ಸನ್ಮಾನ ಮತ್ತು ಪುರಸ್ಕಾರಗಳು ನೀರ್ಗುಳ್ಳೆಯಂತೆ.
ಸಂಪದ ಆರ್ಕೈವಿನಿಂದ
ಲೇಖಕರು
ಪೂರ್ಣ ಹೆಸರು
ಪ್ರವೀಣ್ ಮಾಯಾಕರ್
ಪರಿಚಯ
ನಾನು ಒಬ್ಬ ಕನ್ನಡ ಅಭಿಮಾನಿ ಹಾಗು ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಗೌರವ ಉಳ್ಳವನು. ನಾನು ಕನ್ನಡಕ್ಕಾಗಿ ನನ್ನ ಅಳಿಲು ಸೇವೆ ಮಾಡಬಯಸುವೆ.
ನನ್ನ ವೆಬ್ ಲಿಂಕ್, ಮಾಯಾಜಾಲಕ್ಕೆ ಸ್ವಾಗತ
www.mayajaala.com
ಮುಂಬೈ - ಹೀನ ಕೃತ್ಯ
ಕೆಲವು ತಿಂಗಳ ಹಿಂದೆಯಷ್ಟೆ ಈ ಮಹಾನಗರಿಯ ಪ್ರವಾಸ ಮಾಡಿದ್ದೆ. ಇಂದು ಅದೇ ನಗರಿಯು ದುಷ್ಖತ್ಯದ ತಾಣವಾಗಿರುವುದು ನಂಬಲಸಾಧ್ಯವಾಗಿದೆ.
ನೂರಾರು ಸಾವು, ನೂರಾರು ಗಾಯಾಳು- ಅಮಾಯಕರು, ಪೊಲೀಸರು, ಸೈನಿಕರು. ಏನೀ ದುಷ್ಟರ ಅಟ್ಟಹಾಸ? ಈ ರೀತಿಯ ಮತಿಗೆಟ್ಟ ಜನರ ದುಷ್ಕೄತ್ಯ, ಜಾತಿಯ ಹೆಸರಿನಲ್ಲಿ ಸುಳ್ಳು ಭ್ರಮೆಯ ಹುಚ್ಚುತನ? ಹುಚ್ಚು ಬಹಳ ಸಣ್ಣ ಪದವೆನಿಸುತ್ತದೆ.
ಇವರಿಗೆ ಕ್ಷಮೆಯಿಲ್ಲ, ದಯೆಯಿಲ್ಲ, ಇಂಥ ಹೇಡಿತನದ ರಾಕ್ಷಸೀಯ ಕೃತ್ಯಕ್ಕೆ ನಾವು ತಲೆ ಬಾಗಿಸುವುದಿಲ್ಲ. ನಮಗೆ ತಿಳಿದ ರಾಕ್ಷಸರೂ ಕೂಡ ಕೊಂಚ ಮಾನವೀಯತೆಯಿಂದ ಮೆರೆದಿದ್ದಾರೆ.
ನಮ್ಮ ಜನ ನೆಮ್ಮದಿಗೆಟ್ಟಿದ್ದಾರೆ, ನೋವನುಭವಿಸಿದ್ದಾರೆ, ಸಂಕಟವಾಗುತ್ತದೆ, ನರಕ ಕಂಡಂತೆನಿಸುತ್ತದೆ. ಅವರೆಲ್ಲರಿಗೂ ದೇವರು ಈ ನೋವನನುಭವಿಸುವ ಶಕ್ತಿಕೊಡಲೆಂದು ಬೇಡುತ್ತೇನೆ. ಶಾಂತಿಯಿರಲಿ.
ನಮ್ಮ ಸೈನ್ಯ, ಮತ್ತು ನಮ್ಮ ಈ ಯುದ್ಧದ ನಾಯಕರ ಸತತ ಪ್ರಯತ್ನ ಬಹಳ ಪ್ರಶಂಸನೀಯ. ನಾವು ಅವರಿಗೆ ಸೋಲಲಿಲ್ಲ. ಗೆಲುವು ನಮ್ಮದಾದರು ಗಾಯಗೊಂಡಿದ್ದಾರೆ ನಮ್ಮ ಜನ.
ನಮ್ಮ ತಾಯಿ ಇಂದು ಗಾಯಗೊಂಡಿದ್ದಾಳೆ, ನೊಂದಿದ್ದಾಳೆ. ನಾವು ನೊಂದಿರುವೆವು. ನಮ್ಮಲ್ಲಿ ಕೆಲವು ಕೊರತೆಗಳಿವೆ, ನಾವು ನಮ್ಮ ಪ್ರಯತ್ನ ಮಾಡಿದ್ದೇವೆ. ನಮ್ಮ ಇಂದಿನ ಧೈರ್ಯ , ಸಾಹಸ ಮುಂದಿನ ಶಾಂತಿಯ ದಿನಗಳಾಗಬೇಕು. ಬಹಳಷ್ಟು ಬೆಳವಣಿಗೆಗಳು ಬೇಕಿವೆ. ಆದಷ್ಟು ಬೇಗ ಆಗಲಿಯೆಂದು ಆಶಿಸೋಣ.
ಜೈ ಹಿಂದ್
ಪ್ರವೀಣ್ ಮಾಯಾಕರ್.
--------------------------
www.mayajaala.com
- mayakar's blog
- Login or register to post comments
- 356 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS: