ದೇಶವನ್ನು ಮಾರುತ್ತಿರುವ software ಇಂಜಿನಿಯರುಗಳು
ನಾನೂ ಒಬ್ಬ Software ಕೆಲಸಗಾರನೇ. ಅದ್ರಲ್ಲೂ ಒಂದು ದೊಡ್ಡ ಹೆಸರುವಾಸಿಯಾದ ಅಮೆರಿಕದ ಸಂಚಾರಿ ದೂರವಾಣಿ ಉಪಕರಣ
ಕಂಪೆನಿಯಲ್ಲೇ ಕೆಲಸ.
ಆದ್ರೆ ಈ ’ಮಾತಾಡ್ ಮಾತಾಡು ಮಲ್ಲಿಗೆ’ ಸಿನಿಮದ ಪರಿಣಾಮ ಇರಬೇಕು. ನನ್ನ ತಂತ್ರಾಂಶೇತರ ಮಿತ್ರರು, ಯಾಕೋ ನನ್ನ ಕೆಲಸದ ಮೇಲೆ, ನನ್ನ ಕಂಪೆನಿ ಮೇಲೆ ಕಡುಗೋಪದ ಸುಡುವುರಿಯನ್ನು ಬೀರಹತ್ತಿದ್ದಾರೆ. ನನಗಂತೂ ಇವರ ಮಾತು ಕೇಳಿ ಮರುಮಾತು ಹೇಳಕ್ಕೆ ಅಂಜಿಕೆ ಆಗಿ ಹೋಗಿದೆ.
ಕೆಲವು ಅವರ ಸಾಮಾನ್ಯವಾದ ಅಂತಹ ಸಂಭಾಷಾಣಾವಾಕ್ಯಾಂಶಗಳ ಮುಖ್ಯಾಂಶಗಳು.
೧) ಮುಖ್ಯವಾಗಿ ಈ ತಂತ್ರಾಂಶೋದ್ಯೋಗಿಗಳ ಕಾರಣದಿಂದೇ ನಮ್ಮ ದೇಶಕ್ಕೆ ಈ ಅಮೆರಿಕಾಕಂಪೆನಿಗಳು ವಕ್ಕರಿಸಿಕೊಂಡಿವೆ. ಈ ಪರದೇಶಿ ಪರಂಗಿಗಳ ಗುಲಾಮರಿಂದೇ ನಮ್ಮ ಕೃಷಿಕರ ಪವಿತ್ರೋತ್ತಮಭೂ ಅತಿವಿಶೇಷಾರ್ಥಿಕವಲಯಸುಸ್ಥಾಪನೆಗೆ ಈಡಾಗಿ ಹಾಳಾಗಿ, ನಮ್ಮ ರೈತರು ವೀಥೀನಾಥರಾಗುತ್ತಿದ್ದಾರೆ
.
೨) ಈ ತಂತ್ರಾಂಶೋದ್ಯೋಗಿಗಳು ಮಾಡುವ ಯಾವ ಉತ್ಪತ್ತಿಯೂ ನಮ್ಮ ದೇಶದ ಸಾಮಾನ್ಯಸಾಮಾನ್ಯ ಜನಕ್ಕೆ ಯಾವ ಪ್ರಯೋಜನೋಪಯೋಗಕ್ಕೆ ಇಲ್ಲ. ಅದು ಬರೀ ಅಮೆರಿಕೆಯಂತ ಶ್ರೀಮಂತ ಧನಿಕ ದೇಶಗಳ ಮೋಜಿಗೆ ಇರುವ ಕ್ರೀಡಾಸಾಮಗ್ರಿ.
೩) ಇವರು ತಮ್ಮನ್ನು ತಾವು ಮಾರಿಕೊಂಡಿದ್ದಾರೆ. ಧನದುರಾಶೆ ಇವರಿಗೆ. ಅದಕ್ಕೆ ಅಷ್ಟೊಂದು ಸಂಬಳ ತಗೆದುಕೊಂಡು ಸಮಾಜಕ್ಕೆ ಏನು ಮಾಡಲ್ಲ. ಇವರ ಕಂಪೆನಿಗಳಿಗೆ ನಮ್ಮ ಸರಕಾರ ಕರವಿನಾಯಿತಿ ಬೇರೆ ಕೊಟ್ಟು ಕೊಬ್ಬಿಸಿದೆ.
೪) ಇವರು ಇಲ್ಲಿ ಓದಿ ಕಲಿತು, ಅಮೆರಿಕಕ್ಕೆ ಪಲಾಯನ ಮಾಡಿದ/ವ ದೇಶದ್ರೋಹಿಗಳು
೫) ಇವರಿಂದೇ ನಮ್ಮ ಸ್ವಚ್ಛವಾದ ಅಚ್ಚ-ಕನ್ನಡದಲ್ಲಿ ತುಚ್ಛವಾದ ಆಂಗ್ಲಪದಗಳು ಭರಿತವಾಗಿ ಬರ್ಬರವಾಗಿ ನಮ್ಮ ಮಾತೃಭಾಷೆಯ ಕೊಲೆಯಾಗುತ್ತಿದೆ. ಇವರ ಆಂಗ್ಲೀಯ ವ್ಯಾಮೋಹಕ್ಕೆ ನಮ್ಮ ಭಾಷೆ, ಸಂಸ್ಕೃತಿ, ನಮ್ಮ ಭೂಜಲಾನಿಲಪ್ರಾಣಿಪಕ್ಷಿಜನಮಾನಸದ ಎಲ್ಲದವೂ ಅವನತಿಯ ದುಷ್ಪಥದಲ್ಲಿ ಸಾಗಿದೆ.
೬) ಇವರಿಂದ, ಇವರಿಗಾಗಿ ಬೃಹದ್ವೃಹತ್ ವಾಣಿಜ್ಯಸಂಕೀರ್ಣಗಳು ಬಂದು, ನಮ್ಮ ರಸ್ತೆಪಾರ್ಶ್ವದ ವ್ಯಾಪಾರಿಗಳಿಗೆ ನಷ್ಟವಾಗಿ, ಅವರ ಜೀವನೋಪಾಯಕ್ಕೆ ಸಂಕಷ್ಟವಾಗಿದೆ.
೭) ಇವರ ಯಂತ್ರರಥಗಳಿಂದ ಬಂದ ಕಡುಕೃಷ್ಣಧೂಮ್ರಾನಿಲದಿಂದ ನಮ್ಮ ನೈರ್ಗಿಕ ವಾತಾವರಣವು ಕಲುಷಿತವಾಗಿ ಮಾಲಿನ್ಯವಾಗುತ್ತಿದೆ.
೮) ಇವರ ದೆಸೆಯಿಂದ ವಿದ್ಯುದುಪಯೋಗ ಅತ್ಯತಿಯಾಗಿ, ವಿದ್ಯುದುತ್ಪಾದನಾಗಾರಕ್ಕೆಂದು ಅಣುಸ್ಥಾವರಗಳು, ಉಷ್ಣೋತ್ಪಾದಿತವಿದ್ಯುದಾಗರದಿಂದ ನಮ್ಮ ಇಡೀ ಭೂಖಂಡವೇ ಪ್ರಳಯಮುಖವಾಗಿದೆ.
.
.
.
.
.
ಇನ್ನು ಹಲವು ಆಪಾದನೋಪೇತತಂತ್ರಾಂಶಿಗಳ ಭಜನಾವಳಿ ಇದೆ, ಅವೆಲ್ಲ ಬೇಡ ಸಾಕು.
.
.
.
.
.
.
.
.
ಹೀಗೆಲ್ಲ ಅಂದ್ರು ನನ್ನ, ನನ್ನ ಕೆಲವನ್ನ
:( !! ಎಷ್ಟು ಬೇಜಾರಾಯ್ತು ಗೊತ್ತು ಮನಸ್ಸಿಗೆ, ಇಷ್ಟೊಂದು ಅನ್ನಿಸಿಕೊಂಡೂ ಈ ದೇಶದಲ್ಲಿ ಇರಬಾರದು
![]()
ಏನಾರ ಹೇಳೋರು ಹೇಳಿ! ![]()

- mahesha ರವರ ಬ್ಲಾಗ್
- Login or register to post comments
- 428 hits
- Email this blog





RSS:
ಪ್ರತಿಕ್ರಿಯೆಗಳು
ಉ: ದೇಶವನ್ನು ಮಾರುತ್ತಿರುವ software ಇಂಜಿನಿಯರುಗಳು
೧. ಎಸ್.ಬಿ.ಐ ತನ್ನ ಎಟಿಎಂ ಭಾರತದಲ್ಲಿ ಯಾವ ಜಾಗದಲ್ಲಿಯಾದ್ರು ಲಭ್ಯವಿದೆ... ಇದಕ್ಕೆ ಕಾರಣ ಏನು ? ತತ್ರಾಂಶಗಳು ಅಲ್ಲವೆ ?? ಇದ್ದನ್ನು ಸ್ರಿಷ್ತಿಮಾಡಲು ಎಸ್ಭಿಐ ಅಮೇರಿಕಾಕೆ ಹೋಗಲಿಲ್ಲ !!!
೨. ಅಮೇರಿಕಾ ತನ್ನ ಟೆಕ್ನಾಲಜಿನ ರೈತರಿಗೆ ಉಪಯುಕ್ತ ರೀತಿಯಲ್ಲಿ ಬಳಸುತ್ತಿದೆ, ನಾವು ಯಾಕೆ ಮಾಡುತ್ತಿಲ್ಲ ???!!!
೩. ಒಂದು ಕಾಲದಲ್ಲಿ manufacturing industry boom ನಲ್ಲಿ ಇತ್ತು, ಆಗ ಚೈನಾ ದೇಶಗಳು ಅವ್ವುಗಳನ್ನು ಉಅಪಯೋಗಿಸಿಕೊಂಡು , ತಮ್ಮ infrastructure ಉದ್ದರಿಸಿಕೊಂಡರು. ಅದೆ software industry boom ನಲ್ಲಿ ಇದೆ, ದುಡ್ಡು ಬರ್ತಯಿದೆ ... infrastructure ಬೆಳಿತ್ತಿಲ್ಲ ನಮ್ಮಲ್ಲಿ !!!
೪. software ನಲ್ಲಿ ನಾವೇ ಸಾರ್ವಭೌಮರು ಅಂತ ಮಾತಾಡ್ತೈದ್ದಿ.... china, korea ಇವೆರಲ್ಲ competation ನಲ್ಲಿ ಇದ್ದರೆ ಅನ್ನೊಡು ನಾವು ಮರೆಯಬಾರದು.
ಉದಾಹರಣೆ :
ಜೋಡೆತ್ತಿನ ಗಾಡಿ ಹೋಗ್ತಾಯಿರುತ್ತೆ, ಒಂದು ಎತ್ತು ತುಂಬ ವೇಗವಾಗಿ ಹೋಗ್ತಯಿರುತ್ತೆ, ಇನ್ನೊಂದು ನಿಧಾನಕ್ಕೆ !!!... ಈಗ ಏನು ಮಾಡಬೇಕು... ವೇಗವಾಗಿ ಹೋಗುತ್ತಿರುವುದನ್ನು ಹಿಂದೆ ಎಳೆಯುವುದು ಬುದ್ದಿವಂತರ ಲಕ್ಷಣವಲ್ಲ !!!
-ನಿಮ್ಮ ಬೆಂಬಿಡದ ಬೇತಾಳ .....
ಉ: ದೇಶವನ್ನು ಮಾರುತ್ತಿರುವ software ಇಂಜಿನಿಯರುಗಳು
ಬೇತಾಳಯ್ಯ
"ಅಮೇರಿಕಾ ತನ್ನ ಟೆಕ್ನಾಲಜಿನ ರೈತರಿಗೆ ಉಪಯುಕ್ತ ರೀತಿಯಲ್ಲಿ ಬಳಸುತ್ತಿದೆ, ನಾವು ಯಾಕೆ ಮಾಡುತ್ತಿಲ್ಲ ???!!!"
ಇದಕ್ಕೆ ಅಂತಹ ಮಹಾನುಭವ ಸಿದ್ಧೋತ್ತರ ಹೀಗಿರ್ತದೆ.
"ಯಾಕೆ ಅಂದ್ರೆ ನಾವು ಅಮೇರಿಕರು ಅಲ್ಲ, ನಾವು ಭಾರತೀಯರು! ನಮ್ಮ ಸಂಸ್ಕೃತಿಗೂ ಅವರ ಸಂಸ್ಕೃತಿಗೂ, ಚಿಕ್ಕಜ-ಹೆಗ್ಗಜಾಂತರ ವ್ಯತ್ಯಾಸಗಳಿವೆ. ನಾವು ನಮ್ಮ ಸಂಸ್ಕೃತಿಯನ್ನು ಸಂಪ್ರದಾಯವನ್ನು ಬಿಟ್ಟು ದರಿದ್ರ, ಮೌಲ್ಯಹೀನ, ಆರ್ತರ ರಕ್ತ ಹೀರೋ ಬಂಡವಾಳಶಾಹಿ ಸಂಸ್ಕೃತಿಯನ್ನು ನಮಗೆ ಉದಾಹರಣೆಯಾಗಿ ಕೊಡಲು ನಾಚಿಕೆಯಾಗಬೇಕು. ನಮ್ಮ ಸಂಸ್ಕೃತಿಯ ಬೇರು ಇರುವುದೇ ನಮ್ಮ ಕೃಷಿಕರಲ್ಲಿ. ನಮ್ಮ ದೇಶ ಉದ್ದಾರ ಆಗೋದು ಯಾವಾಗ ಅಂದ್ರೆ ನಮ್ಮ ದೇಶದ ಕೃಷಿಕವರ್ಗದ ಮಹೊನ್ನತಿಯಾದಾಗ ಮಾತ್ರ"
ಇದನ್ನೂ ನಾನು ನನ್ನ ಕಿವಿಯಾರೆ ಕೇಳಿಸಿಕೊಂಡೆನು, ಪ್ರತಿಪ್ರತಿಕ್ರಿಯಾಹೀನಾನಾಗಿ ಮೌನಾವಲಂಬೀಯಾದೆನು!
ಉ: ದೇಶವನ್ನು ಮಾರುತ್ತಿರುವ software ಇಂಜಿನಿಯರುಗಳು
"ನಮ್ಮ ದೇಶ ಉದ್ದಾರ ಆಗೋದು ಯಾವಾಗ ಅಂದ್ರೆ ನಮ್ಮ ದೇಶದ ಕೃಷಿಕವರ್ಗದ ಮಹೊನ್ನತಿಯಾದಾಗ ಮಾತ್ರ"
ಇದನ್ನು ತು೦ಬಾ ಜನರು ಹೇಳಿದ್ದನ್ನು ಕೇಳಿದ್ದೇನೆ. ಆದರೆ ಕೃಷಿಕವರ್ಗದ ಮಹೊನ್ನತಿ ಹೇಗೆ ಸಾಧ್ಯ ಎ೦ದು ಯಾರೂ ಹೇಳುವುದಿಲ್ಲ.
ಅನ೦ತ
ಉ: ದೇಶವನ್ನು ಮಾರುತ್ತಿರುವ software ಇಂಜಿನಿಯರುಗಳು
ಕೆಲವು ಒರೆಗಳು ಅರ್ತ ಆಗಲಿಲ್ಲ.
ಕೃಷ್ಣಧೂಮ್ರಾನಿಲದಿಂದ
ವೀಥೀನಾಥರಾಗುತ್ತಿದ್ದಾರೆ
ಪವಿತ್ರೋತ್ತಮಭೂ ಅತಿವಿಶೇಷಾರ್ಥಿಕವಲಯಸುಸ್ಥಾಪನೆಗೆ
ಭೂಜಲಾನಿಲಪ್ರಾಣಿಪಕ್ಷಿಜನಮಾನಸದ
ಒಸಿ ಬಿಡಿಸಿ ಹೇಳಿ
ಉ: ದೇಶವನ್ನು ಮಾರುತ್ತಿರುವ software ಇಂಜಿನಿಯರುಗಳು
ಕಪ್ಪುಹೊಗೆಗಾಳಿ
ಬೀದಿಯೊಡೆಯರು
ಮಡಿಯ ಮೇಲ್ಮಟ್ಟದ ನೆಲವು ಬಲು ನಿಬ್ಬರದ ಹಣದ ವಲಯವನ್ನು ನೆಲೆಸುದಕ್ಕೆ
ನೆಲನೀರುಗಾಳಿಉಸಿರುಗಳುಹಕ್ಕಿಮಂದಿಗಳ
ಉ: ದೇಶವನ್ನು ಮಾರುತ್ತಿರುವ software ಇಂಜಿನಿಯರುಗಳು
ಇದರಲ್ಲಿ ಸತ್ಯನೂ ಇದೆ. ಆದರೆ ಸಮಸ್ಯೆ ಪರಿಹರಿಸಲು ಯಾರು ಮುಂದೆ ಬಂದಿದ್ದಾರೆ. ಚುನವಣೆ ಯಲ್ಲಿ ಯೆಸ್ಟು ಜನ ಮತ ಚಲಯಿಸುತ್ತಾರೆ?. ಆಮೆರಿಕದಲ್ಲಿ ಇದವನು ಇಲ್ಲಿ ಬಂದು ಮತದಾನ ಮಾಡಿದ್ದು ಇದಿಯ?. ಇಲ್ಲಿ ಇದ್ರೆ ಕಟಾಚಾರಕೆ ಕೆಲವರು ಹೊದ್ರೆ ಹೊದ್ರು. ನಮ್ಮ ದೇಶದ ರಾಜಕಿಯ ವ್ಯವಸ್ಥೆ ನೆಟ್ಟಗೆ ಆಗ್ಬೆಕಾದ್ರೆ ಕಲ್ತವ್ರು ಸ್ವಲ್ಪ ಹಣಮಾಡೊದ್ರೊಂದಿಗೆ ರ್ಆಜಕೀಯ ದ ಬಗ್ಗೆ ಕೂಡ ತಲೆ ಕೆಡಿಸ್ಕೊಳ್ಳಬೇಕು. ವ್ಯವಸ್ಥೆ ಸರಿ ಇಲ್ಲ ಅಂತ ಬೊಬೆ ಹೊಡಿಯೊಕ್ಕೆ ಯೆಲ್ಲರೀಗು ಬರುತ್ತೆ. ಆದರೆ ಮತದಾನ ದಂದು ಈ ಸಾಫ಼್ಟವೇರ್ ಕಂಪೆನಿಗಳು ರಜೆ ಕೊಡೊದಿಲ್ಲ ಅಂತ ಕೋಡ ಆರೊಪ ಇದೆ. ರ್ಐತ ರು ಹೇಳೊದು ಸರಿಯಾಗಿಯೆ ಇದೆ. ಗಾಂಧಿ ಕನಸಿನ ಬೆಳವಣಿಗೆ ಇದು ಅಲ್ಲವೇ ಅಲ್ಲ. ಅಮೇರಿಕ ಕಂಪನಿಗಳಿಂದ ರೈತರ ಬುಡಕ್ಕೆ ಕೊಡಲಿ ಏಟು ಬಿದ್ದಿರುವುದು ೧೦೦% ಸರಿ.
ಮತ್ತೆ SBI ATMಬಗ್ಗೆ ಹೆಳೊದು ಬೇಡ. This ATM is temporarily out of service ಅನ್ನೊದೆ ಅದರ ಮುಖ್ಯ ತಲೆ ಬರಹ ಅಗಿರುತ್ತೆ.
ಉ: ದೇಶವನ್ನು ಮಾರುತ್ತಿರುವ software ಇಂಜಿನಿಯರುಗಳು
ಗಾಂಧಿ ಕನಸಿನ ಬೆಳವಣಿಗೆ ಅಂದ್ರೇನು ? ನಿಮಗೆ ಗೊತ್ತೆ ? ನನಗಂತು ಗೊತ್ತಿಲ್ಲ !!!
ರೈತರ ಬೆಳವಣಿಗೆ ಮಾರಕಹಾಗುತ್ತ ಇರೋದು ಬಯೊಟೆಕ್ನಾಲಜಿಯಿಂದ !!!. ಯಾಕೆ ಪ್ರಕೃತಿವಿರುದ್ದವಾದ ಬೀಜಗಳನ್ನು ಕಂಡುಹಿಡಿದರು ?? ಇದು ರೈತನಿಗೆ ಮಾರಕ ಎಂದು ಗೊತ್ತಿರಲಿಲ್ಲವೆ ?? ಈ ತರದ ಸಂಶೋದನೆಗಳು ಭಾರತದಲ್ಲು ನಡಿತಿವೆ !!!
-ನಿಮ್ಮ ಬೆಂಬಿಡದ ಬೇತಾಳ .....
ಉ: ದೇಶವನ್ನು ಮಾರುತ್ತಿರುವ software ಇಂಜಿನಿಯರುಗಳು
"ಪ್ರಕೃತಿವಿರುದ್ದವಾದ ಬೀಜಗಳನ್ನು "
ಹೀಗಂದ್ರೇನು? ಕಾಳಿದಾಸ ಅಭಿಜ್ಞಾನ ಶಾಕುಂತಲಂನ ನಾಂದಿಯಲ್ಲಿ, ಈ ಧರಿತ್ರಿ "ಸರ್ವಬೀಜ ಪ್ರಕೃತಿ/ಯೋನಿಃ" ಅಂತ ಹೇಳಿದ್ದಾನಲ್ಲ.
ಪ್ರಕೃತಿಗೆ ವಿರುದ್ಧವಾದ ಬೀಜಗಳು ಅಂದ್ರೆ? ಇಲ್ಲಿ ಪ್ರಕೃತಿ ಅಂದ್ರೇನು?
ನಾವು ಬಿತ್ತಗಳನ್ನು ಬಿತ್ತಲು ಹೊಲಗದ್ದೆಗಳಿಗಾಗಿ ಕಾಡುಕಡಿಯಲಿಲ್ಲವೇ? ನಾವು ಅಣೆಕಟ್ಟಲು ಕಾನುಮುಳುಗಿಸಲಿಲ್ಲವೇ? ಇನ್ನು ಏನೇನಕ್ಕೂ ಅರಣ್ಯಧ್ವಂಸವಾಯ್ತಲ್ಲ.
ಪ್ರಕೃತಿಗೂ softwareಗೂ ಏನು ಸಸಂಬಂಧ? ನನಗೆ ಹೇಳ್ರಿ ಬೇತಾಳಯ್ಯ!
ಉ: ದೇಶವನ್ನು ಮಾರುತ್ತಿರುವ software ಇಂಜಿನಿಯರುಗಳು
ಮಾಯ್ಸಣ್ಣ ,
ಈ ಬಯೊಟೆಕ್ನಲಜಿಲಿ ಸಂಶೋದನೆ ಹೀಗಿದೆ ...
ಪ್ರಕೃತಿಯ ಸಹಜ ಗುಣ, ನೀವು ಗಿಡ/ಮರದಿಂದ ಬಂದಂತ ಬೀಜಗಳನ್ನು ಮತ್ತೆ ಭೂಮಿಲಿ ನೆಟ್ಟರೆ, ಮತ್ತೊಂದು ಗಿಡ... ಮರವಾಗಿ ಬೆಳೆಯುತ್ತೆ .. ಅಲ್ಲವೆ !!
ಬಯೊಟೆಕ್ನಲಜಿ ಬೀಜಗಳು - ಅದನ್ನು ನೆಟ್ಟರ ಹಣ್ಣುಗಳನ್ನು ಬಿಡುತ್ತವೆ, ಆದರೆ ಅದರಲ್ಲೆ ಬಂದಂತ ಬೀಜಗಳನ್ನು ನೆಟ್ಟರೆ ಅದು ಗೊಡ್ಡುಮರಗಳಾಗಿ ಬೆಳೆಯುತ್ತವೆ, ಫಲಗಳನ್ನು ಕೊಡುವುದಿಲ್ಲ
... ನಿಮಗೆ ಇನ್ನುಷ್ಟು ಮರಗಳು ಬೇಕಾದಲ್ಲಿ ಆ ಕಂಪನಿಗಳಿಂದ ತೆಗೆದುಕೋಳ್ಳಬೇಕು. ಇದು ವಂತರ ಬಿಸಿನೆಸ್... ಬಯೊಟೆಕ್ನಲಜಿ ಬೀಜಗಳ ಬೀಜಗಳ ಮೇಲೆ ಕಂಪನಿಗಳ ಪೇಟೆಂಟ್ ಇರುತ್ತದೆ !!!
ಸುದ್ದಿ : ಜಗತ್ತಿನಿ ಅವನತಿ ಹೊಂದುತ್ತಿರುವ ಹಣ್ಣುಗಳಲ್ಲಿ "ಬಾಳೆಹಣ್ಣು" ಗಳಿಗೆ ೪ ನೇ ಸ್ಥಾನವಿದೆ.... ಇನ್ನು ಸ್ವಲ್ಪ ವರ್ಷಗಳಬಳಿಕ ನಾವು "b for banana" ಅಂತ ಹೇಳೊಕು ಆಗೊಲ್ಲ !!!
-ನಿಮ್ಮ ಬೆಂಬಿಡದ ಬೇತಾಳ .....
ಉ: ದೇಶವನ್ನು ಮಾರುತ್ತಿರುವ software ಇಂಜಿನಿಯರುಗಳು
ಓ ಇದು ಸಾಪ್ಟವೇರ್ಗೆ ಹೇಗೆ ನಂಟಪ್ಪ ಅಂದ್ರೆ ಈ ಬಯೋ ಮಂದಿ, ತಮ್ಮ ಕೆಲಸದಾಗೆ ಕಂಪ್ಯೂಟರ್ ಬಳಸ್ತಾರೆ ಅಲ್ವಾ, ಅದಕ್ಕೆ!!
ಉ: ದೇಶವನ್ನು ಮಾರುತ್ತಿರುವ software ಇಂಜಿನಿಯರುಗಳು
ಹೌದು ಮಾಯ್ಸಣ್ಣ,
ಅವರ ಕೆಲವು ಕಂತ್ರಿ ಐಡಿಯಾಗಳನ್ನು ಸಿಮುಲೇಟ್ (simulate) ಮಾಡಿ ತೊರಿಸೋದು ತತ್ರಂಶ
ಇದರಿಂದ ಎಲ್ಲ ಕಂತ್ರಿ ಐಡಿಯಾಗಳು ಅಂತ ಹೇಳೊಕೆ ಆಗೊಲ್ಲ .... ಇದರಿಂದ ಒಳ್ಳೇ ಕೆಲಸಗಳನ್ನು ಮಾಡಬಹುದು....
ಬ್ರಹ್ಮಾಸ್ತ್ರ ನ ಗುಬ್ಬಿಮೇಲು ಬಿಡಬಹುದು, ವೈರಿಗಳ ಮೇಲು ಬಿಡಬಹುದು !!!
-ನಿಮ್ಮ ಬೆಂಬಿಡದ ಬೇತಾಳ .....
ಉ: ದೇಶವನ್ನು ಮಾರುತ್ತಿರುವ software ಇಂಜಿನಿಯರುಗಳು
ಇನ್ನೂ ಕೆಲವು ಕ೦ಪೇನಿಯಲ್ಲಿ Bio-tech ಉಪಯೋಗಿಸಿ ಮಾಡುತ್ತಿರುವ ಕೆಲ್ಸಾ ಏನು ಅ೦ದರೆ ??
ಮಗು ಹುಟ್ಟಿದ ನ೦ತರ ಆತನಿಗೆ ಬರುವ ರೋಗದ ಪಟ್ಟಿಯನ್ನು ತಯಾರಿಸಿ ಅವು ಬಾರದ೦ತೆ
ಔಷದಿಯನ್ನು ಕೊಡುತ್ತಾರೆ.ಇದಕ್ಕೆ HealthCare ಎ೦ದು ಕರೆಯುತ್ತಾರೆ.
ಇದರಿ೦ದ ಔಷದಿಯನ್ನು ತಯಾರಿಸುವ ಕ೦ಪನಿಗಳಿಗೂ ಲಾಭ.
ಈ ಚಿಕಿತ್ಸೆಯನ್ನು ಮತ್ತು ರೋಗವನ್ನು ಹುಡುಕುವ Diagnostics ಕ೦ಪನಿಗಳಿಗೂ ಲಾಭ.
ಮಿಕ್ಕವರಿಗೆ ಜೀವನ ಲಭೋ!ಲಭೋ!ಲಭೋ.
ಉ: ದೇಶವನ್ನು ಮಾರುತ್ತಿರುವ software ಇಂಜಿನಿಯರುಗಳು
ನಿಮಗೆ ಗೊತಿಲ್ಲದಿದ್ರೆ ನಾನೇನು ಮಾಡಲಿ ತಿಳಿದುಕೊಳ್ಳಲು ಪ್ರಯತ್ನಿಸಿ!! ಅವರ ಬಗ್ಗೆ ಓದಿ ಗೊತ್ತಾಗ ಬಹುದು. ಅದು ಬರಿ 4 ಗೆರೆ ಯಲ್ಲಿ ಬರೆದು ತಿಳಿಸಲಾಗದ ವಿಷ್ಯ.
ಉ: ದೇಶವನ್ನು ಮಾರುತ್ತಿರುವ software ಇಂಜಿನಿಯರುಗಳು
ಕೋಪ ಮಾಡ್ಕೊಬೇಡಿ ಸರ್
,
-ನಿಮ್ಮ ಬೆಂಬಿಡದ ಬೇತಾಳ .....