26
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ರಸ ಪ್ರಶ್ನೆಗಳು ಭಾಗ - ೨

September 19, 2008 - 1:40pm
makrumanju
ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ. ನನ್ನ ಈ ಪ್ರಯತ್ನ ಸ್ಪರ್ಧತ್ಮಕ ಪರೀಕ್ಷೆ ಬರೆಯುವವರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಈ ಜ್ಞಾನ ದೀವಿಗೆಯ ವರ್ಗದಡಿಯಲಿ ಲೇಖನಗಳನ್ನು ತರುತ್ತಿದ್ದೇನೆ. ಇಲ್ಲಿ ಕನ್ನಡಕ್ಕೆ ಸಂಬಂದಪಟ್ಟ ಸಾಹಿತ್ಯ, ಇತಿಹಾಸ, ಪ್ರಚಲಿತ, ಭಾಷೆ ಮುಂತಾದವುಗಳನ್ನು ಒಳಗೊಂಡಿರುತ್ತದೆ, ಇವಕ್ಕೆ ಪ್ರತಿಕ್ರಿಯೆ ಬಂದರೆ ಮಾತ್ರ ಇದನ್ನು ಮುಂದಿವರಿಸುತ್ತೇನೆ, ಇದರಿಂದ ಒಬ್ಬರಿಗಾದರೂ ಪ್ರಯೋಜನವಾದರೆ ನನಗೆ ಅದೇ ತೃಪ್ತಿ.  ೧. ’ಶಬ್ದಾವತಾರ’ ಎಂಬ ಸಂಸ್ಕೃತ ವ್ಯಾಕರಣ ಕೃತಿ ರಚಿಸಿದ ಗಂಗರ ದೊರೆ ಯಾರು? ೨. ಎ.ಕೆ. ರಾಮಾನುಜನ್ ರವರು ಇಂಗ್ಲೀಷ್ ಗೆ ಅನುವಾದಿಸಿದ ಅನಂತಮೂರ್ತಿಯವರ ಕಾದಂಬರಿ? ೩. ’ಇಂದಿರಾಬಾಯಿ’ ಕಾದಂಬರಿಯ ಪರ್ಯಾಯ ಶೀರ್ಷಿಕೆ ಯಾವುದು? ೪. ’ವಿಕ್ರಮಾರ್ಜುನ ವಿಜಯ’ದಲ್ಲಿರುವ ಒಟ್ಟು ಆಶ್ವಾಸಗಳೆಷ್ಟು? ೫. ರಾಷ್ಟ್ರಕವಿ ಕುವೆಂಪುರವರನ್ನು ’ಆಧುನಿಕ ವಾಲ್ಮೀಕಿ’ ಎಂದು ಕರೆದ ಭಾರತದ ಸಂತ, ಸಮಾಜ ಸುಧಾರಕ ಯಾರು? ೬. ನಾಗವರ್ಮನ ’ಕರ್ಣಾಟಕ ಕಾದಂಬರಿ’ ಕೃತಿಯಲ್ಲಿ ವರ್ಣಿತವಾಗಿರುವ ಸರೋವರ? ೭. ಶ್ರೀ ಮಧ್ವಾಚಾರ್ಯರು ಪ್ರತಿಪಾದಿಸಿದ ಸಿದ್ಧಾಂತ ಯಾವುದು? ೮. ’ತಿರುಕ’ ಕಾವ್ಯನಾಮವುಳ್ಳ ಕವಿಯ ಪೂರ್ಣ ಹೆಸರೇನು? ೯. ’ಭಾರತೀಯ ನಾಟ್ಯರಂಗ’ ಪ್ರಶಸ್ತಿ ಪಡೆದ ಗಿರೀಶ್ ಕಾರ್ನಾಡರ ನಾಟಕ ಯಾವುದು? ೧೦. ಶ್ರೀ ಪಾದರಾಜರ ಕೀರ್ತನೆಗಳ ಅಂಕಿತ ಯಾವುದು? -ಮಾಕೃಮ*
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by mowna on
೭. ದ್ವ್ಯೆತ ಸಿಂದ್ಧಾತ ೮. ಮಲ್ಲಾಡಿ ಹಳ್ಳಿ ರಾಘವೇಂದ್ರ ಸ್ವಾಮಿಗಳು ೫. ವಿನೋಭಾ ಭಾವೆ ಇರಬಹುದೆ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by makrumanju on
೧. ’ಶಬ್ದಾವತಾರ’ ಎಂಬ ಸಂಸ್ಕೃತ ವ್ಯಾಕರಣ ಕೃತಿ ರಚಿಸಿದ ಗಂಗರ ದೊರೆ ಯಾರು? ಉತ್ತರ : ದುರ್ವಿನೀತ ೨. ಎ.ಕೆ. ರಾಮಾನುಜನ್ ರವರು ಇಂಗ್ಲೀಷ್ ಗೆ ಅನುವಾದಿಸಿದ ಅನಂತಮೂರ್ತಿಯವರ ಕಾದಂಬರಿ? ಉತ್ತರ : ಸಂಸ್ಕಾರ ೩. ’ಇಂದಿರಾಬಾಯಿ’ ಕಾದಂಬರಿಯ ಪರ್ಯಾಯ ಶೀರ್ಷಿಕೆ ಯಾವುದು? ಉತ್ತರ : ಸದ್ಧರ್ಮ ವಿಜಯ ೪. ’ವಿಕ್ರಮಾರ್ಜುನ ವಿಜಯ’ದಲ್ಲಿರುವ ಒಟ್ಟು ಆಶ್ವಾಸ ಮತ್ತು ಪದ್ಯಗಳೆಷ್ಟು? ಉತ್ತರ : ೧೪ ಆಶ್ವಾಸ - ೧೬೦೯ ಪದ್ಯ ೫. ರಾಷ್ಟ್ರಕವಿ ಕುವೆಂಪುರವರನ್ನು ’ಆಧುನಿಕ ವಾಲ್ಮೀಕಿ’ ಎಂದು ಕರೆದ ಭಾರತದ ಸಂತ, ಸಮಾಜ ಸುಧಾರಕ ಯಾರು? ಉತ್ತರ : ವಿನೋಭಾ ಭಾವೆ ೬. ನಾಗವರ್ಮನ ’ಕರ್ಣಾಟಕ ಕಾದಂಬರಿ’ ಕೃತಿಯಲ್ಲಿ ವರ್ಣಿತವಾಗಿರುವ ಸರೋವರ? ಉತ್ತರ : ಅಚ್ಛೋದ ಸರೋವರ ೭. ಶ್ರೀ ಮಧ್ವಾಚಾರ್ಯರು ಪ್ರತಿಪಾದಿಸಿದ ಸಿದ್ಧಾಂತ ಯಾವುದು? ಉತ್ತರ : ದ್ವೈತ ೮. ’ತಿರುಕ’ ಕಾವ್ಯನಾಮವುಳ್ಳ ಕವಿಯ ಪೂರ್ಣ ಹೆಸರೇನು?] ಉತ್ತರ : ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿ ೯. ’ಭಾರತೀಯ ನಾಟ್ಯರಂಗ’ ಪ್ರಶಸ್ತಿ ಪಡೆದ ಗಿರೀಶ್ ಕಾರ್ನಾಡರ ನಾಟಕ ಯಾವುದು? ಉತ್ತರ : ಹಯವದನ ೧೦. ಶ್ರೀ ಪಾದರಾಜರ ಕೀರ್ತನೆಗಳ ಅಂಕಿತ ಯಾವುದು? ಉತ್ತರ : ಶ್ರೀರಂಗವಿಠಲ ಮಾ.ಕೃ.ಮಂಜು http://makrumanju.bl...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by makrumanju on
ಕಾರಣಾಂತರಗಳಿಂದ ಸದ್ಯಕ್ಕೆ ಈ ರಸ ಪ್ರಶ್ನೆಗಳು ಲೇಖನಗಳನ್ನು ನಿಲ್ಲಿಸುತ್ತಿದ್ದೇನೆ. ಮಾ.ಕೃ.ಮಂಜು http://makrumanju.bl...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by chandu123 on
ರಸ ಪ್ರಶ್ನೆಗಳು ಸಂಚಿಕೆಯನ್ನ ಮುಂದುವರಿಸಿ... ಎಷ್ಟೋ ಕನ್ನಡದ ಮಾಹಿತಿಗಳು ನಮಗೆ ತಿಳಿದಿರುವುದಿಲ್ಲ ಈ ಮೂಲಕವಾದರೂ ತಿಳಿಯಲಿ... ಪ್ರೀತಿನ ಪ್ರೀತಿಯಿಂದ ಪ್ರೀತ್ಸಿ ತುಂಬು ಹೃದಯದ ಹಾರೈಕೆಯೊಂದಿಗೆ ರಮ್ಯ***
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.