ಎಲ್ಲಾ ಸಂಪದ ಮಿತ್ರರಿಗೆ ನಮಸ್ಕಾರಗಳು,
ಇಂಡಿಯಾ ಸುಧಾರ್ ಒಂದು ಟ್ರಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚು ಮಹತ್ವವನ್ನು ಕೊಟ್ಟು ಕರ್ನಾಟಕ, ಆಂದ್ರ, ತಮಿಳುನಾಡು , ಕೇರಳ ಹೀಗೆ ಹಲವಾರು ರಾಜ್ಯಗಳಲ್ಲಿ ತನ್ನ ಕೆಲ್ಸವನ್ನು ಮಾಡುತ್ತಿದೆ. ಈ ಬಾರಿ ಒಂದನೇ ತರಗತಿಯಿಂದ ಹತ್ತನೇತರಗತಿಯ ತನಕ ಎಲ್ಲಾ ಮಕ್ಕಳಿಗೂ ಉಚಿತ ನೋಟ್ ಪುಸ್ತಕ, ಜಾಮಿಟ್ರಿ ಬಾಕ್ಸ್, ಪೆನ್ನು, ಪೆನ್ಸಿಲ್ ಇತ್ಯಾದಿ ಸಾಮಾಗ್ರಿಗಳನ್ನು ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ನೀಡುತ್ತಿದೆ . ಈ ಬಾರಿ ಹೆಚ್ಚು ಶಾಲೆಗಳಿಂದ ಬೇಡಿಕೆ ಬಂದಿದ್ದು ಪುಸ್ತಕಗಳನ್ನು ನೀಡಲು ಸರ್ವಾಜನಿಕರು ನೀಡಿದ ಹಣ ಸಕಾಗದೇ ಇಂಡಿಯಾ ಸುಧಾರ್ ತಂಡ ತಲೆ ಕೆಡಿಸಿಕೊಂಡು ಅನೇಕ ಜನರೊಟ್ಟಿಗೆ ಸ್ನೇಹಿತರೊಟ್ಟಿಗೆ ಧನ ಸಹಾಯವನ್ನು ಕೇಳುತ್ತಿದೆ. ಅದರಂತೆ ನಾನು ಸಹ ಇಂಡಿಯಾ ಸುಧಾರ್ ನ ಒಬ್ಬ ಸದಸ್ಯನಾಗಿ ಸಂಪದ ಮಿತ್ರರಿಂದ ಕೈಲಾದಷ್ಟು ಧನ ಸಹಾಯ ಮಾಡಬೇಕಾಗಿ ಮನವಿ ಮಾಡಿಕೊಳ್ಳುತ್ತೇನೆ.
ನಿಮ್ಮ ಕೈಲಾದಷ್ಟು ಹಣವನ್ನು http://indiasudar.org/ವೆಬ್ ಸೈಟ್ ಗೆ ಹೋಗಿ Donate ಕ್ಲಿಕ್ಕಿಸಿದರೆ ಬ್ಯಾಂಕಿನ ಮಾಹಿತಿ ಸಿಗುತ್ತದೆ ದಯವಿಟ್ಟು ತಮ್ಮ ಕೈಲಾದಷ್ಟು ಸಹಾಯವನ್ನು ಮಾಡಿದರೆ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಿದಂತೆ ಆಗುತ್ತದೆ. ಮರಯದೆ ತಮ್ಮ ಕೈಲಾದಷ್ಟು ಸಹಾಯವನ್ನು ಮಾಡ್ತೀರಾ ಅಲ್ವಾ ?








