Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಓದುಗರ ಗಮನಕ್ಕೆ: ವ್ಯತ್ಯಯವಾದಲ್ಲಿ ತಿಳಿಸಿ.

ಸಂಪದ › Sampada Blogs › narendra ರವರ ಬ್ಲಾಗ್

'ದೇಶಕಾಲ'ಕ್ಕೆ ಮೂರು ವರ್ಷ

October 22, 2007 - 1:29pm — narendra

ದೇಶ ಕಾಲ - ವಿವೇಕ್ ಶಾನಭಾಗರ ತ್ರೈಮಾಸಿಕ ಪತ್ರಿಕೆಗೆ ಮೂರುವರ್ಷಗಳಾಗುತ್ತಿವೆ. ಈ ಅವಧಿಯಲ್ಲಿ ಸದ್ದಿಲ್ಲದೆ ಅದು ಸಾಧಿಸಿರುವುದು ಬಹಳ. ಅಲ್ಲಿ ಪ್ರಕಟವಾದ ಕತೆ, ಕವನ, ಲೇಖನ, ಪರಿಚಯಿಸಲ್ಪಟ್ಟ ಬರಹಗಾರರು, ವಿಚಾರಗಳು ವೈವಿಧ್ಯಮಯ ಎಂತೋ ಮುಂದಿನ ಸಂಚಿಕೆ ಬರುವ ಮುನ್ನಿನ ಮೂರು ತಿಂಗಳ ಕಾಲ ತಲೆಗೆ ಸಾಕಷ್ಟು ಕೆಲಸ ಕೊಡಬಲ್ಲವು ಕೂಡ ಆಗಿದ್ದವು. ಇಂಥ ಗುಣಮಟ್ಟವನ್ನು ಕಾಯ್ದುಕೊಂಡು ಬರುವ, ಅಂಥ ಬರಹಗಾರರನ್ನು, ಲೇಖನಗಳನ್ನು ಹುಡುಕಿಕೊಂಡು ಹೋಗಿ ಹೆಕ್ಕಿ ತಂದು ಸಮಯಕ್ಕೆ ಸರಿಯಾಗಿ ಪತ್ರಿಕೆಯನ್ನು ಓದುಗರ ಕೈಗಿಡುವ ಕೆಲಸ ಸುಲಭವಲ್ಲದ್ದು. ಆದರೆ ವಿವೇಕ್ ಈ ಬಗ್ಗೆ ಮಾತನಾಡಿದ್ದೇ ಇಲ್ಲವೆನ್ನಬಹುದು. ತಮ್ಮಷ್ಟಕ್ಕೆ ಕೆಲಸ ಮಾಡುತ್ತ ಹೋಗುವುದು ಅವರ ಗುಣ.

ದೇಶಕಾಲ ಸುರುವಾದಾಗ ಕನ್ನಡದ ಉತ್ತಮ ಕತೆಗಾರ ಎಂ.ಎಸ್.ಶ್ರೀರಾಮ್ ತಮ್ಮ ಬ್ಲಾಗ್ ಕನ್ನಡವೇ ನಿತ್ಯದಲ್ಲಿ ಕನ್ನಡದ ಸಣ್ಣಪತ್ರಿಕೆಗಳ ಬಗ್ಗೆ ಬರೆದಿದ್ದರು. ಮಯೂರ(ಜೂನ್ ೨೦೦೬)ದಲ್ಲಿ ಕೂಡ ಅಂತಹುದೇ ಒಂದು ಲೇಖನವನ್ನು ಸಂಪಾದಕ ಜಿ.ಪಿ.ಬಸವರಾಜು ಬರೆದಿದ್ದರು. ಆದರೆ ಈಗ ಬರುತ್ತಿರುವ ಸಂಚಯ, ಸಂಕಲನ, ಸಂಕ್ರಮಣ, ಮಾತುಕತೆ, ಅಭಿನವ, ಕನ್ನಡ ಅಧ್ಯಯನ, ಗಾಂಧಿ ಬಜಾರ್ ಮುಂತಾದ ಇನ್ನೂ ಅನೇಕ ಸಣ್ಣಪತ್ರಿಕೆಗಳ ಕಾಣ್ಕೆ, ಸಮಸ್ಯೆಗಳ ಬಗ್ಗೆ ಹೇಳುವವರಿಲ್ಲ. ಆಸಕ್ತರಿಗೆ ಸರಿಯಾದ ಮಾಹಿತಿ ಕೂಡ ನೀಡುವವರಿಲ್ಲ. ಅವು ನಿಂತು ಹೋದರೆ, ಪುನರಾರಂಭಗೊಂಡರೆ ಸ್ವತಃ ಚಂದಾದಾರರಿಗೂ ತಿಳಿಯುವುದಿಲ್ಲ! ಯಾಕೆಂದರೆ, ಜೀವಂತ ಇರುವಾಗಲೂ ಇವು ನಿಯಮಿತ ಕಾಲಕ್ಕೆ ಮುಖ ತೋರಿಸುವುದು ಸ್ವಲ್ಪ ಅನುಮಾನವೇ! ವಾರದಾಗ ಒಂದು ಸರತಿ ಬಂದು ಹೋಗಾಂವ ಎಂದು ಖಚಿತವಾಗಿ ಹೇಳುವಂತಿಲ್ಲ!

