ನಂಬಿಕೆಯೇ ಆಧಾರ.. ಎಂಬ ದೊಡ್ಡ ಸಮಸ್ಯೆ.
ಇಂದು ನಮ್ಮ ಸುತ್ತಮುತ್ತ ಏನೆಲ್ಲ ಗೊಡವೆಗಳು, ತೊಂದರೆಗಳು, ಇಕ್ಕಟ್ಟು-ಎಡವಟ್ಟುಗಳಿವೆ. ಇವೆಲ್ನ ನಾವು ನಾಳ್ನಾಳೂ ಎದುರಿಸಿಕೊಂಡು, ಬದುಕಿಕೊಂಡಿದ್ದೀವಿ, ಹಾಗೆ ಸತ್ತುಕೊಂಡಿದ್ದೀವಿ. ಬದುಕುವುದೇ ಒಂದು ದೊಡ್ಡ ಪಜೀತಿಯಾಗಿರುವಾಗ, ಈ ಪಜೀತಿಗಳಿಗೆ ಇನ್ನು ಹೆಚ್ಚೆಚ್ಚು ಪಜೀತಿಗಳನ್ನು ತುಂಬಿಕೊಳ್ಳುತ್ತಿದ್ದೀವಿ. ಒಟ್ಟಿನಲ್ಲಿ ನಾವು ನೇರವಾಗಿ ನುಣುಪು-ಬಾಳನ್ನು ಮೆಚ್ಚುವವರು ಅಲ್ಲ ಅನ್ನಿಸ್ತದೆ. ನಮಗೆ ಬದುಕಲು ಈವೆಲ್ಲ ಗೊಡವೆ ಬೇಕೇಬೇಕೇನೋ.
ಇಬ್ಬರು ಹುಯೂಮನರ(humans) ಬೆರಳಚ್ಚು ಹೇಗೆ ಹೊಂದವೋ, ಹಾಗೆ ಅವರ ಮನಗಳು ಒಂದೇ ಬಗೆಯಲ್ಲಿ ಹೊಂದವೂ. ಇದಕ್ಕೆ ಏನು ಓಸುಗರ, ಅಂತ ಹುಡುಕಿಕೊಂಡು ಹೋದ್ರೆ, ಉತ್ರ ಸಿಗ್ತದಾ? ಒಮ್ಮೆ ನೋಡೋಣ.
ಈಗ ನಾವು ಒಂದು ಸರಕು ತಗೆದುಕೊಳ್ಳೋಣ. ಮಾದರಿಯಾಗಿ ಒಂದು ದುಂಡುಗಲ್ಲು. ಇದನ್ನು ನೋಡಿ ಹಲವರು ಹಲವಾರು ಬಗೆಯಲ್ಲಿ ಹೇಳಬಹುದು
೧) ಇದೊಂದು ದುಂಡುಗಲ್ಲು. ದುಂಡಗಿದೆ.
೨) ಇದೊಂದು ದುಂಡುಗಲ್ಲು. ಕಲ್ಲು ಗಟ್ಟಿ, ತೂಕ.
೩) ಇದೊಂದು ದುಂಡುಗಲ್ಲು, ಗುಂಡುಗಲ್ಲು, ಗುಂಡಪ್ಪ. ಅಂದ್ರೆ ಸಿವಲಿಂಗ
೪) ಇದೊಂದು ದುಂಡುಗಲ್ಲು, ಒರಳಿಗೆ ಹಾಕಿ ರುಬ್ಬಲು ಆದೀತು
೫) ಇದೊಂದು ದುಂಡುಗಲ್ಲು, ಇದು ನೋಡಕ್ಕೆ ಸಕ್ಕತ್ತಾಗಿದೆ, ನಮ್ಮ ಮನೆ ಅಂಗಳದ ಮೂಲೆಯಲ್ಲಿ ಇಟ್ಟು ಇದಕ್ಕೆ ಸಿಂಗರಮಾಡಬೋದು.
.
.
.
.
ದುಂಡುಗಲ್ಲು ಒಂದೇ, ಆದ್ರೆ ಒಬ್ಬೊಬ್ಬರು ಒಂದೊಂದು ಗುಣಗಳನ್ನು ಹಿಡಿದರು. ಕೆಲವರು ಅದರ ರೂಪವನ್ನು ನೋಡಿದರು, ಕೆಲವರು ಅದಕ್ಕೊಂದು ಕತೆಯನ್ನು ಗಂಟುಹಾಕಿ ಶಿವಲಿಂಗ ಅಂದರು. ಈಗ ಇವೆಲ್ಲ ಸಂಗತಿಗಲ್ಲಿ ಯಾವುದು ಸರಿ? ಯಾವುದು ಮೇಲು? ಅನ್ನೋ ಮಾತುಕತೆಗೆ ಇಳಿದರೆ ಅದಕ್ಕೊಂದು ಕೊನೆಯುಂಟೇ, ತೀರುಂಟು, ತೀರ್ಮಾನವುಂಟೇ?
ಈ ಗೊಡವೆಯಲ್ಲಿ ಎಲ್ಲರು ಅವರವರ ನಂಬಿಕೆಯ ಹಿನ್ನೆಲೆಯಲ್ಲೇ ಮಾತಾಡುವರು. ಎಲ್ಲರ ಮಾತು ಅವರವರ ನಂಬಿಕೆಯ ಆಧಾರ/ಬೆಂಬಲದಲ್ಲಿ ಸರಿಯೇ. ಹೀಗಿರುವಾಗ ಸುಮ್ನೆ ಒಂದು ಕೂಟ ತಾನು ನಂಬಿದ್ದೇ ಸರಿ, ಎಂದು ಬೇರೊಂದು ನಂಬು-ಕೂಟ(belief-group)ವನ್ನು ಹಳಿಯುವುದು, ಅವರನ್ನು ಅಳಿಸಿಹಾಕಬೇಕೆನ್ನುವುದು, ಇದಕ್ಕೆ ಏನಾರ ಹುರುಳುಂಟೇ? ಇದ್ರೂ, ಮುಂದೆ ಇವರ ನಂಬಿಕೆಯನ್ನು ಕಿತ್ತೆಸೆಯುವ ಮತ್ತೊಂದು ನಂಬು-ಕೂಟ ಬರೊಲ್ಲ ಅಂತ ಏನು ನಿಕ್ಕುವ?
ಒಟ್ಟಿನಲ್ಲಿ, ನಂಬಿಕೆಯೇ ಕೊನೆ, ಇದರ ಮುಂದೇ, ಇದುರು ಏನೂ ಇರಬಾರದು ಅನ್ನೋ ಗೊಡವೆಗೆ ಎಂದೂ ಕೊನೆಯಿಲ್ಲ. ಹೊಸಹೊಸ ನಂಬುಗೆಗಳು, ಅದರ ನಂಬುಗರು ಬರ್ತಾನೇ ಇರ್ತಾರೇ, ಹಾಗೆ ಹಳೆನಂಬುಗೆಗಳು ಬಿದ್ದು, ಹೊಸಹೊಸವು ಏಳ್ತಾನೆ ಇರ್ತಾವೆ. ಆದ್ರೆ ಇವೆಲ್ಲದರ ನಡುವೆ ನಿಕ್ಕುವವಾಗಿ ಎಂದೂ ಈ ಗೊಡವೆಗೆ ತಲೆಗಿವಿಗೊಡದ ಮಂದಿಗಳ ಬದುಕುಗಳ ಸುರು ಮತ್ತು ಕೊನೆಗಳು ಹೇಗೋ ಆಗ್ತಾ ಇರ್ತವೆ.
ಸಮಸ್ಯೆಯನ್ನು ಬಿಡಿಸುವ ಒಂದು ದಾರಿ, ಸಮಸ್ಯೆಯಿಂದ ನಮ್ಮನ್ನು ನಾವು ದೂರ ಮಾಡಿಕೊಂಡು ಬಿಡೋದು ![]()

- mahesha ರವರ ಬ್ಲಾಗ್
- Login or register to post comments
- 257 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS: