September 19, 2008 - 1:40pm
ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ. ನನ್ನ ಈ ಪ್ರಯತ್ನ ಸ್ಪರ್ಧತ್ಮಕ ಪರೀಕ್ಷೆ ಬರೆಯುವವರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಈ ಜ್ಞಾನ ದೀವಿಗೆಯ ವರ್ಗದಡಿಯಲಿ ಲೇಖನಗಳನ್ನು ತರುತ್ತಿದ್ದೇನೆ. ಇಲ್ಲಿ ಕನ್ನಡಕ್ಕೆ ಸಂಬಂದಪಟ್ಟ ಸಾಹಿತ್ಯ, ಇತಿಹಾಸ, ಪ್ರಚಲಿತ, ಭಾಷೆ ಮುಂತಾದವುಗಳನ್ನು ಒಳಗೊಂಡಿರುತ್ತದೆ, ಇವಕ್ಕೆ ಪ್ರತಿಕ್ರಿಯೆ ಬಂದರೆ ಮಾತ್ರ ಇದನ್ನು ಮುಂದಿವರಿಸುತ್ತೇನೆ, ಇದರಿಂದ ಒಬ್ಬರಿಗಾದರೂ ಪ್ರಯೋಜನವಾದರೆ ನನಗೆ ಅದೇ ತೃಪ್ತಿ.
೧. ’ಶಬ್ದಾವತಾರ’ ಎಂಬ ಸಂಸ್ಕೃತ ವ್ಯಾಕರಣ ಕೃತಿ ರಚಿಸಿದ ಗಂಗರ ದೊರೆ ಯಾರು?
೨. ಎ.ಕೆ. ರಾಮಾನುಜನ್ ರವರು ಇಂಗ್ಲೀಷ್ ಗೆ ಅನುವಾದಿಸಿದ ಅನಂತಮೂರ್ತಿಯವರ ಕಾದಂಬರಿ?
೩. ’ಇಂದಿರಾಬಾಯಿ’ ಕಾದಂಬರಿಯ ಪರ್ಯಾಯ ಶೀರ್ಷಿಕೆ ಯಾವುದು?
೪. ’ವಿಕ್ರಮಾರ್ಜುನ ವಿಜಯ’ದಲ್ಲಿರುವ ಒಟ್ಟು ಆಶ್ವಾಸಗಳೆಷ್ಟು?
೫. ರಾಷ್ಟ್ರಕವಿ ಕುವೆಂಪುರವರನ್ನು ’ಆಧುನಿಕ ವಾಲ್ಮೀಕಿ’ ಎಂದು ಕರೆದ ಭಾರತದ ಸಂತ, ಸಮಾಜ ಸುಧಾರಕ ಯಾರು?
೬. ನಾಗವರ್ಮನ ’ಕರ್ಣಾಟಕ ಕಾದಂಬರಿ’ ಕೃತಿಯಲ್ಲಿ ವರ್ಣಿತವಾಗಿರುವ ಸರೋವರ?
೭. ಶ್ರೀ ಮಧ್ವಾಚಾರ್ಯರು ಪ್ರತಿಪಾದಿಸಿದ ಸಿದ್ಧಾಂತ ಯಾವುದು?
೮. ’ತಿರುಕ’ ಕಾವ್ಯನಾಮವುಳ್ಳ ಕವಿಯ ಪೂರ್ಣ ಹೆಸರೇನು?
೯. ’ಭಾರತೀಯ ನಾಟ್ಯರಂಗ’ ಪ್ರಶಸ್ತಿ ಪಡೆದ ಗಿರೀಶ್ ಕಾರ್ನಾಡರ ನಾಟಕ ಯಾವುದು?
೧೦. ಶ್ರೀ ಪಾದರಾಜರ ಕೀರ್ತನೆಗಳ ಅಂಕಿತ ಯಾವುದು?
-ಮಾಕೃಮ*
ಬ್ಲಾಗ್ ವರ್ಗಗಳು:
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: ರಸ ಪ್ರಶ್ನೆಗಳು ಭಾಗ - ೨
ಉ: ರಸ ಪ್ರಶ್ನೆಗಳು ಭಾಗ - ೨
ಉ: ರಸ ಪ್ರಶ್ನೆಗಳು ಭಾಗ - ೨
ಉ: ರಸ ಪ್ರಶ್ನೆಗಳು ಭಾಗ - ೨