ಕೊಳವೆ ಬಾವಿಯಲ್ಲಿ ಸತ್ತ ಹುಡುಗ
ನೆನ್ನೆ ಇಂದು ಟೀವಿ ೯ ರಿಂದ ಎಡೆಬಿಡದೆ ಬಿಸಿಬಿಸಿ ಸುದ್ದಿಯಾಗಿದ್ದ "ಕೊಳವೆ ಬಾವಿಯಲ್ಲಿ ಬಿದ್ದ" ಸಂದೀಪ ಇನ್ನಿಲ್ಲ ,ಎಂದು ಈಗ ಬಂತು.
ಕೊಳವೆ ಬಾವಿ ಕೊರೆದು, ಅದರಿಂದ ನೀರು ಬರಲಿಲ್ಲ, ಅದನ್ನು ಮುಚ್ಚದೇ ಹಂಗೇ ಬಿಟ್ಟು, ಇಂತು ಸಣ್ಣಪುಟ್ಟ ಹುಡುರ ಉಸಿರಿಗೆ ಕುತ್ತು ತರ್ತಾರಲ್ಲ!
ಆ ಹುಡುಗ ಸತ್ತ ಸುದ್ದಿ, ಬಲು ಬೇಸರ ಮಾಡ್ತು.

- mahesha ರವರ ಬ್ಲಾಗ್
- Login or register to post comments
- 413 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ಉ: ಕೊಳವೆ ಬಾವಿಯಲ್ಲಿ ಸತ್ತ ಹುಡುಗ
ತುಂಬಾ ತುಂಬಾ ತುಂಬಾ ಬೇಸರ ಆಗತ್ತೆ ಇಂಥ ಸುದ್ದಿ ಕೇಳ್ದಾಗ. ಮೊನ್ನೆ ಇಟಲಿಯ ಸ್ಯಾಟಲೈಟ್ ನಮ್ಮ ದೇಶದಿಂದ ಉಡಾಯಿಸಿದವಿ ಅಂತ ಓದಿದೆ. ಈಗ ನಮ್ಮ ಮಕ್ಕಳನ್ನ ಪಾತಾಳಕ್ಕೆ ಕಳಿಸ ಕೊಲ್ತಾ ಇದ್ದೀವಲ್ಲ ಅಂತ ಮನಸ್ಸು ಸೊರಗಿ ಹೋಯ್ತು!
ಉ:
ಕಳೆದ ನಾಲ್ಕೈದು ತಿಂಗಳುಗಳಲ್ಲಿ ಇಂತಹದೇ ಇನ್ನೂ ಮೂರ್ನಾಲ್ಕು ಘಟನೆಗಳಾಗಿವೆ, ಅವೆಲ್ಲವನ್ನೂ ಸತತವಾಗಿ ಟಿವಿಯಲ್ಲೂ ದೇಶದಾದ್ಯಂತ ತೋರಿಸಲಾಗಿದೆ. ಹಾಗಿದ್ದರೂ ಅಂತಹ ತೆರೆದ ಬಾವಿಗಳನ್ನು, ಮ್ಯಾನ್ ಹೋಲ್ ಗಳನ್ನು ನೋಡಿದವರೆಲ್ಲರೂ ಸುಮ್ಮನಿದ್ದುಬಿಡುವುದೇಕೆ? ಪ್ರತಿನಿತ್ಯ ಸಾಗುವ ದಾರಿಯಲ್ಲಿ ಇಂತಹವನ್ನು ಕಂಡಾಗ ಅವುಗಳ ಮೇಲೊಂದು ಮರದ ಕೊಂಬೆಯನ್ನೋ, ಅಥವಾ ಸುತ್ತಲೂ ಒಂದೆರಡು ಕಲ್ಲುಗಳನ್ನೋ ಇಟ್ಟು ಬಿಡೋಣ ಅಂತ ಅದ್ಯಾಕೆ ಯಾರಿಗೂ ಅನಿಸುವುದೇ ಇಲ್ಲ? ಊರಿನ ಮೂಲೆ-ಮೂಲೆಯನ್ನೂ ನೋಡಿಕೊಳ್ಳಲು ನಿಯೋಜಿತರಾಗಿರುವ ಸರಕಾರಿ ಸಿಬಂದಿಗೆ ಇವೆಲ್ಲ ಕಾಣಿಸುವುದೇ ಇಲ್ಲವೆ ಅಥವಾ ಪಡೆಯುವ ಸಂಬಳಕ್ಕೆ ಅವರು ಮಾಡಬೇಕಾದ ಕೆಲಸಗಳಲ್ಲಿ ಇವು ಸೇರಿಲ್ಲವೆ? ನಮ್ಮ ಶಿಕ್ಷಣವೆಂದರೆ ಬರೇ ಪುಸ್ತಕದ ಬದನೇಕಾಯಿ ಎನ್ನುವುದು ಇದಕ್ಕೇ ಇರಬಹುದು
ಉ:
ನಿನ್ನೆ ಮಲೇಶ್ವರದಲ್ಲಿ ಸಿಕ್ಕಾಪಟ್ಟೆ Traffficcu .
ರಸ್ತೆ ಮಧ್ಯದಲ್ಲಿ ಡಿವೈಡರ್ ಗೋಸ್ಕರ ಕಲ್ಲುಗಳನ್ನು ಎಸೆದು ಹಾಗೆ
ಬಿಟ್ಟು ಹೋಗಿದ್ದಾರೆ. ಆ ಕಲ್ಲುಗಳು ತು೦ಬಾ ಅಡಚನೆ ಉ೦ಟು ಮಾಡುತ್ತಿತ್ತು.
ಎಲ್ಲರು ಹೇಗೋ ತಪ್ಪಿಸಿಕೊ೦ಡು ಹೋಗೋಣ ಅ೦ತಾ ಹೋಗ್ತಿದ್ದರು.
ಆದರೆ ಅಲ್ಲ್ಲಿದ್ದ್ ಆ ಪೋಲೀಸ್ ನವನು ತನ್ನ ಕೆಲಸ ಬಿಟ್ಟು,
ಆ ರಸ್ತೆಗಳನ್ನು ಜೋಡಿಸುವ ಕೆಲಸ ಮಾಡುತ್ತಿದ್ದ.
ಆ ದೃಶ್ಯ ನೋಡಿದಾಗ ಆ ಮಹಾನುಭಾವನಿಗೆ ಸಹಾಯ
ಮಾಡೋಕ್ಕೆ ಮನಸ್ಸು ಬ೦ತು.ಅವಸರದಲ್ಲಿದ್ದ ಕಾರಣ
ಹಾಗೇ ಹೋಗ ಬೇಕಾಗಿ ಬ೦ತು.
ಜಯದೇವ ಆಸ್ಪತ್ರೆ ಎದುರು ಕೂಡ ಅದೇ ರೀತಿ ಕಲ್ಲುಗಳನ್ನು
ಎಸೆದಿದ್ದಾರೆ. ಅ೦ಡರ್ ಬ್ರಿಡ್ಜ್ ಆದ ಮೇಲೆ,
ಆದರೆ ಕಲ್ಲುಗಳೂ ಸಿಕ್ಕಾಪಟ್ಟೆ ಇವೆ.
ನಾಳೆ ಹೋಗಿ ಪೋಲೀಸ್ ನವರಿಗೆ ಒ೦ದು ದೂರು ಕೊಟ್ಟು ಬರುತ್ತೀನಿ.
ಉ: ಕೊಳವೆ ಬಾವಿಯಲ್ಲಿ ಸತ್ತ ಹುಡುಗ
ಅಯ್ಯೋ! ಕೊನೆಗೂ ಆತ ಬದುಕುಳಿಯಲಿಲ್ಲ..ಈ ರೀತಿಯ ಸಾವುಗಳು ನಮ್ಮ ದೇಶದಲ್ಲಿ ಮಾತ್ರ ಇರ್ಬೇಕು.