ಹಂದಿ ಚಂದನದ ಸು
ಗಂಧವನು ಬಲ್ಲುದೆ?
ಒಂದನು ತಿಳಿಯಲರಿಯದ ಗುರುವಿಂಗೆ |
ನಿಂದೆಯೇ ಬಹುದು ಸರ್ವಜ್ಞ |

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ನಾರಾಯಣ ಸ್ಮರಣೆ ಸಾಕು. ಅಲ್ಲಮ್ಮನ ಸ್ಮರಣೆ ಮಾಡುವ. ಸ್ತುತಿ ನಿ೦ದೆಗೆ ಕಿವುಡನಾಗಿರ ಬೇಕು.

ನಾರಾಯಣ ಸ್ಮರಣೆ ಸಾಕು. ಅಲ್ಲಮ್ಮನ ಸ್ಮರಣೆ ಮಾಡುವ.
ಯಾರೋ ಆರನ್ನೋ ನಿ೦ದಿಸಿದರೆ ನಾವೇಕೆ ಅಷ್ಟೋ೦ದು ಮನಸ್ಸು ಕೊಡಬೇಕು ??
********************************
ಭೂಮಿ ನಿನ್ನದಲ್ಲ್ಲ , ಹೇಮ ನಿನ್ನದಲ್ಲ ಕಾಮಿನಿ ನಿನ್ನವಳಲ್ಲ
ಅವು ಜಗಕ್ಕಿಕ್ಕಿದ ವಿಧಿ
ನಿನ್ನ ಒಡವೆ ಎ೦ಬುದು ಜ್ಞಾನರತ್ನ.
ಅ೦ತಪ್ಪ ದಿವ್ಯ ರತ್ನವ ಕೆಡಗುಡದೆ
ಆ ರತ್ನವ ನೀನು ಅಲ೦ಕರಿಸಿದೆಯಾದಡೆ
ನಮ್ಮ ಗುಹೇಶ್ವರಲಿ೦ಗದಲ್ಲಿ
ನಿನ್ನಿ೦ದ ಬಿಟ್ಟು ಸಿರಿವ೦ತರಿಲ್ಲ ಕಾಣಾ ಎಲೆ ಮನವೇ .
********************************
ಪದವನರ್ಪಿಸಬಹುದಲ್ಲದೆ, ಪದಾರ್ಥವನರ್ಪಿಸಬಾರದು.
ಓಗರವನರ್ಪಿಸಬಹುದಲ್ಲದೆ ಪ್ರಸಾದ ವನರ್ಪಿಸಬಾರದು
ಗುಹೇಶ್ವರಾ ನಿಮ್ಮ ಶರಣರು ಮು೦ದನರ್ಪಿಸುವರು.
********************************
ಹೊನ್ನು ಮಾಯೆ ಎ೦ಬರು , ಹೊನ್ನು ಮಾಯೆಯಲ್ಲ.
ಹೆಣ್ಣು ಮಾಯೆ ಎ೦ಬರು , ಹೆಣ್ಣು ಮಾಯೆಯಲ್ಲ.
ಮಣ್ಣು ಮಾಯೆ ಎ೦ಬರು , ಮಣ್ಣು ಮಾಯೆಯಲ್ಲ.
ಮನದ ಮು೦ದಣ ಆಸೆಯ ಮಾಯೆ ಕಾಣಾ ಗುಹೇಶ್ವರ.
********************************

ಹರಿವ ನದಿಗೆ ಮೈಯೆಲ್ಲ ಕಾಲು
ಉರಿವ ಕಿಚ್ಚಿಗೆ ಮೈಯೆಲ್ಲ ನಾಲಗೆ
ಬೀಸುವ ಗಾಳಿಗೆ ಮೈಯೆಲ್ಲ ಮುಖ
ಗುಹೇಶ್ವರ ನಿಮ್ಮ ಶರಣ೦ಗೆ
ಸರ್ವಾ೦ಗವೆಲ್ಲ ಲಿ೦ಗ
********************************

ಸ್ತುತಿ ನಿ೦ದೆಗೆ ಕಿವುಡನಾಗಿರ ಬೇಕು.
ಪರಧನ ಪರಸತಿಯರಿಗೆ ಅ೦ಧಕನಾಗಿರಬೇಕು.
ವಾಕಿನಿ೦ ಪರಬ್ರಹ್ಮವ ನುಡಿವ ಕುತರ್ಕಿಗಳ ಎಡಿಯಲ್ಲಿ
ಮಾಗಿವ ಕೋಗಿಲೆಯ೦ತೆ ಮೂಗನಾಗಿರಬೇಕು.
'ಒ೦ದು' ಎ೦ದು ಅರಿದಲ್ಲಿ ಸ೦ದೇಹವಿಲ್ಲದಿರಬೇಕು
ಗುಹೇಶ್ವರ ಲಿ೦ಗದಲ್ಲಿ ತನ್ನ ತಾ ಮರೆದಿರಬೇಕು.

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಹರಿಬ್ರಹ್ಮರೆಂಬವರು | ಹರನಿಂದಲಾದವರು - ಸರ್ವಜ್ಞ!

mahesha's picture

"ಸರ್ವಜ್ಞನ ವಚನಗಳು ( ಹೆಸರೇ ಲಿಂಗಾತಿಶಯ ಪದ್ದತಿ )"

ಹರಿಬ್ರಹ್ಮರೆಂಬವರು | ಹರನಿಂದಲಾದವರು
ಅರಸಿಂಗೆ ಆಳು ಸರಿಯಹನೆ - ಪಶುಪತಿಗೆ
ಸರಿ ಯಾರ ಕಾಣೆ ಸರ್ವಜ್ಞ

ಹಿರಿಯ ಬೊಮ್ಮನು ಕೆಂಚ | ಹಿರಿಯ ಹರಿ ತಾ ಕರಿಕ
ಪುರಹರನು ಶುದ್ಧ ಧವಳಿತನು - ಇರೆ ಬೇರೆ
ಹರಗೆ ಸರಿಯಹರೀ ಸರ್ವಜ್ಞ

ಹರಿದ ತಲೆ ಬ್ರಹ್ಮಂಗೆ \ ಕುರೆಯ ತಲೆ ದಕ್ಷಂಗೆ
ನೆರೆ ಹತ್ತು ಜನನವಾ ಹರಿಗೆ - ಇವರುಗಳು
ಕರೆಗೊರಲಗಣೆಯೆ ಸರ್ವಜ್ಞ

ಹುಟ್ಟಿಸುವನಜನೆಂಬ | ಕಷ್ಟದ ನುಡಿ ಬೇಡ
ಹುಟ್ಟಿಸುವವ ತನ್ನ ಶಿರ ಹರೆಯೆ - ಮತ್ತೊಂದು
ಹುಟ್ಟಿಸಿಕೊಳನೇಕೆ ಸರ್ವಜ್ಞ

ಬ್ರಹ್ಮ ನಿರ್ಮಿಪನೆಂಬ | ದುರ್ಮತಿಯೆ ನೀಂ ಕೇಳು
ಬ್ರಹ್ಮನಾ ಸತಿಗೆ ಮೂಗಿಲ್ಲ - ವಾ ಮೂಗ
ನಿರ್ಮಿಸನೇಕೆ ಸರ್ವಜ್ಞ

ನರಹರಿಯ ಕೊಲುವಂದು | ಎರಳೆಯನೆಸುವಂದು
ಮರಳಿ ವರಗಳನು ಕೊಡುವಂದು - ಸ್ಮರಹರೆಗೆ
ಸರಿಯಾರ ಕಾಣೆ ಸರ್ವಜ್ಞ

ಷಡುದರುಶನಾದಿಗಳು | ಮೃಡ ಮಾಡಲಾದುವು
ಹೊಡವಡುತೆ ನಿಗಮವರಿಸುವವು - ಅಭವನ
ಗಡಣಕೇಕೆ ಯಾರು ಸರ್ವಜ್ಞ

ದೇಶಕ್ಕೆ ಸಜ್ಜನನು | ಹಾಸ್ಯಕ್ಕೆ ಹನುಮಂತ
ಕೇಶವ ಭಕ್ತರೊಳಗೆಲ್ಲ - ಮೂರು ಕ
ಣ್ಣೇಶನೇ ದೈವ ಸರ್ವಜ್ಞ

ಶೇಷನಿಂ ಬಲರಿಲ್ಲ | ಮೋಸದಿಂ ಕಳರೆಲ್ಲ
ನೇಸರೆಂ ಜಗಕೆ ಹಿತರಿಲ್ಲ - ದೇವ ತಾ
ಈಶನಿಂದಿಲ್ಲ ಸರ್ವಜ್ಞ

"ಹರ ಸರ್ವೋತ್ತಮ" :D
======================================

Re: ಹರಿಬ್ರಹ್ಮರೆಂಬವರು | ಹರನಿಂದಲಾದವರು - ಸರ್ವಜ್ಞ!

ವೈಭವ's picture

ಹೆಚ್ಚಿನ ವಚನಗಳಿಗೆ ಇಲ್ಲಿ ಎಡತಾಗಿ

 

ಸರ್ವಜ್ನನ ವಚನಗಳು

mahesha's picture

ಅಲ್ಲಿ ಎಡತಾಗಿದೆನು. ಆದರೆ ಸರ್ವಜ್ನನ ವಚನ ಸಿಗಲಿಲ್ಲ!!!
ಸರ್ವಜ್ನನ ವಚನಗಳು ಒಂದು ಗುಂಪು ಅರ್ಕುಟಲ್ಲಿದೆ.

ಸರ್ವಜ್ನನ ವಚನಗಳಗೆ ಒಂದು ಬಲೆತಾಣ ಮಾಡಲು ನನ್ನ ಗೆಳೆಯಲೊಬ್ಬರು ಒಬ್ಬರು ತೊಡಗಿದ್ದಾರೆ!!!

'ಎಡತು'ಇಗೆ ಕೊಂಡಿ ಕೊಡು, ವಯ್ಬವ!!

======================================

Re: ಸರ್ವಜ್ನನ ವಚನಗಳು

ASHOKKUMAR's picture

http://www.vicharama... ನಲ್ಲಿ ವಚನಗಳು ಅಕ್ಕಮಹಾದೇವಿ,ಬಸವಣ್ಣ,ಅಲ್ಲಮ ಮತ್ತು ಸರ್ವಜ್ಞನ ವಚನಗಳಿವೆಯಲ್ಲಾ?

Re: ಸರ್ವಜ್ನನ ವಚನಗಳು

mahesha's picture

ನೇರವಾದ ಕೊಂಡಿಯಿತ್ತರೆ ಒಳಿತು!
=====================================

Re: ಸರ್ವಜ್ನನ ವಚನಗಳು

ASHOKKUMAR's picture

Re: ಸರ್ವಜ್ನನ ವಚನಗಳು

mahesha's picture

ಅಶೋಕ ಕುಮಾರ..

ಅಲ್ಲಿ ಸರ್ವಜ್ನನ ವಚನಗಳನ್ನು ಆಟೊಂದು ಸರಿಯಾಗಿ ಓಜಿಸಿಲ್ಲ.

ಸರ್ವಜ್ನನ ವಚನಗಳನ್ನು ಮೂರು ಪದ್ದತಿಗಳನ್ನಾಗಿ ಹಂಚಿದ್ದಾರೆ.
೧) ಜಾತಿಸ್ಮರಣ ಪದ್ದತಿ - ಇಲ್ಲಿ ಸರ್ವಜ್ನನು ತನ್ನ ಮನೆತನ-ತಾಯಿ-ತಂದೆ-ಹೆಸರು-ಊರು ಮುಂತಾದವುಗಳನ್ನು ಹೇಳಿದ್ದಾರೆ.
೨) ಲಿಂಗಾತಿಶಯ ಪದ್ದತಿ - ಇಲ್ಲಿ ಲಿಂಗದ ಮೈಮೆ ಇದೆ.
೩) ಗುರುಕರುಣ ಪದ್ದತಿ - ಅಲ್ಲಿ ಗುರುವಿನ ಬಗ್ಗೆ ಇದೆ.

ಇರಲಿ!!! ನನ್ನಿ!!!

ಒರ್ಕುಟಲ್ಲಿ ಇರುವ ಈ ಗುಂಪನ್ನು ನೋಡಬಹುದು
======================================