ನಾರಾಯಣ ಸ್ಮರಣೆ ಸಾಕು. ಅಲ್ಲಮ್ಮನ ಸ್ಮರಣೆ ಮಾಡುವ. ಸ್ತುತಿ ನಿ೦ದೆಗೆ ಕಿವುಡನಾಗಿರ ಬೇಕು.
ನಾರಾಯಣ ಸ್ಮರಣೆ ಸಾಕು. ಅಲ್ಲಮ್ಮನ ಸ್ಮರಣೆ ಮಾಡುವ.
ಯಾರೋ ಆರನ್ನೋ ನಿ೦ದಿಸಿದರೆ ನಾವೇಕೆ ಅಷ್ಟೋ೦ದು ಮನಸ್ಸು ಕೊಡಬೇಕು ??
********************************
ಭೂಮಿ ನಿನ್ನದಲ್ಲ್ಲ , ಹೇಮ ನಿನ್ನದಲ್ಲ ಕಾಮಿನಿ ನಿನ್ನವಳಲ್ಲ
ಅವು ಜಗಕ್ಕಿಕ್ಕಿದ ವಿಧಿ
ನಿನ್ನ ಒಡವೆ ಎ೦ಬುದು ಜ್ಞಾನರತ್ನ.
ಅ೦ತಪ್ಪ ದಿವ್ಯ ರತ್ನವ ಕೆಡಗುಡದೆ
ಆ ರತ್ನವ ನೀನು ಅಲ೦ಕರಿಸಿದೆಯಾದಡೆ
ನಮ್ಮ ಗುಹೇಶ್ವರಲಿ೦ಗದಲ್ಲಿ
ನಿನ್ನಿ೦ದ ಬಿಟ್ಟು ಸಿರಿವ೦ತರಿಲ್ಲ ಕಾಣಾ ಎಲೆ ಮನವೇ .
********************************
ಪದವನರ್ಪಿಸಬಹುದಲ್ಲದೆ, ಪದಾರ್ಥವನರ್ಪಿಸಬಾರದು.
ಓಗರವನರ್ಪಿಸಬಹುದಲ್ಲದೆ ಪ್ರಸಾದ ವನರ್ಪಿಸಬಾರದು
ಗುಹೇಶ್ವರಾ ನಿಮ್ಮ ಶರಣರು ಮು೦ದನರ್ಪಿಸುವರು.
********************************
ಹೊನ್ನು ಮಾಯೆ ಎ೦ಬರು , ಹೊನ್ನು ಮಾಯೆಯಲ್ಲ.
ಹೆಣ್ಣು ಮಾಯೆ ಎ೦ಬರು , ಹೆಣ್ಣು ಮಾಯೆಯಲ್ಲ.
ಮಣ್ಣು ಮಾಯೆ ಎ೦ಬರು , ಮಣ್ಣು ಮಾಯೆಯಲ್ಲ.
ಮನದ ಮು೦ದಣ ಆಸೆಯ ಮಾಯೆ ಕಾಣಾ ಗುಹೇಶ್ವರ.
********************************
ಹರಿವ ನದಿಗೆ ಮೈಯೆಲ್ಲ ಕಾಲು
ಉರಿವ ಕಿಚ್ಚಿಗೆ ಮೈಯೆಲ್ಲ ನಾಲಗೆ
ಬೀಸುವ ಗಾಳಿಗೆ ಮೈಯೆಲ್ಲ ಮುಖ
ಗುಹೇಶ್ವರ ನಿಮ್ಮ ಶರಣ೦ಗೆ
ಸರ್ವಾ೦ಗವೆಲ್ಲ ಲಿ೦ಗ
********************************
ಸ್ತುತಿ ನಿ೦ದೆಗೆ ಕಿವುಡನಾಗಿರ ಬೇಕು.
ಪರಧನ ಪರಸತಿಯರಿಗೆ ಅ೦ಧಕನಾಗಿರಬೇಕು.
ವಾಕಿನಿ೦ ಪರಬ್ರಹ್ಮವ ನುಡಿವ ಕುತರ್ಕಿಗಳ ಎಡಿಯಲ್ಲಿ
ಮಾಗಿವ ಕೋಗಿಲೆಯ೦ತೆ ಮೂಗನಾಗಿರಬೇಕು.
'ಒ೦ದು' ಎ೦ದು ಅರಿದಲ್ಲಿ ಸ೦ದೇಹವಿಲ್ಲದಿರಬೇಕು
ಗುಹೇಶ್ವರ ಲಿ೦ಗದಲ್ಲಿ ತನ್ನ ತಾ ಮರೆದಿರಬೇಕು.
- muralihr's blog
- Login or register to post comments
- 1235 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಹರಿಬ್ರಹ್ಮರೆಂಬವರು | ಹರನಿಂದಲಾದವರು - ಸರ್ವಜ್ಞ!
"ಸರ್ವಜ್ಞನ ವಚನಗಳು ( ಹೆಸರೇ ಲಿಂಗಾತಿಶಯ ಪದ್ದತಿ )"
ಹರಿಬ್ರಹ್ಮರೆಂಬವರು | ಹರನಿಂದಲಾದವರು
ಅರಸಿಂಗೆ ಆಳು ಸರಿಯಹನೆ - ಪಶುಪತಿಗೆ
ಸರಿ ಯಾರ ಕಾಣೆ ಸರ್ವಜ್ಞ
ಹಿರಿಯ ಬೊಮ್ಮನು ಕೆಂಚ | ಹಿರಿಯ ಹರಿ ತಾ ಕರಿಕ
ಪುರಹರನು ಶುದ್ಧ ಧವಳಿತನು - ಇರೆ ಬೇರೆ
ಹರಗೆ ಸರಿಯಹರೀ ಸರ್ವಜ್ಞ
ಹರಿದ ತಲೆ ಬ್ರಹ್ಮಂಗೆ \ ಕುರೆಯ ತಲೆ ದಕ್ಷಂಗೆ
ನೆರೆ ಹತ್ತು ಜನನವಾ ಹರಿಗೆ - ಇವರುಗಳು
ಕರೆಗೊರಲಗಣೆಯೆ ಸರ್ವಜ್ಞ
ಹುಟ್ಟಿಸುವನಜನೆಂಬ | ಕಷ್ಟದ ನುಡಿ ಬೇಡ
ಹುಟ್ಟಿಸುವವ ತನ್ನ ಶಿರ ಹರೆಯೆ - ಮತ್ತೊಂದು
ಹುಟ್ಟಿಸಿಕೊಳನೇಕೆ ಸರ್ವಜ್ಞ
ಬ್ರಹ್ಮ ನಿರ್ಮಿಪನೆಂಬ | ದುರ್ಮತಿಯೆ ನೀಂ ಕೇಳು
ಬ್ರಹ್ಮನಾ ಸತಿಗೆ ಮೂಗಿಲ್ಲ - ವಾ ಮೂಗ
ನಿರ್ಮಿಸನೇಕೆ ಸರ್ವಜ್ಞ
ನರಹರಿಯ ಕೊಲುವಂದು | ಎರಳೆಯನೆಸುವಂದು
ಮರಳಿ ವರಗಳನು ಕೊಡುವಂದು - ಸ್ಮರಹರೆಗೆ
ಸರಿಯಾರ ಕಾಣೆ ಸರ್ವಜ್ಞ
ಷಡುದರುಶನಾದಿಗಳು | ಮೃಡ ಮಾಡಲಾದುವು
ಹೊಡವಡುತೆ ನಿಗಮವರಿಸುವವು - ಅಭವನ
ಗಡಣಕೇಕೆ ಯಾರು ಸರ್ವಜ್ಞ
ದೇಶಕ್ಕೆ ಸಜ್ಜನನು | ಹಾಸ್ಯಕ್ಕೆ ಹನುಮಂತ
ಕೇಶವ ಭಕ್ತರೊಳಗೆಲ್ಲ - ಮೂರು ಕ
ಣ್ಣೇಶನೇ ದೈವ ಸರ್ವಜ್ಞ
ಶೇಷನಿಂ ಬಲರಿಲ್ಲ | ಮೋಸದಿಂ ಕಳರೆಲ್ಲ
ನೇಸರೆಂ ಜಗಕೆ ಹಿತರಿಲ್ಲ - ದೇವ ತಾ
ಈಶನಿಂದಿಲ್ಲ ಸರ್ವಜ್ಞ
"ಹರ ಸರ್ವೋತ್ತಮ" :D
======================================
Re: ಹರಿಬ್ರಹ್ಮರೆಂಬವರು | ಹರನಿಂದಲಾದವರು - ಸರ್ವಜ್ಞ!
ಹೆಚ್ಚಿನ ವಚನಗಳಿಗೆ ಇಲ್ಲಿ ಎಡತಾಗಿ
ಸರ್ವಜ್ನನ ವಚನಗಳು
ಅಲ್ಲಿ ಎಡತಾಗಿದೆನು. ಆದರೆ ಸರ್ವಜ್ನನ ವಚನ ಸಿಗಲಿಲ್ಲ!!!
ಸರ್ವಜ್ನನ ವಚನಗಳು ಒಂದು ಗುಂಪು ಅರ್ಕುಟಲ್ಲಿದೆ.
ಸರ್ವಜ್ನನ ವಚನಗಳಗೆ ಒಂದು ಬಲೆತಾಣ ಮಾಡಲು ನನ್ನ ಗೆಳೆಯಲೊಬ್ಬರು ಒಬ್ಬರು ತೊಡಗಿದ್ದಾರೆ!!!
'ಎಡತು'ಇಗೆ ಕೊಂಡಿ ಕೊಡು, ವಯ್ಬವ!!
======================================
Re: ಸರ್ವಜ್ನನ ವಚನಗಳು
http://www.vicharama... ನಲ್ಲಿ ವಚನಗಳು ಅಕ್ಕಮಹಾದೇವಿ,ಬಸವಣ್ಣ,ಅಲ್ಲಮ ಮತ್ತು ಸರ್ವಜ್ಞನ ವಚನಗಳಿವೆಯಲ್ಲಾ?
Re: ಸರ್ವಜ್ನನ ವಚನಗಳು
ನೇರವಾದ ಕೊಂಡಿಯಿತ್ತರೆ ಒಳಿತು!
=====================================
Re: ಸರ್ವಜ್ನನ ವಚನಗಳು
ವಚನಗಳು
Re: ಸರ್ವಜ್ನನ ವಚನಗಳು
ಅಶೋಕ ಕುಮಾರ..
ಅಲ್ಲಿ ಸರ್ವಜ್ನನ ವಚನಗಳನ್ನು ಆಟೊಂದು ಸರಿಯಾಗಿ ಓಜಿಸಿಲ್ಲ.
ಸರ್ವಜ್ನನ ವಚನಗಳನ್ನು ಮೂರು ಪದ್ದತಿಗಳನ್ನಾಗಿ ಹಂಚಿದ್ದಾರೆ.
೧) ಜಾತಿಸ್ಮರಣ ಪದ್ದತಿ - ಇಲ್ಲಿ ಸರ್ವಜ್ನನು ತನ್ನ ಮನೆತನ-ತಾಯಿ-ತಂದೆ-ಹೆಸರು-ಊರು ಮುಂತಾದವುಗಳನ್ನು ಹೇಳಿದ್ದಾರೆ.
೨) ಲಿಂಗಾತಿಶಯ ಪದ್ದತಿ - ಇಲ್ಲಿ ಲಿಂಗದ ಮೈಮೆ ಇದೆ.
೩) ಗುರುಕರುಣ ಪದ್ದತಿ - ಅಲ್ಲಿ ಗುರುವಿನ ಬಗ್ಗೆ ಇದೆ.
ಇರಲಿ!!! ನನ್ನಿ!!!
ಒರ್ಕುಟಲ್ಲಿ ಇರುವ ಈ ಗುಂಪನ್ನು ನೋಡಬಹುದು
======================================