ಮಂದಿರೆಯ ಸೀರೆ!
ಇನ್ನೊಂದು ಹೊಸ ಗುಲ್ಲು, ಉರುವಣಿ.
ಆಕೆ ನಮ್ಮ ದೇಸದ ಬಾವುಟ ಇದ್ದ ಸೀರೆ ಹಾಕಿಕೊಂಡು ನಮಗೆ ದೊಡ್ಡ ಒಚ್ಚಯ ಮಾಡಿಬಿಟ್ಟಳು, ಅಂತ ಜಾರಹ!!
ನಮ್ಮ ದೇಸದಲ್ಲಿ ದಿಟವಾಗಲು ತುಂಬ ಮಂದಿಗೆ ಕೆಲಸವಿಲ್ಲ ಮಾಡಕ್ಕೆ!! ಬರಿ ಇಂತ ಸಂಗತಿ ಮೇಲೆ ಗುಲ್ಲೆಬ್ಬಿಸಿ, ಉರುವಣಿ ಮಾಡಿ, ನಮ್ಮ ದಿಟವಾದ ತೊಂದರೆ, ಪೀಕಲಾಟಗಳ ಬಗ್ಗೆ ಗಮನವನ್ನು ತಪ್ಪಿಸಿಸಿಕೊಂಡು, ಕಾಲ ತಳ್ಳೋ ಮಂದಿ ನಾವು.
ಈ ಒಸುಗೆಗಾರರೋ( news people ) ಬರಿ ಇಂತ ಗುಲ್ಲುಗಳಿಗೆ ಹೆಚ್ಚು ಹೊತ್ತು, ಒತ್ತು ಕೊಟ್ಟ, ನಮ್ಮನ್ನು ಅಡ್ಡದಾರಿಗೆ ಎಳೇತಾವ್ರೆ,
ತುಸು ಉನ್ನಿಸಿದರೆ, ಏನಪ್ಪ ಇದು, ಹಚ್ಚುತನ, ಐಲು ಅನ್ಸಲ್ವಾ?
೧) ನಾರಯಣ ಮೂರ್ತಿ, ರಾಸ್ಟರ ಗೀತೆ
೨) ಸಿಲ್ಪ ಸೆಟ್ಟಿ ಗೇರ್ರ ಉಮ್ಮ
೩) ಅಬಿಸೇಕ್, ಐಸ್ ಮದುವೆ
೪) ಮಂದಿರ ಸೀರೆ
ಬರೀ ಇಂತವೇ!
ಇವೆಲ್ಲ ದಿಟವಾದ ಸಮಸ್ಯೆ, ತೊಂದರೆಗಳೇ? ಇದರ ಬಗ್ಗೆ ನಮ್ಮ ಸುದ್ದಿಗಾರರು ಈಟೊಂದು ಹೊತ್ತು, ಒತ್ತು ನೀಡಬೇಕೆ?
ಯಾರೋ ಇಲ್ಲ "ಸುದ್ದಿ ಬರ"ದ ಬಗ್ಗೆ ಬರೆದಿದ್ದರು. ಹಾಗೆ ನೋಡಿದರೆ ಯಾವ ಸುದ್ದಿ ಬರವಿಲ್ಲ. ನಮ್ಮಲ್ಲಿ ಏನು ತೊಂದರೆಗಳು, ಅಡೆತಡೆಗಳು, ಕಡಮೆ ಇವಾ? ಜನರು ಬದುಕಕ್ಕೆ ದೊಡ್ಡ ಹಾವಳಿ ಆಗಿರುವಾಗ, ಅಂತ ಸುದ್ದಿ ಬೇಕಾನ್ನಿ (ಬೇಕಾದಷ್ಟು) ಸಿಗ್ತಾವೆ!!
ನಮ್ಮ ಸುದ್ದಿಗಾರರಿಗೆ ಕುಂತಲ್ಲೇ ಒಂದು ಕತೆ ಕಟ್ಟಿ ಪೇಳೋ ಅಂತ ಸುದ್ದಿ ಹುಡುಕಿಕೊಂಡು ಹಾಯಾಗಿವ್ರೆ. ಅವರು ಬಳಸೋ ಮಾತು ಹಂಗೆ ಕೊಂಕಣ ಸುತ್ತಿ ಮೈಲಾರಕ್ಕೆ ಬಂದ ಹಂಗೆ!
"ಹತ್ರ ಬಾ" ಅನ್ನಕ್ಕೆ "ದೂರ ಸಾಗದೇ, ಸಮೀಪಕ್ಕೆ ಆಗಮಿಸು" ಅಂತಾರೆ
ಎರಡು ಒರೆಯಲ್ಲಿ ಪೇಳೋದನ್ನ ನಾಲ್ಕು ಒರೆಯಲ್ಲಿ ಪೇಳೋ ಜಾಣತನ!

- mahesha ರವರ ಬ್ಲಾಗ್
- Login or register to post comments
- 428 hits
- Email this blog





RSS:
ಪ್ರತಿಕ್ರಿಯೆಗಳು
ಉ: ಮಂದಿರೆಯ ಸೀರೆ!
ನಿನ್ನೆ ಮೊನ್ನೆಯಿಂದ ಒಂದೆರಡು ಚಾನಲ್ ಗಳಲ್ಲಿ ಗಂಡ-ಹೆಂಡಿರ ಜಗಳವೂ, ಅದರ ನ್ಯಾಯ ತೀರ್ಮಾನವೂ, ಅದಕ್ಕೆ ಇಡೀ ಭರತಖಂಡದ ಮೂಲೆಮೂಲೆಗಳಿಂದ 'ದೂರಸಲಹೆಗಳೂ' - ಬರೇ ಇವೇ - ಇನ್ನು ಬಿಗ್ ಬ್ರದರ್, ಸಣ್ಣ ಸಿಸ್ಟರ್ ಇತ್ಯಾದಿ ರಿಯಾಲಿಟಿ ಶೋಗಳಾದರೂ ಯಾಕೆ ಬೇಕು? ಹಾಗೆಯೇ ಸೋಪುಗಳೂ ಬೇಡ! ಮನೆಮನೆಯ ಜಗಳ, ಕೇರಿ-ಕೇರಿಯ ಲವ್ವು, ಮಂದಿರಳ ಸೀರೆ, ಇಂದಿರಳ ಬ್ಲೌಸು, ಜಾನನ ಅಂಗಿ, ಇನ್ನೊಬ್ಬನ ಚಡ್ಡಿ - ಮಾಧ್ಯಮಕರ್ತರ ಕ್ರಿಯಾಶೀಲತೆಗೆ ಜಯವಾಗಲಿ!
ಉ: ಮಂದಿರೆಯ ಸೀರೆ!
ಜ್ವಲಂತ ಸಮಸ್ಯೆಗಳ ಕಡೆ ಗಮನ ಹರಿಸದೆ, ಚಿಲ್ಲರೆ ವಿಷಯಗಳ ಕಡೆ, ದೊಡ್ಡವರ ಮದುವೆ ಸಮಾರಂಭಗಳ ಕಡೆ ನಮ್ಮ ಸುದ್ದಿ ಮಾಧ್ಯಮದವರು ಒಲವು ತೋರಿಸುತ್ತಿದ್ದಾರೆ. ಅವರಿಗೆ ಅವರದೇ ಆದ ಅನಿವಾರ್ಯತೆಗಳಿವೆ. ಜನರ ಗಮನ ಸೆಳೆಯುವ ವಿಚಾರಗಳನ್ನು ಹುಡುಕಿ ತಮ್ಮ ಮಾಧ್ಯಮಗಳು ಚಲಾವಣೆಯಲ್ಲಿ ಉಳಿಯುವಂತೆ ಮಾಡಬೇಕಿದೆ. ಆದರೆ ನಾವೂ ಅವುಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಕೇ ಅಲ್ಲ, ಅವುಗಳ ಕಡೆಗೆ ದಿವ್ಯ ನಿರ್ಲಕ್ಶ್ಯ ತೋರಬೇಕೇ? ನಾವೂ ಮಂದಿರೆಯ ಸೀರೆಯ ಬಗ್ಗೆ,ಶಿಲ್ಪಾ-ಗೆರೆ ಪ್ರಕರಣದ ಕುರಿತು ಚರ್ಚಿಸಿ, ಮಾಧ್ಯಮಗಳನ್ನೇ ಅನುಕರಿಸುತ್ತಿಲ್ಲವೇ?