ನಮ್ಮ ನಿಯತಕಾಲಿಕೆಗಳು, ಮಾಧ್ಯಮ ಕೂಡ ಮಾರ್ಕೆಟ್ ಇಲ್ಲದ ಯಾವುದರ ಕುರಿತೂ ಮಾತನಾಡುವ ಉತ್ಸಾಹ ತೋರಿಸುವುದಿಲ್ಲ. ಜಯಂತ ಕಾಯ್ಕಿಣಿ ಮುವ್ವತ್ತು ಕಂತುಗಳಲ್ಲಿ ನಮ್ಮ ನಾಡಿನ ಧೀಮಂತ ಸಾಹಿತಿಗಳಾದ ಕುವೆಂಪು, ಬೇಂದ್ರೆ, ಕಾರಂತರ ಕುರಿತು ಈ ಟಿವಿಯಲ್ಲಿ ಒಂದು ಸ್ತುತ್ಯ ಕಾರ್ಯಕ್ರಮ ನಡೆಸಿಕೊಟ್ಟರು. ಸಾಹಿತಿಯನ್ನು ಆತನ ಪರಿಸರದಿಂದ, ಅವನ ಒಡನಾಡಿಗಳಿಂದ, ಅವನ ಸಾಹಿತ್ಯದಿಂದ, ಅವನ ದೈನಂದಿನ ಬದುಕಿನಿಂದ ಜಯಂತ ಕಟ್ಟುತ್ತ ಹೋದರು. ಅದು ಕನ್ನಡಕ್ಕಂತೂ ತೀರ ಹೊಸದಾಗಿತ್ತು. ಈ ಕಾರ್ಯಕ್ರಮದಿಂದ ಸಾಹಿತಿಯ ಅಸಾಹಿತ್ಯಿಕ ಮುಖವನ್ನು ಪರಿಚಯಿಸುತ್ತಲೇ ಆತನ ಸಾಹಿತ್ಯವನ್ನು ಜನಸಾಮಾನ್ಯರತ್ತ ಒಯ್ದವರು ಜಯಂತ. ಇದು ಸರಿಯಾದ ಪೋಷಣೆ, ಉತ್ತೇಜನವಿಲ್ಲದೆ ಮೂರೇ ಮಂದಿ ಮಹನೀಯರ ಮಟ್ಟಿಗೆ ನಿಂತು ಹೋಯಿತು. ಹೆಚ್ಚೆಂದರೆ ಅಲ್ಲಿನ ಅಳಿದುಳಿದ ನೆನಪುಗಳ ಕುರಿತು ಅವರಿಂದಲೇ ಬರೆಯಿಸಿ ಅಚ್ಚು ಹಾಕುವುದರಾಚೆ ಯಾವುದೇ ಪತ್ರಿಕೆ ಇದನ್ನೆಲ್ಲ ಗಮನಿಸಲಿಲ್ಲ. ಸಂಪಾದಕರುಗಳಿಗೆ ಬರೆದರೂ ಆ ಈಮೇಲುಗಳೇನಾದವೋ ಬಲ್ಲವರಿಲ್ಲ! ಸಂಪಾದಕರುಗಳಿಗೆ ಈ ಜಯಂತ, ವಿವೇಕಗಳೆಲ್ಲ ನೆನಪಾಗುವುದು ದೀಪಾವಳಿ ಸಂಚಿಕೆಗಳ ಹೊಣೆ ಬಿದ್ದಾಗಲೇ ಅನಿಸುತ್ತದೆ!

ಈಗಲೂ ವಿವೇಕರ ಸಂದರ್ಶನವನ್ನು ಕನ್ನಡದವರು ನಡೆಸದಿದ್ದರೂ ಇಂಡಿಯನ್ ಫೌಂಡೇಶನ್ ಫರ್ ಆರ್ಟ್ಸ್ ಎನ್ನುವ ಸಂಸ್ಥೆಯ ತ್ರೈಮಾಸಿಕವೊಂದು ಪ್ರಕಟಿಸಿದೆ. (http://www.indiaifa.org/newsletter/July-Sep-2007-IFA-Newsletter.htm) ದೇಶಕಾಲದಲ್ಲಿ ಕಳೆದ ಹನ್ನೊಂದು ಸಂಚಿಕೆಗಳಲ್ಲಿ ಪ್ರಕಟವಾದ ಸಾಹಿತ್ಯ-ಸಂಸ್ಕೃತಿ ಕುರಿತ ಬರಹಗಳ ಒಂದು ಪುಟ್ಟ ಪಟ್ಟಿ ಇಲ್ಲಿದೆ:

ಕತೆಗಳು: ಅಬ್ದುಲ್ ರಶೀದ, ಎಸ್.ದಿವಾಕರ್, ಗೋಪಿನಾಥ ತಾತಾಚಾರ್, ಎಸ್. ಸುರೇಂದ್ರನಾಥ್, ವಿವೇಕ ಶಾನಭಾಗ, ಸಂದೀಪ ನಾಯಕ, ಮೊಗಳ್ಳಿ ಗಣೇಶ್, ಶ್ರೀನಿವಾಸ ವೈದ್ಯ(೨), ಯಶವಂತ ಚಿತ್ತಾಲ, ಪ್ರಹ್ಲಾದ ಅಗಸನಕಟ್ಟೆ, ಸಚ್ಚಿದಾನಂದ ಹೆಗಡೆ, ಜೋಗಿ, ಜಯಂತ ಕಾಯ್ಕಿಣಿ, ಅಶೋಕ ಹೆಗಡೆ(೨), ಸುನಂದಾ ಪ್ರಕಾಶ ಕಡಮೆ, ಸುಕನ್ಯಾ ಕನಾರಳ್ಳಿ, ಶ್ರೀಧರ ಬಳಗಾರ, ನಾಡಿಸೋಜ.

ಅನುವಾದಿತ ಕತೆಗಳು: ರ್ಯುನೊಸುಕೆ ಅಕುತಗವ(ಜಪಾನ್), ಶೆರ್‌ವುಡ್ ಆಂಡರ್‌ಸನ್(ಅಮೆರಿಕ), ಜಯಮೋಹನ್(ಮಲಯಾಳಂ), ಶಿ ತೈಷೆಂಗ್(ಚೀನಾ), ಮೀನಾ ಕಾಕೋಡಕರ್(ಕೊಂಕಣಿ), ಹೈನ್ರಿಚ್ ಬೋಲ್(ಜರ್ಮನ್), ಆಂಟನ್ ಚೆಕಾಫ್(ಉಕ್ರೇನ್), ಶಶಿ ದೇಶಪಾಂಡೆ(ಇಂಗ್ಲೀಷ್), ಹುವಾನ್ ರುಲ್ಫೊ(ಲ್ಯಾಟಿನ್ ಅಮೆರಿಕ), ಡಯೋನ್ ಬ್ರಾಂಡ್(ಟ್ರಿನಿಡಾಡ್), ಮೇಘನಾ ಪೇಠೆ(ಮರಾಠಿ), ಫ್ಲ್ಯಾನೆರಿ ಒಕೋನರ್(ಅಮೆರಿಕ), ಉದಯ ಪ್ರಕಾಶ(ಹಿಂದಿ), ಹುಲಿಯೋ ಕೊರ್ತಾಜಾರ್(ಅರ್ಜೆಂಟೀನಾ), ನಯ್ಯರ್ ಮಸೂದ್(ಉರ್ದು), ಸೊಮರ್‌ಸೆಟ್ ಮಾಮ್(ಇಂಗ್ಲೀಷ್), ಎಸ್.ವೇಣುಗೋಪಾಲ್(ತಮಿಳು), ಕೆಂಜಬುರೊ ಒಎ(ಜಪಾನ್).

ಸಮಯ ಪರೀಕ್ಷೆ:(ಸಂಕಿರಣ ಮಾದರಿಯ ಪ್ರಬಂಧ ಮಂಡನೆ, ಚರ್ಚೆ, ಸಂವಾದ: ದೇಶದ ವಿವಿಧ ಭಾಗದಿಂದ ಆಯಾ ರಂಗದಲ್ಲಿ ನುರಿತವರು, ಅನುಭವಿಗಳು ಮತ್ತು ಬರಹಗಾರರು ಇಲ್ಲಿ ಬರೆಯುತ್ತಾರೆ) ಈ ದೇಶ ಈ ಕಾಲದಲ್ಲಿ ನಾನು, ಧರ್ಮಸಂಕಟ- ಸೆಕ್ಯುಲರ್ ಪ್ರಭುತ್ವ ಮತ್ತು ಧಾರ್ಮಿಕ ಹಿಂಸೆ, ಹಿಂಸೆಯ ಮೀಮಾಂಸೆ, ಕನ್ನಡ ಕಾವ್ಯದ ಹೊಸ ಬೆಳೆ(ಹದಿನೇಳು ಕವಿತೆಗಳ ಕುರಿತು ಹದಿನೇಳು ಮಂದಿ), ಅನಿವಾಸಿ ಕನ್ನಡ, ರಾಜಕೀಯದ ಪತನ, ರಂಗಭೂಮಿಯ ವರ್ತಮಾನ, ದೃಶ್ಯ ಕಲೆಗಳ ಅ-ದೃಶ್ಯ, ಕೃಷಿ ಸಂಸ್ಕೃತಿಯ ಪಲ್ಲಟಗಳು, ಕನ್ನಡಕ್ಕೊಂದು ಪುಸ್ತಕನೀತಿ, ಭೂಸ್ವಾಧೀನದ ಬಿಕ್ಕಟ್ಟುಗಳು.

ಲೇಖನ : ಯು.ಆರ್.ಅನಂತಮೂರ್ತಿ, ಕೆ.ವಿ.ತಿರುಮಲೇಶ್, ನಾಗರಾಜ ವಸ್ತಾರ್‍ಎ, ಡಾ.ಬಿ.ದಾಮೋದರ ರಾವ್, ಕ್ರಿಸ್ಟಫರ್ ವುರ್ಸ್ಟ್, ರಾಘವೇಂದ್ರ ರಾವ್, ಕೆ.ವಿ.ಸುಬ್ಬಣ್ಣ, ವೈದೇಹಿ, ರೊದ್ದಂ ಶ್ರೀನಿವಾಸ, ಸುಂದರ್ ಸಾರುಕ್ಕೈ, ಡೇನಿಯಲ್ ಅಮಿಟ್, ಎ.ಆರ್. ಉಷಾದೇವಿ, ಅಕ್ಷರ ಕೆ.ವಿ., ಜಿಯಾವುದ್ದೀನ್ ಸರದಾರ್, ಶಮೀಕ್ ಬಂದೋಪಾದ್ಯಾಯ, ಅರವಿಂದ ಚೊಕ್ಕಾಡಿ, ಮನು ಚಕ್ರವರ್ತಿ, ಗಿರೀಶ್ ವಿ ವಾಘ್, ಮುರಳೀಧರ ಉಪಾಧ್ಯ, ಟಿ.ಎನ್ ಕೃಷ್ಣರಾಜು, ಫ್ರಿಟ್ಸ್ ಸ್ಟಾಲ್ ಮತ್ತಿತರ.

ಕವಿತೆಗಳು : ಪಿ.ರಾಮನ್(ಮಲಯಾಳಂ), ಮಂದಾಕ್ರಾಂತಾ ಸೇನ್(ಬಂಗಾಲಿ), ಪ್ರತಿಭಾ ನಂದಕುಮಾರ್, ಎಸ್. ಮಂಜುನಾಥ್, ಸಂಧ್ಯಾದೇವಿ, ನಾ.ಮೊಗಸಾಲೆ.

ಹೊಸ ಪುಸ್ತಕದ ಕೆಲವು ಪುಟಗಳು: ಶಿಖರಸೂರ್ಯ(ಕಂಬಾರ), ಬಿಸಿಲ ಕೋಲು(ಉಮಾರಾವ್), ಉಧೋ ಉಧೋ (ಬಾಳಾಸಾಹೇಬ), ಮಿತ್ತಬೈಲ್ ಯಮುನಕ್ಕೆ(ಡಿ.ಕೆ.ಚೌಟ), ಕಾಲಜಿಂಕೆ(ಕೆ.ಸತ್ಯನಾರಾಯಣ), ಸ್ವರಾಧಿರಾಜ ಭೀಮಸೇನ(ಅರವಿಂದ ಮುಳಗುಂದ), ದಿಗಂಬರ(ಯಶವಂತ ಚಿತ್ತಾಲ), ಅಶ್ವಮೇಧ(ಅಶೋಕ ಹೆಗಡೆ), ಮಾರ್ಕ್ವೆಜ್(ಅನುವಾದಿತ-ಕತೆಗಾರನ ಮೊದಲ ದಿನಗಳು), ಬಿಳಿಯ ಚಾದರ(ಗುರುಪ್ರಸಾದ್ ಕಾಗಿನೆಲೆ), ಕಿರೀಟ(ಮೊಗಳ್ಳಿ ಗಣೇಶ್), ಮದುವೆಯ ಆಲ್ಬಂ(ಗಿರೀಶ ಕಾರ್ನಾಡ್), ಸಂಗೀತ ದಿವ್ಯ(ದತ್ತಾತ್ರೇಯ ಸದಾಶಿವ ಗರೂಡರ ಆತ್ಮಕತೆಯ ಆಯ್ದ ಭಾಗಗಳು), ಸ್ವಯಂವರ ಲೋಕ(ಕೆ.ವಿ.ಅಕ್ಷರ), ಎನ್ನ ಭವದ ಕೇಡು(ಎಸ್ ಸುರೇಂದ್ರನಾಥ್).

ವಿಮರ್ಶೆಗೆ ಒಳಗಾದ ಬರಹಗಾರರು: ಸುನಂದಾ ಪ್ರಕಾಶ್, ಎಸ್. ಮಂಜುನಾಥ್, ಸವಿತಾ ನಾಗಭೂಷಣ, ಎಸ್ ಸುರೇಂದ್ರನಾಥ್, ಜಯಂತ ಕಾಯ್ಕಿಣಿ, ಎಸ್. ದಿವಾಕರ್, ಗೋಪಾಲಕೃಷ್ಣ ಅಡಿಗ ಮತ್ತಿತರರು.

ದೇಶ ಕಾಲ ತನ್ನ ಸೀಮಿತ ವಲಯದಲ್ಲಿ ಉಸಿರಾಡುತ್ತಿದ್ದರೂ ತನ್ನದೇ ಆದ ಗುರುತ್ವವನ್ನು ಈಗಾಗಲೇ ರೂಢಿಸಿಕೊಂಡಿದೆ. ಇದು ಇನ್ನೂ ಬಹುಕಾಲ ಕನ್ನಡದ ಸಂವೇದನೆಗಳನ್ನು ಸರಿದಾರಿಯಲ್ಲಿ ಉದ್ದೀಪಿಸುತ್ತ, ಚಿಗುರಿಸುತ್ತ ನಮ್ಮ ಅರಿವಿನ ಬಳ್ಳಿಯನ್ನು ಸದಾ ಹೊಸದರತ್ತ ಹಬ್ಬಿಸುತ್ತದೆ ಎಂದು ನಿರೀಕ್ಷಿಸಬಹುದಾಗಿದೆ.

Ornamental seperator
  • narendra ರವರ ಬ್ಲಾಗ್
  • Login or register to post comments
  • 344 hits
  • Email this blog
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಅಕ್ಷರದಾಹ ಬಳಗ ಆಹ್ವಾನ
  • 'ನಾದಲೀಲೆ' - ಬೇಂದ್ರೆ ಕಾವ್ಯ ವಾಚನ
  • ಪ್ರೇಮದ ಓಲೆ
  • ನನ್ನ ಕಾವ್ಯ
  • ವಿವೇಕ್ ಶಾನಭಾಗ್ ಸಂದರ್ಶನ
Syndicate content

ಲೇಖಕರು

narendra's picture

ಪರಿಚಯ

ಕನ್ನಡ ಸಾಹಿತ್ಯದಲ್ಲಿ ಆಸಕ್ತ. ಸುಮಾರು ಮುವ್ವತ್ತು ಕಥೆಗಳನ್ನು ಬರೆದಿದ್ದೇನೆ. ಉತ್ತಮ ಅಭಿರುಚಿಯ ನಾಟಕ, ಸಿನಿಮಾ, ಕಲೆ ಮುಂತಾಗಿ ಇಲ್ಲಿನ ಬದುಕನ್ನು ಸಂಪನ್ನಗೊಳಿಸಬಲ್ಲ ಎಲ್ಲದರಲ್ಲೂ ಆಸಕ್ತಿ ಇದೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಲೇಖನಗಳ ಆಹ್ವಾನ

