July 27, 2007 - 9:54pm
ಒಂದು ದರುಮದವರಲ್ಲಿ :) "ನಾನು ಹೀಗೊಂದು ತಪ್ಪು ಮಾಡಿಬಿಟ್ಟೆ" ಎಂದು ಹೋಗಿ ಅವರ ಗುರುಗಳ ಹತ್ರ ಹೇಳಿಕೊಳ್ಳೋ ಒಳ್ಳೇ ಆಚಾರ ಇದೆ. ಅವರಲ್ಲಿ ಇದಕ್ಕೆ ಒತ್ತೂ ಇದೆಯಂತೆ.
ಕುವೆಂಪು ಅವರ ರಾಮಾಯಣ ದರ್ಶನಂ ಅಲ್ಲೂ "ಪಶ್ಚಾತಾಪವೇ ಪ್ರಾಯಶ್ಚಿತ್ತ" ಅಂತ ಬರುವುದಂತೆ, ಇದು ನಿಕ್ಕುವ ಗೊತ್ತಿಲ್ಲ.
ಆದರೆ ನಮಗೆ ಈ ಗುಣದ ಕೊರತೆ ಇರುವುದಂತೂ ದಿಟ. ಇದು ನನಗೂ ಇದೆ! ನಮಗೆ ನೀನು ತಪ್ಪು ಅಂದರೆ, ನಮ್ಮ ಮೊದಲ ಪ್ರತಿಕ್ರಿಯೆ ಸಿಟ್ಟು, ಮುನಿಸು, ಇರುಸುಮುರುಸು, ಹೊರತು, ಹೇಳಿತ್ತಿರುವವರು ಏನು ಹೇಳುತ್ತಿದ್ದಾರೆ ಅನ್ನೋದು ಬಳಿಕವೇ ಎಣಿಸೋದು.
ಹಲವು ಸರತಿ ನಮ್ಮ ತಪ್ಪು ನಮಗೆ ತಿಳಿಯುವುದೇ ಇಲ್ಲ, ಇಲ್ವೇ ತಿಳಿಯೋದು ಬಲು ತಡವಾಗಿ. ಇವೆಲ್ಲ ಯಾಕೆ, ಇದನ್ನು ಸರಿಪಡಿಸಲು ಹಲವು ಉಂಕುಗಳನ್ನು ನಡೆಸಿದ್ದೇನೆ. ನೋಡುಮ ಏಶ್ಟ ಜಸ ಸಿಗುವುದೆಂದು.!!
ತಪ್ಪುಗಳು ಆಗುವುದಕ್ಕೆ ಓಸುಗರಗಳು
೧) ತಿಳಿವಳಿಕೆ ಇಲ್ಲದೇ ಕೆಲಸ ಮಾಡಿದ್ದರಿಂದ
೨) ಕೆಲಸ ಮಾಡುವಾಗ ಗಮನ ತಪ್ಪಿದ್ದರಿಂದ
ಕೆಲಸ ಮಾಡುವಾಗ ಗಮನ ತಪ್ಪಿದ ತಪ್ಪು, ತಪ್ಪು ಅಂತ ಬೇಗನೇ ತಿಳಿದು ಹೋಗುವುದು. ಆದರೆ ತಿಳಿವಳಿಕೆ ಇಲ್ಲದೇ ಕೆಲಸ ಮಾಡಿದ್ದು ತಿಳಿಯುವುದು ತುಸು ಕಶ್ಟವೇ.
ಯಾಕೆ ಅದು ಕಶ್ಟ ಅಂದರೆ, ನಮಗೆ ತಿಳಿವಳಿಕೆ ಇಲ್ಲ ಅಂತ ತಿಳಿಯೋದೇ ದೊಡ್ಡ ಸಂಗತಿ.
ಈ ’ತಿಳಿವಳಿಕೆ’ ಅನ್ನೋದು ಇನ್ನೊಂದು ದೊಡ್ಡ ತರಲೆ. ತಿಳಿದಿದ್ದೇ ತಪ್ಪಾಗಿರಬಹುದಲ್ಲ. ನಾವು ಹಲವು ಸರತಿ ತಿಳಿಯೋದು ನಂಬಿಕೆಯ ಮೇಲೇ. ಯಾರನ್ನೋ ನಂಬಿಬಿಟ್ಟು, ಅವರು ಹೇಳಿದೆಲ್ಲಾ ’ತಿಳಿವು’ ಅಂತ ಮಾಡಿಕೊಂಡು, ತಪ್ಪು ತಪ್ಪ ತಿಳಿದುಕೊಂಡುಬಿಟ್ಟಿದ್ದರೆ.
ಅಯ್ಯೋ ಶಿವನೇ!! ಇಂತಹ ತಪ್ಪು ’ತಿಳಿವು’ಗಳು ನಮ್ಮ ತಲೆಯಲ್ಲಿ ಎಶ್ಟು ತುಂಬಿದೆಯೋ, ಇದರಿಂದ ಮುಂದೆ ಎಶ್ಟು ತಪ್ಪುಗಳು ಆಗವುವೊ, ಅವೆಲ್ಲ ಹೇಗೆ ಸರಿಪಡಿಸೋದು? ಅವೆಲ್ಲ ಇವೆ ಅಂತ ಹೇಗೆ ಕಂಡು ಹಿಡಿಯೋದು.
ಅಯ್ಯೋ!! ಹಾಗಂತ ಏನು ಮಾಡದೇ ಇರಲು ಆಗುತ್ತಾ?
ಅದಕ್ಕೆ ತಪ್ಪಾಯ್ತು ಅಂತ ಒಪ್ಪಿಕೊಂಡರೇ, ಎಲ್ಲ ಮುಗಿಯಿತಲ್ಲ. ಒಂದು ದೊಡ್ಡಗುಣ ಗಳಿಸಿದಂತೂ ಆಯಿತಲ್ಲ!!
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: ತಪ್ಪು ಒಪ್ಪಿಕೊಳ್ಳುವ ದೊಡ್ಡಗುಣ - ಇದು ನಮ್ಮಲ್ಲಿ ಇಲ್ಲ!
ಉ: ತಪ್ಪು ಒಪ್ಪಿಕೊಳ್ಳುವ ದೊಡ್ಡಗುಣ - ಇದು ನಮ್ಮಲ್ಲಿ ಇಲ್ಲ!
ಉ: ತಪ್ಪು ಒಪ್ಪಿಕೊಳ್ಳುವ ದೊಡ್ಡಗುಣ - ಇದು ನಮ್ಮಲ್ಲಿ ಇಲ್ಲ!