Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಓದುಗರ ಗಮನಕ್ಕೆ: ವ್ಯತ್ಯಯವಾದಲ್ಲಿ ತಿಳಿಸಿ.

ಸಂಪದ › Sampada Blogs › narendra ರವರ ಬ್ಲಾಗ್

ಹೆತ್ತ ತಾಯ ನೆನಪಲ್ಲಿ ಓದಬೇಕಾದ ಹೊತ್ತಗೆ...

October 11, 2007 - 11:00pm — narendra

ಬಹುಷಃ ಇವತ್ತು ಕನ್ನಡ ಪತ್ರಿಕೆಗಳಲ್ಲಿ ಸಣ್ಣಕತೆಗಳ ಸ್ಥಾನವನ್ನು ಕ್ರಮೇಣ ಅಂಕಣಗಳು, ಕಾಲಮ್ಮುಗಳು ಮತ್ತು ಬ್ಲಾಗುಗಳು ಆಕ್ರಮಿಸುವಂತೆ ಕಾಣುತ್ತದೆ. ಅನುಭವವನ್ನು ಒಂದು ಚೌಕಟ್ಟಿನಲ್ಲಿ, ಯುಕ್ತ ವಿವರಗಳ ಹಂದರದಲ್ಲಿ, ಆಕರ್ಷಕವಾಗಿ ಮತ್ತು ಸಾರ್ಥಕವಾಗಿ ಕಟ್ಟಿಕೊಡುವುದು ಶ್ರಮದ ಕೆಲಸ. ಕೆಲವೊಮ್ಮೆ ಎಲ್ಲ ಸರಿಯಿದ್ದೂ ಬಯಸಿದ್ದು ಕೈಗೂಡಿರುವುದಿಲ್ಲ. ಅಲ್ಲದೆ ವಿಮರ್ಶಕರ, ಸಂಪಾದಕರ ಮರ್ಜಿ ಕಾಯುವ, ಅವರಿಗೆ ಹಲ್ಲುಗಿಂಜಿ, ಅವರಿಗೆ ಸಿಟ್ಟುಬರದ ಹಾಗೆ ಮಾತನಾಡಿ....

ಇನ್ನೊಂದು ಕಾರಣವೂ ಇದೆ. ಹೇಳಿಕೊಳ್ಳುವ ಅನುಭವವೇ ಇಲ್ಲದವರೂ ಕಾಲಮ್ಮು ಬರೆಯಬಹುದು! ನನ್ನ ಹಾಗೆ ಓದಿದ ಪುಸ್ತಕಗಳ ಬಗ್ಗೆಯೇ ಬರೆಯುತ್ತ, ಅದನ್ನೇ ಬಂಡವಾಳ ಮಾಡಿಕೊಂಡು ಅಷ್ಟಿಷ್ಟು ರಾಮಾಯಣ, ಮಹಾಭಾರತ ಅಂತೆಲ್ಲ ಉದ್ಧರಿಸುತ್ತ ಓದುಗರನ್ನು ಆಕರ್ಷಿಸಿ ನಮ್ಮ ಬರೆಯುವ ತೀಟೆ ತೀರಿಸಿಕೊಳ್ಳುವುದಕ್ಕೂ ಬ್ಲಾಗು, ಕಾಲಮ್ಮು ಅನುಕೂಲಕರ. ಆಗೊಮ್ಮೆ ಈಗೊಮ್ಮೆ ಬೇಕಾದರೆ ಯಾರೋ ಸತ್ತವರ ಬಗ್ಗೆ, ಇನ್ಯಾರದ್ದೋ ಹುಟ್ಟಿದ ಹಬ್ಬದ ಬಗ್ಗೆ ಬರೆದು ವರೈಟಿ ಮೇನ್‌ಟೇನ್ ಮಾಡಬಹುದು. ಇನ್ನು ರಾಜಕೀಯದ ಉದಾಹರಣೆಗಳನ್ನೂ ಸೇರಿಸಿದರೆ ಎಂಥವರೂ ಏನ್ ಬರೀತಾನ್ ಬಿಡಮ್ಮ ಎನ್ನುವುದು ಖಾತರಿ! ಪುಸ್ತಕ ಅಚ್ಚುಹಾಕುವುದಕ್ಕೆ ಇನ್ನೇನು ಬೇಕು?

ಆದರೆ ಇದೆಲ್ಲ ಹೆಚ್ಚು ಕಾಲ ನಡೆಯುವುದಿಲ್ಲ. ನಾಲಗೆ ಸುಳ್ಳು ಹೇಳಬಹುದು, ಕಣ್ಣು ಸುಳ್ಳು ಹೇಳುವುದಿಲ್ಲ ಎನ್ನುವುದು ಒಂದು ಹಳೆಯ ನಂಬುಗೆ. ನಾಲಗೆಯನ್ನು ಬಿಟ್ಟರೆ ಇಡೀ ದೇಹವೇ ಸುಳ್ಳಿಗೆ ಒಗ್ಗುವುದಕ್ಕೆ ಹೊತ್ತು ತೆಗೆದುಕೊಳ್ಳುವುದಂತೆ! ಹಾಗೆಯೇ ಬರೆಯುವವನ ಪ್ರಾಮಾಣಿಕತೆ ಹೆಚ್ಚು ಕಾಲ ಓದುಗನಿಂದ ಮರೆಯಾಗಿರುವುದು ಸಾಧ್ಯವಿಲ್ಲದ ಮಾತು. ಓದುತ್ತಿದ್ದ ಬಹು ಜನಪ್ರಿಯ ಅಂಕಣ ಸಂಕಲನವೊಂದನ್ನು ಅರ್ಧಕ್ಕೇ ನಿಲ್ಲಿಸಿ ನಮ್ಮಲ್ಲಿ ಅನೇಕರು ಓದುಗನನ್ನು ಟೇಕನ್ ಫರ್ ಗ್ರಾಂಟೆಡ್ ಅಂದುಕೊಂಡು ಬಿಟ್ಟಿರುವುದರ ಬಗ್ಗೆ ಅಸಹ್ಯ, ಆಶ್ಚರ್ಯಪಡುತ್ತಿರುವಾಗಲೇ ಈ ಪುಸ್ತಕ ಕಣ್ಣಿಗೆ ಬಿತ್ತು.

ಶಿರಸಿಯ ಸ್ತ್ರೀರೋಗ ತಜ್ಞರಾದ ಡಾಕ್ಟರ್ ಜಿ.ಎಂ.ಹೆಗಡೆಯವರ ಪತ್ನಿ, ಅರ್ಥಶಾಸ್ತ್ರದ ಪ್ರಾಧ್ಯಾಪಕಿಯಾದರೂ ಪತಿಯ ಕಾಯಕದಲ್ಲಿ ಸಾಕಷ್ಟು ಜೊತೆಜೊತೆಯಾಗಿ ತೊಡಗಿಕೊಂಡಂತಿರುವ ಶ್ರೀಮತಿ ಕುಮುದ ಜಿ.ಎಂ. ಅವರು ಬರೆದ "ಪ್ರಸೂತಿ ಗೃಹದ ಸ್ಮರಣೀಯ ಪ್ರಸಂಗಗಳು" ಎಂಬ ಪುಸ್ತಕ ಅದು. ಇಲ್ಲಿನ ಬರಹಗಳಲ್ಲಿ ತಾನು ಗಹನವಾದುದೇನನ್ನೋ ಹೇಳುತ್ತಿದ್ದೇನೆಂಬ ಪ್ರಜ್ಞೆ ಹಿನ್ನೆಲೆಯಲ್ಲಿ ಕೆಲಸಮಾಡುತ್ತಿಲ್ಲ. ಭಾಷೆಯ ಆಡಂಬರವಿಲ್ಲ. ತನಗೊಬ್ಬನಿಗೇ ಹೊಳೆದ ಸತ್ಯಗಳನ್ನು ಹೇಳುತ್ತಿದ್ದೇನೆಂಬ ಅಹಂಮಿಕೆಯ ಧಾಟಿಯಿಲ್ಲ. ಮೇಲಾಗಿ ಯಾವುದೇ ಪುಸ್ತಕಗಳ ಬಗ್ಗೆ, ಅನಂತಮೂರ್ತಿ, ಚಿತ್ತಾಲ, ರಾಮಾಯಣ, ಮನುಷ್ಯನ ಸ್ವಭಾವದ ಬಗ್ಗೆ ಕುತೂಹಲಕರ ಟಿಪ್ಪಣಿ ಯಾವುದೂ ಇಲ್ಲ. ಇರುವುದು ಪ್ರಾಮಾಣಿಕವಾದ ಅನುಭವಗಳು, ನೆನಪುಗಳು ಮತ್ತು ಅವು ಸಾಮಾನ್ಯರಲ್ಲಿ ಸಾಮಾನ್ಯಳಾದ ಒಬ್ಬ ಮಹಿಳೆಯ ಮನಸ್ಸಿನಲ್ಲಿ ಹುಟ್ಟಿಸಿದ ಭಾವ, ಚಿಂತನೆ, ಬದುಕಿನ ವೈಚಿತ್ರ್ಯಗಳ ಕುರಿತ ಮುಗ್ಧ ಅಚ್ಚರಿ ಮಾತ್ರ. ಇದನ್ನು ಓದಿದಾಗಲೇ ಬಹುಷಃ ನಮ್ಮ ಅನೇಕ ಸೆಲೆಬ್ರಿಟಿ ಕಾಲಮ್ಮಿಷ್ಟರ ಟೊಳ್ಳುತನ, ನನ್ನನ್ನೂ ಸೇರಿಸಿ, ನನ್ನ ಅರಿವಿಗೆ ಬಂದಿದ್ದು.

ಅಸಾಹಿತ್ಯಿಕ ವಾತಾವರಣದಿಂದಲೇ ಇವತ್ತು ಸಾಹಿತ್ಯ ಹೊಸ ಜೀವ ಚೈತನ್ಯವನ್ನು ಮರಳಿ ಪಡೆಯಬೇಕಿದೆ ಎನ್ನುವುದರ ಹಿಂದಿನ ಸತ್ಯ ಗೋಚರಿಸುವುದು ಕೂಡ ಇಲ್ಲೇ. ಇಲ್ಲಿ ಯಾವುದೇ ಗಿಮ್ಮಿಕ್ ಇಲ್ಲದೆ, ಸರಳವಾಗಿ, ಪುಟ್ಟದಾಗಿ, ಪ್ರಾಮಾಣಿಕವಾಗಿ ಘಟನೆಗಳು ಒಂದರ ನಂತರ ಒಂದರಂತೆ ನಿರೂಪಿಸಲ್ಪಟ್ಟಿವೆ. ಕೆಲವು ನಮ್ಮನ್ನು ಆತಂಕದಿಂದ ಉಸಿರು ಬಿಗಿಹಿಡಿಯುವಂತೆ ಮಾಡಿದರೆ ಇನ್ನು ಕೆಲವು ಸಿನಿಮಾ ಕತೆಗಿಂತ ಹೆಚ್ಚು ಕುತೂಹಲಕರ ತಿರುವುಗಳನ್ನು, ಅನಿರೀಕ್ಷಿತಗಳನ್ನು ತೋರಿಸಿ ಬದುಕಿನ ರೀತಿಯ ಬಗ್ಗೆ ಅಚ್ಚರಿ, ಕೌತುಕ ಮೂಡಿಸುತ್ತವೆ. ಕೆಲವು ಪ್ರಸಂಗಗಳು ನಮ್ಮ ಭಾವವಲಯವನ್ನು ನುಗ್ಗಿ ಕಲಕಿದರೆ ಇನ್ನು ಕೆಲವು ಮುಗುಳ್ನಗೆಯಲ್ಲಿ ಮುಗಿಯುತ್ತವೆ.

ನಮ್ಮೆಲ್ಲರ ಹುಟ್ಟಿನ ಸ್ವಲ್ಪವೇ ಮುನ್ನ ನಡೆದಿರಬಹುದಾದ ಗಡಿಬಿಡಿಯ ಹಲವು ಮುಖಗಳನ್ನು ಎಳೆ ಎಳೆಯಾಗಿ ಇಲ್ಲಿ ಕುಮುದಾ ನಮ್ಮೆದುರು ತೆರೆದಿಡುತ್ತಾರೆ. ತಾವು ಎದುರಿಸಿದ ಧರ್ಮಸಂಕಟಗಳನ್ನು, ಹೃದಯ ಕರಗಿಸುವ ಮುಗ್ಧರ ಪ್ರಾಮಾಣಿಕತೆಯನ್ನು ಅವರು ಯಾವ ತಂತ್ರಗಾರಿಕೆಯಿಲ್ಲದೆ, ಸಹಜವಾಗಿ, ಅದರೆಲ್ಲ ವಿವರಗಳೊಂದಿಗೆ ನಮ್ಮೊಂದಿಗೆ ಹಂಚಿಕೊಳ್ಳುತ್ತಾರೆ. ಕತೆಕಟ್ಟುವುದಿಲ್ಲ. ಅಂಥ ಆಮಿಷಕ್ಕೆ ಬಲಿಯಾಗದೆ ಅನುಭವವನ್ನು ಅನುಭವವನ್ನಾಗಿಯೇ ನಿರೂಪಿಸುತ್ತ ನಮ್ಮ ಜೊತೆ ತಾನೂ ನಿಂತು ಅದನ್ನು ನೋಡುತ್ತಾರೆಯೇ ಹೊರತು ಅದರಲ್ಲಿ ತನ್ನದೇನೋ ಇದೆಯೆಂಬ ಅಂಟು-ನಂಟು ಮುಂದೆ ಮಾಡುವುದಿಲ್ಲ.

ನೂರ ಅರವತ್ತಾರು ಪುಟಗಳಲ್ಲಿ ಒಟ್ಟು ನಲವತ್ತು ಪ್ರಸಂಗಗಳನ್ನು ಬರೆದಿರುವ ಕುಮುದಾರ ಪುಸ್ತಕವನ್ನು ಅವನಿ ರಸಿಕರ ರಂಗ ಪ್ರಕಾಶನ, ೨ನೇ ಮುಖ್ಯ ರಸ್ತೆ, ೩ನೇ ಅಡ್ಡ ರಸ್ತೆ, ನಾರಾಯಣಪುರ, ಧಾರವಾಡ - ೫೮೦ ೦೦೮ ಇವರು ಪ್ರಕಟಿಸಿದ್ದಾರೆ. ಬೆಲೆ ಎಂಭತ್ತು ರೂಪಾಯಿ. ಪ್ರಕಟನೆಯ ಹಿಂದೆ ನಮ್ಮ ಹೆಮ್ಮೆಯ ಕತೆಗಾರರಲ್ಲಿ ಒಬ್ಬರಾದ ಶ್ರೀಧರ ಬಳಗಾರ ಇದ್ದಾರೆ. ಜಿ.ಎಂ. ಬೊಮ್ನಳ್ಳಿಯವರದೂ ಸೇರಿದಂತೆ ಉತ್ತಮ ಕಲಾವಿದರ ರೇಖಾ ಚಿತ್ರಗಳ ಸೊಗಸಿದೆ. ಜಯಂತ್ ಕಾಯ್ಕಿಣಿಯವರ ಬೆಚ್ಚನೆಯ ಮುನ್ನುಡಿಯಿದೆ.

ಸಿಟಿಗಳಲ್ಲಿ ಸಹಜವಾದ ಬದುಕಿನಿಂದ ದೂರಾಗಿ, ಹಣದ ಹಿಂದೆ ಹೂಡಿದ ಓಟದಲ್ಲಿ ಎಲ್ಲೋ ಕಳೆದುಹೋದಂತಿರುವ ನಮ್ಮೊಳಗೆ ನಾವು ಕಳೆದುಕೊಳ್ಳುತ್ತಿರುವುದರ ಒಂದು ತುಣುಕನ್ನಾದರೂ ಈ ಹೊತ್ತಗೆ ತೋರಿಸಿಕೊಡುತ್ತದೆ ಎಂಬ ಪುಟ್ಟ ಕಾರಣಕ್ಕಾಗಿಯಾದರೂ ಹೆತ್ತ ತಾಯ ನೆನಪಲ್ಲಿ ಓದಬೇಕಾದ ಪುಸ್ತಕವಿದು.

Ornamental seperator
  • narendra ರವರ ಬ್ಲಾಗ್
  • Login or register to post comments
  • 280 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
October 12, 2007 - 11:18am — vinayak.mdesai

ಉ: ಹೆತ್ತ ತಾಯ ನೆನಪಲ್ಲಿ ಓದಬೇಕಾದ ಹೊತ್ತಗೆ...

vinayak.mdesai's picture

ಶ್ಯಾಮನ ತಾಯಿ ಪುಸ್ತಕವೂ ತುಂಬ ಚನ್ನಾಗಿದೆ.
ಮೂಲ : ಮರಾಠಿ [ಸಾ. ನೆ. ಗುರೂಜಿ] ಕನ್ನಡದ ಅನುವಾದಕರು : [ನನಗೆ ಗೊತ್ತಿಲ್ಲ :-(].

ವಿನಾಯಕ ಮುತಾಲಿಕ ದೇಸಾಯಿ

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಬೇರೆಯವರು ಬರೆದ ಪುಸ್ತಕಗಳ ಬಗ್ಗೆಯೇ ಬರೆಯುವುದರ ಬಗ್ಗೆ ಬರೆಯುತ್ತ...
  • ಕನ್ನಡಿಗರ ಭವ್ಯ ಇತಿಹಾಸ - ಇಂಗ್ಲೀಷ್ ನಮ್ಮ ಅಭಿವ್ಯಕ್ತಿಯ ಮಾದ್ಯಮ ?-'ನಾನೇಕೆ ನಾಸ್ತಿಕ ?
  • ಹಾಗೇ ಸುಮ್ಮನೆ
  • ಅದಾವ ಮಾಯೆಯದು, ಎಂದೂ ಯಾಕೆ ಬದುಕಬೇಕು ಅನಿಸದಂತೆ ಬದುಕಿಸುವುದು?
  • ಮಾಯಾಲೋಕ-೧: ವಿಹಾರಾನಂದ
Syndicate content

ಲೇಖಕರು

narendra's picture

ಪರಿಚಯ

ಕನ್ನಡ ಸಾಹಿತ್ಯದಲ್ಲಿ ಆಸಕ್ತ. ಸುಮಾರು ಮುವ್ವತ್ತು ಕಥೆಗಳನ್ನು ಬರೆದಿದ್ದೇನೆ. ಉತ್ತಮ ಅಭಿರುಚಿಯ ನಾಟಕ, ಸಿನಿಮಾ, ಕಲೆ ಮುಂತಾಗಿ ಇಲ್ಲಿನ ಬದುಕನ್ನು ಸಂಪನ್ನಗೊಳಿಸಬಲ್ಲ ಎಲ್ಲದರಲ್ಲೂ ಆಸಕ್ತಿ ಇದೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಲೇಖನಗಳ ಆಹ್ವಾನ

ಅರ್ಘ್ಯಂ ಸಂಸ್ಥೆಯವರು ನೀರಿನ ಬಳಕೆ, ಉಪಯೋಗ, ನೈರ್ಮಲ್ಯ ಹಾಗೂ ಸಂಬಂಧಪಟ್ಟ ವಿಷಯಗಳ ಕುರಿತು ಅರಿವು ಮೂಡಿಸಲು ಪ್ರಾರಂಭಿಸಿರುವ ಇಂಡಿಯ ವಾಟರ್ ಪೋರ್ಟಲ್ ಕನ್ನಡದ ಪ್ರಾಯೋಗಿಕ ಆವೃತ್ತಿ ಆಗಲೇ ಕನ್ನಡ ಓದುಗರ ಮುಂದಿದೆ.

ಈ ಹೊಸ ಕನ್ನಡ ಪೋರ್ಟಲ್ ಗೆ ಕನ್ನಡ ಲೇಖನಗಳನ್ನು ಸಂಪದ ಸಮುದಾಯದ ಸದಸ್ಯರಿಂದ ಈ ಮೂಲಕ ಆಹ್ವಾನಿಸುತ್ತಿದ್ದೇವೆ.

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ವಿಮರ್ಶೆ
  • ಯು ಮಿ ಔರ್ ಹಮ್
  • ಸೃಷ್ಟಿ(ನಾಲ್ಕು)-ಮುಂಗಾರು ಮಳೆಗೆ ಮೈಯೊಡ್ಡಿದಾಗ..
  • ಹೆಲ್ಮೆಟ್ ಇದ್ರೆ ಸಾಕಾ.. ???
  • ತಿರುಪತಿ ತಿಮ್ಮನೂ, ಉಡುಪಿಯ ಹೋಟೆಲೂ...
  • ಮನಸಲ್ಲಿ ಬರುತ್ತೆ ಯೋಚನೆ
  • ಸುಮ್ನೆ ಗೀಚಿದ್ದು ...
  • ಹೂವಿನ ಹುಡುಗಿ....
  • ಪ್ರೀತಿ ಕೈ ಜಾರಿದಾ ಕ್ಶಣ
  • ಏಕೆ ಹೀಗೆ ಅನಿಸುತ್ತದೆಯೋ!
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hamsanandi
    ಉ: ಯು ಮಿ ಔರ್ ಹಮ್
    May 22, 2008 - 12:14am
  • hamsanandi
    ಉ: ಉಳ್ಳವರು ಶಿವಾಲಯವ ಮಾಡುವರು
    May 21, 2008 - 10:02pm
  • hamsanandi
    ಉ: ಹೆಲ್ಮೆಟ್ ಇದ್ರೆ ಸಾಕಾ.. ???
    May 21, 2008 - 9:55pm
  • Sunil Jayaprakash
    ಉ: ತಿರುಪತಿ ತಿಮ್ಮನೂ, ಉಡುಪಿಯ ಹೋಟೆಲೂ...
    May 21, 2008 - 9:28pm
  • ಕರಿ ತವಳೆ
    ಉ: ಚಾಗದ ಭೋಗದಕ್ಕರದ...
    May 21, 2008 - 8:26pm
  • harshab
    ಉ: ಹೆಲ್ಮೆಟ್ ಇದ್ರೆ ಸಾಕಾ.. ???
    May 21, 2008 - 8:01pm
  • harshab
    ಉ: ಇರೀರು ಕಿರೀರ್ಗೆ ಜಾಗ ಬಿಟ್ಕೊಟ್ಟು , ಆಸೀರ್ವಾದ ಮಾಡೋದೆ, ಅರಸೋದೆ ಅಲ್ವ್ರ, ನಮ್ಮ ಕನ್ನಡದೋರ್ ಪರಂಪರೆ. ಏನಂತೀರ ದೇವ್ರು ?
    May 21, 2008 - 7:52pm
  • Sunil Jayaprakash
    ಉ: ಹೆಲ್ಮೆಟ್ ಇದ್ರೆ ಸಾಕಾ.. ???
    May 21, 2008 - 7:34pm
  • ವೈಭವ
    ಉ: ಕಲಿತರೆ ಹೀಗೆ...
    May 21, 2008 - 7:32pm
  • ವೈಭವ
    ಉ: ತಿರುಪತಿ ತಿಮ್ಮನೂ, ಉಡುಪಿಯ ಹೋಟೆಲೂ...
    May 21, 2008 - 7:21pm
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 6 ಅತಿಥಿಗಳು ಆನ್ಲೈನ್ ಇರುವರು.

ಪರಸ್ಥಳದಲ್ಲಿ ವಿದ್ಯೆಯೇ ಧನ, ವಿಪತ್ಕಾಲದಲ್ಲಿ ಬುಧ್ಧಿಯೇ ಧನ, ಪರಲೋಕದಲ್ಲಿ ಧರ್ಮವೇ ಧನ, ಒಳ್ಳೆಯ ನೆಡೆತೆಯಾದರೋ ಎಲ್ಲೆಡೆಯಲ್ಲಿಯೂ ಅಖಂಡ ಧನ.

— ಭಾರತ ಮಂಜರೀ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator