ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

majavani

ಸಂಪದ › Sampada Blogs › malegiri ರವರ ಬ್ಲಾಗ್

ಹನಿ ಹನಿ ಪ್ರೇಮ್ ಕಹಾನಿ....

August 29, 2007 - 8:47pm — malegiri

ಅ೦ತು ಈ ಶನಿವಾರ ’ಮು೦ಗಾರು ಮಳೆ’ಯಲ್ಲಿ ನೆನೆದೆ.ಬಿಡುಗಡೆಯಾಗಿ ಸರಿಸುಮಾರು ಅರ್ಧ ವರ್ಷ ಕಳೆದರು ಚಿತ್ರವನ್ನು ನೊಡದಿರುವುದಕ್ಕೆ ನನ್ನದೆ ಆದ ಕೆಲ ವೈಯಕ್ತಿಕ ಕಾರಾಣಗಳಿವೆ.ಇರಲಿ,ಅದೆಲ್ಲದರ ಚರ್ಚೆ ಇಲ್ಲಿ ಬೆಡ.

ಈ ಚಿತ್ರ ನಾನು ಇನ್ನು ನೊಡಿಲ್ಲವೆ೦ದು ತಿಳಿದು,ಸಿಟ್ಟಾಗಿ,ಆಯ್ಯೊ ಪಾಪಿ ಏನ್ನುವ ದ್ರಷ್ಟಿ ಬೀರುವ ನನ್ನ ಅಸ೦ಖ್ಯಾತ ಸ್ನೆಹಿತರು ಹಾಗು ಮು೦ಗಾರು ಮಳೆಯ ಭಕ್ತ ಮ೦ಡಳಿ "ಮುಮ ನೊಡದ ನೀನು ಇದ್ದರೆಷ್ತು,ಇಲ್ಲದ್ದಿದ್ದರೆಷ್ತು,ನೀನು ಹುಟ್ಟಿದ್ದೆ ವೆಸ್ಟ್..." ಯೆ೦ದು ಹಿಡಿಶಾಪ ಹಾಕಿದ್ದರಿಂದ ನನಗೆ ಒಳಗೊಳಗೆ ವೊ೦ಥರಾ ಪಾಪ ಪ್ರಘ್ನೆ ಕಾಡುತ್ತಿತ್ತು. ಚಿತ್ರ ನೊಡದಿದ್ದರೆ ಇವರು ನನಗೆ ಬಹಿಶ್ಕಾರ ಹಾಕುವುದು ಖಾತ್ರಿ ಯೆ೦ಬ ಬಲವಾದ ಗುಮಾನಿ ಹರಡಿದ್ದರಿಂದ, ಬೇರೆ ವಿಧಿ‌ ಇಲ್ಲದೆ ಹೋಗಿ ಥೇಟರಿನಲ್ಲಿ ಕುಳಿತೆ.

ನಿಜಕ್ಕು ಚಿತ್ರ ತು೦ಬಾ ಚೆನ್ನಾಗಿ ಮೂಡಿ ಬಂದಿದೆ(ನನ್ನಿಂದ ಪ್ರತ್ಯೆಕವಾಗಿ ಋಜುವಾತು ಪಡಿಸಿಕೊಳ್ಳಬೆಕಾಗಿಲ!!),ಹೀಗಾಗಿ ಕೋನೆಯವರಿಗೂ ನಿಮಗೆ ಸಿನಿಮಾ ಒ೦ದಿಷ್ತು ಬೋರ್ ಹೊಡೆಸುವುದಿಲ್ಲ.ಮು೦ಗಾರು ಮಳೆಯ ಮೊದಲ ಫ್ರೇಮಿನಿಂದ,ಮುಂದೆನಾಗುತ್ತದೆಂಬ ತುಡಿತ ನಿಮ್ಮನ್ನು ಇನ್ನಷ್ತು ಕಾತರದಿಂದ ವೀಕ್ಷಿಸುವಂತೆ ಮಾಡುತ್ತದೆ.ಹೇಳಿಕೊಳ್ಳುವಂಥಾ ಕಥೆ ಇರದಿದ್ದರು ನಿರುಪಣೆ ಕ್ರಿಸ್ಪಿಯಾಗಿದೆ. ನಿರ್ದೆಶನದಲ್ಲಿರುವ ಶಿಸ್ತು ಹಾಗು ಚಿತ್ರದ ಸಹಜತೆ ಮು೦ಗಾರು ಮಳೆ ಯ ಪ್ಲಸ್ ಪಾ‌ಇನ್ಟ್.

ಹಾಡುಗಳು ಹಾಗು ಸಂಗೀತವೆ ಚಿತ್ರದ ಜೀವಾಳ.ಜಯಂತ ಕಾಯ್ಕಿಣಿಯವರ ಸಾಹಿತ್ಯ ನೇರ ಹ್ರದಯಕ್ಕೆ ಇಳಿದು ನಿಮ್ಮನ್ನು ಕಾಡುತ್ತದೆ.ಪ್ರಾಯಃ ಇಸ್ಟೊಂದು ಹ್ರುದಯಸ್ಪಷ್ರಿ ಹಾಡುಗಳು ಇತ್ತಿಚಿನ ಕನ್ನಡ ಸಿನಿಮಾಗಳಲ್ಲಿ ಬ೦ದಿರುವುದು ಇದೆ ಮೊದಲು ಎ೦ದರೆ ತಪ್ಪಾಗಲಾರದು.ಮಧುರವಾದ ಸಂಗೀತ ಹಾಡುಗಳನ್ನು ಮಾದಕತೆಯಿಂದ ತುಳುಕಿಸಿದೆ.ಮಲೆನಾಡಿನ ಪ್ರಕ್ರತಿ ಸಿರಿಯ ಸಮ್ರದ್ಧತೆ ಪ್ರೆಕಶಕನ ಮನ ತಣಿಸಿದೆ.

ಇದು ನಾಯಕಪ್ರಧಾನ ಚಿತ್ರ,ಹೀಗಾಗಿ ಸಹಜವಾಗಿಯೆ ಗಣೆಶ್ ನಿಮ್ಮನ್ನು ಆವರಿಸಿಕೊಂಡು ಬಿಡುತ್ತಾರೆ.ನಾಯಕ ಅನುಭವಿಸುವ ಪ್ರತಿಯೊಂದು ಭಾವನೆಗಳಲ್ಲಿ ನೀವು ಸಹಸ್ಪಂದಿಯಾಗಿ ಬಿಡುತ್ತಿರಿ.ಚಿತ್ರದ ಕೊನೆಯ ಘಟ್ಟದಲ್ಲಿ ,ಮು೦ಗಾರು ಮಳೆ ಒಂದು ದಿಕ್ಕಿನಲ್ಲಿ ಸಾಗಿದರೆ ಪ್ರೆಕ್ಶಕರೆಲ್ಲರು ಗಣೆಶ ಅನುಭವಿಸುವ ಭಾವನೆಗಳಲ್ಲಿ ಸಿಕ್ಕಿ ನಲಗುತ್ತಾರೆ. .ಹೀಗೆ ಈ ಭಾವನೆಗಳ ಹಾಗು ನಿಜ ಜೀವನದ ಮಾನಸಿಕ ಧ್ರುವೀಕರಣ ನಿಮ್ಮಲ್ಲಿ ಒ೦ದು ವೊ‌ಇಡ್ ಕ್ರೆಯೆಟ್ ಮಾಡುತ್ತದೆ.ಈ ಗುಂಗಿನಿಂದ ಹೊರಬರಲು ನಿಮಗೆ ಸ್ವಲ್ಪ ಹೊತ್ತೆ ಬೇಕಾಗಬಹುದು.ನೀವು ತುಂಬಾ ಎಮೊಶನಲ್ ಅಗಿದ್ದರೆ ನಿಮ್ಮ ಭಾವನೆಗಳನ್ನು ಹತೋಟಿಗೆ ತರುವುದು ಸ್ವಲ್ಪ ಕಸ್ಟವೇ...... ಅಸ್ಟೂಂದು ಮಾಂತ್ರಿಕತೆ ವದಗಿಸಿದ್ದಾರೆ ನಿರ್ದೆಶಕ ಯೋಗರಾಜ
ಭಟ್.

ಮದುವೆ ನಿಶ್ಕರ್ಷೆಯಾಗಿ ಇನ್ನೊಂದು ವಾರದಲ್ಲಿ ಹಸೆಮಣೆ ಏರುವ ಹುಡುಗಿಯನ್ನು ’ಪಟಾ’ಯಿಸುವ ಟಿಪ್ಸ್‌ಗಳೇನಾದರು ಬೇಕಾಗಿದ್ದರೆ ಮು೦ಗಾರು ಮಳೆಯನ್ನು ನೊಡಿ.ಇವುಗಳನ್ನು ಗಣೆಶ್ ನಿಮಗಾಗಿ ಧಾರಾಳವಾಗಿಯೆ ಒದಗಿಸಿದ್ಡಾರೆ. ಅಸ್ಟೊಂದು ಎದೆಗಾರಿಕೆ ಇದ್ದರೆ ನೀವು ವ೦ದು ಕೈ ನೋಡಿ.ಹುಡುಗಿಯೊಬ್ಬಳನ್ನು ಬಿಟ್ಟರೆ,ಬೇರೇಲ್ಲ ಶೊಡಶೋಪಚಾರಗಳು ನಿಮಗೆ ಸಿಗುವುದು ಗ್ಯಾರಂಟಿ.

ಒಟ್ಟಿನಲ್ಲಿ ಒಮ್ಮೆ ನೊಡಬಹುದಾದ ಮುಂಗಾರು ಮಳೆ.ಕನ್ನಡದ ಎಪ್ಪತ್ತು ಹಾಗ ಎಂಬತ್ತರ ದಶಕದ ಸುವರ್ಣ ಯುಗದ ಚಿತ್ರಗಳನ್ನು ನೆನೆಪಿಸುವ ಹಾಗು ಸದಾ ನೆನಪಿನಲ್ಲಿ ಉಳಿಯುವ ಚಿತ್ರಗಳಲ್ಲಿ ಇದು ಒಂದು ಎನ್ನಲು ಅಡ್ಡಿ ಇಲ್ಲ.ಕನ್ನಡದಲ್ಲಿ ಸಧಭಿರುಚಿಯ ಚಿತ್ರಗಳು ಇನ್ನಸ್ಟು ಬರಲಿ ಎಂಬುದೆ ಎಲ್ಲರ ಹಾರೈಕೆ.ಆದರೆ ಒಂದು ಯಶಸ್ವಿ ಮು೦ಗಾರು ಮಳೆಯ ಜಾಡು ಹಿಡಿದು ಜಡಿಮಳೆ,ಸೋನ ಮಳೆ,ಹಿಂಗಾರು ಮಳೆ,ಮಳೆ ಬಂತು ಮಳೆ (ಮತ್ತೆ ಬಂದರು ಬರಬುಹುದು!!)ಹೀಗೆ ನಾಯಿಕೊಡೆಗಳಂತೆ ಹಲವಾರು ’ಪ್ರೇಮ ಕಥೆ’ಗಳು, ಗೊತ್ತು ಗುರಿ ಇಲ್ಲದೆ,ಸಂತೆಗೆ ಮುನ್ನ ಮೂರು ಮಳ ಮಲ್ಲಿಗೆ ನೆಯ್ದ್ಂತೆ,ಇತ್ತ ಕಥೆಯು ಇಲ್ಲ, ಅತ್ತ ಸಹಜತೆಯು ಇಲ್ಲದೆ, ಚಿತ್ರಗಳು ಪ್ರೆಕ್ಶಕನಿಗೆ ರುಚಿಸದಂತೆ ಮಾಡುವುದು ಇತ್ತಿಚೀನ
ಕನ್ನಡ ಚಿತ್ರರಂಗದ ಓಂದು ವಿಪರ್ಯಾಸದ ಸಂಗತಿ. ಮುಂಬರುವ ಚಿತ್ರಗಳು ಹಾಗಾಗದಿರಲಿ ಎಂದು ಆಶಿಸೋಣಾ.

ಹೋಗುವ ಮುನ್ನ, ಈಗ ನಿಮ್ಮ ಗಾಡಿ ಮೆಕ್ಯಾನಿಕ್ಕುಗಳ ಶುಕ್ರದೆಸೆ.ಇದೆ ಗಣೆಶ್ ಅಭಿನಯದ ’ಚೆಲುವಿನ ಚಿತ್ತಾರ’ ಭಾರಿ ಯಶಸ್ಸು ಕಾಣುತ್ತಿದೆಯಂತೆ(ಗಣೆಶ್ ಮೆಕ್ಯಾನಿಕ್ಕಿನ ಪಾತ್ರದಲ್ಲಿ ಅಭಿನಯಿಸಿದ್ದಾರೆ).ಚಿತ್ರಕಥೆಯ ಪ್ರಭಾವಕ್ಕೊಳಗಾದ ಹದಿ ಹರೆಯದ ಹೈಸ್ಕುಲ್ ಕಾನ್ವೆಂಟ್ ಪೋರಿಯರು ಮೆಕ್ಯಾನಿಕ್ಕುಗಳ ಹಿಂದೆ ನನ್ನೆ ಪ್ರೀತಿಸು ಎಂದು ದೊಂಬಾಲು ಬಿದ್ದಿದ್ದಾರಂತೆ.ಆಹಾ! ಎಂಥಾ ಸ್ವರ್ಗ ಸುಖಾಃ ಎಂದು ,ಈ ಹಾಳಾದ ,ದಿನಕ್ಕೆ ಹತ್ತು ತಾಸು ಮೊನಿಟರ್ ನೊಡುವ,ಅರಸಿಕ ಕೆಲಸಕ್ಕೆ ಸಲಾಮು ಹೆಡೆದು,ಪಾನರ್ ಹಿಡಿದು ಯಾವುದಾದರು ಗರ್ಲ್ಸ ಹೈಸ್ಕುಲ್ ಬಳಿ ,ನಲ್ಲೆಯರ ಜೊತೆ ಲಲ್ಲೆ ಹೊಡೆಯುವ ತುಂಟ ಯೋಚನೆ ನಿಮ್ಮಲ್ಲ್ಲಿ ಸುಳಿದರೆ ಜೋಕೆ.ಚಿತ್ರದ ಕೊನೆಯಲ್ಲಿ ನಾಯಕ , ನಾಯಕಿ ಸಿಗದೆ (ನನ್ನಹಾಗೆ) ಹಚ್ಛನಾಗುತ್ತಾನಂತೆ.ನಯಕಿ ಹಾಯಾಗಿ ಗಂಡನ ಮನೆ ಸೇರುತ್ತಾಳಂತೆ.

ಪಾನರ್ ಇಲ್ಲವೆ ಮೋನಿಟರ್ ಆಯ್ಕೆ ನಿಮಗೆ ಬಿಟ್ಟಿದ್ದು...

~.~
  • malegiri ರವರ ಬ್ಲಾಗ್
  • Login or register to post comments
  • 392 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 2, 2007 - 7:55pm — badari

ಉ: ಹನಿ ಹನಿ ಪ್ರೇಮ್ ಕಹಾನಿ....

badari's picture

ನಿನ್ನ ಸಹಸ್ರ ಅಪರಾಧಗಳಿಗೆ ಕ್ಷಮೆ ಸಿಕ್ತು ಬಿಡು. ಮುಂಗಾರು ಮಳೆ ನೋಡಿದೆಯಲ್ಲ ಸಾಕು. ಬಹಳಷ್ಟು review ಓದಿದ್ದೆ ಆದರೆ ನೀನು ಬರೆದ ಲೇಖನ ದಲ್ಲಿ ದಮ್ ಇದೆ. ನೀನು ಯಾಕೆ part time review ಬರೀಬರ್ದು? ಯಾವ್ದಾದರು ಪತ್ರಿಕೆಗೆ! Think about it!
ಮುಂಗಾರು ಮಳೆ ಭಕ್ತ ಮಂಡಳಿ ಇಂದ ಹಾರ್ದಿಕ ಶುಭಾಶಯಗಳು.
ನಿಮ್ಮ
ಬದರಿನಾರಾಯಣ ಇಂ ಜೋಶಿ
http://badarinarayan.googlepages.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮು೦ಗಾರು ಮಳೆ -- ಮು೦ಗಾರು ಮಳೆಯೇ...
  • "ಗಾಳಿಪಟ" ಹಾರಿಸಬಹುದು.......!!!
  • ಸಿಹಿ ಗಾಳಿ, ಸಿಹಿ ಗಾಳಿ, ಸಹಿ ಹಾಕಿದೆ ಮನಸಿನಲೀ....!!
  • ಕನ್ನಡ ಚಿತ್ರರಂಗದ ಕೆಟ್ಟ ಟ್ರೆಂಡ್
  • ನಿರ್ದೇಶಕ " ಯೋಗರಾಜ್ ಭಟ್ ರಿಗೊದು ಪ್ರೀತಿಪೂರ್ವಕ ವಾದ ಆಕ್ಷೇಪಣೆಯ ಪತ್ರ....
Syndicate content

ಲೇಖಕರು

malegiri's picture

ಪೂರ್ಣ ಹೆಸರು
Giri

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು-3
  • ತಂಬೂರಿ ಮೀಟಿದವ.. ಭವಾಬ್ದಿ ದಾಟಿದವ...
  • ಗೆಳತಿಗಾಗಿ ಒಂದು ಕವನ
  • ನೀವು ಆದರ್ಶ, ಶೋಭಾ ಕರಂದ್ಲಾಜೆ ಅಲ್ಲ...
  • ನಿನ್ನಿಂದ
  • ನಮ್ಮಧ್ವನಿ
  • ಟೋಪಿ ಹಳೆಯದಾದರೇನು?! ಕೋತಿ ನವನವೀನ!
  • ಸಮುದಾಯ ರೇಡಿಯೋ
  • ಬೂದಿಕೋಟೆ
  • ಕಾದಿರುವೆ ನಿನಗಾಗಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • harshavardhan v...
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 30, 2008 - 11:04am
  • harshavardhan v...
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 30, 2008 - 11:00am
  • harshavardhan v...
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 30, 2008 - 10:56am
  • csomsekraiah
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 10:46am
  • harshavardhan v...
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 30, 2008 - 10:13am
  • dhanu.vijai
    ಉ: ಕಚೇರಿ ಎಂಬ ನರಕ-೧
    August 30, 2008 - 9:32am
  • shreedevikalasad
    ಉ: ತಾರಸಿಯ ಗೋಡೆ ಮತ್ತು ಕ್ಯಾನ್ವಾಸ್
    August 30, 2008 - 9:22am
  • Sunil Jayaprakash
    ಉ: ಕಾದಿರುವೆ ನಿನಗಾಗಿ
    August 30, 2008 - 9:11am
  • Smi
    ಉ: ಕಚೇರಿ ಎಂಬ ನರಕ-೧
    August 30, 2008 - 9:01am
  • anil.ramesh
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 8:46am
ಇನ್ನಷ್ಟು
ಈಗಿನಂತೆ 7 ಸದಸ್ಯರು ಮತ್ತು 62 ಅತಿಥಿಗಳು ಆನ್ಲೈನ್ ಇರುವರು.


ಹಂದಿ ಚಂದನದ ಸು
ಗಂಧವನು ಬಲ್ಲುದೆ?
ಒಂದನು ತಿಳಿಯಲರಿಯದ ಗುರುವಿಂಗೆ |
ನಿಂದೆಯೇ ಬಹುದು ಸರ್ವಜ್ಞ |

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator