ಕನ್ನಡ ತಮಿಳು ಕವಲುಗಳು ಹೀಗಾದವು!
ನಾನು ಈಗೀಗ ಕನ್ನಡ ಮತ್ತು ತಮಿಳು ನಡುವಣ ನಂಟಿನ ಗಂಟಿನ ಬಿಗಿಯ ಬಗ್ಗೆ ಹೆಚ್ಚೆಚ್ಚು ಓದಲು ತೊಡಗಿದ್ದೇನೆ. ನನಗೆ ಹಲವಾರು ಸೋಜಿಗದ ಅರಿಮೆಗಳು ದೊರೆತಿವೆ.
೧) ಕನ್ನಡ-ತಮಿಳು ಒಂದಾನೊಂದು ಹೊತ್ತಿನಲ್ಲಿ ಒಂದೇ ನುಡಿಯಾಗಿದ್ದವು, ಇದರಲ್ಲಿ ಯಾವು ಐಬು/ಶಂಕೆ ಇಲ್ಲ.
೨) ಕನ್ನಡ-ತಮಿಳು ವ್ಯಾಕರಣದಲ್ಲಿ, ಒರೆಗಳಲ್ಲಿ, ಉಲಿಕೆ/ಉಚ್ಚಾರಣೆಯಲ್ಲಿ ಬಲು ಹತ್ತಿರವಿದೆ.
ಕನ್ನಡ ಮತ್ತು ತಮಿಳು ಇವು ಬೇರೆ ಬೇರೆ ಹೇಗೆ ಆಗಿರಬಹುದು, ಇಲ್ಲವೇ ಯಾರು ಇವನ್ನು ಬೇರೇ ಬೇರೆ ಎಂದು ಹೇಳಿರಬಹುದು ಎಂದು ಹುಡುಕುತ್ತಾ ಹಲವು ಬರಹಗಳಿವೆ. ಅಂತಹವಲ್ಲಿ ನನಗೆ ಹಿಡಿಸಿ ಒಂದು ಬರಹದಂತೆ;
ಕಾವೇರಿನಾಡಿನಲ್ಲಿ ಮುಖ್ಯವಾಗಿ ಗಂಗನಾಡು(ಕಂಕನಾಡು), ಕೊಂಗ/ಕೊಂಕನಾಡು, ಅಂತ ಇವೆ. ಈ ಕೊಂಗನಾಡಲ್ಲಿ ಮಾತಾಡುವ ತಮಿಳನ್ನು ಗಂಗೀ(ಕೊಂಗ) ತಮಿಳು(ಕಂಕೀ ತಮಿಳು) ಎಂದು ಕರೆಯುವರು. ಈ ತಮಿಳು ಮದುರೈಯ ಸಂದೆಮಿಳಿಗಿಂತ ಬೇರೆಯಂತೆ.
ಹಾಗೇ ಈ ಕೊಂಗ ತಮಿಳು, ಕಾವೇರಿಸೀಮೆಯವರ ಗಂಗಗನ್ನಡ( ಗಂಗನಾಡಿನ ಕನ್ನಡ ) ಬಲು ಹತ್ತಿರವಾಗಿದೆ. ಈ ಗಂಗನಾಡಿನ ನುಡಿ ಕನ್ನಡ-ತಮಿಳು ಬರೆಸಿದ ನುಡಿಯಾಗಿತ್ತು ಎಂದು ಇವರ ಅನಿಸಿಕೆ. ಆದುದರಿಂದ ಗಂಗರು ಕನ್ನಡರೂ ಹೌದು, ತಮಿಳರೂ ಹೌದು?!
ಅವರಂತೆ ಮದುರೈಯಲ್ಲಿ ತಮಿಳಿಗೆ ಮೊದಲ ವ್ಯಾಕರಣ ಬರೆದಾಗ, ಅದರಂತೆ ಕನ್ನಡದ ಗಂಗರೂ ಕನ್ನಡಕ್ಕೆ ಒಂದು ವ್ಯಾಕರಣ ಬರೆಸಿದರು/ಬರೆದರು.( ಇದರಲ್ಲಿ ಯಾವುದು ಮೊದಲು ಅನ್ನೋದು ಬಗೆಹರಿದಿಲ್ಲ ). ಏಕೆಂದ್ರೆ, ಕನ್ನಡದ ಮೊದಲ ವ್ಯಾಕರಣ ಬರೆದವನು ಗಂಗದೊರೆ ದುರ್ವಿನೀತ, ಆದ್ರೆ ಎಂದು ಎಂದು ತಿಳಿದಿಲ್ಲ.
ಹೀಗೆ ಎರಡು ವ್ಯಾಕರಣಗಳಿಂದ ಹುಟ್ಟಿ ಬೇರೆಯಾದವು ತಮಿಳು-ಕನ್ನಡಗಳು.
ಆದ್ರೆ ಗಂಗರ ಬಳಿಕ ಕನ್ನಡದೊರೆಗಳು ಹೆಚ್ಚು ತುಂಗೆಯ ಬಡಗಿನಿಂದ ಆಳಿದವರು, ಆದರೆ ಹೊಯ್ಸಳ ಕನ್ನಡನಾಡಿನ ಆಳ್ವಿಕೆಯನ್ನು ಕಾವೇರಿ ಬಯಲಿಂದ ನಡೆಸಿದ್ರು. ಶಬ್ದಮಣಿದರ್ಪಣದ ಕೇಶೀರಾಯ ಹೊಯ್ಸಳನಾಡಿನವನು.

- mahesha ರವರ ಬ್ಲಾಗ್
- Login or register to post comments
- 510 hits
- Email this blog





RSS:
ಪ್ರತಿಕ್ರಿಯೆಗಳು
ಉ: ಕನ್ನಡ ತಮಿಳು ಕವಲುಗಳು ಹೀಗಾದವು!
article ತುಂಬಾ ಚೆನ್ನಾಗಿದೆ.
ಉ: ಕನ್ನಡ ತಮಿಳು ಕವಲುಗಳು ಹೀಗಾದವು!
ಕೊಂಗನಾಡಿನ ತಮಿಳಿಗೆ ಕೊಂಗುತ್ತಮಿಳ್ ಅನ್ನುತ್ತಾರೆ - ಕಂಕೀ ತಮಿಳೆಂದಲ್ಲ.
ಮದುರೈನ ತಮಿಳು ಸೆಂದಮಿಳ್.
-ಹಂಸಾನಂದಿ
ಉ: ಕನ್ನಡ ತಮಿಳು ಕವಲುಗಳು ಹೀಗಾದವು!
ಹಂಸಾನಂದಿಯರೇ,
ನಾನು ಈಗೀಗ ನಮ್ಮ ಕೆಲಸ ಮಾಡೋದು ಕೊಯಮುತ್ತೂರು, ಸೇಲಂ ಮಂದಿ ಕೂಟ. ಅವರೇ ಹಾಗೇ ಹೇಳಿದ್ದು...
ಆದ್ರೆ, ಗಂಗರ ಮಾತು ಕನ್ನಡ-ತಮಿಳು ಹದವಾಗಿ ಬರೆದ ನುಡಿ ಎಂಬುದು ಸರಿಯಾದ ಅನಿಸಿಕೆ ಅಲ್ಲವೇ?
ಉ: ಕನ್ನಡ ತಮಿಳು ಕವಲುಗಳು ಹೀಗಾದವು!
ನನ್ನಿ!
ನಲವು