ಬರಹಗಾರನಿಗಿರಬೇಕಾದ ಅತ್ಯುಚ್ಚ ನಿಷ್ಠೆಯೆಂದರೆ ಭಾಷೆಗಿರುವ ಅವನ ಒಲವು.

— ಜೇಮ್ಸ್ ಬ್ರಾಡ್‌ಸ್ಕಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

manjunathsinge ರವರ ಬ್ಲಾಗ್

ಇಹಲೋಕದ ಹಾಡು ಮುಗಿಸಿದ ಸುಗಮ ಸಂಗೀತ ಗಾನ ಗಾರುಡಿಗ ಸಿ. ಅಶ್ವಥ್

ಹಿಂದೆ ಎಲ್ಲೋ ಓದಿದ ನೆನಪು. ನಾಗಮಂಡಲ ಚಿತ್ರದ "ಈ ಹಸಿರು ಸಿರಿಯಲಿ" ಹಾಡನ್ನು ಸಂಗೀತ ಕಟ್ಟಿಯವರು ಮೊದಲ ಸಲ ಹಾಡಿದಾಗ, ಸಿ ಅಶ್ವಥ್ ಅವರು ತೀವ್ರ ಅಸಮಧಾನ ವ್ಯಕ್ತಪಡಿಸಿದ್ದರಂತೆ. ಅವರ ಹಾಡಿನಲ್ಲಿದ್ದ ಹಲವು ತಪ್ಪುಗಳನ್ನು ಹುಡುಕಿ, ತಿದ್ದಿ, ಅದ್ಭುತವಾದ ಹಾಡೊಂದನ್ನು ಕನ್ನಡಿಗರಿಗೆ ಕೊಟ್ಟು, ಕಟ್ಟಿಯವರ ಪ್ರತಿಭೆಯನ್ನು ಎತ್ತಿ ಹಿಡಿದವರು ಸಿ ಅಶ್ವಥ್. ತಪ್ಪಾಗಿ ಸ್ವರ ಎತ್ತಿದ ಯಾರೆ ಆಗಲಿ, ಅಶ್ವಥ್ ಅವರ ಟೀಕೆಯನ್ನು ಸಹಿಸಿಕೊಳ್ಳಲೇ ಬೇಕಾಗುತ್ತಿತ್ತು. ಹಲವಾರು ಗಾಯಕ/ಗಾಯಕಿಯರು ಅಶ್ವಥ್ ಅವರ ನಿರ್ದೇಶನದಲ್ಲಿ ಹಾಡಲು ಹೆದರುತ್ತಿದ್ದರಂತೆ! ಅಶ್ವಥ್ ರವರ (ಆರೋಗ್ಯಕರವಾದ) ಟೀಕೆಗಳ ಉದ್ದೇಶ ಮಾತ್ರ ಇಷ್ಟೇ: ಒಬ್ಬ ಗಾಯಕನಲ್ಲಿ ಹುದುಗಿರುವ ಪ್ರತಿಭೆಯನ್ನು ಎತ್ತಿ ಹಿಡಿಯುವುದು.

ಧೂಳು ಹಿಡಿದು ಹಾಳಾಗಿ ಹೋಗಿದ್ದ ಹಲವಾರು ಜಾನಪದ ಗೀತೆಗಳಿಗೆ ತಮ್ಮ ಕಂಚಿನ ಕಂಠದಿಂದ ಜೀವ ತುಂಬಿದ್ದ ಅಶ್ವಥ್ ಇಂದು ತಮ್ಮ ಜೀವನವೆಂಬ ಹಾಡನ್ನು ಮುಗಿಸಿದ್ದಾರೆ. ಕನ್ನಡ ಸುಗಮ ಸಂಗೀತಕ್ಕೆ, ಕನ್ನಡಿಗರಿಗೆ ಇದೊಂದು ತುಂಬಲಾರದ ನಷ್ಟ. ಕರ್ನಾಟಕದಲ್ಲಷ್ಟೇ ಅಲ್ಲ, ಅಂತರರಾಷ್ಟ್ರೀಯ ಮಟ್ಟದಲ್ಲೂ ಸಹ ಕನ್ನಡದ ಜಾನಪದ ಗೀತೆಗಳನ್ನು ಭಾವತುಂಬಿ ಹಾಡಿ ಕನ್ನಡಿಗರನ್ನು ಆನಂದಿಸಿದ್ದಾರೆ. "ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ಸ್ ಒಂದು ಕಾಲದಲ್ಲಿ Scorpion, Sting, Deep Purple, the sprawling, Bryan Adams, ಇನ್ನಿತರ ಪಾಶ್ಚಿಮಾತ್ಯ ಸಂಗೀತಗಾರರಿಂದ ಮಾತ್ರ ಕಿಕ್ಕಿರಿದಿರುತ್ತಿತ್ತು. ಅಲ್ಲಿ "ಕನ್ನಡವೇ ಸತ್ಯ" ಎಂಬ ಧ್ವನಿ ಎತ್ತಿ, ಸುಮಾರು ಇಪ್ಪತ್ತು ಸಾವಿರ ಪ್ರೇಕ್ಷರನ್ನು ದಿಙ್ಮೂಢರನ್ನಾಗಿಸಿದ ಹೆಮ್ಮೆ ಅಶ್ವಥ್ ಅವರದು [The Hindu]". "ಕನ್ನಡವೇ ಸತ್ಯ", "ಎಲ್ಲೋ ಹುದುಕಿದೆ ಇಲ್ಲದ ದೇವರ ಕಲ್ಲು ಮುಳ್ಳುಗಳ ಗುಡಿಯೊಳಗೆ", "ಸೋರುತಿಹುದು ಮನೆಯ ಮಾಳಿಗಿ", "ತವರಲ್ಲ ತಗಿ ನಿನ್ನ ತಂಬೂರಿ - ಸ್ವರ", "ಉಳುವ ನೇಗಿಲ ಯೋಗಿ", "ಗುಪ್ತ ಗಾಮಿನಿ, ನನ್ನ ಶಾಲ್ಮಲ", ಇತ್ಯಾದಿ ಹಾಡುಗಳು ಕನ್ನಡಿಗರನ್ನು ಅನಂತ ಕಾಲ ಆನಂದಿಸುತ್ತಲೇ ಇರುತ್ತವೆ.  ಮುಂದೆ ಓದಿ »

ಕನ್ನಡ ಶಾಸ್ತ್ರೀಯ ಸ್ಥಾನಕ್ಕೆ ಅರ್ಹವೇ? ಎಳ್ಳಷ್ಟೂ ಸಂಶಯ ಬೇಡ!

ಕಳೆದ ಕೆಲವು ವರ್ಷಗಳಿಂದ ಕನ್ನಡ ಶಾಸ್ತ್ರೀಯ ಸ್ಥಾನಮಾನಕ್ಕೆ ಅರ್ಹವಲ್ಲ ಎಂಬ ಕಿಡಿಗೇಡಿಗಳ ಮಾತಿನಿಂದ ಎಷ್ಟೋ ಕನ್ನಡಿಗರ ಮನಸ್ಸು ನೊಂದುಕೊಂಡಿತ್ತು. ನೊಂದ ಮನಸ್ಸು ಹೋರಾಟದ ಹಾದಿ ಹಿಡಿಯಿತು. ಹೋರಾಟದ ಹಾದಿ ಶಾಸ್ತ್ರೀಯ ಸ್ಥಾನವನ್ನು ಮತ್ತಷ್ಟು ಹತ್ತಿರಗೊಳಿಸಿತು. ಕೊನೆಗೂ ಕೇಂದ್ರ ಸರಕಾರ ತಲೆದೂಗಿ, ತೆಲೆಬಾಗಿ ಕನ್ನಡಿಗರ ಬೇಡಿಕೆಯನ್ನು ಈಡೇರಿಸಿತು. ಕರ್ನಾಟಕದ ಹುಟ್ಟುಹಬ್ಬದ ದಿನ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಬಂದದ್ದು ಕನ್ನಡಿಗರಿಗೆಲ್ಲ ಒಂದು ಅಪೂರ್ವ ಸಂಗಮದಂತೆ ತೋರುತ್ತಿದೆ.

ಅದಿರಲಿ, ಕನ್ನಡ ಭಾಷೆ ಶಾಸ್ತ್ರೀಯ ಸ್ಥಾನಕ್ಕೆ ಅರ್ಹವೇ? ಶಾಸ್ತ್ರೀಯ ಸ್ಥಾನದಿಂದ ಕನ್ನಡಕ್ಕಾಗುವ ಲಾಭಗಳೇನು? ಇಂತಹ ಕಿಡಿಗೇಡಿ ಪ್ರಶ್ನೆಗಳನ್ನು ಬೇರು ಸಹಿತ ಕಿತ್ತು ಹಾಕಲು ನನ್ನದೊಂದು ಸಣ್ಣ ಪ್ರಯತ್ನ ಇಲ್ಲಿದೆ.  ಮುಂದೆ ಓದಿ »

"ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"

ಮುಂಬೈಯಲ್ಲಿರುವ ವಲಸಿಗರು ಥ್ಯಾಕ್ರೆಯ ಸಿಂಹಗರ್ಜೆನೆಗೆ ಬೆಚ್ಚಿಬಿದ್ದರು. ಸ್ಥಳೀಯ ನೆಲ, ಸಂಸ್ಕೃತಿ, ಭಾಷೆ, ಭಾವನೆಗಳನ್ನು ಗೌರವಿಸುವ ಪಾಠ ಕಲಿತರು. ಆದರೆ ಕನ್ನಡಿಗರು ಬೆಂಗಳೂರಿಗೆ ಬಂದ ವಲಸಿಗರಿಗೆ ಎಲ್ಲರೂ ನಮ್ಮ ಜನರಲ್ಲವೇ ಎಂದು ಸಹಿಷ್ಣುತೆ ತೋರಿಸಿದರು. ಸಿಕ್ಕಿದ್ದೇನು? "www.leavingbangalore.com" ಅಭಿಯಾನ! ಸ್ಥಳೀಯ ನೆಲ, ಸಂಸ್ಕೃತಿ, ಭಾಷೆ, ಭಾವನೆಗಳ ಅವಹೇಳನ. ಎಷ್ಟೋ ಜನರಿಗೆ ಬೆಂಗಳೂರು ಕಲ್ಪವೃಕ್ಷವಿದ್ದಂತೆ; ಮೊದಲ ನೌಕರಿ, ಮೊದಲ ಸಂಬಳ, ಮೊದಲ ಕಾರು, ಮೊದಲ ಮನೆ, ಎಲ್ಲಕ್ಕಿಂತ ಮಿಗಿಲಾಗಿ ತಾಳ್ಮೆಯುಳ್ಳ ಕನ್ನಡಿಗರ ಸ್ನೇಹ-ವಿಶ್ವಾಸಗಳೆಲ್ಲ ದೊರೆತದ್ದು ವಲಸಿಗರ ಸೌಭಾಗ್ಯವಲ್ಲವೇ? ಇದನ್ನು ಮರೆತ ಕೆಲ ಕಿಡಿಗೇಡಿ ವಲಸಿಗರು ಬೆಂಗಳೂರಿನ ಮೂಲಭೂತ ಸೌಕರ್ಯಗಳನ್ನು ತಿರಸ್ಕೃತ ಮನೋಭಾವನೆಯಿಂದ ನೋಡುತ್ತಿರುವುದು ಅವರ ಸಂಕುಚಿತ ಸ್ವಭಾವಕ್ಕೆ ಹಿಡಿದ ಕೈಗನ್ನಡಿಯಾಗಿದೆ.  ಮುಂದೆ ಓದಿ »

ಜೂನ್ ೪ - ಅಂತರರಾಷ್ಟ್ರೀಯ ಶೋಷಿತ ಮಕ್ಕಳ ದಿನ, ಗೊತ್ತಾ ನಿಮಗೆ?

ಅಮ್ಮನ ಉದರದಿಂದ ಧರೆಗಿಳಿದ ಮರುಕ್ಷಣ, ಶುರುವಾಯಿತು ನಮ್ಮೆಲ್ಲರ ಹೊಸ ಬದುಕಿನ ಪಯಣ.
ಅಂತಹ ಅಪೂರ್ವ ಕ್ಷಣಗಳಲ್ಲಿ ಅಮ್ಮ-ಅಪ್ಪರಿಗಾದ ಆನಂದಕ್ಕೆ ಪಾರವೇ ಇರಲಿಲ್ಲ ಅಲ್ಲವೆ?
ಮೊದಲ ಆಳುವಿನಿಂದ ಹಿಡಿದು ಮೊದಲ ಮುಗ್ಧ ನಗುವಿನವರೆಗೆ ಅಮ್ಮನಿಂದ ಪಡೆದ ಅತ್ಯಮೂಲ್ಯವಾದ
ಪ್ರೀತಿ-ಪೋಷಣೆ ಎಲ್ಲರಿಗೂ ಸಿಕ್ಕಿದ್ದುಂಟೇ? ಎಲ್ಲರೂ ಅಷ್ಟೊಂದು
ಭಾಗ್ಯವಂತರಾಗಿರುವುದಿಲ್ಲ. ಕೆಲವರು ಮೊದಮೊದಲು ಅಮ್ಮ-ಅಪ್ಪಂದಿರ ಪೋಷಣೇ ಪಡೆದರೂ ಮತ್ತೆ
ವಂಚಿತರಾಗಿತುತ್ತಾರೆ, ಪೋಷಕರ ತಪ್ಪಿನಿಂದಲ್ಲ, ಮಾನವನ ಹೀನ ಕೃತ್ಯಗಳಾದ
ಯುದ್ಧ-ವಿವಾದಗಳಿಂದ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಶೋಷಣೆಯಿಂದ. ಜಗತ್ತಿನಲ್ಲಿ
ಸುಮಾರು ೩,೦೦,೦೦೦ (ಹೌದು, ಮೂರು ಲಕ್ಷ!)ಕ್ಕೂ ಹೆಚ್ಚು ’ಬಾಲ ಸೈನಿಕ (child
soldiers)’ರಿದ್ದಾರೆ, ಅದರಲ್ಲಿ ೧೦ ವರ್ಷಕ್ಕಿಂತಲೂ ಕಡಿಮೆಯಿರುವ ಎಷ್ಟೋ
ಬಾಲಕಿಯರಿದ್ದಾರೆ. ಹೆಜ್ಜೆ ಹೆಜ್ಜೆಗೂ ಬಾಲ ಸೈನ್ಯದಲ್ಲಿರುವ ಮುಗ್ಧ ಬಾಲಕಿಯರು ಲೈಂಗಿಕ
ಕಿರುಕಿಳಕ್ಕೆ ಒಳಗಾಗುತ್ತಿದ್ದಾರೆ, ವ್ಯೇಶ್ಯಾವಾಟಿಕೆಗೆ ಬಲಿಯಾಗುತ್ತಿದ್ದಾರೆ [2001,
source].
ಕಳೆದ ಎರಡು ದಶಕಗಳಲ್ಲಿ ಸುಮಾರು ಇಪ್ಪತ್ತು ಲಕ್ಷಕ್ಕೂ ಹೆಚ್ಚು ಮಕ್ಕಳು
ಯುದ್ಧ-ವಿವಾದಗಳಿಗೆ ಬಲಿಪಶುಗಳಾಗಿದ್ದಾರೆ, ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬಿಯನ್
ನಾಡಿನಲ್ಲಿ ಪ್ರತಿ ವರ್ಷ ೮೦ ಸಾವಿರಕ್ಕೂ ಹೆಚ್ಚು ಮಕ್ಕಳು ಸಮಾಜದಲ್ಲಿ, ತಮ್ಮ ತಮ್ಮ
ಪ್ರದೇಶದಲ್ಲಿ ನಡೆಯುವ ದೌರ್ಜನ್ಯಕ್ಕೆ ಬಲಿಯಾಗುತ್ತಿರುವುದು ಶೋಚನೀಯ ಸಂಗತಿ[UN].
ಶಾಲೆಯಲ್ಲಿ ಅ-ಆ-ಇ-ಈ ಕಲಿಯಬೇಕಾದ ಮಕ್ಕಳು, ಬಡತನ ಮತ್ತು ಹಸಿವಿನಿಂದಾಗಿ ಬಾಲ
ಕಾರ್ಮಿಕರಾಗುತ್ತಿತುವುದು ಹೊಸದೇನಲ್ಲ. ಅದೇನೆ ಇರಲಿ, ಈ ಮಕ್ಕಳು ಮಾಡಿದ ತಪ್ಪಾದರೂ
ಏನು? ಧರೆಗಿಳಿದು ತಮ್ಮ ಬದುಕಿನ ಪಯಣ ಪ್ರಾರಂಭಿಸಿದ್ದೇ? ಇಲ್ಲ, ಇದು ಮಾನವನ ಹೀನ
ಕೃತ್ಯಗಳಿಗೆ ಪ್ರಕೃತಿ ನೀಡುತ್ತಿರುವ ಶಿಕ್ಷೆ.  ಮುಂದೆ ಓದಿ »

ನಮ್ಮೂರಿನ ಚೋಮ, ಸಿದ್ರಾಮಜ್ಜ

ಊರಿನಲ್ಲಿ ಎಲ್ಲಿಯಾದರು ಹಲಗೆಯ (ಒಂದು ರೀತಿಯ ವಾದ್ಯ, ಸಾಹಿತ್ತಿಕ ಭಾಷೆಯಲ್ಲಿ "ದುಡಿ" ಅಂತ ಹೆಸರು, ಕಾರಂತರ ಚೋಮನ ದುಡಿ
ನೆನಪಿಗೆ ಬರಬಹುದೇ?) ಶಬ್ದ ಕಳಿದರೆ ಸಾಕು, ಸಿದ್ರಾಮಜ್ಜನು ಬಾರಿಸುತ್ತಿದ್ದ ಹಲಗೆಯ
ನೆನಪಾಗುತ್ತದೆ. ಸುತ್ತ ಮುತ್ತ ಇದ್ದ ಹಳ್ಳಿಗಳಲ್ಲೆಲ್ಲ ಅವನು ಬಾರಿಸುತ್ತಿದ್ದ ಹಲಗೆಯ
ನಾದ ಸಿಕ್ಕಾಪಟ್ಟೆ famous. ಮದುವೆಯಿರಲಿ, ಜಾತ್ರೆಯಿರಲ್ಲಿ, ಹಬ್ಬ-ಹರಿದಿನಗಳಿರಲಿ,
ಶವಸಂಸ್ಕಾರದ ಕಾರ್ಯವಾಗಿದ್ದರೂ ಸರಿಯೇ, ಸಿದ್ರಾಮಜ್ಜನ ಹಲಗೆಯ ನಾದ
ಅನಿವಾರ್ಯವಾಗಿತ್ತು. ಸಿದ್ರಾಮಜ್ಜ ತೀರಿಹೋಗಿ ಸುಮಾರು ಐದು ವರ್ಷಗಳೇ ಕಳೆದಿರಬೇಕು.
ಅವನು ಒಂದು ರೀತಿಯಲ್ಲಿ ನಮ್ಮೂರಿನ "ಚೋಮ!", ಕಾರಂತರ ಚೋಮ ಅತ್ಯಂತ ಮುಗ್ಧ ಮತ್ತು
ಸ್ವಾಮಿನಿಷ್ಟೆಯುಳ್ಳವನು, ಆದರೆ ನಮ್ಮೂರ ಚೋಮ, ಸಿದ್ರಾಮಜ್ಜ, ಒಂದು ರೀತಿಯಲ್ಲಿ
ಕ್ರಾಂತಿಕಾರಿ, ಕ್ರಾಂತಿಕಾರಿ ಅನ್ನುವುದಕ್ಕಿಂತ ತುಂಬಾ ಸ್ವಾಭಿಮಾನದ ವ್ಯಕ್ತಿ
ಅನ್ನಬಹುದು. ಯಾರು ತನಗೆ ಗೌರವದಿಂದ ಕಾಣುತ್ತಾರೋ, ಅವರನ್ನು ಮಾತ್ರ
ಗೌರವಿಸುತ್ತಿದ್ದನು. ಕೆಲವೊಮ್ಮೆ, "ದಲಿತನಾದರೇನು, ನಾನೂ ಮನುಷ್ಯನಲ್ಲವೇ?" ಎಂದು
ಪ್ರಶ್ನಿಸುವಂಹ ಸ್ವಭಾವದವನು. ಅವನ ಇನ್ನೊಂದು ವಿಶೇಷತೆಯೆಂದರೆ, ದಿನದ ಬಹುಪಾಲು ಭಾಗ
ಸಾರಾಯಿ ಕುಡಿದ ಅಮಲಿನಲ್ಲಿರುವುದು. ಪ್ರತಿ ಸಲ ಊರಿಗೆ ಹೋದಾಗ ಯಾವತ್ತಾದರು ಸಿಕ್ಕರೆ,
ಅವನ ಬಾಯಿಯಿಂದ ಬರುತ್ತಿದ್ದ ಹೆಂಡದ ವಾಸನೆ ನನ್ನನ್ನು ಒಂದು ಮಾರು ದೂರ
ನಿಲ್ಲಿಸುತ್ತಿತ್ತು; ಈಗ ಸ್ವಲ್ಪ adjust ಆಗಿದೆ ಅನ್ಕೋಬಹುದು :-).  ಮುಂದೆ ಓದಿ »

Syndicate content