ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › manjunathsinge ರವರ ಬ್ಲಾಗ್

ಅಂಧಕಾರವೋ , ಅವಿವೇಕವೋ ?

July 25, 2007 - 3:10pm — manjunathsinge

"ಬೆಳಿಗ್ಗೆ ಬೆಳಿಗ್ಗೆನೆ ಯಾವನ್ ಮುಖ ನೋಡಿದ್ನೋ ಏನೊ, ಅದಕ್ಕೆ ಹಿಂಗ್ ಆಗ್ತಾ ಇದೆ", "ಇವತ್ time ಸರಿ ಇಲ್ಲ, ಆ ಕೆಲಸ ಇವತ್ ಬೇಡ", "ದಿನಾ ಬೆಳಿಗ್ಗೆ ಬಲಗಡೆಯಿಂದನೇ ಏಳ್ಬೇಕು" ಇಂತಹ ಅನೇಕ ಆಧಾರವಿಲ್ಲದ ದೂರುಗಳನ್ನು ಕೇಳಿರಬಹುದು. ಕೆಲವು ಸಲ ಮನೆಯಲ್ಲಿನ ಹಿರಿಯರು, ಮಗು ಎಡಗಡೆಯಿಂದ ಏಳುವುದನ್ನು ನೋಡಿದರೆ, ಆ ಮಗುವನ್ನು ಮತ್ತೆ ಮಲಗಿಸಿ, ಬಲಗಡೆಯಿಂದ ಎಬ್ಬಿಸಿದ್ದನ್ನು ನಾನು ಕೇಳಿದ್ದೇನೆ! ದಿನಾ ಪತ್ರಿಕೆಗಳಲ್ಲಿ ಅಂದಂದಿನ ಭವಿಷ್ಯ ನೋಡ್ಕೊಂಡೇ ಮುಂದಿನ ಕೆಲಸ ಮಾಡೋರು ಇದಾರೆ. ನಿಮ್ಮ ಅನುಭವದಲ್ಲಿ ಅಂತಹ ಭವಿಷ್ಯವಾಣಿ ನಿಜವಾಗಿದ್ದೇನಾದರು ಉಂಟೆ? ಯಾವನದೋ "ಅರಿಷ್ಟ" ಮುಖ ನೋಡಿ ಕೆಲಸ ಕೆಟ್ಟಿದ್ದು ಉಂಟೆ? ನನ್ನ ಜೀವನದಲ್ಲಿ ಇಂತಹ ಅನೇಕ ಸಂಗತಿಗಳು ನಿಜವಾಗಿದ್ದುಂಟು! ಹಾಗೆ ನಡೆದುಕೊಳ್ಳದಿದ್ದರೆ ಏನಾದೀತೆಂದು ತಿಳಿದುಕೊಳ್ಳುವ ಹುಚ್ಚಿನಿಂದ, ದಿನಾ ಬೆಳಿಗ್ಗೆ ಎಡಗಡೆಯಿಂದಾನೇ ಏಳಬೇಕು ಎಂಬ ಮೊದಲ ಹೆಜ್ಜೆಯನ್ನಿಟ್ಟೆ. ಕಳೆದ ಆರೇಳು ತಿಂಗಳಿಂದ ಎಡಗಡೆಯಿಂದಾನೇ ಏಳುತ್ತಿದ್ದೇನೆ! ವಿಷಾದಕರ ಘಟನೆಗಳಿಗಿಂತ, ಅತೀವ ಸಂತಸ ತಂದ ದಿನಗಳೇ ಹೆಚ್ಚು!

ಯಾವುದೇ ವಸ್ತುವನ್ನು, ವ್ಯಕ್ತಿಯನ್ನು, ವಿಶಯವನ್ನು, ನಿಸ್ಪಕ್ಷಪಾತವಾಗಿ, ಸಹಾನುಭೂತಿ ಮತ್ತು ವಿವೇಚನೆಯಿಂದ ನೋಡಿ ನಿರ್ಧಾರ ಕೈಗೊಂಡರೆ, ಕಣ್ಮುಂದಿನ ಸಮಾಜವೇ ಕೆಲವು ಬಾರಿ ಸ್ವರ್ಗವಾಗಬಹುದು. ಆದರೆ ಅಂಧಶ್ರದ್ಧೆ ಮನುಶ್ಯನನ್ನು ಎಂತಹ ಪರಿಸ್ಥಿತಿಗೆ ಗುರಿಪಡಿಸಬಹುದೆಂಬ ಅರಿವಾದದ್ದು ಮೊನ್ನೆ ಮೊನ್ನೆ ಮಾತ್ರ. ಸ್ವಲ್ಪ ದಿನಗಳ ಹಿಂದೆ ನಾನೊಂದು ಹಳ್ಳಿಗೆ ಹೋಗಿದ್ದೆ. ಮಕ್ಕಳಿದ್ದರೂ ಅನಥಳಾದ ವ್ರದ್ಧೆಯೊಬ್ಬಳು, ಆಶ್ರಯಕ್ಕಾಗಿ ಹಳ್ಳಿಯ ಹಲವರನ್ನು ಅಂಗಲಾಚಿದರೂ ಪ್ರಯೋಜನವಿಲ್ಲದ ಪರಿಸ್ಥಿತಿ ಹೃದಯವಿದ್ರಾವಕವಾಗಿತ್ತು. ಕಾರಣ ಇಷ್ಟೆ, ಅವಳೊಬ್ಬ ತೊಂಬತ್ತು ಮೀರಿದ "ದೇವದಾಸಿ" ವ್ರದ್ಧೆ, ರಾತ್ರಿ ಯಾರ ಮನೆಯಲ್ಲಾದರೂ ಆಶ್ರಯಿಸಿ ಅಲ್ಲೇ ಅಸುನೀಗಿದರೆ ಅವಳ "ಪಾಪ" ಮನೆಯವರಿಗೆ ತಟ್ಟೀತೆಂಬ ಅಂಧ ನಂಬಿಕೆ! ಮನೆ-ಮಠ, ತನ್ನವರೆನ್ನುವವರು ಯಾರೂ ಇಲ್ಲದ ಆ ವ್ರದ್ಧೆ ಜೀವಂತ ಶವದಂತೆ. ನನ್ನಿಂದಾದ ಸಹಾಯ ಮಾಡಿದೆ, ಆದರೆ ಅದು ಅವಳಿಗೆ ಎಷ್ಟು ದಿನ ಆಧಾರವಾದೀತು? ಇದರ ಬಗ್ಗೆ ಹಲವರನ್ನು ಹಾಗಲ್ಲ, ಇದು ಹೀಗೆ, ಅದು ಸರಿಯಲ್ಲ, ಇದು ಸರಿಯಾದ ದಾರಿ ಎಂದು ನೂರಾರು ವಾದಗಳಿಂದ ಮನಸ್ಸನ್ನು ಪರಿವರ್ತಿಸಲು ಪ್ರಯತ್ನ ಪಟ್ಟೆ, ಅವರಿಂದ ಹೂಂ ಎನಿಸಿಕೊಂಡದ್ದೂ ಆಯಿತು. ಆದರೆ ಮರುದಿನ ಎತ್ತು ಏರಿಗೆ ಕೋಣ ನೀರಿಗೆ ಎನ್ನುವಂತಾಗಿತ್ತು ನನ್ನ ಪ್ರಯತ್ನ. ಅವರ ಆ ನಂಬಿಕೆ ಅಂಧಕಾರವೋ , ಅವಿವೇಕವೋ ತಿಳಿಯದು.

ಇಂತಹ ನಂಬಿಕೆಗಳು ಅಂತರಾಳದಲ್ಲಿನ ನಿಂತ ನೀರಿನಂತೆ. ಹೊರಗೆಡವಲು ಹೋದರೆ ಏನೋ ಕಳೆದುಕೊಳ್ಳುತ್ತೇನಲ್ಲ ಎಂಬ ಭಯ ಕೆಲವರಿಗೆ! ಅಂಧಶ್ರದ್ಧೆಯ ಅಥವ ಮೂಢಭಕ್ತಿಯ (irrational) ವಿಚಾರಗಳು ಎಷ್ಟೋ ಬಾರಿ ನಮ್ಮನ್ನು ಸಹಿಸಲಾರದ ತೊಂದರೆಗಳಿ ಗುರಿಪಡಿಸಬಹುದು. ಹದಿನೆಂಟನೇ ಶತಮಾನದ ರಾಜಾರಮ್ ಮೋಹನ್ ರಾಯ್ರ ಕಾಲದಿಂದಲೂ "ವಿವೇಚನಾಧಾರಿತ ವಿಚಾರಗಳ (rational thinking)" ಬಗ್ಗೆ ಸಾವಿರಾರು ಲೇಖನಗಳು, ಭಾಷಣಗಳು, ಪುಸ್ತಕಗಳು ಬಂದಿದ್ದರು, ಜನರ ಮನದಾಳದಲ್ಲಿ ಹುದುಗಿದ ಮೂಢನಂಬಿಕೆಗಳ / ಢಾಂಬಿಕತೆಯ ಬೇರುಗಳು ಇನ್ನು ಸಂಪೂರ್ಣವಾಗಿ ಅಳಿದು ಹೋಗಿಲ್ಲ. ಇಂತಹ ಅಂಧಕಾರಗಳನ್ನು ಹೊಡಿದೆಬ್ಬಿಸುವ ಪ್ರಯತ್ನ ಹೊಸದೇನಲ್ಲ, ಇತಿಹಾಸದ ಅನೇಕ ಮಹನೀಯರು ಇದರ ಬಗ್ಗೆ ಜೀವನ ಪರ್ಯಂತ ಹೋರಡಿದ್ದಾರೆ. ಜ್ಯೋತಿಬಾ ಫುಲೆ, ಈಶ್ವರ ಚಂದ್ರ ವಿದ್ಯಾಸಾಗರ, ದೇವೇಂದ್ರನಥ ಠಾಗೋರ್, ಮದನ ಮೋಹನ ಮಾಳವೀಯರಂತಹ ಸಹಸ್ರಾರು ಗಣ್ಯರು ಎಷ್ಟೇ ಪ್ರಯತ್ನ ಪಟ್ಟರೂ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿಲ್ಲ. ಹನ್ನೆರಡನೇ ಶತಮಾನದಲ್ಲೇ, ಮಾದಿಗರ ಹರಳಯ್ಯ ಮತ್ತು ಬ್ರಾಹ್ಮಣರ ಮಧುವಯ್ಯರ ನಡುವೆ ಸಂಭಂದ ಬೆಳೆಸಲು ಪ್ರಯತ್ನ ಪಟ್ಟ ಬಸವಣ್ಣನವರು ನಮ್ಮ ಕಾಲದವರಿಗಿಂತ 800 ವರ್ಷ ಮುಂದಿದ್ದರು ಎನಿಸುತ್ತದೆ! ಇಂತಹ ಪರಿಸ್ಥಿತಿಗೆ ಪೂರ್ಣವಿರಾಮ ಇಲ್ಲವೇ ಎನ್ನುವ ಬಲುದೊಡ್ಡ ಪ್ರಶ್ನೆ ನನ್ನಂತೆ ಎಲ್ಲರನ್ನೂ ಕಾಡುತ್ತಿರಬಹುದು. ಆದರೆ ಎಲ್ಲಿಯವರೆಗೆ ನಾವೆಲ್ಲರೂ ಅಂಧನಂಬಿಕೆಗಳನ್ನು ಪ್ರಶ್ನಿಸುವುದಿಲ್ಲವೋ ಬಹುಶಃ ಅವು ಅನಂತ ಕಾಲದವರೆಗೆ ಉಳಿಯಬಹುದು. ತುಂಬ idealistic ಆಗಿ ತೋರಬಹುದು ನನ್ನ ವಿಚಾರ. ಆದರೆ ಅಟ್ಟವನೇರುವುದಕ್ಕ ನಿಚ್ಚಣಿಕೆಯೇ ಸೋಪಾನವೆನ್ನುವ ಮಾತು ನೆನಪಾಗುವುದಿಲ್ಲವೇ? ನಿಚ್ಚಣಿಕೆಯ ಪ್ರತಿಯೊಂದು ಮೆಟ್ಟಿಲಿನಂತೆ, ನಮ್ಮ ಜೀವನಲ್ಲಿ ಎಲ್ಲರೂ, ಮೂಢಭಕ್ತಿಯನ್ನು ಮೂಲಭೂತವಾಗಿ ಪ್ರಶ್ನಿಸಿದರೆ (The fundamental questions to the irrational thinking), ಅಟ್ಟವನೇರುವುದು ಅಸಾಧ್ಯವೇನಲ್ಲ. ಅರ್ಥವಿಷ್ಟೇ, ಶ್ರದ್ಧೆಯನ್ನು ಪುರಸ್ಕರಿಸಿ, ಆದರೆ ಅವಿವೇಕದ ಶ್ರದ್ಧೆಯನ್ನು ಸದಾ ತಿರಸ್ಕರಿಸಿರಿ.

~.~
  • manjunathsinge ರವರ ಬ್ಲಾಗ್
  • Login or register to post comments
  • 212 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಚಿಂತನ
  • ನವೆಂಬರ ೧ರಂದು ವಿಕಿಪೀಡಿಯಾದ ಮುಖ್ಯಪುಟದಲ್ಲಿ ಕರ್ನಾಟಕ
  • ಸರಿಯಾದ ಕನ್ನಡ ಪದ ತಿಳಿಸಿ
  • ನಾಳೆ ನೀವೂ ಮಾಯ.............
  • ಇವರೀಗ ಯಾವ ಕಾಲದಲ್ಲಿದ್ದಾರೆ!
Syndicate content

ಲೇಖಕರು

manjunathsinge's picture

ಪರಿಚಯ

ಹೇಳಿಕೊಳ್ಳುವಂತಹ ಸಾಧನೆ ಇನ್ನೂ ಮಾಡಬೇಕಾಗಿದೆ. ಮಾಡುತ್ತೇನೆ, ಮಾಡಿದ ತಕ್ಷಣ update ಮಾಡುತ್ತೇನೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಚುಕ್ಕಿಗಳಂತ ಹಲ್ಲು
  • ಹಗಲು-ಇರುಳು
  • ನಿನ್ನ ಪೂಜೆಗೆ ಬಂದ ಮಹದೇಸ್ವರಾ
  • ನುಡಿ ಚಿತ್ರ ಬರೆಯಲು ಕಲಿತಿದ್ದು
  • ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
  • ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೧)
  • ನೆನೆವುದೆನ್ನ ಮನ ಕರ್ನಾಟಕ ದೇಶವಮ್
  • ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
  • ನೀಲಿ ಹಲ್ಲು ಇರುವ ಜಂಗಮ ದೂರವಾಣಿ ಯಂತ್ರ
  • ಮೊಬೈಲ್ ಕಥೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ನೀತಾ
    ಉ: Abroad ಅನ್ನೋ ಮಾಯೆ...
    July 9, 2008 - 6:21pm
  • Deeparavishankar
    ಉ: ಬೈಟೊ ಕಾಫಿ !!! - ೧
    July 9, 2008 - 6:10pm
  • ಸಂಗನಗೌಡ
    ಉ: ಅಬ್ಬಾ!
    July 9, 2008 - 6:01pm
  • yuvapremi
    ಉ: ವರದಕ್ಷಿಣೆ;/ಪ್ರದಕ್ಷಿಣೆ;
    July 9, 2008 - 5:55pm
  • ನೀತಾ
    ಉ: Abroad ಅನ್ನೋ ಮಾಯೆ...
    July 9, 2008 - 5:53pm
  • yuvapremi
    ಉ: ಮುಕ್ತ...ಮುಕ್ತ...ಸಾಹಿತ್ಯ ಬೇಕು...
    July 9, 2008 - 5:46pm
  • veena
    ಉ: ಸುಮ್ನೆ 1 ಮದ್ವೆ ಬ್ಲಾಗು :)
    July 9, 2008 - 5:41pm
  • girish.rajanal
    ಉ: ಹಣ "investment"
    July 9, 2008 - 5:03pm
  • cmariejoseph
    ಉ: ಕನ್ನಡ ರಸಪ್ರಶ್ನೆ:೯
    July 9, 2008 - 4:50pm
  • cmariejoseph
    ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
    July 9, 2008 - 4:47pm
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 32 ಅತಿಥಿಗಳು ಆನ್ಲೈನ್ ಇರುವರು.


ಭಾರತ ದಾತ್ಮ೦ ಕ೦ಗೆಡುತಿದೆ ಪರ
ಸಾರಸ್ವತ ಸ೦ಪದ ಭರದಿ೦
ತಾರಿ ಹೋಗಿತಿದೆ ತಾಯ್ನಾಡಿನ ಮನ
ಏರುವಿದೇ ಸ್ವಪ್ರತ್ಯಯದಿ೦

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator