ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › naasomeswara ರವರ ಬ್ಲಾಗ್

ಪ್ರಕೃತಿ ಶಾಶ್ವತ!

December 11, 2007 - 11:02am — naasomeswara

ಶಾಶ್ವತ ಪ್ರಕೃತಿ

ಹುಡುಗ ಹುಡುಗಿಯರು ಹರಯಕ್ಕೆ ಬರುತ್ತಿರುವಂತೆಯೇ

ಮಾಡುತ್ತಾರಂತೆ ಮದುವೆ|

ಏಳು ದಿನಗಳ ಮದುವೆ ಅಗ್ನಿಯ ಝಳಕ್ಕೆ ಹೊಗೆಯ ಮಸಿಗೆ

ಇಬ್ಬರು ಮಾಗಲು ತಡವೆ?||

ಉತ್ತು ಬಿತ್ತು ನೀರ ಹನಿಸಿ ಬೆಳೆಸಿದ ಸೂರ್ಯಕಾಂತಿ ಗಿಡಗಳಿಗೆ

ಕುಡಗೋಲು ಬೀಳುವ ಹಾಗೆ|

ಮದುವೆ ಮುಗಿದ ಮೇಲೆ ಇಬ್ಬರನ್ನು ಒಂದು ರಾತ್ರಿ ದೂಡುತ್ತಾರೆ

ಕತ್ತಲು ತುಂಬಿದ ಕೋಣೆಗೆ||

ಅಂದು, ಹುಡುಗಿ ಬೆದರಿದ ಹರಿಣಿ ಮೂಲೆಯಲ್ಲಿದ್ದಳು

ಒಳಗೊಳಗೆ ನಡನಡುಗುತ್ತಾ!

ಬರುವುದು ಹುಲಿಯೋ ಕಿರುಬನೋ ಇಲ್ಲ ಸಾರಂಗವೋ

ಎಂದು ಒಬ್ಬಳೇ ಕಾಯುತ್ತಾ||

ಪುರುಷಮೃಗದ ಕಾಲಿಗೆ ಬಿದ್ದು, ಕೈಗೆ ಬಿಸಿ ಹಾಲನ್ನು

ಕೊಟ್ಟು ತಲೆಬಗ್ಗಿಸಿ ನಿಲ್ಲಬೇಕಿತ್ತು|

ಖಂಡವಿದೆಕೋ ಮಾಂಸವಿದೆಕೋ ಬಿಸಿರಕ್ತದ ಗುಂಡಿಗೆಯಿದೆಕೋ

ಕುತ್ತಿಗೆಯೊಡ್ಡಬೇಕಿತ್ತು||

ಏಳುಸುತ್ತಿನ ಕೋಟೆಯೋ ಆಫ್ರಿಕದ ಕಗ್ಗತ್ತಲ ಖಂಡವೋ

ಸಾಹಸಕ್ಕಿಳಿಯಲೇಬೇಕಿತ್ತು|

ಮೊದಲ ಬಾರಿಗೆ ನೇಗಿಲ ಹಿಡಿದು ಹೊಲವನುಳಲು ಹೊರಟ

ಅಳುಕು ಭೀತಿಯಿರುತ್ತಿತ್ತು||

ತೆರೆಗಳ ಸರಿಸಿ ಮನದ ಪೊರೆಗಳ ಕಳಚಿ ಹುಡುಕಾಟ ಬೆದಕಾಟ

ಮುದವನ್ನು ಕೊಡುತ್ತಿತ್ತು|

ಕಚ್ಚಾಟ ಕಿರುಚಾಟ ಪರಚಾಟ ಕರಡಿಯುಗುರ ಘಾತಕ್ಕೆ ಹಲಸು

ಬಿರಿದು ಅಂಟು ರೇಜಿಗೆಯಾಗುತ್ತಿತ್ತು||

ಇಂದು ಅಂತರ್ಜಾಲದಲ್ಲಿ ಜಾರಿ ಹೋಗುವಾಗ ಸಂಗಾತಿ ತೇಲಿ

ಬರಲು ಹೃದಯಗಳು ದಡಗುಟ್ಟುತ್ತವೆ|

ಮಾತೇ ಕಥೆಯಾಗಿ, ಕಥೆಯೇ ಬದುಕಾಗಿ ಬದಲಾಗುವ ಅದ್ಭುತವೆಂಬ

ಮಾಯೆಯ ಮುಸುಕು ಅಡರುತ್ತದೆ||

ಮುಖಾಬಿಲೆಯಲ್ಲಿ ಮೊಳಕೆಯೊಡೆದರೆ ಪ್ರೀತಿ, ಗಿಡವಾಗಿ ಮರವಾಗಿ

ಬೇರು ಬಿಳಲು ಬಿಡುತ್ತದೆ|

ಹೊರಒಳಗನ್ನು ನೋಡುವ ತಡಕುವ ಅರ್ಥಮಾಡಿಕೊಳ್ಳುವ ವ್ಯರ್ಥ

ಪ್ರಯತ್ನವೂ ನಡೆಯುತ್ತದೆ||

ತೇಲುವಾಗ ಹುಡುಗ ಹುಡುಗಿಯರೆಷ್ಟು ಕಳಿತಿದ್ದರು ಎಂಬುದು ಮುಖ್ಯ

 ತೇಲಿಹೋಗಬಹುದು, ಇಲ್ಲ|

ಹಿರಿಯರ ಸಮ್ಮುಖದಲ್ಲಿ ನೆಪಮಾತ್ರಕ್ಕೆ ಹಸೆಮಣೇಯೇರಿ ಮದುವೇ

ಶಾಸ್ತ್ರವೆಲ್ಲ ಮುಗಿದೇ ಹೋಗುವುದಲ್ಲ||

ಮೊದಲ ರಾತ್ರಿ ಹುಡುಗ ಹುಡುಗಿಯರಿಗೆ ಹೊಸ ಹೋಟಲಿಗೆ ಹೋಗುವ

ಸಂಭ್ರಮವು ತುಳುಕುತ್ತಿರುತ್ತದೆ|

ತಿಂಡಿ ಹೇಗಿರುವುದೋ, ರುಚಿಯಿರುವುದೋ, ಮಸಾಲೆ ಹದವಾಗಿರುತ್ತದೋ

ಎಂಬ ಕುತೂಹಲವಿಷ್ಟಿರುತ್ತದೆ||

ಹುಲಿಗಳಿಲ್ಲ, ಚಿರತೆಗಳಿಲ್ಲ, ಕಿರುಬಗಳ ಕಾಟವಿಲ್ಲ, ಹಾಲನೊಪ್ಪಿಸುವ

ಹರಕೆ ಪುಣ್ಯಕೋಟಿ ಬದುಕೇ ಇಲ್ಲ|

ಎಲ್ಲವೆಲ್ಲ ಲೆಕ್ಕ, ಸರಿಸಮ ಲೆಕ್ಕ! ಯಾರೂ ಹೆಚ್ಚಲ್ಲ ಯಾರೂ ಕೀಳಲ್ಲ

ಎಲ್ಲ ವೆಲ್ಲದರಲ್ಲಿ ಸರಿಸಮವೆಲ್ಲ||

ಅಂತರ್ಜಾಲದಲ್ಲಿ ತೇಲಿ ತೇಲಿ ಹೋಗುವಾಗಲೆಲ್ಲ ಕಗ್ಗತ್ತಲ ಖಂಡವೆಲ್ಲ

ದಟ್ಟ ಪರಿಚಯವಾಗಿರುತ್ತದೆಯಲ್ಲ|

ಮರುಭೂಮಿಯನ್ನು ಉತ್ತು ಓಯಸಿಸ್ಸು ಹರಸಿ ಸಿಹಿ ಸಿಹಿ ಖರ್ಜೂರವ

ಬೆಳೆಸಿದ ಅನುಭವವಿರುತ್ತದೆಯಲ್ಲ||

ಕೋಟೆಕೊತ್ತಲಗಳ ಕಾಲ ಮುಗಿದಿದೆ, ಜಗದ ತುಂಬಾ ಉಜ್ವಲ

ಸೂರ್ಯಕಿರಣದ ಬೆಳಕಿದೆ|

ಟ್ರಾಕ್ಟರ್ ಇರುವ ಕಾಲದಲ್ಲಿ ಉತ್ತ ನೆಲ ಎಳ್ಳೆಡೆ ಇರುವಾಗ

ನೆಲವೆಲ್ಲ ಫಲವತ್ತಾಗಿಯೇ ಇರುತ್ತದೆ||

ಬೇಕಿದ್ದಲ್ಲಿ ಭತ್ತದ ಪಯಿರನ್ನು ನೆಡಿ ಬೆಳೆಸಿ, ಬೇಡವಿದ್ದಲ್ಲಿ ನೆಲದ

ಗಂಧವ ಮನದಣಿಯುವವರಿಗೆ ಆಸ್ವಾದಿಸಿ|

ಕಳಪೆ ಬೀಜವ ಮಣ್ಣಲಿ ಹೊಸಕಿ, ಸ್ವದೇಶದ್ದೋ ವಿದೇಶದ್ಧೋ

ಉತ್ತಮ ತಳಿಯ ಬೀಜವ ಬಿತ್ತಿ ಬೆಳೆಯಿರಿ||

ಹಣದ ಥೈಲಿ ಝಣ ಝಣ ನೀನಾದ ಮಾಡುತ್ತಿರಲು ದಿನದಿನ

ಹೊಸನೆಲದ ಅನ್ವೇಷಣೆ ಅಸಹಜವಲ್ಲ|

ಜಗವು ಕುಗ್ರಾಮವಾಗಿರಲು ವಿಶಾಲ ಬಯಲು ನಮ್ಮದಾಗಿರಲು

ವಿಧ ವಿಧ ಗಿಡಮರ ಗಿಡಮರ ಬೆಳೆಸುವುದರಲ್ಲಿ ತಪ್ಪಿಲ್ಲ||

ಬೇಕೆನಿಸಿದಾಗ ನೆಲದ ಮೇಲಕ್ಕಿಳಿದರಾಯಿತು ಇಲ್ಲದಿರೆ

ಜಗವನ್ನೇ ಮನೆಯನ್ನಾಗಿಸಿ ತೇಲಿದರಾಯಿತು|

ಮುಕ್ತ ಎಲ್ಲ ಮುಕ್ತ ಎಲ್ಲರಿಗೂ ಮುಕ್ತ ಮದುವೆಯ ಚೌಕಟ್ಟೆಂಬುದು

ಬೇಡವೆಂದಲ್ಲಿ ಹೊರಬಂದರಾಯಿತು||

ನಾಗರಿಕತೆ ಎಣ್ಣುವುದು ಕೃತಕ! ಮಾನವ ಮಾಡಿಕೊಂಡ

ಒಪ್ಪಂದ ಎಷ್ಟು ದಿನವಿದ್ದೀತು ಹೇಳು?

ಪ್ರಕೃತಿ ಅನಂತ! ಶಕ್ತಿಶಾಲಿ, ಕುಣಿಸುವುದು ಹಿಡಿದು ಮೂಗುದಾರ

ಎಂದೆಂದಿಗೂ ಶಾಶ್ವತ ಕೇಳು||

                                          -ಡಾ.ನಾ.ಸೋಮೇಶ್ವರ

~.~
  • naasomeswara ರವರ ಬ್ಲಾಗ್
  • Login or register to post comments
  • 183 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮದುವೆ ಯಾರಿಗೆ ಬೇಕು...
  • 7 ಮದುವೆ ಅನುಭವ
  • ನಿಜವಾಗಿಯೂ ಆದೆನೆ ನಾನಿಂದು ಮುಕ್ತ ಮುಕ್ತ ಮುಕ್ತಾ.ಆಆಆ....
  • ಪ್ರೇತ ಮದುವೆ ಗೊತ್ತಾ?
  • ನಗೆ ಗವನ
Syndicate content

ಲೇಖಕರು

naasomeswara's picture

ಪೂರ್ಣ ಹೆಸರು
naasomeswara

ಪರಿಚಯ

ವೃತ್ತಿಯಲ್ಲಿ ವೈದ್ಯ. ಪ್ರವೃತ್ತಿಯಲ್ಲಿ ಬರಹಗಾರ. ವಿಜ್ಞಾನ, ವೈದ್ಯಕೀಯ ಬರಹಗಳು, ಪುಸ್ತಕಗಳು ಒಂದಷ್ಟು ಪ್ರಕಟವಾಗಿವೆ. ದೂರದರ್ಶನದಲ್ಲಿ ಈಗ `ಥಟ್ ಅಂತ ಹೇಳಿ` ಕ್ವಿಜ್ ಕಾರ್ಯಕ್ರಮ ನಡೆಸಿಕೊಡುತ್ತಿದ್ದೇನೆ. 900 ಕಂತುಗಳು ಮುಗಿದಿವೆ. ಹೊಸ ಅರಿವು, ಹೊಸ ನೋಟ, ಹೊಸ ಗೆಳೆತನದಲ್ಲಿ ಆಸಕ್ತಿಯಿದೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಕಥೆ ಬರೆದದ್ದು ಹೀಗಿತ್ತು
  • ಶಾಸಕರ ರಾಜೀನಾಮೆ ಮತ್ತು ರಾಜಕೀಯ
  • ಪ್ರೀತಿಸಿರೋ...
  • ತನುಮನ
  • ವೈದ್ಯನಾರಾಯಣಕಥೆ
  • ಹೃದಯದ ಭಾವ
  • ಕನಸ್ಸು
  • ರಂಗಿನ ಚಿಟ್ಟೆ
  • ಚಿರನಿದ್ರೆ
  • ಸೋಲಿನ ಪತ್ತೆಗಾಗಿ ಸಂಶೋಧನೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • aniljoshi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 7, 2008 - 2:33am
  • aniljoshi
    ಉ: ಜಗನ್ನಾಥನ ತಬ್ಬಲಿ ಮಕ್ಕಳು
    July 7, 2008 - 2:22am
  • aniljoshi
    ಉ: ವೈದ್ಯನಾರಾಯಣಕಥೆ
    July 7, 2008 - 12:50am
  • ರೇಖಾ
    ಉ: ರಾಗಿ ಮುದ್ದೆ ಮಿಶಿನ್! (Finger Millet machine)
    July 6, 2008 - 11:43pm
  • ರೇಖಾ
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 6, 2008 - 11:26pm
  • ರೇಖಾ
    ಉ: ಲವ್ ಅಟ್ ಫಸ್ಟ್ ಸೈಟ್ ?
    July 6, 2008 - 11:21pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:16pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:13pm
  • ರೇಖಾ
    ಉ: ಬ್ರಹ್ಮ ಕಮಲ.
    July 6, 2008 - 11:12pm
  • ರೇಖಾ
    ಉ: ಕಣ್ಣು ನೋಡೇ ಗೌರಿ
    July 6, 2008 - 11:07pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 20 ಅತಿಥಿಗಳು ಆನ್ಲೈನ್ ಇರುವರು.


ಸತ್ಯದಿಂದ ಭೂಮಿಯು ನಿಂತಿದೆ, ಸತ್ಯದಿಂದಲೇ ಸೂರ್ಯನು ಹುಟ್ಟುತ್ತಾನೆ, ಸತ್ಯದಿಂದಲೇ ಗಾಳಿಯು ಬೀಸುತ್ತದೆ, ಸತ್ಯದಿಂದಲೇ ನೀರು ಹರಿಯುತ್ತದೆ.

— ನಾರದಸ್ಮೃತಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator