ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › manubhat ರವರ ಬ್ಲಾಗ್

ಶ್ಯಾಮಲಾ

July 3, 2008 - 1:10am — manubhat

ಇವತ್ತು ಸ್ವಲ್ಪ ತಂಪಾಗಿದೆ . ಇಲ್ದೆ ಇದ್ರೆ ಸುಡೋ ಉರಿಬಿಸ್ಲು ! ಅದೂ ಕಾರವಾರದ ಬಿಸಿಲು ಅಂದ್ರೆ ಕೇಳ್ಬೇಕಾ ? ಕಲ್ಲೂ ಕರ್ಗೋಗೋಷ್ಟು . ತಂಪಾದ ಗಾಳಿ ಬೇರೆ ಬೀಸ್ತಾ ಇದೆ. ಎಲ್ಲೋ ಮಳೆ ಆಗಿರ್ಬೇಕು . ಸಮುದ್ರ ಮಾತ್ರ , ಯಾರನ್ನೋ ಕಾಯ್ತಾ ಇರೊವ್ರ ತರ ಮೊರಿತಾ ಇದ್ದಿದ್ದು ಈಗ ಒಮ್ಮೆಗೆ ಭೋರ್ಗರೀತಾ ಇದೆ . ಅದ್ರ ಮೂಡ್ ನೊಡಿ ನಂಗೂ ಖುಶಿ ಆಯ್ತು.
ಬಿಸಿಲು ಬಿಡುವು ಕೊಟ್ಟಿದ್ದೇ ಕೊಟ್ಟಿದ್ದು , ಜನ ’ ಬೀಚಾ ವಚ್ಯಾ ರೇ !’ ಅಂತ ಮನೆಯಿಂದ ಹೊರಗೆ ಬಿದ್ರು . ಅವ್ರು ಬರ್ತಾರೆ ಅಂತಾನೇ ಅಂದಾಜು ಹಾಕಿ ಸರಿ ಹೊತ್ತಿಗೆ ತಮ್ಮ ಗಾಡಿ ಎಳ್ಕೊಂಡು ಪಾನಿಪೂರಿವಾಲಾಗಳು ಸಾಲಾಗಿ ಬಂದ್ರು . ನಾನು ಸುಮಾರು ಚಿಕ್ಕವ್ನಾಗಿದ್ದಾಗ್ಲೇ ಈ ಪಾನಿಪೂರಿಯವ್ರ ಪೂರ್ವಜರು ಉತ್ತರ ಭಾರತದಿಂದ , ಮುಂಬಯಿಯಿಂದ ಈ ಕಡೆ ವಲಸೆ ಬಂದ್ರು . ಅವ್ರು ಮಾಡೋ ಪಾವ್ ಭಾಜಿ , ಮಸಾಲಾ ಪೂರಿ, ಭೇಲ್ ಪೂರಿಗೆ ಸಿಕ್ಕಾಪಟ್ಟೆ ಡಿಮಾಂಡು , ನಮ್ ಕಾರವಾರದಲ್ಲಿ .
ನಾನು ನಿಂತಿರೋ ಜಾಗದಿಂದ ನನ್ ಬಲಗಡೆಗೆ ಯಾರೋ ಪರಿಚಯದವ್ರು ಮಹಿಳೆ ನಡ್ಕೊಂಡ್ ಹೊಗ್ತಾ ಇದ್ದಾರೆ. ಎಲ್ಲೋ ನೋಡಿದ ನೆನಪು! ಸ್ವಲ್ಪ ವಯಸ್ಸಾಗಿದೆ ಅದಿಕ್ಕೇ ಗುರುತು ಸಿಗ್ತಾ ಇಲ್ಲ. ಅವ್ರ ಜೊತೆ ಸುಮಾರು ೨೫ ರ ಒಬ್ಬ ಯುವಕ . ಅವ್ನ ಮುಖ ನೋಡಿದ್ ತಕ್ಷಣ ಆ ಮಹಿಳೆ ಯಾರು ಅಂತ ಗೊತ್ತಾಗೋಯ್ತು ! ಜೊತೆಗೆ ಎನೇನೋ ಹಳೇ ನೆನಪುಗಳು ! ಗಾಳಿ ತಂಪಾಗಿ ಬೀಸ್ತಾ ಇದ್ರೂ , ಒಂದ್ ತರಾ ಬಿಸಿ ಬೇಗೆ ಮೈಯಲ್ಲಿ . ಹೌದು! ಅವಳು ಶ್ಯಾಮಲಾ ! .. ಅದೇ ಚೂಪು ಮೂಗು, ಬೊಗಸೆ ಕಂಗಳು , ಕೂದಲು ನೆರೆದಿದ್ರೂ ಅದೇ ನುಣುಪು , ಹೊಳಪು. ಗಲ್ಲ ಸ್ವಲ್ಪ ಜೋತು ಬಿದ್ದಿದೆ. ಆದ್ರೂ ಅವ್ಳು ಅಷ್ಟೇ ಆಕರ್ಷಕವಾಗಿ ಕಾಣ್ಸ್ತಾಳೆ . ಪ್ರೀತಿ ಮಾಡೊವ್ರ ಕಣ್ಣೇ ಹಾಗೇನೋ ಬಹುಶಃ .!
ಈ ಶ್ಯಾಮಲಾ ಅಥವಾ ಶ್ಯಾಮಿ , ಒಂದ್ ಕಾಲದಲ್ಲಿ , ಅಂದ್ರೆ ನಾನು ಹಾಯ್ ಸ್ಕೂಲ್ ಒದ್ತಾ ಇರ್ ಬೇಕಿದ್ರೆ , ನನ್ ಕನಸಿನ ರಾಣಿ !. ನನ್ನ ತರಗತಿನೇ. ಆದ್ರೆ ಹುಡ್ಗೀರ ಸೆಕ್ಷನ್ ಬೇರೆ ಇತ್ತು . ನಾನು ನನ್ ಕ್ಲಾಸಲ್ಲಿ ಜಾಣ ಆದ್ರೆ , ಅವ್ಳು ಅವ್ಳ್ ಕ್ಲಾಸಲ್ಲಿ . ಅವ್ಳಿಗೆ ಸಂಗೀತ ಬೇರೆ ಬರ್ತಿತ್ತು . ನಾನು ಅವ್ಳನ್ನ ಎಷ್ಟು ಇಷ್ಟ ಪಡ್ತಿದ್ದೆ ಅಂತ ನನ್ ಕ್ಲಾಸ್ ಮೇಟ್ಸ್ ಗೆಲ್ಲಾ ಗೊತ್ತಿತ್ತು . ಅವ್ಳಿಗೂ ಗೊತ್ತಿಲ್ದೆ ಎನೂ ಇರ್ಲಿಲ್ಲ . ಕದ್ದು ಕದ್ದು ನೋಡೋದು , ನಗೋದು , ಹೀಗೆ ಬೇರೆ ಬೇರೆ ಸನ್ನೆ ಮಾಡೋದು ಎಲ್ಲಾ ನಡೀತಿತ್ತು. ಆದ್ರೆ ನಮ್ ಕಾಲ್ ದಲ್ಲಿ ಈಗ ಇರೋಷ್ಟು ಸ್ವಾತಂತ್ರ್ಯ ಇರ್ಲಿಲ್ಲ , ಹುಡ್ಗೀರಿಗಾಗ್ಲಿ , ಹುಡುಗ್ರಿಗಾಗ್ಲಿ . ನಮ್ ತರಾನೇ ಎಷ್ಟೊಂದ್ ಹುಡುಗ್ರು, ಹುಡ್ಗೀರು ಹೀಗೆ ಮನಸ್ಸಲ್ಲೇ ಮಂಡಿಗೆ ತಿಂತಿದ್ರು. ಹಾಯ್ ಸ್ಕೂಲಲ್ಲಿ ಎನೂ ಆಗಿಲ್ಲ , ಮುಂದೆ ಕಾಲೇಜು .
ಕಾಲೇಜು ಅಂದ್ರೆ ಸ್ವಲ್ಪ ಪರ್ವಾಗಿಲ್ಲ . ಆದ್ರೆ ಹುಡ್ಗೀರನ್ನ ಕಾಲೇಜಿಗೆ ಕಳ್ಸೊದೇ ಅಪರೂಪ ಆ ಕಾಲದಲ್ಲಿ . ಶ್ಯಾಮಲ ತಂದೆ ಲಾಯರ್ರು . ತಾಯಿ ಬೇರೆ ಓದಿದ್ರು . ಅದಿಕ್ಕೆ ಅವ್ಳ್ಗೂ ಕಾಲೇಜು ಮೆಟ್ಟಿಲು ಹತ್ತೋ ಅವಕಾಶ ಸಿಕ್ತು . ನಾನೂ ಸಿಕ್ಕಿದ್ದ ಅವಕಾಶ ಬಿಟ್ಟುಕೊಡಬಾರ್ದು ಅಂತ ಅವ್ಳನ್ನ ಮಾತಾಡ್ಸೋಕೆ ಪ್ರಯತ್ನ ಮಾಡ್ದೆ . ನಿಮ್ಗೇ ಗೊತ್ತಲ್ಲ ! ಪ್ರೀತ್ಸೋರ್ ಕಷ್ಟ !. ಪ್ರತಿ ಸಲ ಯೇನಾದ್ರೂ ಮಾತಾಡ್ಸ್ ಬೇಕು ಅಂತ ಹೋದಾಗ್ಲೆಲ್ಲಾ ಹೊಟ್ಟೆ ಉಡುಗಿಹೋಗಿ ಮಾತೇ ಹೊರಗೆ ಬರದೇ ಸುಮ್ನೆ ಪೆಕ್ರನ ತರಾ ನಿಂತ್ ಬಿಡ್ತಾ ಇದ್ದೆ. ಅವ್ಳು ಪಾಪ ಎರಡು ನಿಮಿಷ ಅಲ್ಲೇ ಸುಳಿದಾಡಿ , ಆಮೇಲೆ ನನ್ನ ಅಸಹಾಯಕತೆ ನೊಡಿ ಹೋಗಿಬಿಡೋವ್ಳು . ಒಳಗೊಳಗೇ ನಗ್ತಿದ್ಲೋ , ಅಥವಾ ತನ್ನ ಪುಕ್ಕಲು ಹೀರೋನ ನೊಡಿ ಕೋಪ ಮಾಡ್ಕೊತಿದ್ಲೋ ಗೊತ್ತಿಲ್ಲ. ಆದ್ರೆ ಅವ್ಳಿಗೂ ನನ್ನ ಬಗ್ಗೆ ಒಂದು ಭಾವನೆ ಇದ್ದಿದ್ದಂತೂ ನಿಜ. ಒಂದು ದಿನ ಅವ್ಳು ಲೈಬ್ರರಿ ಮೆಟ್ಟಿಲು ಇಳಿದು ಬರ್ತಾ ಇದ್ಲು . ಅದೇನೋ ಇದ್ದಕ್ಕಿದ್ದ ಹಾಗೆ ನನ್ನ ನೋಡಿ , ಒಂದು ಮುಗುಳ್ನಗೆ ನಕ್ಕಳು . ನನ್ನನ್ನೇ ಹಾಗೆ ದಿಟ್ಟಿಸಿ ನೋಡಿ ಏನೋ ಹೇಳ್ಬೇಕು ಅಂತ ಇದ್ದವ್ಳು , ಅಷ್ಟರಲ್ಲಿ ನಾನು ಮಹಾಪುರುಷ , ನಾಚಿಕೆಯಿಂದಾನೋ ಏನೋ ತಲೆ ತಗ್ಸಿಬಿಟ್ಟೆ. ಒಂದು ಕ್ಷಣ ಬಿಟ್ಟು ತಲೆ ಎತ್ತಿ ನೊಡಿದ್ರೆ , ಅವ್ಳು ಗಂಟು ಮೋರೆ ಹಾಕ್ಕೊಂಡು ಬೇರೆ ಕಡೆ ನೋಟ ಬೀರಿ ಧುಡು ಧುಡುನೆ ಹೋಗಿಬಿಟ್ಲು. ಛೀ ! ಈಗ್ಲೂ ಛೀಮಾರಿ ಹಾಕ್ಕೋತೀನಿ ನಂಗೆ ನಾನೇ.
ಇದಾದ ಒಂದು ವಾರ ಅವ್ಳು ನಂಗೆ ಕಾಣಿಸ್ಲೇ ಇಲ್ಲ ಕಾಲೇಜಲ್ಲಿ . ಆಮೇಲೆ ಗೊತ್ತಾಯ್ತು , ಅವ್ಳ ಮದುವೆ ನಿಶ್ಚಯ ಆಗಿದೆ ಅಂತ !...
ಒಂದು ದಿನ ಕೂತು ಅತ್ತೆ ! .

ನಾನೂ ಓದೊದ್ರಲ್ಲಿ ಸುಮಾರು ಚೆನ್ನಾಗೇ ಇದ್ದೆ . ಕಷ್ಟ ಪಟ್ಟು ಓದಿ , MA ಮಾಡ್ದೆ . ಆಮೇಲೆ IAS ; ನಂದೇ ಜಿಲ್ಲೆಗೆ ಕಮೀಷನರ್ ಆಗಿ ಬಂದೆ . ಅಪ್ಪ ಅಮ್ಮ ಮದುವೆ ಕೂಡ ಮಾಡಿದ್ರು. ಆದ್ರೂ ನನ್ನ್ ಮನಸ್ಸಿಂದ ’ಶ್ಯಾಮಿ’ ನ ಅಳ್ಸಿ ಹಾಕೋಕೆ ಆಗ್ಲೇ ಇಲ್ಲ . ಆಗಾಗೆ ಕಾಣಿಸ್ತಿದ್ಲು ಕಾರವಾರ ಪೇಟೇಲಿ, ದೀಪಾವಳಿ ಲಕ್ಷ್ಮಿ ಪೂಜೆ ಸಮಾರಂಭಗಳಲ್ಲಿ, ಗಣೇಶ ಚತುರ್ಥಿ ವಿಗ್ರಹ ಮುಳುಗಿಸೋ ಮೆರವಣಿಗೇಲಿ. ಅವ್ಳ ಗಂಡ ದೊಡ್ದ ವ್ಯಾಪಾರಿ . ಮನೇಲಿ ಪ್ರತೀ ವರ್ಷ ಗಣಪತಿ ವಿಗ್ರಹ ಕೂಡಿಸ್ತಿದ್ರು . ನನಗೆ ಆಹ್ವಾನನೂ ಬರ್ತಿತ್ತು . ಹೋಗೋಕೆ ಮನಸ್ಸು ಎಳೀತಿತ್ತು. ಆದ್ರೆ ಹೇಗೋ ಅದನ್ನ ತಡೀತಿದ್ದೆ . ಒಂದು ಸಲ ಹೋಗಿದ್ದೆ ಕೂಡ . ನಾನು ಅಲ್ಲಿ ಇರೋವಷ್ಟು ಹೊತ್ತೂ , ಶ್ಯಾಮಿ ದೇವರ ವಿಗ್ರಹದ ಹತ್ರದಿಂದ ಕದಲಲಿಲ್ಲ . ಅದೇ ಕೊನೇ ಸಲ ಅಲ್ಲಿಗೆ ಹೋಗಿದ್ದು . ಇನ್ನೂ ಆ ಲೈಬ್ರರಿ ಮೆಟ್ಟಿಲ ಮೇಲೆ ನಾನು ತೋರಿಸಿದ ಪೌರುಷ ನೆನಪಿಸ್ಕೊಂಡ್ರೆ ಕೋಪ ಬರುತ್ತೆ , ಅಳು ಬರುತ್ತೆ . ಆದರೆ ನನ್ನ ಈ ಭಾವ , ನಿಮ್ಮ ಕಣ್ಣಿಗೆ ಬೀಳ್ದೆ ಇರೋವಷ್ಟು , ಕಿವಿಗೆ ಕೇಳ್ದೆ ಇರೋವಷ್ಟು , ಕ್ಷೀಣ , ..... ನಿರ್ಜೀವ . ನಾನೊಂದು ಪ್ರತಿಮೆ !.. ಕಗ್ಗಲ್ಲ ಕೆತ್ತಿ ಮಾಡಿರೋ ಗೊಂಬೆ ! ಕಾರವಾರದ ಪ್ರಜೆ ತಮ್ಮದೇ ಊರಿನ ಒಬ್ಬ ಗಣ್ಯ ವ್ಯಕ್ತಿ ಯನ್ನು ನೆನಪಿಸಿಕೊಳ್ಳೋಕೆ ಮಾಡಿರೋ ಸಂಕೇತ ..
" ದಿವಂಗತ ಮಹಾಪೌರ ವಿನಾಯಕ ರಾಯ್ಕರ್ , ಮಾಜಿ ಕಮೀಷನರ್ , ಉತ್ತರ ಕನ್ನಡ ಜಿಲ್ಲೆ , ೧೯೮೦ - ೯೫ ಇವರ ಸ್ಮರಣಾರ್ಥದಲ್ಲಿ "
ಶ್ಯಾಮಿ ಹೊರಟು ನಿಂತ್ಲು . ಸೀರೆಗೆ ಅಂಟಿದ್ದ ಉಸುಕು ಕೊಡವಿ ಮಗನ ಕೈ ಹಿಡಿದು ಎದ್ದು ನಿಂತಳು . ನಿಧಾನವಾಗಿ ನಡೀತಾ ನನ್ನ ಬಲಗಣ್ಣಿಗೆ ಸ್ಫುಟವಾಗಿ ಕಾಣಿಸಿದ್ಲು . ಅದೇ ಕಣ್ಣುಗಳು , ೨೫ ವರ್ಷದ ಕೆಳಗೆ ಆ ಲೈಬ್ರರಿ ಮೆಟ್ಟಿಲು ಇಳೀಬೇಕಿದ್ರೆ ಹೇಗೆ ನೋಡಿದ್ಲೋ ಹಾಗೇ ಒಂದಸರ್ತಿ ನನ್ನ ನೋಡಿದ್ಲು.
’ ನಾಚ್ಕೆ ಆದ್ರೂ ತಲೆ ತಗ್ಸೋಕೆ ಆಗೊಲ್ಲ ಶ್ಯಾಮೀ ’ ..

  • ಸಣ್ಣಕಥೆ
~.~
  • manubhat ರವರ ಬ್ಲಾಗ್
  • Login or register to post comments
  • 199 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 3, 2008 - 8:47am — kadakolla05

ಉ: ಶ್ಯಾಮಲಾ

kadakolla05's picture

ನಿಮ್ಮ ಭಾವನ ಪ್ರಪಂಚ ತುಂಬಾ ವಿಶಾಲವಾಗಿದೆ.
ಕಥೆಯ ನಿರೂಪಣೆ ಚನ್ನಾಗಿದೆ
ಇನ್ನೂ ಹೊಸ ಹೊಸ ಬರಹ ನಿಮ್ಮಿಂದ ನಿರೀಕ್ಷೀಸುತ್ತೇವೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 3, 2008 - 5:49pm — Jayalaxmi.Patil

ಉ: ಶ್ಯಾಮಲಾ

Jayalaxmi.Patil's picture

ಮನು
ಕಥೆ ಚೆನ್ನಾಗಿದೆ.
ಜಯಲಕ್ಷ್ಮೀ.ಪಾಟೀಲ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮುಂದೇನು ...?
  • ಒಂದು ಸ್ವಗತ:
  • ಚಿಂಟು: ನಂಗೆ ಇಷ್ಟ ಆಗದೇ ಇರೋದು!
  • ಒಂದು ಕಹಿ ಅನುಭವ
  • ಚಿಂಟು: ನಂಗೇನಿಷ್ಟ ಅಂದ್ರೆ...
Syndicate content

ಲೇಖಕರು

manubhat's picture

ಪೂರ್ಣ ಹೆಸರು
manu bhatta

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು-11
  • ಶಿವರಾಜ್ ಕುಮಾರ ಅಭಿಮಾನಿಗಳಿಗೆ ಮತ್ತೇರಿಸುವ ಚಿತ್ರ " ಮಾದೇಶ "
  • ಹಬ್ಬ ತಂದ ನೆನಪು...
  • ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
  • ಆಧುನಿಕ "ಬೇಡರ ಕಣ್ಣಪ್ಪ"..
  • ವೃತ್ತಿಜೀವನದ ಹಂತಗಳು...
  • ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
  • ಓದಿದ್ದು ಕೇಳಿದ್ದು ನೋಡಿದ್ದು-10
  • ಮೊದಲ ಚಿತ್ರ
  • ಬಿಗುಮಾನದ ಚಿತ್ರಗಳು
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 6:48am
  • kalpana
    ಉ: ಜೀವ ಕಾಯುವುದೇತಕೆ?
    September 7, 2008 - 5:19am
  • kalpana
    ಉ: ಮೊದಲ ಚಿತ್ರ
    September 7, 2008 - 1:48am
  • srivathsajoshi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 12:24am
  • yuvapremi
    ಉ: Splendours of Royal Mysore
    September 6, 2008 - 10:19pm
  • yuvapremi
    ಉ: ಮೊದಲ ಚಿತ್ರ
    September 6, 2008 - 10:11pm
  • ASHOKKUMAR
    ಉ: ಹಬ್ಬ ತಂದ ನೆನಪು...
    September 6, 2008 - 9:59pm
  • uniquesupri
    ಉ: ಜೀವ ಕಾಯುವುದೇತಕೆ?
    September 6, 2008 - 9:30pm
  • cmariejoseph
    ಉ: ಹಬ್ಬ ತಂದ ನೆನಪು...
    September 6, 2008 - 9:16pm
  • cmariejoseph
    ಉ: ಚಂದಿರನ ನೋಡಿದವ
    September 6, 2008 - 9:01pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 150 ಅತಿಥಿಗಳು ಆನ್ಲೈನ್ ಇರುವರು.


ವಯಸ್ಸಾಗುತ್ತ ಹೋದಂತೆ ಈ ಮೂರು ಘಟನೆಗಳು ಜರುಗುತ್ತವೆ. ಮೊದಲನೆಯದಾಗಿ ನಿಮ್ಮ ಸ್ಮರಣ ಶಕ್ತಿ ಹೋಗುತ್ತದೆ, ಮತ್ತು .... ಕ್ಷಮಿಸಿ ಇನ್ನೂ ಎರಡು ನೆನಪಾಗ್ತಾ ಇಲ್ಲ...

— ಸರ್ ನಾರ್ಮನ್ ವಿಸ್ಡಮ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator