ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › msprasad ರವರ ಬ್ಲಾಗ್

ಸೋಮಾರಿ ಕಟ್ಟೆ

ಸುಮ್ನೆ, ಬೇಕಾದ್ದು, ಬೇಡದ್ದು ಮಾತಾಡೋಕೆ ಒಂದು ಸೋಮಾರಿ ಕಟ್ಟೆ....

ಕಿರಿಕ್ಕು ಟ್ರಾಫಿಕ್ಕು

March 18, 2008 - 6:10pm — msprasad

ಬೆಂಗಳೂರು ಮಹಾನಗರ...ದಿನಾಲು ಬೆಳಿಗ್ಗೆ ಕೆಲ್ಸಕ್ಕೆ ಹೊರಡೋದೇ ತಲೆನೋವು.

2 ವ್ಹೀಲರ್ ಆಗ್ಲಿ, 4 ವ್ಹೀಲರ್ ಆಗ್ಲಿ, ತಲೆಬಿಸಿ..ನಾನು ನನ್ನ ಬೈಕಿನಲ್ಲಿ ಆರ್.ಟಿ. ನಗರದಿಂದ 12 ಕಿಮೀ ದೂರದಲ್ಲಿರೋ ನಮ್ಮ ಆಫೀಸಿಗೆ ದಿನಾಲೂ ಓಡಾಡ್ತೀನಿ. ಡೈಲಿ ಒಂದಲ್ಲಾ ಒಂದು ಕಿರಿಕ್ಕು ಇದ್ದದ್ದೇ. ಆಟೋನವರದ್ದು ಆಗ್ಲಿ, ಬಸ್ಸಿನವರದ್ದಾಗ್ಲಿ, ಪಾದಚಾರಿಗಳದ್ದಾಗ್ಲಿ, ಅಥವಾ, ನಮ್ಮ ಪಕ್ಕದಲ್ಲೇ ಜುಂಯ್ ಅಂಥಾ ಪಾಸ್ ಆಗೋ ದ್ವಿಚಕ್ರಿಗಳದ್ದಾಗ್ಲಿ.

ಇವತ್ತು (17-3-08 ಸೋಮವಾರ) ಆಫೀಸಿಗೆ ಬರಬೇಕಾದ್ರೆ, ಇನ್ಫೆಂಟ್ರಿ ರಸ್ತೆಯಲ್ಲಿ, ಒಂದು ಬಿಎಂಟೀಸಿ ಬಸ್ಸಿನ ಹಿಂದೆ ಬರ್ತಾ ಇದೀನಿ, ಆ ಮನುಷ್ಯನೋ, ಹಾವಿನ ಥರಾ ಜಿಗ್-ಜಾಗ್ ಓಡುಸ್ತಾ ಇದಾನೆ.. ಬಲಗಡೆಯಿಂದ ಟೇಕ್ ಓವರ್ ಮಾಡೋಣಾ ಅಂತ ಬಂದ್ರೆ, ಆ ಕಡೇನೇ ಬರ್ತಾನೆ, ಎಡಗಡೆಯಿಂದ ಮುನ್ನುಗ್ಗೋಣ ಅಂದ್ರೆ, ಪುನಃ ಆ ಕಡೆ ಬರ್ತಾನೆ. ನೋಡೋ ತನಕ ನೋಡಿ, ಸಡನ್ನಾಗಿ ಮುಂದೆ ಬಂದು, ಗಾಡಿ ನಿಲ್ಸಿ, ಅವನನ್ನೂ ನಿಲ್ಸೋ ಹಾಗೆ ಮಾಡ್ದೆ..
ತಕ್ಷಣ ಶುರು ಹಚ್ಕೊಂಡೆ, "ಬೋ ಮಗ್ನೆ, ರಸ್ತೆ ಏನ್ ನಿಮಪ್ಪಂದಾ ? ಅವಾಗ್ಲಿಂದಾ ನೋಡ್ತಾ ಇದೀನಿ, ಒಳ್ಳೇ ಹಾವಿನ್ ಥರಾ ಓಡುಸ್ತಾ ಇದ್ಯಲ್ಲೋ ಬೇವರ್ಸಿ... ಏನ್ ನಿನ್ ಬಸ್ಸು ರಸ್ತೇಲಿ ಹೋಗ್ಬೇಕಾದ್ರೆ, ಯಾರೂ ಓವರ್ಟೇಕ್ ಮಾಡ್ಬಾರ್ದಾ ??".
ಅವ್ನೂ ಕೂಡಾ "ಬೋ ಮಗ್ನೆ, ಏನೋ ನಿಂದು? ಜಾಸ್ತಿ ಮಾತಾಡ್ಬೇಡ, ಸರಿ ಇರಲ್ಲಾ..ಮುಂದೆ ಜಾಗ ಇರೋ ಹಾಗೆ ಓಡುಸ್ತೀನಿ, ನೀನ್ ಯಾರೋ ಕೇಳಕ್ಕೆ" ಅಂದವ್ನೇ, ಬಸ್ಸನ್ನ ಗೇರ್ ಗೆ ಹಾಕಿ, ಆಕ್ಸಿಲರೇಟರ್ ಒತ್ತಿ, ನಂಗೆ ಢಿಕ್ಕಿ ಹೋಡೆಯೋ ಚಮಕ್ ಕೊಡೋಥರಾ ಮಾಡಿದ.. ಅದಕ್ಕೆ ನಾನು, "ತಿ* ಮುಚ್ಕೊಂಡು ಹೋಗೋ ಬೇವರ್ಸಿ, ಗಾಡಿ ಓಡಿಸೋಕ್ಕೆ ಬಂದ್ರೆ, ಓಡ್ಸು, ಇಲ್ಲಾಂದ್ರೆ ತಿ* ಅದುಮ್ಕೋಂಡು ಮನೆಲಿ ಬಿದ್ದಿರು, ಈ ಚಮಕ್ ಎಲ್ಲಾ, ಆ ನಾರ್ಥಿಗಳ ಹತ್ರ ಇಟ್ಕೋ, ಮಗ್ನೆ ನೆಟ್ಟಗೆ ಇರಲ್ಲಾ ನಿನಯ್ಯನ್, ಮುಖ ಮೂತಿ ನೋಡ್ದೆ ಬೀಳ್ತಾವೆ...."ಅಂತ ಆವಾಜ್ ಹಾಕಿ, ಜಾಸ್ತಿ ಜಗಳ ಮಾಡಿ ಕೊಂಡ್ರೆ,ಇಡೀ ದಿನ ಖರಾಬ್ ಆಗಿ ಇರತ್ತೆ ಅನ್ಕೊಂಡು, ಹೊರ್ಟೆ..(ಇನ್ನೂ ಏನೇನೋ ಭಯಂಕರ ಮಾತುಗಳು ನಡೆದ್ವು, ಅದನ್ನೆಲ್ಲಾ ಇಲ್ಲಿ ಹಾಕಕ್ಕೆ ಆಗಲ್ಲ)

ಇದೇನು ತನ್ನ ಶೌರ್ಯದ ಬಗ್ಗೆ, ಅಥವಾ ನನ್ನ ಅತುತ್ತಮ ಬೈಗುಳ ವೊಕ್ಯಾಬುಲರಿ ಬಗ್ಗೆ ಪುಂಗ್ತಾ ಇದಾನೆ ಅನ್ಕೋಬೇಡಿ. ನಾನೊಬ್ನೇ ಅಲ್ಲಾ ಕಣ್ರೀ, ಇದು ಸಾಮಾನ್ಯವಾಗಿ ಎಲ್ರೂ ದಿನಾಗ್ಲೂ ನೋಡೋದು, ಅನುಭವಿಸೋದು ಅಷ್ಟೇನೇ. ಯಾಕೆ ? ನೀವು ಖರಾಬಾಗಿ ಟ್ರಾಫಿಕ್ಕಲ್ಲಿ ಯಾರ ಜೊತೇನೂ ಜಗಳಾ ಕಾದಿಲ್ವಾ ?? ದಿನಾ ಬೆಳಗಾದ್ರೂ ಇದೇ ಹಣೇಬರಹ...
ಯಾಕೆ ಹಿಂಗೆ ಅಂತ ಕೇಳಿ ನೋಡಿ... ಏನು ಉತ್ತರ ಸಿಗುತ್ತೆ ಗೊತ್ತಾ ? "ಅಯ್ಯೋ, ಟೆನ್ಶನ್ನು ಸ್ವಾಮಿ", "ಸರಿಯಾಗಿ ಮಾನಿಟರ್ ಮಾಡೋಕ್ಕೆ ಪೊಲೀಸರು ಇಲ್ಲಾ", "ಆಫೀಸಿಗೆ ಟೈಂ ಆಗುತ್ತೆ, ಅದಕ್ಕೆ".

ಅಲ್ಲ ಕಣ್ರೀ, ಎಲ್ಲಾನೂ ನೋಡ್ಕೊಳಕ್ಕೆ ಪೊಲೀಸ್ರೇ ಆಗ್ಬೇಕು ಅಂದ್ರೆ, ನಮ್ಮದು ಏನು ? ದಿನಾಗ್ಲೂ ಹೇಳ್ತಾರೆ, "ಬೆಂಗಳೂರು ಮಹಾನಗರದ ಟ್ರಾಫಿಕ್ ಸಮಸ್ಯೆ ನಿವಾರಿಸಲು ಅಲ್ಲಿ ಅದನ್ನು ಇಷ್ಟು ಕೋಟಿ ರೂ ಖರ್ಚಿನಲ್ಲಿ ಅಳವಡಿಸಲಾಗುತ್ತಿದೆ, ಇನ್ನಷ್ಟು ಸಿಬ್ಬಂದಿಯನ್ನು ನೇಮಿಸಲಾಗುತ್ತಿದೆ". ನಿಜವಾದ ಸಮಸ್ಯೆ ಬಗೆಹರಿಯೋದು ಜನರಲ್ಲಿ ಜಾಗೃತಿ ಮೂಡಿಸಿದಾಗ.
ಎಲ್ಲಾ ಬರೀ ರೂಲ್ಸು, ರೂಲ್ಸು ಅಂತ ಬೊಂಬ್ಡಿ ಹಾಕಿ, ಅದನ್ನ ಪಾಲಿಸೋರೇ ಇಲ್ದೆ ಇದ್ರೆ ಏನು ಬಂತು ? ಸರ್ಕಾರ ಎಷ್ಟೇ ಕೋಟಿ ಖರ್ಚು ಮಾಡಿದ್ರೂ, ಎಷ್ಟೆ ಸಿಬ್ಬಂದಿ ನೇಮಿಸಿದ್ರೂ ಕೂಡಾ ಅದು "ಹೊಳೇಲಿ ಹುಣಿಸೇಹಣ್ಣು ಕಿವುಚಿದ ಹಾಗೆ".

ಇದರ ಒಂದು ಲೈವ್ ಉದಾಹರಣೆ ಅಂದ್ರೆ, ಟ್ರಾಫಿಕ್ಕನ್ನು ಮಾನಿಟರ್ ಮಾಡಕ್ಕೆ ಇನ್ಫೆಂಟ್ರಿ ರಸ್ತೆಯ, ಕಾಫಿ ಬೋರ್ಡ್ ಪೊಲೀಸ್ ಕಮಿಷನರ್ ಆಫೀಸ್ ಜಂಕ್ಷನ್ನಲ್ಲಿ CC TV ಕ್ಯಾಮೆರಾಗಳನ್ನು ಅಳವಡಿಸಲಾಯಿತು. ಇವತ್ತಿನವರೆಗೂ ಅವು ಕೆಲಸ ಮಾಡ್ತಾ ಇದ್ಯೋ ಇಲ್ವೋ ಅಂತಾ ಕೂಡಾ ಗೊತ್ತಿಲ್ಲ.. ಹಾಗೇ, ಮಾನಿಟರ್ ಎಲ್ಲಿ, ಹೇಗೆ, ಯಾರು ಮಾಡ್ತಾರೆ ಅಂತಾ ಕೂಡಾ ಗೊತ್ತಿಲ್ಲ. ಆ ತೆರನಾದ ಮಾಡ್ರನ್ ಪರಿಕರಗಳ ಪರಿಚಯ, ಕಾರ್ಯವಿಧಾನ ನಮ್ಮ ಪೊಲೀಸ್ ಪಡೆಗೆ ಇದೀಯಾ ಅಂತ ಕೂಡಾ ಡೌಟ್ ಇದೆ.

ಅವಾಗ್ಲೇ ಹೇಳಿದ ಹಾಗೆ, ಈ ಸಮಸ್ಯೆ ಬಗೆಹರಿಯೋದು ಸ್ವಲ್ಪ (ಜಾಸ್ತಿ ಸ್ವಲ್ಪ ) ಡೌಟೇ, ಆದ್ರೂ ಕೂಡಾ ಸಮಸ್ಯೆಯನ್ನ ಕಮ್ಮಿ ಮಾಡಬಹುದು. ಜನರಲ್ಲಿ ಜಾಗೃತಿ ಮುಖ್ಯ. ಈ ನಮ್ಮ ತಲೆಮಾರಲ್ಲಿ ಆಗೋದು ಭಯಂಕರ ಅನುಮಾನ ಇದೆ. ಆದ್ರೆ, ಕಡೇ ಪಕ್ಷ ನಾವು ಟ್ರಾಫಿಕ್ನಲ್ಲಿ ಪಟ್ಟ ಪಾಡು ನಮ್ಮ ಮುಂದಿನ ಪೀಳಿಗೆ ಪಡದೇ ಇರಬೇಕಾದ್ರೆ, ಮಕ್ಕಳಲ್ಲಿ ಈ ಜಾಗೃತಿ ಮೂಡಿಸಬೇಕು.

ಒಬ್ಬ ತಂದೆ, ತನ್ನ ಮಗುವನ್ನು ಗಾಡಿಯಲ್ಲಿ ಸ್ಕೂಲಿಗೆ ಕರ್ಕೊಂಡು ಹೋಗಬೇಕಾದ್ರೆ, ಟ್ರಾಫಿಕ್ ಜಾಮ್ ಅಂತಾ, ಫುಟ್ಪಾತಿನ ಮೇಲೆ ಹೋಗೋದು, ಸಿಗ್ನಲ್ ಜಂಪ್ ಮಾಡೋದು, ರಾಂಗ್ ಸೈಡಿನಲ್ಲಿ ನುಗ್ಗೋದು, ಎಡಗಡೆಯಿಂದ ಓವರ್ ಟೇಕ್ ಮಾಡೋದು, ಸುಮ್ನೆ ಎಡಗೈ ಹೆಬ್ಬೆರಳು ಗಟ್ಟಿ ಇದೆ ಅಂತ ಹಾರನ್ ಹೋಡೀತಾ ಇದ್ರೆ, ಆ ತಂದೆಯ ಜೊತೆ ಇರೋ ಮಗೂಗೆ ಏನ್ರೀ ಟ್ರಾಫಿಕ್ ಸೆನ್ಸ್ ಬರುತ್ತೆ ? ಅದೂ ಕೂಡಾ, "ಹೆಂಗಾದರೂ ಹೋದು, ಯಾವುದರ ಮೇಲಾದ್ರೂ ಹೋಗು.. ಒಟ್ಟಿನಲ್ಲಿ ನೀನು ಗಾಡಿ ಓಡುಸ್ಕೊಂಡ್ ಹೋಗು" ಅನ್ನೋ ಬುದ್ಧಿ ಕಲಿಯುತ್ತೆ. ಚಿಕ್ಕ ವಯಸ್ಸಿನಲ್ಲೇ ಈ ಥರ ಆದ್ರೆ, ದೇವರಾಣೇಗ್ಲೂ ಮುಂದೆ ಅದನ್ನು ತಿದ್ದೋಕ್ಕೆ ಆಗಲ್ಲ.
ಮಕ್ಕಳಿಂದ ಈ awareness ಶುರು ಮಾಡಿದರೆ, ಗ್ಯಾರಂಟಿ ಏನಾದ್ರೂ ಛೇಂಜ್ ಕಾಣಬಹುದು.

ದಯವಿಟ್ಟು, ಆದಷ್ಟೂ ಟ್ರಾಫಿಕ್ ನಿಯಮಗಳನ್ನು ಪಾಲಿಸಿ. ನಿಮ್ಮ ಮನೆ ಮಕ್ಕಳಿಗೆ ಟ್ರಾಫಿಕ್ ಪಾಠ, ರೂಲ್ಸು, ಕಾಮನ್ ಸೆನ್ಸು ಹೇಳಿಕೊಡಿ. ಇದು ನನ್ನ ಒಂದು ವಿನಮ್ರ ರಿಕ್ವೆಸ್ಟ್.
-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

ನನ್ನ ಬ್ಲಾಗಿಗೊಮ್ಮೆ ಭೇಟಿ ಕೊಡಿ : http://somari-katte.blogspot.com

~.~
  • msprasad ರವರ ಬ್ಲಾಗ್
  • Login or register to post comments
  • 182 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 18, 2008 - 11:55pm — bachi

ಉ: ಕಿರಿಕ್ಕು ಟ್ರಾಫಿಕ್ಕು

bachi's picture

ಶಂಕರ್ ರವರೆ, ನಿಮ್ಮ ಪಾದದ ಜೆರಾಕ್ಸ್ ಇದ್ರೆ ಸಲ್ಪ ಕೊಡ್ತೀರ!......ನಮ್ಮ ದೇಶದ ಸಮಸ್ಯೆಗಳಿಗೆಲ್ಲಾ ಪರಿಹಾರ ಹೇಳ್ಬಿಟ್ರಲ್ಲಾ ಸಾರ್! ಲಂಚ, ರಾಜಕಾರಣದಲ್ಲಿರೋ ಬ್ರಷ್ಟಾಚಾರ, ಜನಸಂಖ್ಯಾ ಸ್ಪೋಟ, ಇತ್ಯಾದಿ ಸಮಸ್ಯಗಳಿಗೆಲ್ಲಾ ಒಂದೇ ಪರಿಹಾರ - ಶಿಕ್ಷಣ, ಜನ ಜಾಗೃತಿ, awareness! ಬೇರೆಯವರಲ್ಲಿ ತಪುಗಳನ್ನ ಹುಡುಕದೆ, ನಮ್ಮನ್ನು ನಾವು ತಿದ್ದಿಕೋ ಬೇಕು.

ಬಾchi - www.sumneblog.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕಿರಿಕ್ಕು ಟ್ರಾಫಿಕ್ಕು
  • ಕುಡಿದಾಗ ಕಾಮನ್ ಆಗಿ ಹೊಡಿಯೋ ಡೈಲಾಗುಗಳು
  • ಕನ್ನಡ ಮಾತಾಡಿ, ಮಜಾ ಮಾಡಿ
  • ಅಕ್ಸಿಡೆಂಟು ನೋಡಿ
  • ಮುಂದೇನು ...?
Syndicate content

ಲೇಖಕರು

msprasad's picture

ಪೂರ್ಣ ಹೆಸರು
ಶಂಕರ ಪ್ರಸಾದ

ಪರಿಚಯ

ಮೂಲತಃ ಮೈಸೂರು, ಓದಿದ್ದು ಮೈಸೂರು ಹಾಗು ಹೈದ್ರಬಾದು. ಹೊಟ್ಟೆಪಾಡಿಗಾಗಿ ಬೆಂಗಳೂರಿನಲ್ಲಿ ಒಂದು ಫ್ರೆಂಚ್ ಏರೋಸ್ಪೇಸ್ ಕಂಪೆನಿಯಲ್ಲಿ ಡಿಜೈನ್ ಎಂಜಿನಿಯರ್ ಆಗಿ ಕಾಯಕ.
ಮನಸ್ಸಿನ ತುಡಿತ, ಮಿಡಿತ, ಕಡಿತ ತೀರಿಸಿಕೊಳ್ಳೋಕ್ಕೆ ಬ್ಲಾಗಿಂಗ್ ಮಾಡ್ತೀನಿ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ನರಸಿಂಹ ತೀರ್ಥ, ಮುಳಬಾಗಿಲು

(ಫೋಟೋ: ಹರಿ ಪ್ರಸಾದ್ ನಾಡಿಗ್)

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಹಿಂದೂ ಸಂಸ್ಕ್ೃತಿಯಲ್ಲಿ ಮಣ್ಣಿಗಿರುವ ಮಹತ್ವ
  • ಏನಿದೇನಿದು
  • ಎಲ್ಲೇ ಹೋಗು ಹಿಂಬಾಲಿಸುವೆ...................,
  • ಲಿನಕ್ಸಾಯಣ - ೧೯ - EvDO ಲಿನಕ್ಸ್ ನಲ್ಲಿ?
  • ನಾನು ನಿಜವಾಗಿಯು ಹುಚ್ಚಾನ?
  • ಲಿನಕ್ಸಾಯಣ - ೧೮ - ನೆಟ್ವರ್ಕಿಂಗ್ ಭಾಗ -೨ - BSNL BroadBand ಹ್ಯಾಗೆ ಉಪಯೋಗಿಸೋದು?
  • ಹಿಂದಿ ದಿವಸ : ಒಕ್ಕೂಟ ವ್ಯವಸ್ಥೆಗೊಂದು ಕಳಂಕ
  • ಓದಿದ್ದು ಕೇಳಿದ್ದು ನೋಡಿದ್ದು-12
  • ನೀನು ನಾನು ಜೋಡಿ
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • sudhimail
    ಉ: ಏನಿದೇನಿದು?
    September 8, 2008 - 10:12pm
  • hamsanandi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 9:41pm
  • kalpana
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:37pm
  • hpn
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 9:35pm
  • smurthygr
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 9:32pm
  • hamsanandi
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 9:23pm
  • ಶ್ರೀನಿಧಿ
    ಉ: ಬಾಳ್, ಬಾೞ್
    September 8, 2008 - 8:47pm
  • ASHOKKUMAR
    ಉ: ಏನಿದೇನಿದು
    September 8, 2008 - 8:18pm
  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 8:12pm
  • ASHOKKUMAR
    ಉ: ವಾರಾಂತ್ಯ ಹೇಗಿತ್ತು?
    September 8, 2008 - 8:10pm
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 129 ಅತಿಥಿಗಳು ಆನ್ಲೈನ್ ಇರುವರು.


ವನ್ಯಮೃಗಗಳ ನಡುವೆ ಗೋವು ಬಂದೇನಿಹುದು? ।
ಪಣ್ಯವೀಧಿಯಲಿ ತಾತ್ವಿಕನಿಗೇನಿಹದು? ।।
ಅನ್ಯಾಯದುನ್ಮತ್ತ ಕೋಲಾಹಲದ ಲೋಕ ।
ಪುಣ್ಯವನು ಚಿಂತಿಪುದೆ? -- ಮಂಕುತಿಮ್ಮ ।।

— ಡಿ.ವಿ.ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator