Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › malegiri ರವರ ಬ್ಲಾಗ್

ಮಳೆ ನಿಂತರು ಮರದ ಹನಿ ಬಿಡದು - 1

September 27, 2007 - 2:53pm — malegiri

ಮುಂಜಾನೆ ಎಂಟಾಗಿರಬಹುದು. ರಾಮ ಹೋದನೆಂದು ಊರಿನಿಂದ ಫೋನ್ ಬಂತು.ಇದು ಒಂದು ಅನೀರೀಕ್ಷಿತ ಘಟನೆಯೆನು ಆಗಿರಲಿಲ್ಲ.9೦ರ ಆಸುಪಾಸಿನಲ್ಲಿ ಜೀವನದ ಕೊನೆಯ ಘಳಿಘೆಗಳನ್ನು ಕಳೆಯುತ್ತಿದ್ದ ರಾಮ, ಶಬರಿ ರಾಮನನ್ನು ಕಾಯ್ದ ಹಾಗೆ ತನ್ನ ಸಾವನ್ನು ಕಾಯುತ್ತಿದ್ದ.ಪ್ರತಿ ಬಾರಿಯು ಊರಿಗೆ ಹೊದಾಗ ನನ್ನೊಡನೆ ಮಾತಾಡುವಾಗ
" ಆಯ್ತು ಗಿರೆಪ್ಪ ಡಣಿ ,ನನ್ನ ಸಂತಿ ಮುಗಿತು , ನಾ ಇನ್ನ ಹೊತಿನಿ " ಎನ್ನುತ್ತಿದ್ದ ರಾಮನನ್ನು ಕೊನೆಯಬಾರಿಗೆ ನೊಡಲು ಊರಿಗೆ ಹೊರಟೆ.

6 ಅಡಿ ಉದ್ದನೆಯ ಆಸಾಮಿಯನ್ನು ಆತನ ಮನೆಯ ಕಟ್ಟೆಯಮೇಲೆ ಕುಡಿಸಿದ್ದರು.ದೇಹವನ್ನು ಬೀಳದಂತೆ ಹಗ್ಗದಿಂದ ಮೆದುವಾಗಿ ಕಿಟಕಿಯ ಸಾಲಾಕೆಗಳಿಂದ ಕಟ್ಟಲಾಗಿತ್ತು. ಢಾಳಗಲ ಹಚ್ಚಿದ ವಿಭೂತಿ ಹಾಗು ನಾ ಯೆಂದೆಂದು ಕಾಣದ ಮೀಸೆ ಬೊಳಿಸಿದ ರಾಮನ ಶವವನ್ನು ಆತನ ಹೆಂಡತಿ ಮಕ್ಕಳು ಸುತ್ತುವರಿದಿದ್ದರು.ರೋಧನ ಮುಗಿಲು ಮುಟ್ಟಿತ್ತು.ನಾವು ಬಂದ ಕೂಡಲೆ ,ರಾಮನ ಹೆಂಡತಿ "ರಾಮ ಏದ್ದೆಳು,ಡಣಿ ಬಂದಾನ ನೋಡು ಏದ್ದೆಳು"ಏಂದು ಅದೆಸ್ಟು ಸಾರಿ ಗೋಗರೆದರು ಈ ಸರ್ತಿ ರಾಮ ಎದ್ದೆಳಲೆ ಇಲ್ಲ.ನನ್ನ ಪಾಲಿಗೆ ಇದು ಕರುಳು ಕಿತ್ತಿಬರುವ ,ಇವತ್ತಿಗೂ ಕಣ್ಣಿಗೆ ಕಟ್ಟಿರುವ ದ್ರಶ್ಯ.

