನನಗೆ ಗೊತ್ತಿಲ್ಲ.
ಏಕೆ ಅಂತ ಉವರು ತಿಳಿಸಿ!

- mahesha ರವರ ಬ್ಲಾಗ್
- Login or register to post comments
- 736 hits
- Email this blog





RSS:
ಪ್ರತಿಕ್ರಿಯೆಗಳು
Re: ಆವರಣಾಭಿಮಾನ
ನನಗೆ ತಿಳಿದ್ಂತೆ ಪರ್ವ ಬ್ಯಾನ್ ಆಗಿರಲಿಲ್ಲ .. ಗಿರಡ್ಡಿ ಗೋವಿಂದರಾಜರು ಭೈರಪ್ಪನವರ ಮೇಲೆ ಕೃತಿಚೌರ್ಯದ ಆಪಾದನೆ ಹೊರಿಸಿದ್ದರು..
-ಹಂಸಾನಂದಿ
Re: ಆವರಣಾಭಿಮಾನ
ಹೌದು ಭೈರಪ್ಪನವರ ಯಾವ ಕೃತಿಯೂ ಬ್ಯಾನ್ ಆಗುವಂಥವಲ್ಲ. ಆವರಣ ಬ್ಯಾನ್ ಆಗಲಿ ಎಂದು ಅವರೇ ಆಸೆ ಪಟ್ಟಿದ್ದರೂ ಅದಾಗುತ್ತಿಲ್ಲ.
ಜೈ ಕನ್ನಡ ಭುವನೇಶ್ವರಿ
ಇಸ್ಮಾಯಿಲ್ ನನ್ನ ಬ್ಲಾಗ್: http://ismail.sampada.net
ಈ ವರುಷ ಭೈರಪ್ಪನವರ ವರುಷ
ಮೊದಲು ಅವರ ನಾಯಿನೆರಳು ಕಾದಂಬರಿ ಚಿತ್ರವಾಗಿ ಬಿಳಿಪರದೆ ಏರಿತಲ್ಲದೆ, ಪಿವಿಆರ್ ಅಲ್ಲಿ ಹೌಸ್ ಪುಲ್ ಓಡಿತು.
ತರುವಾಯ ಅವರ "ಆವರಣ" ಸೂಪರ್ ಹಿಟ್. ಹಾಟ್ ಕೇಕಂತೆ ಸೇಲಾಯ್ತು.
ಅದಲ್ಲದೆ, ಈಗ ’ಆವರಣ’ದ ಕುರಿತ ಸಂವಾದಗಳು ನಡೆಯುತ್ತಾ ಇವೆ
ಸಂಡೇ ನಡೆದ ಸಂವಾದದಲ್ಲಿ ನಾರಯಾಣಮೂರ್ತಿಗಳು ( the murthys
) ಬಂದಿದುದು, ಒಂದು ತೆರ ಚೆನ್ನಾಗಿದೆ
http://vijaykarnatakaepaper.com/pdf/2007/03/19/20070319a_004101003.jpg
http://prajavaniepaper.com/pdf/2007/03/19/20070319a_004100002.jpg
(ಈ ವರುಷ ಭೈರಪ್ಪನವರ ವರುಷ) ++;
ಇನ್ನೂ ಒಂದೆರಡು ಕಾರಣಗಳನ್ನು ಸೇರಿಸಬಹುದು..
ಶಂಕರಮೂರ್ತಿಯವರ ಹೇಳಿಕೆಯ ಬಳಿಕ ಕಾರ್ನಾಡ್ ಅವರಿಂದ ಭೈರಪ್ಪನವರ ಮೇಲೆ ಕೆಸರೆರೆಚುವ ಬಾಲಿಶ ಪ್ರಯತ್ನ. ಅದಕ್ಕೆ ಭೈರಪ್ಪನವರ ವಿದ್ವತ್ಪೂರ್ಣವಾದ ಉತ್ತರಗಳು, ಓದುಗರ ಬೆಂಬಲದ ಸುರಿಮಳೆ ಇತ್ಯಾದಿ ಇತ್ಯಾದಿ..
(ಭೈರಪ್ಪನವರು ಇಲ್ಲಿ ಜನಪ್ರಿಯತೆಯನ್ನು ಉದ್ದೇಶಿಸದೆ ಇರಬಹುದು, ಆದರೆ ವಿಷಯ ತುಂಬಾ ಬಿಸಿ ಇದ್ದುದರಿಂದ ಭೈರಪ್ಪನವರ ಕಾದಂಬರಿಯನ್ನು ಓದದ ’class of people' ಕೂಡ ಭೈರಪನವರ ಬರಹವನ್ನು ಈ ಸಂದರ್ಭದಲ್ಲಿ ಓದಿದರು.)
ವಸಂತ್ ಕಜೆ
(ಈ ವರುಷ ಭೈರಪ್ಪನವರ ವರುಷ) +++;
ಆ ಶಂಕರಮೂರ್ತಿ ಅವರ ಹೇಳಿಕೆ ಜೊತೆ, ಪೇಪರಲ್ಲಿ ಆದ ಬೈರಪ್ಪ ಮತ್ತು ಕಾರ್ನಾಡರ ನಡುವೆ ಬರೆವಣಿಗಯೆ ಚಕಮಕಿ( ಮಾತಿನ ಚಕಮಕಿ ತೆರ) ಬಹಳ ಮಜಾ ತಂತು.
ನನಗಂತೂ ದಿನಾ ಅದರ ಬಗ್ಗೆ ಯಾರು ಯಾರನ್ನು ಅಂತಾರೆ ಅಂದ ಓದೋದೇ ಒಂದು ತಪ್ಪದ ಕೆಲಸ!
ಯಾರು ಗೆದ್ದರೋ, ಯಾರು ಬಿದ್ದರೋ, ಆದರೆ ಮಂದಿಗೆ ಟಿಪ್ಪುವಿನ ಎಸ್ಟು ಅಡಗಿಸಿಟ್ಟಿದ ಸುದ್ದಿಗಳೆಲ್ಲ ಬಯಲಾಯಿತು.
ಭೈರಪ್ಪನವರ ಅಧಿಕೃತ ಉತ್ತರ
ಮಹೆಷರವರೆ,
ನೀವು ಓದಿದ್ದೀನಿ ಅಂದ ಕೆಲವು ಭೈರಪ್ಪನವರ ಉತ್ತರಗಳು ಅಥವ ಅವುಗಳ ಕೊಂಡಿಗಳನ್ನು ನನ್ನೊಂದಿಗೆ ಇಲ್ಲಿ ಹಂಚಿಕೊಳ್ಳುವಿರಾ? ಆ ಕಾಲದಲ್ಲಿ ಈ ಬಗ್ಗೆ ಏನೂ ಓದಿಲ್ಲದಿದ್ದರಿಂದ, ಏನು ನಡೀತು ಎಂದು ತಿಳಿಯಲು ನನಗೆ ಕುತೂಹಲ
ಭೈರಪ್ಪನವರ ಉತ್ತರ
ರೋಹಿತ್
ನನ್ನ ಬಳಿ paper cuttings ಇವೆ. ಅದು ಇಲ್ಲಿ ನನ್ನ ಬಳಿಯಿಲ್ಲ. ಊರಲ್ಲಿದೆ.
ನನ್ನ ಹೆಸರು ಮಹೇಶ
.
ಮಹಿಷ ಅಂದರೆ ಕೋಣ ಅಂತ.
ನಿಮ್ಮ ಕೂತುಹಲ ತೀರಿಸುವ ಕೊಕ್ಕೆಗಳನ್ನು ನೀಡಲು ಆರುವರು, ನಿಮಗೆ ನೆರವಾಗಲಿ!
ನನ್ನಿ!