ದೇವರ ದರುಶನ, ಪೂಜೆಗಿಂತ ಚರುಪೇ ಮುಕ್ಯವಾದಾಗ!
ಈ ವೀಕೆಂಡು ನಮ್ಮೂರಿನ ಶಂಕರ ಮಟಕ್ಕೆ ಹೋಗಿದ್ದೆ. ಶಂಕರ ಜಯಂತಿಯ ಯಾವುದೋ ಕಾರ್ಯಕ್ರಮಕ್ಕೆ ನನ್ನಮ್ಮನಂನು ಬಿಡಲು. ಅವಳೋ "ಇಲ್ಲಿಗೆ ಬಂದಾಗಿದೆಯಲ್ಲ, ಇನ್ನೇನು ಮಂಗಳಾರತಿ ಇರೋ" ಅಂದಳು. ಸರಿ ಆಯ್ತು ಇದ್ದೇ. ಏನು ಒಂದು ಇಪ್ಪತ್ತರಿಂದ ಮುವ್ವತ್ತು ಮಂದಿ. ಹೆಂಗಸರೇ ಮೆಜಾರಿಟಿ. ನಮ್ಮ ಹಣ್ಣೂಕಾಯಿ ಆಯಿತು. ಮಂಗಳಾರತಿಯೂ ಆಯಿತು.
ಮಂಗಳಾರತಿ, ತೀರ್ತ ಪಡೆದು ಚರುಪು(ಪ್ರಸಾದ) ತಿಂನದೇ ಹೋಗಕ್ಕೆ ಆಗುತ್ಯೇ? ಅಂತ ಪ್ರಸಾದ ಸಾಲಿಗೆ ಹೋದರೆ, ಅದೆಲ್ಲಿದ್ರಪ್ಪ ಜನ, ಇಲ್ಲಾ ಅಂದ್ರು ನೂರು ಮಂದಿ ಬಂದು ಮುತ್ತಿಕೊಂಡಿ ಇದ್ರು. ಇದನ್ನ ನೋಡಿ ನಾನು ನನ್ನಮ್ಮ ಸೀದಾ ಮನೆಗೆ ಹೋದ್ವು.
ಇಲ್ಲಿ ನಂಗೆ ಚರುಪು ಸಿಗನಿಲ್ಲ ಅಂತ ಬೇಜಾರಿಲ್ಲ. ![]()
ಆದ್ರೆ ಯಾವಾಗಲೂ ಹಿಂಗೇ, ಎಲ್ಲ ಗುಡಿಗಳಲ್ಲೂ ಹಿಂಗೆ, ಪೂಜೆಗೆ, ಸಂಗೀತೋತ್ಸವಕ್ಕೆ, ಅದ್ಯಾಕೆ ಹರಿಕತೆಗೂ ಜನ ಇರುಲ್ಲ. ಆದರೆ ಚರುಪಿಗೆ ಮಾತ್ರ ನೂಕುನುಗ್ಗಲು.

- mahesha ರವರ ಬ್ಲಾಗ್
- Login or register to post comments
- 640 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ದೇವರ ದರುಶನ, ಪೂಜೆಗಿಂತ ಚರುಪೇ ಮುಕ್ಯವಾದಾಗ!
ನನಗೆ ಈ ದಾಸರ ಪದ ನೆನಪಿಸಿತು
"ಎಲ್ಲರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ..." - ಪುರಂದರ ದಾಸರು
ಉ: ದೇವರ ದರುಶನ, ಪೂಜೆಗಿಂತ ಚರುಪೇ ಮುಕ್ಯವಾದಾಗ!
"ಎಲ್ಲರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ..." - ಪುರಂದರ ದಾಸರು
ಇದನ್ನು ಹೇಳಿದ್ದು ಕನಕದಾಸರು ..
-ಹಂಸಾನಂದಿ
ಉ:
ಉ:
ಅನಿವಾಸಿಗಳೆ,
ಪದ ಜೋಡಿಕೆ ನೋಡಿದರೆ ಪುರಂದರ ದಾಸರೇ ಅಂತ ನನಗೂ ಅನ್ನಿಸುತ್ತಿದೆ..
ಉ:
ಹಂಸಾನಂದಿಯವರು ಹೇಳಿದ ಹಾಗೆ ಈ ಕೆಳಗಿನ ಪ್ರಸ್ತುತಿಯ ಕಡೆಯಲ್ಲಿ ಕನಕದಾಸರ ಅಂಕಿತವಿದೆ!
http://www.kannadaaudio.com/Songs/Devotional/BhakthiSowrabha/Ellaaru.ram
ಉ:
ವೈಭವ ಮತ್ತು ಅನಿವಾಸಿ ಅವರೆ, ಮೊದಲು ನಾನು ಬರೆದ ಮಾತನ್ನು ಸ್ವಲ್ಪ ಬದಲಾಯಿಸಬೇಕಾಗುತ್ತೆ
ನೀವು ಹೇಳಿದ್ದೂ ಸರಿ, ನಾನು ಹೇಳಿದ್ದೂ ಸರಿ!
ಎಲ್ಲ ಹರಿದಾಸರ ಮೂಲಭೂತ ಮೌಲ್ಯಗಳು ಒಂದೇ ಆದುದ್ದರಿಂದ, ಒಂದೇ ತರಹದ ರಚನೆಗಳನ್ನು ಅವರು ಮಾಡಿದ್ದರೂ ಆಶ್ಚರ್ಯವಿಲ್ಲ. ನಾನು ಇಲ್ಲಿಯವರೆಗೆ ತಿಳಿದಿದ್ದ ಎಲ್ಲರು ಮಾಡುವುದು ಎಂಬ ರಚನೆ ಕನಕದಾಸರದ್ದು. ಆದರೆ, ಸ್ವಲ್ಪ ಹುಡುಕಿ ನೋಡಲಾಗಿ, ಪುರಂದರ ದಾಸರದ್ದೂ ಆ ರೀತಿ ಒಂದು ರಚನೆ ಇದೆ ಎಂದು ತಿಳಿದುಬಂತು.
ಎಲ್ಲರಿಗೂ ಅನುಕೂಲವಾಗಲಿ ಎಂದು ಎರಡನ್ನೂ ಇಲ್ಲಿ ಬರೆದ್ದೇನೆ. ನನಗೆ ತಿಳಿದ ಮಟ್ಟಿಗೆ, ಕನಕದಾಸರ ರಚನೆ ಸ್ವಲ್ಪ ಹೆಚ್ಚಾಗಿ ಪ್ರಚಲಿತದಲ್ಲಿದೆ. (ಸಾಧಾರಣವಾಗಿ, ಎಲ್ಲಾ ಚರಣಗಳನ್ನೂ ಹಾಡುವುದಿಲ್ಲ)
ಎಲ್ಲರು ಮಾಡುವುದು ಹೊಟ್ಟೆಗಾಗಿ - ಕನಕದಾಸರು
ಪಲ್ಲವಿ:
ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ತುತ್ತು ಹಿಟ್ಟಿಗಾಗಿ
ಚರಣಗಳು:
ವೇದಶಾಸ್ತ್ರ ಪಂಚಾಂಗ ಓದಿಕೊಂಡು ಪರರಿಗೆ
ಬೋಧನೆಯ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ
ಅಂಗಡಿಗಳನ್ನೆ ಹೂಡಿ ವ್ಯಂಗ್ಯ ಮಾತುಗಳನ್ನಾಡಿ
ಭಂಗಬಿದ್ದು ಗಳಿಸುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ
ಬೆಲ್ಲದಂತೆ ಮಾತನಾಡಿ ಎಲ್ಲರನು ಮರಳುಮಾಡಿ
ಸುಳ್ಳು ಬೊಗಳಿ ತುಂಬುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ
ಸನ್ಯಾಸಿ ಜಂಗಮ ಜೋಗಿ ಜಟ್ಟಿ ಮೊಂಡ ಬೈರಾಗಿ
ನಾನಾ ವೇಷಂಗಳೆಲ್ಲ ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ
ಹಳ್ಳದಲ್ಲಿ ಕುಳಿತುಕೊಂಡು ಕಲ್ಲು ದೊಣ್ಣೆ ಹಿಡಿದುಕೊಂಡು
ಕಳ್ಳತನವ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ
ಅಂದಣ ಪಲ್ಲಕ್ಕಿ ಏರಿ ಮಂದಿ ಮಾರ್ಬಲಗೂಡಿ
ಚಂದದಿಂದ ಮೆರೆವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ
ಉನ್ನತ ನೆಲೆಯಾದಿ ಕೇಶವನ ಧ್ಯಾನವನ್ನು
ಮನಮುಟ್ಟಿ ಮಾಡುವುದು ಮುಕ್ತಿಗಾಗಿ ಆನಂದಕ್ಕಾಗಿ
ಎಲ್ಲರೂ ಮಾಡುವುದು ಹೊಟ್ಟೆಗಾಗಿ - ಪುರಂದರದಾಸರು
ಪಲ್ಲವಿ:
ಎಲ್ಲರು ಮಾಡುವುದು ಹೊಟ್ಟಗಾಗಿ ಗೇಣು ಬಟ್ಟೆಗಾಗಿ
ಅನುಪಲ್ಲವಿ:
ಸಿರಿ ವಲ್ಲಭನ ಭಜಿಸುವುದು ಮುಕ್ತಿಗಾಗಿ
ಚರಣಗಳು:
ಪಲ್ಲಕ್ಕಿಯ ಹೊರುವುದು ಹೊಟ್ಟೆಗಾಗಿ ದೊಡ್ಡ ಮಲ್ಲರೊಡನಾಡುವುದು ಹೊಟ್ಟೆಗಾಗಿ
ಸುಳ್ಳಾಗಿ ಪೊಗಳುವುದು ಹೊಟ್ಟೆಗಾಗಿ ಸಿರಿ ವಲ್ಲಭನ ಧ್ಯಾನವು ಮುಕ್ತಿಗಾಗಿ
ದೊರೆತನ ಮಾಡುವುದು ಹೊಟ್ಟೆಗಾಗಿ ಕರಿ ತುರಗವೇರುವುದು ಹೊಟ್ಟೆಗಾಗಿ
ದುರಿತವ ಮಾಡುವುದು ಹೊಟ್ಟೆಗಾಗಿ ಸಿರಿ ಹರಿಯ ಭಜಿಸುವುದು ಮುಕ್ತಿಗಾಗಿ
ಬೆಟ್ಟವ ಹತ್ತುವುದು ಹೊಟ್ಟೆಗಾಗಿ ಗಟ್ಯಾಗಿ ಕೂಗುವುದು ಹೊಟ್ಟೆಗಾಗಿ
ದಿಟವಾಗಿ ನಮ್ಮ ಶ್ರೀ ಪುರಂದರ ವಿಠಲನ್ನ ಧ್ಯಾನವು ಮುಕ್ತಿಗಾಗಿ
-ಹಂಸಾನಂದಿ
ಉ:
ವಾವ್.. ಪುರಂದರರ ಮತ್ತು ಕನಕದಾಸರ ಎರಡು ರಚನೆ ಹುಡುಕಿ ತಿಳಿಸಿಕೊಟ್ಟಿದ್ದಕ್ಕೆ ನನ್ನಿ. ಹಾಗದರೆ ನನಗೆ ಇದುವರೆವಿಗೂ ಗೊತ್ತಿದ್ದು ಕನಕದಾಸರ "...ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ"
ಉ:
"ಮಲಯಮಾರುತ" ಚಿತ್ರದಲ್ಲಿ ಇರುವ ಹೊಟ್ಟೇಗಾಗಿ..ಹಾಡೂ ಕನಕದಾಸರದ್ದೇ...
ಉ:
ಶ್ರೀ ಬಿ.ವಿ.ಕಾರಂತರು ಜಡಭರತರ 'ಸತ್ತವರ ನೆರಳು' ನಾಟಕದ ತಮ್ಮ ಆಟದಲ್ಲಿ ಪುರಂದರ ದಾಸರ ಪದವನ್ನು ಬಳಸಿದ್ದಾರೆ. ನಾಟಕದಾದ್ಯಂತ, ಮಠದ ಆಗುಹೋಗುಗಳನ್ನು ಟೀಕಿಸುವುದಕ್ಕೆ ಪುರಂದರದಾಸರ ಹಾಡುಗಳನ್ನು ಬಳಸಿ ಎಪ್ಪತ್ತರ ದಶಕದಲ್ಲಿ ಒಂದು ಕೃತಿಯ ರಂಗದ ಅಳವಡಿಕೆಯ ಬಗ್ಗೆ ಅಲೆಯನ್ನೇ ಎಬ್ಬಿಸಿದ್ದರು. ಬಿ.ಜಿ.ಎಲ್.ಸ್ವಾಮಿಯವರು ಪುರಂದರದಾಸರ ಪದಗಳ ಬಳಕೆ ಮತ್ತು ಅಳವಡಿಸಿದ ರಾಗಗಳ ಬಗ್ಗೆ ಪ್ರಜಾವಾಣಿ ಸಾಪ್ತಾಹಿಕ ಪುರವಣಿಯಲ್ಲಿ ಪುಟವಿಡೀ ಬರೆದು ವಿಮರ್ಶೆ ಮಾಡಿದ್ದನ್ನು ನೋಡಿದ್ದು ನೆನಪಿದೆ (ಓದಿದ್ದಲ್ಲ!). ಅಲ್ಲಿ ಬಳಸಿದ ರಾಗಗಳು ನಾಟಕೀಯವಾಗಿದ್ದು, ಶಾಸ್ತ್ರೀಯ ಪದ್ಧತಿ ಪಕ್ಕಕ್ಕಿಟ್ಟು, "ಜನಪದ" ಬಳಸುವ ಮಟ್ಟುಗಳನ್ನು ಹಾಕಿಕೊಂಡಿದ್ದರು. ಅದಕ್ಕಾಗಿ ಕಾರಂತರು ಬೆಂಗಳೂರಿನ ಅಜ್ಜಿಯಂದಿರು ಆ ಪದಗಳನ್ನು ಹಾಡುವ ಪರಿಯನ್ನು ಅವರ ಮನೆಗಳಿಗೆ ಹೋಗಿ ರೆಕಾರ್ಡ್ ಮಾಡಿಕೊಂಡು ಅವರ ಏರಿಳಿತಗಳನ್ನು ಅಭ್ಯಾಸ ಮಾಡಿದ್ದರು ಎಂದು ಕೇಳಿ ರೋಮಾಂಚನಗೊಂಡಿದ್ದೆ! ಬಿ.ವಿ.ಕಾರಂತರ ಸಂಗೀತ ಶೈಲಿಯನ್ನೇ ಅಭ್ಯಾಸಮಾಡುವ ಅಗತ್ಯವಿದೆ ಎಂದು ನನ್ನ ಯೋಚನೆ.
ಉ:
ಈ ನಾಟಕದ ಹಾಡುಗಳ ಆಡಿಯೋ ಕ್ಯಾಸೆಟ್ ನನ್ನಲ್ಲಿದೆ..ಹಾಡುಗಳನ್ನು ಬಿ ವಿ ಕಾರಂತರೇ ಹಾಡಿದ್ದಾರೆ.ಹಾಡುಗಾರಿಕೆಯಲ್ಲಾಗಲೀ ಸಂಗೀತದಲ್ಲಾಗಲಿ ಯಾವುದೇ ಆಡಂಬರವಿಲ್ಲ.ಅದಕ್ಕೇ ಅದು ಇಷ್ಟವಾಗುತ್ತದೆ..ಈ ನಾಟಕವನ್ನು ಇನ್ನೂ ನೋಡ್ಲಿಲ್ಲ. ನೋಡ್ಬೇಕು.
ಇತ್ತೇಚೆಗೆ 'ಮ್ಯೂಸಿಕ ವರ್ಲ್ದ್'ನಲ್ಲಿ ಸಿ ಅಶ್ವಥ್ ಸಂಗೀತದಲ್ಲಿರುವ ರಂಗಗೀತೆಗಳ ಸಿಡಿ ನೋಡಿದ್ದೆ..ಅದರಲ್ಲಿ ಕಾಕನಕೋಟೆಯ 'ನೇಸರ ನೋಡು' ಮತ್ತು 'ಬೆಟ್ಟದಾ ತುದಿಯಲ್ಲಿ..' ಹಾಡುಗಳಿವೆ..ಇನ್ನೊಮ್ಮೆ ಹೋದಾಗ ಅದನ್ನು ತೆಗೆದುಕೊಳ್ಳಬೇಕು.
ಉ:
'ಸತ್ತವರ ನೆರಳು' ನಾಟಕದ ಕ್ಯಾಸೆಟ್ಟು ನಿಮ್ಮಲ್ಲಿದೆ ಎಂದಿದ್ದೀರಿ. ಅದರಲ್ಲಿ ಬಿ.ವಿ.ಕಾರಂತರ 'ಗಿಳಿಯು ಪಂಜರದೊಳಿಲ್ಲಾ ' ಹಾಡು ಇದೆಯೇ? . ಅದೊಂದು ಅದ್ಭುತ ಹಾಡು . ಯಾರಾದರೂ ಮಹಾನುಭಾವರು ತೀರಿಕೊಂಡಾಗ ಆಕಾಶವಾಣಿಯಲ್ಲಿ ಸರಕಾರೀ ಸೂತಕ ಇರುವಾಗ ಈ ಹಾಡು ಕೇಳಿ ಬರುತ್ತದೆ. ಶೋಕರಸ ತುಂಬಿ ಹಾಡಿದ್ದಾರೆ . ನನಗೆ ಬಹಳ ಮೆಚ್ಚಿಗೆ ಯಾದ ಹಾಡು ಅದು.
(ಆದರೆ ನಮ್ಮ ಮನೆಯಲ್ಲಿ ಈ ಹಾಡು ನಿಷಿದ್ಧ ಯಾಕೆಂದರೆ ನನ್ನ ಅಕ್ಕ ಚಿಕ್ಕಂದಿನಲ್ಲಿ ತೀರಿಕೊಂಡಿದ್ದು ನನ್ನವ್ವನಿಗೆ ನೆನಪಾಗಿ . ದುಃಖಪಡುತ್ತಾಳೆ).
ಈ ಹಾಡು ನಿಮ್ಮ ಹತ್ತಿರ ಇರುವ ಕ್ಯಾಸೆಟ್ಟಿನಲ್ಲಿದ್ದರೆ . ಕ್ಯಾಸೆಟ್ಟಿನ ವಿವರ ತಿಳಿಸಿ . - ಹೆಸರು , ಕಂಪನಿ ಇತ್ಯಾದಿ.
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ:
"ಗಿಳಿಯು ಪಂಜರದೊಳಿಲ್ಲ" ಈ ಹಾಡು ಅಮೃತಧಾರೆ ಸಿನಿಮಾಡಲ್ಲೂ ಇದೆ.
ಅದರ ಹಾಡನ್ನು ನೀವು ಕನ್ನಡಾಡಿಯೋ.ಕಾಂ ಇಲ್ವೇ musicindiaonline.com ಅಲ್ಲಿ ಕೇಳಬೋದು!
======================================
ಉ:
ನನ್ನ ಹತ್ತಿರ ಇರುವುದು 'ಸತ್ತವರ ನೆರಳು' ಹಾಡುಗಳ ಕ್ಯಾಸೆಟ್..'ಸ ರಿ ಗ ಮ(sa re ga ma) ' ಆಡಿಯೊ ಕಂಪೆನಿ ..ಕ್ಯಾಸೆಟ್ನ ಹೆಸರು 'ಬಿ ವಿ ಕಾರಂತ್ ನಿರ್ದೇಶನದ ಸತ್ತವರ ನೆರಳು ನಾಟಕದ ಹಾಡುಗಳು;ಪುರಂದರ ದಾಸರ ಪಧ್ಯಗಳು' ಎಂದು..
ನಿಜ. ಆ ಕ್ಯಾಸೆಟ್ನಲ್ಲಿ ಗಿಳಿಯು ಪಂಜರದೊಳಿಲ್ಲ ಹಾಡಿದೆ..ಅಮೃತಧಾರೆ ಸಿನೆಮಾದಲ್ಲಿ ಆ ಹಾಡನ್ನು ಸಿ ಅಶ್ವಥ್ ಚೆನ್ನಾಗಿ ಹಾಡಿದ್ದಾರೆ..ಆದರೆ ಬಿ ವಿ ಕಾರಂತ್ ಹಾಡಿರುವುದು ನಂಗೆ ಹೆಚ್ಚು ಇಷ್ಟವಾಯಿತು..ಕೃಷ್ಣನ ಕುರಿತಾದ ಹಾಡೊಂದಿದೆ..ಅದೂ ಚೆನ್ನಾಗಿದೆ..
ಉ: ದೇವರ ದರುಶನ, ಪೂಜೆಗಿಂತ ಚರುಪೇ ಮುಕ್ಯವಾದಾಗ!
veena.
ನಾನು ದೇವಸ್ಠಾನಕ್ಕೆ ಹೋದಾಗ ಹಾಕುವ ಮಾಮೂಲಿ ಅರ್ಜಿಗಳ ಜೊತೆಗೆ ಕೇಳುವುದೇನು ಗೊತ್ತ, ದೇವರೆ ಹೊರಗೆ ನಾನು ಬಿಟ್ಟು ಬಂದಿರುವ ಚಪ್ಪಲಿಯನ್ನು ಕಾಪಾಡು.
ಉ: ದೇವರ ದರುಶನ, ಪೂಜೆಗಿಂತ ಚರುಪೇ ಮುಕ್ಯವಾದಾಗ!
ವೀಣಾರೆ
ನಾನು ಹಿಂದೊಂದು ಡುಂಡಿರಾಜರ ನಾಟಕ ಓದಿದ್ದೆನು. ಅದರ ಹೆಸರು ನೆಪ್ಪಿಲ್ಲ.
ಆದರಲ್ಲಿ ಚಪ್ಪಲಿಯೂ ದೇವರು.
ದೇವರು ಕಾಪಾಡುವವನು ಅಲ್ವಾ! ಚಪ್ಪಲಿಯೂ ನಮ್ಮ ಕಾಪಾಡುವುದು, ಆದುದರಿಂದ ಅದರಲ್ಲೂ ದೇವನಿದ್ದಾನಂತೆ!
======================================