ಗಾಳಿಪಟ
ಇಪ್ಪತ್ತಯ್ದಾಗ್ತಾ ಇದೆ! ಈ ಬಗೆ ಇಪ್ಪತ್ತಯ್ದರ ಸುತ್ತ ಮುತ್ತನಿನ ಮಂದಿಯ ಮನದ ಕತೆ.
ಸಿನಿಮ ಚನ್ನಾಗಿದೆ.

- mahesha ರವರ ಬ್ಲಾಗ್
- Login or register to post comments
- 757 hits
- Email this blog



ಇಪ್ಪತ್ತಯ್ದಾಗ್ತಾ ಇದೆ! ಈ ಬಗೆ ಇಪ್ಪತ್ತಯ್ದರ ಸುತ್ತ ಮುತ್ತನಿನ ಮಂದಿಯ ಮನದ ಕತೆ.
ಸಿನಿಮ ಚನ್ನಾಗಿದೆ.




ಪ್ರತಿಕ್ರಿಯೆಗಳು
ಉ: ಗಾಳಿಪಟ
ಟಿಕೆಟ್ ಸಿಗ್ತಾ ಇಲ್ವಲ್ಲ..
ಪಿವಿಆರ್ನಲ್ಲಿ ಬುಧವಾರದವರೆಗೂ ಟಿಕೆಟ್ ಇಲ್ಲ.
ಸಿನೆಮಾ ಚೆನ್ನಾಗಿದೆ ಎಂದು ಎಲ್ಲರು ಹೇಳುತ್ತಿದ್ದಾರೆ.ವಿಜಯ ಕರ್ನಾಟಕದ ಕಿತ್ತೋಗಿರುವ ರಿವ್ಯೂ ಒಂದನ್ನು ಬಿಟ್ಟು.
ಉ: ಗಾಳಿಪಟ
ಇದೊಂದು ಕಿತ್ತುಹೋದ ಪ್ರಿವ್ಯೂ. ವಿಷಯ ತಿಳಿಯದೆ ವರದಿ ಮಾಡುವ ಕ್ರಮ.
______
ಬೊಳುಂಬು
ಉ: ಗಾಳಿಪಟ
ವಿಜಯ ಕರ್ನಾಟಕದಲ್ಲಿ ಬರೆದಿರೋದು ಆ ದೇವಶೆಟ್ಟಿ ಮಹೇಶ್.
http://www.vijaykarnatakaepaper.com/pdf/2008/01/19/20080119a_001101007.j...
ಇವರ ಕೆಲಸ, ಕನ್ನಡ ಸಿನಿಮಾಗಳಲ್ಲಿ ಕುಂದು ಹುಡುಕುವುದು. ಇವರೇ ವಿ.ಕ.ದಲ್ಲಿ ತಮಿಳಿನ 'ಶಿವಾಜಿ'ಯನ್ನು ಭಾರಿ 'ಮಹೋನ್ನತ' ಸಿನಿಮ ಅಂತೆಲ್ಲ ಹೊಗಳಿದ್ದರು.

ಇವರಿಗೆ 'ಗಾಳಿಪಟ'ದಲ್ಲಿ ಕಾಣಿಸಿದ 'ಸ್ಟುಪಿಡಿಟಿ' ಶಿವಾಜಿಯ ಎಳಸು ಸ್ಟಂಟ್ಗಳಲ್ಲಿ ಕಾಣಲಿಲ್ಲವೇನೋ ಪಾಪ ?
ಇದಕ್ಕೆಲ್ಲ ಮಣೆ ಹಾಕಿತ್ತಿರುವ ವಿ.ಕ. 'ಸಮಸ್ತ ಕನ್ನಡಿಗರ ಹೆಮ್ಮೆ'
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಗಾಳಿಪಟ
ನಂಗೆ ನೆನಪಿದೆ, ಆತ ಶಿವಾಜಿಯ ಬಗ್ಗೆ ಬರೆದಿದ್ದು.'ಅನಾಥರು' ಬಂದಾಗ, 'ರಿಮೇಕ್ ಮಾಡಿದ್ರೆ ಹೀಗೆ ಮಾಡಬೇಕು' ಎಂದು ಬರೆದಿದ್ರು!
'ಗಾಳಿಪಟ' ಚೆನ್ನಾಗಿಲ್ಲ ಅಂದರೆ ಪರ್ವಾಗಿಲ್ಲ.ಪ್ರತಿಯೊಬ್ಬರಿಗು ತಮ್ಮದೇ ಆದ ಅಭಿಪ್ರಾಯಗಳಿರುತ್ತಾವೆ. ಆದರೆ ರಿವ್ಯೂವಿನಲ್ಲಿ, ಭಟ್ಟರಿಗೆ ಸಿನೆಮಾ ಮಾಡೋಕೆ ಬರುವುದಿಲ್ಲ ಎಂದರೆ ಒಪ್ಪಿಕೊಳ್ಳೋದು ಕಷ್ಟ!
ಅಲ್ಲದೇ ವಿಜಯಕರ್ನಾಟಕದಲ್ಲಿ, ಸಿನೆಮಾದ ಬಗ್ಗೆ ಬರೆಯುವುದು ಆದಿತ್ಯವಾರ.ಅದು ಒಳಗಿನ ಪುಟಗಳಲ್ಲಿ..ಮೊದಲಿನ ಪುಟದಲ್ಲಿ, ಶನಿವಾರವೇ ಗಾಳಿಪಟದ ಬಗ್ಗೆ ಬರೆಯುವ ಅಗತ್ಯವೇನಿತ್ತೋ!ನಿನ್ನೆ ಬಿಡುಗಡೆಯಾದ ಇನ್ನೊಂದು ಸಿನೆಮಾ'ಹೊಂಗನಸು' .ಅದರ ಬಗ್ಗೆ ನಾಳೆ ಬರಿತಾರ?
ಉ: ಗಾಳಿಪಟ
ಮಾಯ್ಸ,
ನೀನೇ ಪುಣ್ಯ ಮಾಡಿದ್ದೆ ಅನ್ಸುತ್ತೆ
ಟಿಕೆಟ್ ಸಿಗ್ತ ಇಲ್ಲ. ಕಾಳಸಂತೆಯಲ್ಲಿ ೧೫೦/- ಟಿಕೆಟುಗಳನ್ನು ಮಾರುತ್ತಿದ್ದಾರೆ.
ಬೊಳುಂಬು, ಶಿವ,
ಈ ಕಿತ್ತೋದ ರಿವ್ಯೂಗಳನ್ನ ಕಟ್ಕೊಂಡ್ ನಮ್ಗೇನು. ಸಿನಿಮ ಚನ್ನಾಗಿಲ್ದೇದ್ರೆ ಈ ತರ ಟಿಕೆಟ್ಗೆ ಪರದಾಡಬೇಕಾಗಿತ್ತಾ?
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಗಾಳಿಪಟ
ವಿಜಯಕರ್ನಾಟಕದಲ್ಲಾದ್ರೆ ಪರ್ವಾಗಿಲ್ಲ, ಚಿತ್ರ ಬಿಡುಗಡೆಯಾದ ನಂತರ ವಿಮರ್ಶೆ ಪ್ರಕಟವಾಗಿದೆ. ಅವರಿಗೆ ಅನ್ನಿಸಿದ್ದನ್ನು ಅವರು ಬರೆದಿದ್ದಾರೆ. ಲಂಕೇಶ್ ಪತ್ರಿಕೆಯಲ್ಲಿರುವಂತೆ ಬಿಡುಗಡೆಯಾಗುದಕ್ಕೆ ಮುಂಚಿನ ಹಾಳು ಊಹೆಗಳನ್ನಲ್ಲ.
ಶಿವಾಜಿಯ ಬಗ್ಗೆ ವಿಪರೀತ ಅನ್ನಿಸುವಷ್ಟೇನೂ ಹೊಗಳಿಲ್ಲ .
______
ಬೊಳುಂಬು
ಉ: ಗಾಳಿಪಟ
ಸ್ನೇಹಿತರೆ,
ಚಿತ್ರ ನೋಡಿದವರದೆಲ್ಲ್ಲ ಒಂದೇ ಅಭಿಪ್ರಾಯ-ಚಿತ್ರ ಒಳ್ಳೆ ಮನರಂಜನೆ ಕೊಡುತ್ತೆ ಅನ್ನೋದು. ಒಬ್ಬ ಸರ್ವೆ ಸಾಮಾನ್ಯ ಪ್ರೇಕ್ಷಕನಿಗೆ ಇದಕ್ಕಿಂತ ಇನ್ನೇನು ಬೇಕು. ಇಷ್ಟಕ್ಕೂ ಚಿತ್ರವನ್ನು ಮುಂಗಾರು ಮಳೆಯ ಜೊತೆಗೆ ಹೋಲಿಕೆ ಮಾಡುವುದೇಕೋ ತಿಳೀತಿಲ್ಲ. ಮುಂಗಾರು ಮಳೆ ಅಂಥಾ ಬಿಗಿ ಕಥಾಹಂದರದ ಚಿತ್ರವೂ ಆಗಿರಲಿಲ್ಲ. ಅದರ ಗೆಲುವಿಗೂ ಅದರದೇ ಆದ ಹಲವಾರು ಸಾಂದರ್ಭಿಕ ಕಾರಣಗಳನ್ನು ಕೊಡುತ್ತಾರಾದರೂ ಕೊನೆಗೂ ಪ್ರೇಕ್ಷಕನೇ ಅದರ ಯಶಸ್ಸಿನ ಸೂತ್ರದಾರ. ಯೋಗರಾಜ ಭಟ್ಟರಿಗೂ ವಿಜಯ ಕರ್ನಾಟಕದವರಿಗೂ ಅದೇನು ಮನಸ್ತಾಪ ಬಂತೋ ವಿಜಯ ಕರ್ನಾಟಕ ಮುಖಪುಟದಲ್ಲಿ ’ಗಾಳಿಪಟ’ವನ್ನು ಅಸಂಬದ್ಧ ಸಿನಿಮ ಅಂತ ಓದುಗರೆದುರು ಅಲವತ್ತುಕೊಂಡಿದ್ದಾರೆ. ಓದುಗರು ಈ ಮಟ್ಟದ ಮೂಢರೇನೂ ಅಲ್ಲ. ’ಗಜ’ ಎಂಬ ತೆಲುಗಿನ ’ಭದ್ರ’ದ ಹಳಸಲನ್ನು ಸ್ವಮೇಕ್ ಎಂಬಂತೆ ಬಿಂಬಿಸಿ ಬರೆದ ದೇವಶೆಟ್ಟಿ ಮಹೇಶ್ರಂತವರ ಪ್ರಾಮಾಣಿಕತೆಯೂ ಪ್ರಶ್ನಾರ್ಹ. ಕನ್ನಡದ ಸಿನಿಮ ವರದಿಗಾರರು ಅದೆಷ್ಟು ಭ್ರಷ್ಟರಾಗಿ ಹೋಗಿದ್ದಾರೆಂಬುದಕ್ಕೆ ಇದು ಸಾಕ್ಷಿ. ಇದೆಲ್ಲ ಬಿಟ್ಟು ಯೋಗರಾಜ ಭಟ್ಟರ ಗಾಳಿಪಟವನ್ನು ಎಲ್ಲ ಚಿತ್ರಗಳಂತ ವಿಮರ್ಶಿಸಿದರೆ ಸಾಕಲ್ಲವೆ...? ಮುಖಪುಟದಲ್ಲಿ ಕನ್ನಡ ಚಿತ್ರವೊಂದನ್ನು ಬೈಯ್ಯಲು ಬಳಸುವ ಏಕೈಕ ಪತ್ರಿಕೆ ವಿ ಕ ಒಂದೇ ಇರಬೇಕು. ವಿಶ್ವೇಶ್ವರ ಭಟ್ಟರಿಗೆ ವಿವೇಚಿಸುವ ಸಮಚಿತ್ತತೆ ಬರಲಿ. ದೇವಶೆಟ್ಟಿ ಮಹೇಶ್ ಬರೆದದ್ದನ್ನು ಇನ್ನೊಂದು ಹೆಸರಲ್ಲಿ ಪ್ರಕಟಿಸಿದ ದಟ್ಸ್-ಕನ್ನಡ ಶ್ಯಾಂ ಬೇಸ್ತು ಬಿದ್ದರಾ...? ಅವರನ್ನೇ ಕೇಳಬೇಕು.
ವಂದನೆಗಳೊಂದಿಗೆ..
ರವಿ
ಉ: ಗಾಳಿಪಟ
ನೋಡುವವರ ಮನರಂಜಿಸುವಲ್ಲಿ 'ಗಾಳಿಪಟ' ಗೆದ್ದಿದೆ ಎನ್ನಬಹುದು. ಕನ್ನಡತನ ಎಂಬುದನ್ನು ಚಿತ್ರದಲ್ಲಿ ತೋರಿಸಿದ್ದಾರೆ.ರತ್ನವೇಲು ಕ್ಯಾಮರಾ ಕೆಲಸ ಅದ್ಭುತ. ಕನ್ನಡಕ್ಕೆ ಸಹಜವಾದ ಮಾತುಕತೆಗಳು, ಕನ್ನಡದಲ್ಲಿ ಇಲ್ಲಿಯವರೆಗೆ ಬಳಕೆಯಾಗದ ಸೂಪರ್ ೩೫ ಎಂಎಂ, ಸಂದರ್ಭಕ್ಕೆ ತಕ್ಕಂತಹ ಹಾಡುಗಳು,ಅತಿಯೆನಿಸದ ನಟನೆ, ಹೀಗೆ ಹಲವಾರು ಒಳ್ಳೆಯ ಅಂಶಗಳಿವೆ.( ಹಾಡಿನಲ್ಲಿ ಉದಿತ್ ನಾರಾಯಣ್ ಕಾಟ.)
