ಹಗಲುಗನಸಿಂದ ಎದ್ದಾಗ
ಎಲ್ಲ ಸರಾಗವಾಗಿದ್ರೆ, ನಮ್ಮ ತಲೆಯೊಳಗೆ ಹಗಲುಗನಸು ನಮಗರಿವಿಲ್ಲದಂತೇರಿ ಕುಳಿತಿರ್ತದೆ. ನಾನು ಆರಾಮಾಗಿದ್ದೀನಿ, ಮುಂದೆಲ್ಲವೂ ಸಲೀಸಾಗಿ ಸಾಗಿ ಮುಗೀತದೆ ಎಂದು ಮೈಮರೆರ್ತಿತೀವಿ.
ಯಾವುದೋ ಯೋಚನೆ ತಲೆಯಲ್ಲಿ ನಿಮಿರಿ, ಆಹಾ!! ಆ ಹುಸಿಲೋಗವೇ ಬೊಂಬಾಟನ್ನಿಸಿ, ಅದರಾಚೆ ಯೋಚನೆಹರಿಸದೇ ಇದ್ದುಕೊಂಡಿರ್ತೀವಿ.
ಹೀಗೆ ಸಿಕ್ಕಾಪಟ್ಟೇ ಆರಾಮು ಒಳ್ಳೆಯದಲ್ಲ. ಅದಕ್ಕೆ ಆಗಾಗ ಏನಾದ್ರು ಗೊಡವೆ ಹಚ್ಚಿಕೊಂಡು ತಲೆಚಚ್ಚಿಕೊಳ್ಳಬೇಕು. ಆಗಲೇ ನಾವು ಮೈಮನ-ಎಚ್ಚರ ಇರ್ತೀವಿ.
ಇದೆಲ್ಲ ನನಗೆ ಅರಿತವಾಗಿದ್ದು, ನಾನು ಸುಮ್ನೆ ಇರಕ್ಕಾಗದೆ ಕರ್ರಿರುಳಲ್ಲಿ ಹೋಗಿ ಬಂಡಿಯಿಂದ ನನ್ನ ಬೀಳಿಸಿ, ಕಾಲುಹರಿದುಕೊಂಡಾಗ. ನನಗೆ ದಿಟವಾಗಲೂ ಈ ನೋವು ಬಲು ಮೆಚ್ಚುಗೆಯಾಯ್ತು!! ಹೀಗೆ ಎರಡು ಮೂರು ತಿಂಗಳಿಗೊಮ್ಮೆ ಬೀಳುವ ಬಯಕೆ ಬಂದಿದೆ.
ಬೀಳೋದೇಳೋದಿದ್ದುದ್ದೇ, ಆದ್ರೆ ಬಿದ್ದು ಕಲಿತ ಬುದ್ದಿ, ದೊಡ್ಡದು!!

- mahesha ರವರ ಬ್ಲಾಗ್
- Login or register to post comments
- 313 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಹಗಲುಗನಸಿಂದ ಎದ್ದಾಗ
ಹುಷಾರಿದ್ದೀರಿ ತಾನೆ?
ಮೈ-ಮನ ಎಚ್ಚರ ಇರೋಕೆ ಕೈ-ಕಾಲು ಮುರಿಕೋಬೇಕಾಗಿಲ್ಲಪ್ಪ...
ಜಾಗರೂಕರಾಗಿರಿ!
ಉ: ಹಗಲುಗನಸಿಂದ ಎದ್ದಾಗ
ನಾ ಹುಷಾರು!!
ಆದ್ರೆ ನಂಗೆ ಹಾಗೆ ಅನ್ನಿಸ್ತು!!
ಕೈಕಾಲು ಅಂದ್ರೆ ಬರೀ ನಮ್ಮ ಮೈಯ ಕೈಕಾಲು, ಮನಕ್ಕೂ ಕೈಕಾಲು ಇರ್ತದೆ, ಕೈಕಾಲೇನು ರೆಕ್ಕೆಚಕ್ರಗಳೂ ತಿರ್ತಾವೆ, ಅವಕ್ಕೆ ಆಗಾಗ ವಸಿ ಏಟುಕೊಡ್ತಾ ಇರ್ಬೇಕು.
ನನ್ನ ಹುದುಳ ಕೇಳಿದಕ್ಕೆ ನನ್ನಿ!
ಉ: ಹಗಲುಗನಸಿಂದ ಎದ್ದಾಗ
ಕೈಕಾಲು ಅಂದ್ರೆ ಬರೀ ನಮ್ಮ ಮೈಯ ಕೈಕಾಲು ಅಲ್ಲ.. ಅಂತ ಓದಿಕೊಳ್ರಿ
ಉ: ಹಗಲುಗನಸಿಂದ ಎದ್ದಾಗ
ಅಯ್ಯೋ ರಾಮ (ಸಾರಿ ದೈವವೇ) , ಎಲ್ಲಿ ಬಿದ್ಯಪ್ಪಾ ?
ಉ: ಹಗಲುಗನಸಿಂದ ಎದ್ದಾಗ
ಈಗ 'ರಾಮ' ಅನ್ನಕ್ಕೂ ಹೆದರಿಕೆ ಆಗ್ತದಾ... ರಾಮ ರಾಮ!!
, ನಮ್ಮನೆ ಹತ್ರ.
ಎಲ್ಲೂ ಇಲ್ಲ, ನಮ್ಮ ಬೆಂಗಳೂರ ಹೊರ-ಉಂಗುರ-ದಾರಿಯಲ್ಲಿ