ರಾಮನ ಮೀಸೆ ಇರದೆ ಭಣಗುಟ್ಟುತ್ತಿದ್ದ ಮುಖ,ನನಗೆ ಆತನನ್ನು ಕಳೆದು ಕೊಂಡಸ್ಟೆ ದುಖಃಕ್ಕೀಡುಮಾಡಿತ್ತು.ಸತ್ತ ಮೇಲೆ ಮೀಸೆ ತಗೆಯುವುದು ಒಂದು ಪದ್ಧತಿಯಂತೆ.ಮೀಸೆ ಇರದ ಆತನ ಮುಖವನ್ನು ನೋಡುವುದೆಂದರೆ ನೀರಿನಿಂದ ಈಗಸ್ಟೆ ಹೊರತೆಗೆದ ಮೀನಿನ ಪರಿಸ್ಥಿತಿ ನನ್ನದಾಗಿತ್ತು.ಈ ಇಳಿವಯಸ್ಸಿನಲ್ಲಿ ಆತನ ವ್ಯಕ್ತಿತ್ವಕ್ಕೆ,ವರ್ಛಸ್ಸಿಗೆ ಮೀಸೆ ಬಹಳ ಪರಿಣಾಮಕಾರಿಯಾಗಿದ್ದವು.ಚೂಪಾದ ಮೂಗಿನ ತಳಬದಿಯ ಇಕ್ಕೆಲಗಳಲ್ಲಿ,ಬಲಿತ ಪೊಡವಲಕಾಯಿಯ ಹಾಗೆ ಬೆಳೆದ ಮೀಸೆಯನ್ನು ನೋಡುವುದೆಂದರೆ ನಮಗೆ ಸಂಭ್ರಮವೋ ಸಂಭ್ರಮ.

ಹದಿ ಹರೆಯರ ಕುಡಿ ಮೀಸೆ, ನಡು ವಯಸ್ಸಿನವರ ಸೈಕಲ್ ಹ್ಯಾಂಡಲ್‌ನಂತಿರುವ ಮೀಸೆಯನ್ನು ಕಂಡು ಬೆಜಾರ್ ಆಗಿದ್ದ ನಮಗೆ,ರಾಮನ ರಾವಣನಂತಿರುವ ಮೀಸೆಗಳು ತುಂಬಾ ಮುದ ನೀಡುತ್ತಿದ್ದವು.ಪ್ರಾಯಃ ರಾವಣನ ಹತ್ತು ತಲೆಗಳ ಹತ್ತು ಮೀಸೆಗಳನ್ನು ಒಂದು ಗೂಡಿಸಿದಾಗ ಮೂಡಿದ ಮೀಸೆಯಂತೆ,ನಮ್ಮ ರಾಮನ ಮೀಸೆ ಆತನ ಮುಖದಲ್ಲಿ ರಾರಾಜಿಸುತ್ತಿತು.ವೊಮ್ಮೆ ಅವುಗಳನ್ನು ತಿರುವಿ ತಿಡಿದನೆಂದರೆ ಸುರಲೊಕಕ್ಕೆ ಮುಖ ಮಾಡಿದ ಮೀಸೆ,ರಾಮನಿಗೆ ವೊಬ್ಬ ಪಾಳೆಯಗಾರನ ಛಾಪನ್ನು ತಂದುಕೊಡುತ್ತಿದ್ದವು.

ಮೀಸೆ ಇಲ್ಲದ ರಾಮನ ಮುಖ ಈಗಸ್ಟೆ ಎಸ್.ಎಸ್.ಎಲ್.ಸಿ ಮುಗಿಸಿದ ಹುಡುಗನ ಮುಖದಂತೆ ಕಾಣುತ್ತಿತ್ತು.ಆತನ ಹಸನ್ಮುಖ,ಅಜಾನುಬಾಹು ಶರೀರ,ಮಾತಿನ ಧಾಟಿ,ಒಮ್ಮೆ ಬೀಡಿ ಸೇದಿ ಎಳೆದನೆಂದರೆ,ಮೂಗು,ಕಿವಿ,ಕಣ್ಣುಗಳಿಂದ ಆತ ಬಿಡುತ್ತಿದ್ದ ಹೊಗಿಯಿಂದ ನಾವೆಲ್ಲರು ದಿಗ್ಮೂಢರಾಗಿ ನೊಡುತ್ತಿದ್ದ ಆ ಪ್ರಕ್ರಿಯೆಯ ದ್ಯೊತಕವಾಗಿದ್ದ ಕಪ್ಪು ತುಟಿಗಳು.ಇವುಗಳೆಲ್ಲವನ್ನು ನೊಡಿದಾಗ ರಾಮ ಒಬ್ಬ ಮದ್ಲಿಂಗನಂತೆ,ಈಗಸ್ಟೆ ಮದುವೆ ದಿಬ್ಬಣಕ್ಕೆ ಸಜ್ಜಾಗಿ ಹೊರಟಿರುವ ಛಾಪನ್ನು ಮುಡಿಸುತ್ತಿತ್ತು.

