ಬಿಟ್ಟಿ ಉಪದೇಸದಿಂದ ತುಟ್ಟಿಯಾದವರು!
ನಾನು ಸುಖಬೋಧಾನಂದ ಅವರು ಮಾತು ಕೇಳ್ತಾ ಇದ್ದೆಂ ನೆನ್ನೆ!! ( ನಂಗೆ ಈ ಸುಖಬೋಧಾನಂದ ಅವರು ಯಾರು ಏನು ಅಂತ ಗೊತ್ತಿಲ್ಲ, ಸುಮ್ನೆ ಹಿಂಗೆ ಚಂದನದಲ್ಲಿ ಇವರು ಇಂಗ್ಲೀಸಲ್ಲಿ ಮಾತಾಡದ್ರು, ೨ ಚಣ ಕೇಳಿಸಿಕೊಂಡೆಂ )
ಅವರು ಹೇಳ್ತಿದ್ರು. ನಮ್ಗೆಲ್ಲ ಹಲವು ಪುಕ್ಕಲ್ಲುಗಳಂತೆ, ಅದರಲ್ಲಿ ಒಂದು fear of public speech, ಅಂದ್ರೆ ನಮಗೆ ಸರಿಯನ್ನಿಸಿದ್ದನ್ನು ಎಲ್ಲರ ಮುಂದೆ ಹೇಳಿಕೊಳ್ಳುವಂಜಿಕೆ. ಅದಕ್ಕವರು ಹೇಳಿದ್ರು, ಇದರಿಂದ ನಮ್ ದೇಸದಾಗೇ ಬಾಸಣ ಬಿಗಿಯೋರಿಗೆ ಬಲು ಮರ್ಯಾದೆ, ಏಕೆಂದ್ರೆ ನಾವ್ ಹಲವರಿಗೆ, ಮುಂಬಂದು ಮಾತಾಡಕ್ಕೆ ಹೆದರಿಕೆ ಐತೆ.
ಅದಕ್ಕೆ ನಮ್ಮ ನಡುವೆ ಹಲ-ಮಂದಿ ಹೀಗೆ 'ಬಿಟ್ಟಿ ಉಪದೇಸದಿಂದ ತುಟ್ಟಿಯಾಗಿ ಬಿಟ್ಟವ್ರೆ, ಬಿಡ್ತಾ ಅವ್ರೆ, ಬಿಡ್ತಾರೆ'. ನಾನು ಬಿಟ್ಟಿ ಬಿಟ್ಟಿ ಉಪದೇಸ ಮಾಡೋದು ಬಿಟ್ಬಿಡಬೇಕಂತ ಯಾವಗಲೂ 'ಇದು ಹಿಂಗಿದೆ' ಅಂತ ಹೇಳಕ್ಕೆ ನೋಡ್ತೀನಿ, ಆದ್ರೆ 'ಇದು ಹಿಂಗಿರಬೇಕು, ಹಿಂಗರಬಾರದು' ಅಂತ ಹೇಳಕ್ಕಲ್ಲ. ಆದ್ರೂ ನಮ್ಮ ಇಂಡಿಯತನದಿಂದ ಈ ಬಿಟ್ಟಿ ತುತ್ತೂರಿಯೂದೋ ಪೆದ್ದಗುಣ ನಮ್ಮೊಡಲೊಳು ಹೇಗೋ ಹೊಕ್ಕಿಕೊಂಡಿರ್ತದೆ.
ಹೇಗೆ ಬಿಟ್ಟಿ ಉಪದೇಸ ನೀಡಬಾರದೋ, ಹಾಗೆ ಬಿಟ್ಟಿ ಉಪದೇಸವನ್ನೂ ಕೇಳಿಸಿಕೊಂಡ್ರು, ಹುಸಾರಾಗಿ ನಂಬಬೇಕು.
ಈಗ ಒಬ್ಬ 'ಊ' ಬಂದು ಹಿಂಗೆ "ಟಟಟ ಮಾಡಬೇಡ, ಡಡಡ ಮಾಡಬೇಕು, ರರರ ಒಳ್ಳೇದು, ಱಱಱ ಒಳ್ಳೇದಲ್ಲ, ಕೆಟ್ಟದ್ದು " ಹೇಳ್ದಂ, ಅಂತ ಇಟ್ಟಕೊಳ್ಳಿ
ಆಗ ನಾವು ಹಿಂಗೆ ಅರಿತ ಮಾಡಿಕೊಳ್ಬೇಕು.
೧) ಟಟಟ ಮಾಡಬೇಡ, ಏಕೆಂದ್ರೆ ಅದನ್ನು ಮಾಡಿದ್ರೆ ಊ ಗೆ ತೊಂದ್ರೆ.
೨) ಡಡಡ ಮಾಡಬೇಕು, ಏಕೆಂದ್ರೆ ಅದನ್ನು ಮಾಡಿದ್ರೆ ಊ ಗೆ ಆರಾಮು, ಲಾಬ
೩) ರರರ ಒಳ್ಳೇದು, ನಂಗೆ ಒಳ್ಳೇದೋ ಇಲ್ವೋ, ಆದ್ರೆ ಊ ಗೆ ಒಳ್ಳೇದು
೩) ಱಱಱ ಒಳ್ಳೇದಲ್ಲ, ನಂಗೆ ಒಳ್ಳೇದೇ ಇರಬೋದು, ಆದ್ರೆ ಊ ಗೆ ಒಳ್ಳೇದಲ್ಲ.
"ಈ ನೆಲದಲ್ಲಿ ಯಾರು ಯಾರಿಗೂ ಬೇರೊಬ್ರಿಗೆ ಒಳ್ಳೇದು ಮಾಡಲ್ಲ, ಮಾಡಕ್ಕಾಗಲ್ಲ! ನಾವು ನಮಗೆ ಒಳ್ಳೇದು( ಇಲ್ಲಿ ಒಳ್ಳೇದು ಅಂದ್ರೆ ನಮಗೆ ಹಿಡಿಸೋದು ) ಮಾಡಿಕೋಬೇಕು" ಅಂತ ನನ್ನನಿಸಿಕೆ.
ನಮಗೆ ಯಾರಾರ ಬಂದು "ನಿಂಗೆ ಒಳ್ಳೇದು ಮಾಡ್ತೀನಿ ಅಂದ್ರೆ, ೯೯% ಅವನು ನಂಗೆ ಟೋಪಿ ಹಾಕ್ತಾನೆ" ![]()

- mahesha ರವರ ಬ್ಲಾಗ್
- Login or register to post comments
- 543 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ಉ: ಬಿಟ್ಟಿ ಉಪದೇಸದಿಂದ ತುಟ್ಟಿಯಾದವರು!
ಅರೆ ಇದೇನಿದು? ಮುಂದೆ ಏನೂ ಇಲ್ಲವೇ? ಗಾಂಧೀನಗರದವರ ಥರ ಇದೇನು ಟೈಟಲ್ಲು ??? ರಿಸರ್ವು???
ಎನಗಿಂತ ಕಿರಿಯರಿಲ್ಲ