ಮುಂಗಾರುಮಳೆಯ ಮಾತಿನ ಶೈಲಿಯನ್ನೇ ಮುಂದುವರಿಸಿದಂತೆ ಕಾಣುವುದೂ ನಿಜ. ಆದರೆ ಈ ಚಿನಕುರಳಿ ಮಾತುಗಳು ನಾಯಕರ ಪೈಕಿ ಗಣೇಶಂಗೆ ಮಾತ್ರ. ಉಳಿದವರಿಬ್ಬರು ಬೆದರುಬೊಂಬೆಗಳು. ಒಬ್ಬ ಶ್ರೇಷ್ಠ ಹಾಡುಗಾರನನ್ನು ಬದಿಗಿಟ್ಟುಕೊಂಡು ಆತನಿಂದ ಒಂದು ಹಾಡನ್ನಾದರೂ ಹಾಡಿಸಬಾರದಿತ್ತೇ? ಜಾಗಟೆಗೆ ಗುಂಡು ಮೊದಲು ಬಡಿಯಿತು ಎನ್ನುತ್ತಾರೆ, ಆದರೆ ವಿರಾಮಕ್ಕೆ ಮುಂಚಿನ ದೃಶ್ಯದಲ್ಲಿ ಗುಂಡೇಟು ಬಿದ್ದ ಜಾಗಟೆ ಕಾಣಿಸುವುದೇ ಇಲ್ಲ.ಗುಂಡು ನೇರವಾಗಿ ಬಡಿಯುವಂತೆಯೇ ಕಾಣಿಸುತ್ತದೆ.ಜಾಗಟೆಯಲ್ಲಿ ತೂತಿದೆ-ಹಾಗಿದ್ದರೆ ಗುಂಡು ಹಿಂದಕ್ಕೆ ಬಡಿಯುವುದು ಹೇಗೆ?
ನಧೀಂ ಧೀಂ ತನಾ ಹಾಡಿನಲ್ಲಿ ಯಕ್ಷಗಾನದ ವೇಷಗಳೂ ಕುಣಿಯುತ್ತವೆ, ಆದರೆ ಆಹಾ ಎಂಬಂತಹ ಒಂದು ದೃಶ್ಯಸಂಯೋಜನೆ ಸಾಧ್ಯವಾಗಲಿಲ್ಲ. ಹಂದಿ ಹೊಡೆಯಲು ಹೋಗಿ ಹಂದಿಯಿಂದ ಏಟು ತಿಂದು, ಹೋದ ಕಾಲಿನ ಶಕ್ತಿ ಮರಳಿ ಸಿಗುವ ಸನ್ನಿವೇಶ 'ಮುರಿಯದ ಮನೆ' ಚಿತ್ರದಲ್ಲಿ ಚಿಕ್ಕಂದಿನಲ್ಲಿ ವಿದ್ಯುತ್ ಶಾಕ್ ತಗುಲಿ ಒಂದು ಕಯ್ಯ ಶಕ್ತಿಯನ್ನು ಕಳೆದುಕೊಳ್ಳುವ ರಾಜ್ಕುಮಾರ್ ಇನ್ನೊಮ್ಮೆ ವಿದ್ಯುತ್ ಶಾಕ್ ತಗುಲಿದಾಗ ಪುನಃ ಮೊದಲಿನಂತಾಗುವುದನ್ನು ನೆನಪಿಸುತ್ತದೆ. ('ಸ್ಪೈನಲ್ ಕಾರ್ಡ್ ಫೈಲ್ಯೂರ್' ಅಂತೆ ಅದು.) ಇಂತಾದರೂ ಇದಕ್ಕಾಗಿಯೇ ಅಲ್ಲದೆ ಇನ್ನೂ ಹಲವು ಕಾರಣಗಳಿಗಾಗಿ ಭಟ್ಟರು ಅಭಿನಂದನೆಗೆ ಅರ್ಹರು.
ಇತ್ತೀಚೆಗೆ ಬಂದ ಸತ್ಯವಾನ್ ಸಾವಿತ್ರಿ ಚಿತ್ರದ ಸಂಭಾಷಣೆಗಳು(ರಾಜೇಂದ್ರ ಕಾರಂತ್) ಒಂದು ರೀತಿಯಲ್ಲಿ ಮಾದರಿಯಾಗಬಹುದಿತ್ತು. ಯೋಗರಾಜ ಭಟ್ಟರಂತಹ ನಿರ್ದೇಶಕರು ಹೆಚ್ಚಲ್ಲದಿದ್ದರೂ ಹತ್ತು ಮಂದಿ ಕನ್ನಡದಲ್ಲಿ ಇರಬೇಕು.
ಗಾಳಿಪಟದ ಬಗ್ಗೆ ಪ್ರಕಟವಾದ ಮೊದಲ ವಿಮರ್ಶೆ ಹೀಗೆನ್ನುತ್ತದೆ .
ನನಗೆ ಹಿಡಿಸಿದ ಇನ್ನೊಂದು ವಿಮರ್ಶೆ
ತಮ್ಮನ್ನು ವಿಮರ್ಶಕರೆಂದುಕೊಳ್ಳುವವರ ಬಗ್ಗೆ ಯೋಗರಾಜ ಭಟ್ ಹೀಗೆನ್ನುತ್ತಾರೆ
ಎಲ್ಲರೂ ಒಳ್ಳೆಯ ವಿಮರ್ಶೆಯನ್ನೇ ನೀಡಬೇಕೆಂದೇನೂ ಇಲ್ಲ.ವಿಜಯಕರ್ನಾಟಕದಲ್ಲಾದರೆ ಪರ್ವಾಯಿಲ್ಲ, ಚಿತ್ರ ಬಿಡುಗಡೆಯಾದ ನಂತರ ವಿಮರ್ಶೆ ಪ್ರಕಟವಾಗಿದೆ. ಅವರಿಗೆ ಅನ್ನಿಸಿದ್ದನ್ನು ಅವರು ಬರೆದಿದ್ದಾರೆ; ಲಂಕೇಶ್ ಪತ್ರಿಕೆಯಲ್ಲಿರುವಂತೆ ಬಿಡುಗಡೆಯಾಗುವುದಕ್ಕೆ ಮುಂಚಿನ ಹಾಳು ಊಹೆಗಳನ್ನಲ್ಲ. ಅವರು ಹೇಳುವಂತೆ ಕಾಡುಹಂದಿ ಎಂಬ ಕಲ್ಪನೆಯೇ ಇಂಗ್ಲಿಷ್ ಚಿತ್ರದಿಂದ ಬಂದದ್ದಂತೆ.
ವಿಜಯಕರ್ನಾಟಕದ ಲೇಖನಗಳು ಸುಲಭವಾಗಿ ಜಾಲಿಸಲು ಸಿಗುವುದರಿಂದ ಧಾರಾಳವಾಗಿ ಟೀಕಿಸಬಹುದು. ಆದರೆ ಈ ಕೆಳಗಿನ ಅಂಶಗಳು ಬಂದಿರುವುದು ಲಂಕೇಶ್ ಪತ್ರಿಕೆಯಲ್ಲಿ:
೧.ತನಗೆ ಸರಿಸಾಟಿ ಯಾರೂ ಇಲ್ಲ ಎಂದು ಬೀಗುವ ನಿರ್ದೇಶಕ ಯೋಗರಾಜ ಭಟ್.
೨.ಜೊತೆಗೆ ದುಡಿದವರೊಂದಿಗೆ ಗೆಲುವು ಹಂಚಿಕೊಳ್ಳಬಾರದೆಂಬ ಕಾರಣಕ್ಕಾಗಿ ತಾಂತ್ರಿಕ ವರ್ಗದಲ್ಲಿ ಬದಲಾವಣೆ ಮಾಡಿಕೊಂಡರು.
೩.ಹರಿಕೃಷ್ಣ ಅವರ ಸಂಗೀತ ಸಪ್ಪೆಯಾಗಿದೆ.
೪.ದಿಲ್ ಚಾಹ್ತಾ ಹೈ ಚಿತ್ರದ ನೆರಳು ಗಾಳಿಪಟದಲ್ಲಿದೆ, ಇನ್ನೂ ಕೆಲವು ಚಿತ್ರಗಳ ನೆರಳಿದೆ.
೫.ಐದುಕೋಟಿ ಕನ್ನಡಕ್ಕೆ ಆಪತ್ತು: ಐದುಕೋಟಿಗಿಂತ ಹೆಚ್ಚಿಗೆ ಬಜೆಟ್ಟಿನಲ್ಲಿ ತಯಾರಾದುದರಿಂದ ಚಿತ್ರ ಸೋತೇ ಸೋಲಲಿದೆ.
______
ಬೊಳುಂಬು
ಉ: ಗಾಳಿಪಟ
ಸಿನೆಮಾ ಬಿಡುಗಡೆಯಾದ ಮರುದಿನದ ಪತ್ರಿಕೆಯಲ್ಲಿ ಜನ ಓದಬಯಸುವುದು ಒಂದು ಸ್ಥೂಲವಾದ ವಿಮರ್ಶಾ ಅಭಿಪ್ರಾಯ. ಭಾರಿ ಪ್ರಚಾರ ಗಿಟ್ಟಿಸಿಕೊಂಡ ಚಿತ್ರಗಳು ಗುಣಮಟ್ಟದಲ್ಲಿ ಆ ನಿರೀಕ್ಷೆ ಮುಟ್ಟಿಲ್ಲ ಎಂಬುದು ಒಬ್ಬ ‘ಪತ್ರಿಕಾ ವಿಮರ್ಶಕ’ ಸೂಚಿಸಬಹುದಾದ ಏಕೈಕ ಅಂಶ. ಆ ಎಲ್ಲೆಯನ್ನು ಮೀರಿ ವಿಜಯ ಕರ್ನಾಟಕ ವಿಮರ್ಶೆಯನ್ನು ಪ್ರಕಟಿಸುವುದು ಸಂಶಯಕ್ಕೆ ಎಡೆಮಾಡಿಕೊಡುತ್ತದೆ.
ವಿಜಯ ಕರ್ನಾಟಕವನ್ನು ಸಮರ್ಥಿಸಿಕೊಳ್ಳುವ ನಿಮ್ಮ ಪಡಿಪಾಟಲು ಕಂಡು ನಗು ಬರುತ್ತದೆ. ವಿಜಯ ಕರ್ನಾಟಕ್ಕೂ ಲಂಕೇಶ್ ಪತ್ರಿಕೆಗೂ ಎಲ್ಲಿಂದೆಲ್ಲಿಯ ಹೋಲಿಕೆ? ಒಂದು ನಾಡಿನ ನಂಬರ್ ಒನ್ ದಿನಪತ್ರಿಕೆ, ಮತ್ತೊಂದು ಅಪ್ಪಟ ಟ್ಯಾಬಲಾಯ್ಡ್. ನಿಮ್ಮ ಸಮರ್ಥನೆಯಿಂದ ಮತ್ತೊಂದು ಅಂಶದ ಬಗ್ಗೆ ತಿಳಿವು ಮೂಡಿತು... ಇತ್ತೀಚೆಗೆ ಪ್ರತಾಪ್ ಸಿಂಹರ ಬರಹ, ಅವುಗಳ ಹೆಡ್ಡಿಂಗು ಗಮನಿಸಿದರೆ ಅದು ಸತ್ಯವೂ ಅನ್ನಿಸುತ್ತಿದೆ. ವಿಜಯ ಕರ್ನಾಟಕ ಹೊಸತೊಂದು ಮೈಲುಗಲ್ಲು ಮುಟ್ಟುವತ್ತ ಧಾವಿಸುತ್ತಿದೆ. ‘ದೈನಂದಿನ ಟ್ಯಾಬಲಾಯ್ಡ್’ ಆಗಿ ಪತ್ರಿಕೆ ಮಾರ್ಪಾಡಾಗುತ್ತಿದೆ. ‘ಇದು ಕನ್ನಡಿಗರ ಹೆಮ್ಮೆ!’
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
ಉ: ಗಾಳಿಪಟ
ಎಂದಿಗೆ ಸಂಕೇಸ್ವರ್ ಪ್ಯೂರ್ ಬಿಜಿನೆಸ್ ಮೈಂಡೆಡ್ ಆಗಿ ವಿಜಯ ಕರ್ನಾಟಕಾನ ಹೋಗಿ ಹೋಗಿ ಟಿ.ಓ.ಐ ಗೆ ಮಾರಿಕೊಂಡನೋ ಅಂದೇ ಅದು ಸತ್ತು ಹೋಯಿತು. ಈಗೇನಿದ್ದರು ಅದರ ದೇಹ, ಒಳಗಿರುವದು ಕನ್ನಡಕ್ಕೆ ಮಾರಕವಾದ ದೆವ್ವ ಅನಿಸುತ್ತೆ. ನನ್ನ ಮಾತು ನಿಮಗೆ ಅತೀ ಅನಿಸಬಹುದು. ಆದರೆ ವಿ.ಕ ಮಾರಾಟವಾದ ಮರುದಿನದಿಂದಲೇ ಕನ್ನಡದ ಹಿತ ಬಯಸುವ ಸುದ್ದಿಗಳು ಒಳಪುಟದ ಯಾವುದೋ ಮೂಲೆ ಸೇರತೊಡಗಿದವು. ಕನ್ನಡವನ್ನು ಲೋಕಸಭೆಯಲ್ಲಿ ಮಹಾರಾಸ್ಟ್ರದ ಕಿತಾಪತಿಯಿಂದ ತೆಗೆದದ್ದು, ಮುಕಪುಟದಲ್ಲಿ ಬರ್ತಾ ಇತ್ತು. ಅದೇ ಹೊತ್ತಲ್ಲೇ ಸಂಕೇಸ್ವರ್ ತಮ್ಮ ಪೇಪರನ್ನು ಮಾರಿಕೊಳ್ಳುವ ತುರಾತುರಿ ನಡೆಸಿದ್ದರು. ಮಾರಾಟವಾದ ಮರುದಿನಾನೇ ಆ ಸುದ್ದಿ ಒಳಪುಟ ಸೇರಿತು, ಅದೂ ಅರ್ದಂಬರ್ದ!
ವಿ.ಕ.ದ ವರದಿಗಾರರನ್ನು ತುರ್ಜಮೆಗಾರನ್ನಾಗಿ ಬಳಸಿಕೊಳ್ಳಲು ಮುಂದಾದ ಟಿ.ಓ.ಐ ಪಾಲಿಗೆ ಟೈಮ್ಸ್ ಕನ್ನಡ ವರದಿಗಾರರು ಬರೀ ಇಂಗ್ಲೀಸಿನಲ್ಲಿ ಬರೆದದ್ದನ್ನು ಕನ್ನಡಕ್ಕೆ ತರುವ ಮಶೀನುಗಳಸ್ಟೇ. ಕನ್ನಡ ಪೇಪರುಗಳಲ್ಲಿ ಮೊದಲು ಕನ್ನಡ ಸಿನಿಮಾಗಳ ಬಗ್ಗೆ ಅಸ್ಟೇ ಬರ್ತಾ ಇತ್ತು. ಈಗ ನಮ್ಮ ಸಂಕೇಸ್ವರರ ಒಂದು ಎಡವಟ್ಟಿನಿಂದ ಹಿಂದಿ ಸಿನಿಮಾ ಸುದ್ದಿಗಳದೇ ಅಬ್ಬರ. ಕನ್ನಡ ಪೇಪರುಗಳಲ್ಲಿ ಹಿಂದಿ ಸಿನಿಮಾ ಸುದ್ದಿಗಳು ಇಸ್ಟು ದೊಡ್ಡ ಬಗೆಯಲ್ಲಿ ಬರತೊಡಗಿದ್ದು ಇದೇ ಪೇಪರಿನಲ್ಲಿ.
ಶನಿವಾರ ವಿ.ಕ ದಲ್ಲಿ ಬಂದ ತಿಕ್ಕಲುತನದ ರಿವೀವ್ ನೋಡಿಯೇ ನಾನು ಹೆಂಗೋ ಕಸ್ಟಪಟ್ಟು ಟಿಕೆಟ್ "ಗಳಿಸಿಕೊಂಡು"(
)) ಸಿನಿಮಾ ನೋಡಿದೆ. ನೋಡಿದ ಮೇಲೆ ನನಗನಿಸಿದ್ದು, ಆ ಬರಹವನ್ನು ಬರೆದ ದೇವಶೆಟ್ಟಿ ಮತ್ತು ಮುಕಪುಟದಲ್ಲಿ ಹಾಕಿದ ವಿ.ಕ ಎಡಿಟರ್ರು ಇಬ್ಬರೂ ದೊಡ್ಡ ಸ್ಯಾಡಿಸ್ಟಗಳೆಂದು 
ಸಿನಿಮಾ ಸಕ್ಕಾತ್ತಾಗಿದೆರೀ, ಇಂತ ಸ್ಯಾಡಿಸ್ಟ್ ಗಳ ಕೆಟ್ಟ ರಿವೀವ್ ಓದಿಕೊಂಡು ತುಂಬಾ conscious ಆಗಿ ನೋಡದೇ, ತಿಳಿ ಮನಸ್ಸಿ(ಪ್ರಾಂಜಲ ಮನಸ್ಸು)ನಿಂದ ಸಿನಿಮಾ ನೋಡಿ. ನನಗಂತೂ ಸಿನಿಮಾ ತುಂಬಾ ಹಿಡಿಸಿತು.