ಸೂಮಾರು ಮೂರು ತಲೆಮಾರುಗಳ ಅಂತಃಕರಣ,ವಿಶ್ವಾಸ ಹಾಗು ಯಾರಿಗು ಸರಿಸಾಟಿ ಇಲ್ಲದ ಸ್ವಾಮಿನಿಸ್ಠೆಯ ಆ ಅವಿರತ ಕೊಂಡಿ ಆ ದಿನ ಕಳಚಿತ್ತು.

ಮುಂದುವರೆಯುವುದು....

Ornamental seperator
  • malegiri ರವರ ಬ್ಲಾಗ್
  • Login or register to post comments
  • 297 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 28, 2007 - 10:14am — Sunil Jayaprakash

ಉ: ಮಳೆ ನಿಂತರು ಮರದ ಹನಿ ಬಿಡದು - 1

Sunil Jayaprakash's picture

ಮಲೆಗಿರಿ, ಬರಹ ಚೆನ್ನಾಗಿ ಸಾಗಿದೆ. ಮುಂದುವರಿಸಿ. ಮೀಸೆಯ ಸುತ್ತಾ ಇನ್ನು ಏನೇನು ಕಾದಿದೆಯೋ ಕಾತರದಲ್ಲಿದ್ದೇವೆ. ಒಂದು ಸಣ್ಣ ಮಾತು. ಬರೆಯುವಾಗ ಕಾಗುಣಿತವೂ ಗಮನದಲ್ಲಿರಲಿ. ಇಲ್ಲವಾದರೆ, ಹೀಗಾಗುವುದುಂಟು.

ಆತನ ಮನೆಯ ಕಟ್ಟೆಯಮೇಲೆ ಕುಡಿಸಿದ್ದರು

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮೀಸೆ ಹೂವುಗಳು
  • ಮಳೆ ನಿಂತರು ಮರದ ಹನಿ ಬಿಡದು - 2
  • ಏನ್ರೀ ಗೌಡ್ರೇ!
  • ಜೀವನೀತಿ
  • ಕೋಚ್ ಬೇಕೇ?
Syndicate content

ಲೇಖಕರು

malegiri's picture

ಪೂರ್ಣ ಹೆಸರು
Giri

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
  • ಕಟಪಯಾದಿ ಸೂತ್ರ
  • ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
  • ಕೆಂಪು, ಕಣ್ಣು ಏನು ಪರಿಹಾರ..???
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Sunil Jayaprakash
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 16, 2008 - 10:37am
  • rameshbalaganchi
    ಉ: ನಾಡೋಜ ಎಂದರೆ.....
    May 16, 2008 - 10:31am
  • vikashegde
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 16, 2008 - 10:14am
  • srikanth
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 16, 2008 - 10:01am
  • ಶ್ರೀನಿಧಿ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 9:09am
  • hamsanandi
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:25am
  • keshavamurali
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:10am
  • ವೈಭವ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:04am
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:26pm
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:23pm
ಇನ್ನಷ್ಟು
ಈಗಿನಂತೆ 5 ಸದಸ್ಯರು ಮತ್ತು 20 ಅತಿಥಿಗಳು ಆನ್ಲೈನ್ ಇರುವರು.

ಅಖಂಡ ಕರ್ನಾಟಕ:
ಅಲ್ತೊ ನಮ್ಮ ಬೂಟಾಟದ ರಾಜಕೀಯ ನಾಟಕ!

ಇಂದು ಬಂದು ನಾಳೆ ಸಂದು
ಹೋಹ ಸಚಿವ ಮಂಡಲ
ರಚಿಸುವುದು ಕೃತಕವಲ್ತೊ
ಸಿರಿಗನ್ನಡ ಸರಸ್ವತಿಯ
ವಜ್ರ ಕರ್ಣಕುಂಡಲ!

— ಕುವೆಂಪು

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator