ಪಂಚೆ ಉಟ್ಟು, ಬಾಯಿ ಮುಚ್ಚಿಕೊಂಡು, ಯಾವುದಕ್ಕೂ ಪ್ರತಿಭಟನೆ ಮಾಡದವನೇ ಕನ್ನಡಿಗ !!!
http://thatskannada.oneindia.in/news/2007/03/20/insult_kannadiga.html
ಮೇಲಿನ ತಾವಿನಲ್ಲಿ ಆ ಸುದ್ದಿ ಓದಿ ಬೇಸರವಾಯಿತು.
ನಾವು ಕನ್ನಡಿಗರು ಏಕೆ ಹಿಂಗೆ?
ಸಭ್ಯತೆ, ಮರ್ಯಾದೆ ಅಂತ ಹಿನ್ನಡೆದು ನಮಗೆ ಆದ ಅನ್ಯಾಯದ ಎದುರು ದನಿ ಎತ್ತಲ್ಲ. ಯಾರು ಕನ್ನಡಕ್ಕೆ ರಸ್ತೆಗೆ ಇಳಿಯುವವರಿಗೆ ಜೊತೆ ನೀಡಲ್ಲ. ಬದಲಿಗೆ ಅವರನ್ನೇ ನಾವು ರೌಡಿ, ಅಸಭ್ಯ, ಕನ್ನಡವನ್ನು ಸರಿಯಾಗಿ ಉಚ್ಚಾರ ಮಾಡಲಾಗದ ಹಳ್ಳಿ ಮುಕ್ಕ ಅಂತ ಹೀಯಾಳಿಸ್ತೇವೆ.
ಈ ಗಟನೆಯಲ್ಲಿ, ಅವರು ಕನ್ನಡದ ಪ್ರೋಗ್ರಾಮಲ್ಲಿ ಹಿಂದಿ ಹಾಡು ಹಾಡಬೇಡಿ, ಕನ್ನಡ ಹಾಡು ಹಾಡಿ ಅಂದುದೇ ತಪ್ಪೇ. ಇದು ಅವರ ಅಸಭ್ಯತೆಯೇ.
http://thatskannada.oneindia.in/column/sham/210307attack_on_kannadiga1.html
http://thatskannada.oneindia.in/category/response/260307kannada_no_insult.html
http://thatskannada.oneindia.in/category/response/270307kannada_insult_kiran.html

- mahesha ರವರ ಬ್ಲಾಗ್
- Login or register to post comments
- 1191 hits
- Email this blog





RSS:
ಪ್ರತಿಕ್ರಿಯೆಗಳು
avamaana
du nijavagalu avamaana, kannadakke kannadadavare maaduthiruva avamaana. kannada karyakramadalli kannadakke modala praamukhyathe irli. malagiruva kannidagare eddeli.........
(kannada IME illa english nalle barediddini)
ಸೂಚನೆ: ಕನ್ನಡದಲ್ಲಿ ಬರೆಯಿರಿ. ಕಂಗ್ಲಿಷ್ ಗೆ ಸಂಪದದಲ್ಲಿ ಜಾಗವಿಲ್ಲ. ಹೆಚ್ಚಿನ ಮಾಹಿತಿಗೆ:
http://dev.sampada.net/wiki/Baraha_IME
ಪುಟ ನೋಡಿ.
- ನಿರ್ವಹಣೆ ತಂಡದ ಪರವಾಗಿ.
ಕನ್ನಡದಲ್ಲೇ ಬರೀರಿ ಸಾರ್... ಯಾಕ್ನಾಚ್ಕೆ ?
ಸರಿ, ನೀವ್ ಕನ್ನಡ್ದೋರ್ ಅನ್ನೊದು ಗೊತ್ತಾಘೋಯ್ತು ನೋಡಿ.
ಕನ್ನಡದಲ್ಲಿ ಟೈಪಿಸಲು ಬರಲ್ವಾ ? ಅಥವಾ ತಾಂತ್ರಿಕ ತೊಂದರೆಯೇನಾದ್ರು ಇದೆಯಾ ಸಾರ್..? . ಏಕಂದ್ರೆ ನಾನು ಸಂಪದಕ್ಕೆ ಮೊದ್ಲು ಪಾದಾರ್ಪಣೆ ಮಾಡ್ದಾಗ, ಹೀಗಿ ತೊಂದರೆ ಅನ್ಭವ್ಸಿದೆ. ನನ್ ಸಮಸ್ಯೆ ಅಂದ್ರೆ, ನನಗೆ ಇಂಟರ್ ನೆಟ್ ಮಾಧ್ಯಮದ ವಿಶೇಷತೆಗಳ ಪರಿಚಯವೇ ಇರಲಿಲ್ಲ. ಈಗ್ಲೂ ಸ್ವಲ್ಪ ಹಾಗೇಯ !
ಏನ್ಮಾಡೋದ್ ಹೇಳಿ, " ಕಾಲಾಯ ತಸ್ಮೈ ನಮಃ "
ಹೊಸತೇನಲ್ಲ
ಇದನ್ನು ನಮ್ಮ ಕನ್ನಡ ಕುಲೋತ್ತಮರ ಧರ್ಮಸಂಕಟ ಎನ್ನಬಹುದಾ?!
ಕನ್ನಡಿಗರ ಔದಾರ್ಯ!!!ನಾಚಿಗ್ಗೇಡು
ನಿಜಕ್ಕೂ ಎಷ್ಟು ಬೇಸರವಾಗುವುದಿಲ್ಲವೇ ?
ಇದೇ ನೋವನ್ನು ರಾಘವೇಂದ್ರ ಕೃಷ್ಣಮೂರ್ತಿಯವರು, ಪ್ರಜಾವಾಣಿಯ ವಾಚಕರ ವಾಣಿಯಲ್ಲಿಯೂ ತೋಡಿಕೊಂಡಿದ್ದಾರೆ. ಇದರ ಬಗ್ಗೆ ವಿಜಯಕರ್ನಾಟಕದಲ್ಲಿ ನೆನ್ನೆಯೇ ಬಂದಿತ್ತು.
ಇಂತಹ ಘಟನೆಗಳಿಗೆ ಕಾರಣಗಳನ್ನು ಹುಡುಕುತ್ತಾ ಹೋದರೆ ಕೊನೆಯಲ್ಲಿ ಸಿಗುವುದು ಒಂದೇ ಉತ್ತರ.
ಎಲ್ಲಿಯವರೆಗೆ "ಕನ್ನಡ" ಎಂಬುದನ್ನು ಕೇವಲ ಒಂದು ಭಾಷೆ, ಸಂವಹನಕ್ಕೆ ಮಾತ್ರವೇ ಸೀಮಿತವಾದದ್ದು ಎಂಬ ನಮ್ಮ ದುರ್ಬಲತೆಯನ್ನು ಗೆಲ್ಲುವುದಿಲ್ಲವೋ ಅಲ್ಲಿಯವರೆಗೆ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. "ಕನ್ನಡ" ಎಂಬ ಪದವು ಕೇವಲ ಒಂದು ಭಾಷೆಯಲ್ಲ, ಅದೊಂದು ಸಾಮಾಜಿಕ ಮೌಲ್ಯ (ನುಡಿ, ನಮ್ಮ ನಮ್ಮ ಮಾತು, ಕತೆ, ಕಾದಂಬರಿ, ಅಡುಗೆ, ಸಿನಿಮಾ, ಹಾಡುಗಳು, ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ನಾಟಕ, ಯಕ್ಷಗಾನ, ಬೇಸಾಯ, ಮೀನು ಸಾಕಾಣಿಕೆ, ದನಮೇಯಿಸುವುದು......ಹೀಗೆ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಮಾರುಕಟ್ಟೆ) ಎಂದು ಬಗೆದರೆ ಯಾವ ಸಮಸ್ಯೆಯೂ ಉದ್ಭವಿಸುವುದಿಲ್ಲ. ಆದರೆ ಕನ್ನಡ ಎಂಬ ಪದ ಕೇವಲ ಒಂದು ಭಾಷೆ, ಸಂವಹನಕ್ಕೆ ಸೀಮಿತ ಎಂದು ಒಣವಾಗಿ ವಾದಿಸುತ್ತಾ ಹೋದರೆ ಆಗ ಬೇಡದ ಔದಾರ್ಯ, open-mindedness, broadmindedness ಎಲ್ಲವೂ ಮನೆಮಾಡುತ್ತದೆ.
ಸಂಗೀತ ಎನ್ನುವುದು ಕೂಡ ಕನ್ನಡದ, ಕನ್ನಡಿಗರ ಒಂದು ಸಾಮಾಜಿಕ ಮೌಲ್ಯ ಎಂದು ಕಾರ್ಯಕ್ರಮದ ಆಯೋಜಕರು ಆಲೋಚಿಸಿದ್ದರೆ, ಕನ್ನಡದ್ದೇ ಹಾಡು ಪ್ರಾರ್ಥನಾ ಗೀತೆಯಾಗುತ್ತಿತ್ತು. ಹಿರಿಯರಿಗೆ ಅವಮಾನವಾಗುವ ಪ್ರಸಂಗ ಬರುತ್ತಿರಲಿಲ್ಲ.
ಭೈರಪ್ಪ ಏನು ಮಾಡುತ್ತಿದ್ದರು?
ಇಷ್ಟೆಲ್ಲಾ ಆಗುವಾಗ ಸತ್ಯವನ್ನು ಅನಾವರಣಗೊಳಿಸಲು ತುಡಿಯುವ ಭೈರಪ್ಪನವರು ಏನು ಮಾಡುತ್ತಿದ್ದರು ಎಂಬುದು ಸ್ಪಷ್ಟವಾಗಲಿಲ್ಲ?
-ಯಾಮಿ
ಭೈರಪ್ಪ ಏನು ಮಾಡುತ್ತಿದ್ದರು? ??
ಏನು ಮಾಡುತ್ತಿರಲಿಲ್ಲ!!
-ಜೋಕು
ಪಂಚೆ ಉಟ್ಟುಕೊಳ್ಳುವ ಪರಿಪಾಠವೂ ಇದ್ದಂತಿಲ್ಲ.
ಆ ಗೋವಿನ ಪದ್ಯ ಇದೆಯಲ್ಲ ; ಅದರ ತರಹ " ಮುಂದೆ ಬಂದರೆ ಹಾಯ ಬೇಡಿ,
ಹಿಂದೆ ಬಂದರೆ ಒದೆಯ ಬೇಡಿ.... ಇತ್ಯಾದಿ -ಕನ್ನಡಿಗರಿಗಾಗಿಯೇ ಹೇಳಿಮಾಡಿಸಿ ಬರೆದದ್ದು ಅನ್ನೋದನ್ನ ನನಗೆ ಯಾರೋ ಹೇಳಿದ್ದರು . ನಿಜ ಇದ್ದರೂ ಇರಬಹುದು.
ಹೋಗ್ಲಿ ಬಿಡಿ ಸಾರ್, ನಮ್ಗ್ಯಾಕೆ ಅದಲ್ಲಾ ! ಸುಮ್ನೆ ನೀವೊಬ್ರು.....
ನಮ್ಗ್ಯಾಕೆ ಅದಲ್ಲಾ ! ಸುಮ್ನೆ ನೀವೊಬ್ರು
ಅಜ್ಜಯ್ಯಾ ನೀನು ಸ್ಯಾನೆ ತಮಾಸೆ ಮಾಡ್ತೀಯಪ್ಪೋ. ನಂಗೆ ಕಿಸ್ಡೂ ಕಿಸ್ದೂ ವೊಟ್ಟೆ ವುಣ್ಣಾಯ್ತು !!
ನೌಗಳು ಕನ್ನಡದೋರು ಮುಂದೆ ಹಾಯಲ್ಲ, ಹಿಂದೆ ವದೆಯಲ್ಲ, ಆದರೆ ಮುಂದೆ ಹಾಯ್ಸಿಕೋತೀವಿ, ಹಿಂದೆ ವದ್ಸಿಕೋತೀವಿ.
ನೀನು ಸಂದಾಕ್ ಅಂದೆ.
[ನೀನು... ಸಲಿಗೆಯಿಂದ]
ಸರಿಯಾಗ್ ಏಳ್ದೆ ಮಗ... ನಾನೂ ಯಾರಾದ್ರು ಕಿಸ್ದಾರಾ ಅಂತವ .ನೊಡ್ತಿದ್ದೆ.
ಎಲ್ಲ ದೇವ್ರಿಟ್ಟಂಗ್ ಆಗ್ಲೇಳು . ನಮ್ದೇನಯ್ತೆ. ಮಾದೇವ ಮಡ್ದಂಗೈತೆ. ಅಜ್ಜಯ್ನ ಮಾತೇ ಕ್ವನೆ ಅಂತಿಟ್ಗಬೇಡ ಮಗ.
ಬತ್ತೀನಿ . ಉಸಾರು ಕಣಪೊ.
ನಿನ್ಮಟ್ಗಾದ್ರು ನೊಡ್ಕಳಪ್ಪೊ. ಅಂಗೆ ಅಗೂರಾಗ್ಬೇಡ ಕಣಪ್ಪೊ.
[ಸಲ್ಗೆ ಇದ್ರ ಒಳ್ಳೇದೇ ಅಲ್ವ್ರ]
ಕಿಸ್ದೋರು
ಹಂಗೆ ಆಗ್ಲಿ ಅಜ್ಜ...
ನೀನ್ ವೋಗ್ ಬಾ.
ನನ್ ಯ್ವಾಚನೆ ಮಾಡ್ ಬ್ಯಾಡ ನೀನು.
ಮಾದೇವ ಎಲ್ರಗೂ ಸರ್ಯಾಗೆ ಮಡಗ್ತೌನೆ
ಕಿಸಿಯೋದು ಅಂದರೆ ಗೊತ್ತಿಲ್ದಿರೋರ್ಗೆ
Ka. kisi (kisid-/kist-) to expand, open, withdraw the lips from the teeth so as to show them, grin, put astride; vb.n. kisa, kisi, kisu; kisikisi nagu to grin in laughter, grin; kicikil to neigh. ತುಸು ಕಿಸಿಯಿರಿ