ಆ ಈ ರಿವೀವ್ ಗಳನ್ನು ತಲೆಗೆ ಹಾಕೊಳ್ಳದೇ ನೋಡಿದ್ರೆ ಯಾರಿಗಾದ್ರೂ ಇಸ್ಟ ಆಗುತ್ತೆ ಈ ಸಿನಿಮಾ, ನನಗನಿಸುವಂತೆ ಇದು ಮತ್ತೊಂದು ಮುಂಗಾರು ಮಳೆನೇ.
ಉ: ಗಾಳಿಪಟ
ಗಾಳಿಪಟದ ಬಗ್ಗೆ ಕೆಟ್ಟದಾಗಿ ಬರೆದ ವಿ.ಕ ಗೆ ದಿಕ್ಕಾರವಿರಲಿ......ಗಾಳಿಪಟ ಒ೦ದು ಅತ್ಯುತ್ತಮ ಚಿತ್ರ ....
ಪ್ರೀತಿ,ಸ್ನೇಹ,ಭಾವನೆಗಳ ಅಡಿಪಾಯದಲ್ಲಿ ಮೂಡಿ ಬ೦ದಿರುವ ಗಾಳಿಪಟ ಪ್ರೇಕ್ಶಕನಿಗೆ ಮನರ೦ಜನೆ ಕೊಡುತ್ತದೆ...
ನಕ್ಕು ನಗಿಸುವ ಹಾಸ್ಯ, ಮೈನವಿರೇಳಿಸುವ ಛಾಯಗ್ರಹಣ,ಇ೦ಪಾದ ಹಾಡುಗಳು,ಹಾಡುಗಳಿಗೆ ತಕ್ಕ ಸಾಹಿತ್ಯ ಎಲ್ಲರ ಮನ ಸೂರೆಗೊಳ್ಳುತ್ತದೆ..
ಒ೦ದು ಸಾಮಾನ್ಯವೆನಿಸುವ೦ತ ಕತೆಯನ್ನು ಪ್ರೆಕ್ಷಕನ ಮನದ ಮುಗಿಲಿಗೆ ತಲುಪಿಸುವಲ್ಲಿ ಭಟ್ಟರು ಸಫಲರಾಗಿದ್ದಾರೆ..
ಹಾಡುಗಳ ಸಾಹಿತ್ಯವ೦ತೂ ಅತ್ಯದ್ಭುತ ಎನ್ನಬೇಕು..
ಜೀವ ಕಳೆವ ಅಮೄತಕೆ ಒಲುವೆ೦ದು ಹೆಸರಿಡಬಹುದೆ
ಪ್ರಾಣ ಉಳಿಸೊ ಖಾಯಿಲೆಗೆ ಪ್ರೀತಿಯೆ೦ದೆನ್ನಬಹುದೆ
ಉ: ಗಾಳಿಪಟ
ಹಾಗೆಂದು TOI ಗಾಳಿಪಟಕ್ಕೆ ಒಳ್ಳೆಯ ರೇಟಿಂಗ್ ಕೊಟ್ಟಿದೆ!
*ಅಶೋಕ್
ಉ: ಗಾಳಿಪಟ
ಹೂಂ, ಟಿ.ಓ.ಐ ಕನ್ನಡ ಸಿನಿಮಾಗಳ ಬಗ್ಗೆ ಕೆಟ್ಟದಾಗಿ ಬರಿಯೋ ದೈರ್ಯ ಮಾಡಿಲ್ಲ
... ಯಾಕೋ ಗೊತ್ತಿಲ್ಲ.
ಉ: ಗಾಳಿಪಟ
ಹೂಂ, ಟಿ.ಓ.ಐ ಕನ್ನಡ ಸಿನಿಮಾಗಳ ಬಗ್ಗೆ ಕೆಟ್ಟದಾಗಿ ಬರಿಯೋ ದೈರ್ಯ ಮಾಡಿಲ್ಲ
... ಯಾಕೋ ಗೊತ್ತಿಲ್ಲ.