ಅರ್ಘ್ಯಂ ಸಂಸ್ಥೆಯವರು ನೀರಿನ ಬಳಕೆ, ಉಪಯೋಗ, ನೈರ್ಮಲ್ಯ ಹಾಗೂ ಸಂಬಂಧಪಟ್ಟ ವಿಷಯಗಳ ಕುರಿತು ಅರಿವು ಮೂಡಿಸಲು ಪ್ರಾರಂಭಿಸಿರುವ ಇಂಡಿಯ ವಾಟರ್ ಪೋರ್ಟಲ್ ಕನ್ನಡದ ಪ್ರಾಯೋಗಿಕ ಆವೃತ್ತಿ ಆಗಲೇ ಕನ್ನಡ ಓದುಗರ ಮುಂದಿದೆ.

ಈ ಹೊಸ ಕನ್ನಡ ಪೋರ್ಟಲ್ ಗೆ ಕನ್ನಡ ಲೇಖನಗಳನ್ನು ಸಂಪದ ಸಮುದಾಯದ ಸದಸ್ಯರಿಂದ ಈ ಮೂಲಕ ಆಹ್ವಾನಿಸುತ್ತಿದ್ದೇವೆ.

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ವಿಮರ್ಶೆ
  • ಯು ಮಿ ಔರ್ ಹಮ್
  • ಸೃಷ್ಟಿ(ನಾಲ್ಕು)-ಮುಂಗಾರು ಮಳೆಗೆ ಮೈಯೊಡ್ಡಿದಾಗ..
  • ಹೆಲ್ಮೆಟ್ ಇದ್ರೆ ಸಾಕಾ.. ???
  • ತಿರುಪತಿ ತಿಮ್ಮನೂ, ಉಡುಪಿಯ ಹೋಟೆಲೂ...
  • ಮನಸಲ್ಲಿ ಬರುತ್ತೆ ಯೋಚನೆ
  • ಸುಮ್ನೆ ಗೀಚಿದ್ದು ...
  • ಹೂವಿನ ಹುಡುಗಿ....
  • ಪ್ರೀತಿ ಕೈ ಜಾರಿದಾ ಕ್ಶಣ
  • ಏಕೆ ಹೀಗೆ ಅನಿಸುತ್ತದೆಯೋ!
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • venkatesh
    ಉ: ಇರೀರು ಕಿರೀರ್ಗೆ ಜಾಗ ಬಿಟ್ಕೊಟ್ಟು , ಆಸೀರ್ವಾದ ಮಾಡೋದೆ, ಅರಸೋದೆ ಅಲ್ವ್ರ, ನಮ್ಮ ಕನ್ನಡದೋರ್ ಪರಂಪರೆ. ಏನಂತೀರ ದೇವ್ರು ?
    May 22, 2008 - 5:00am
  • hamsanandi
    ಉ: ಯು ಮಿ ಔರ್ ಹಮ್
    May 22, 2008 - 12:14am
  • hamsanandi
    ಉ: ಉಳ್ಳವರು ಶಿವಾಲಯವ ಮಾಡುವರು
    May 21, 2008 - 10:02pm
  • hamsanandi
    ಉ: ಹೆಲ್ಮೆಟ್ ಇದ್ರೆ ಸಾಕಾ.. ???
    May 21, 2008 - 9:55pm
  • Sunil Jayaprakash
    ಉ: ತಿರುಪತಿ ತಿಮ್ಮನೂ, ಉಡುಪಿಯ ಹೋಟೆಲೂ...
    May 21, 2008 - 9:28pm
  • ಕರಿ ತವಳೆ
    ಉ: ಚಾಗದ ಭೋಗದಕ್ಕರದ...
    May 21, 2008 - 8:26pm
  • harshab
    ಉ: ಹೆಲ್ಮೆಟ್ ಇದ್ರೆ ಸಾಕಾ.. ???
    May 21, 2008 - 8:01pm
  • harshab
    ಉ: ಇರೀರು ಕಿರೀರ್ಗೆ ಜಾಗ ಬಿಟ್ಕೊಟ್ಟು , ಆಸೀರ್ವಾದ ಮಾಡೋದೆ, ಅರಸೋದೆ ಅಲ್ವ್ರ, ನಮ್ಮ ಕನ್ನಡದೋರ್ ಪರಂಪರೆ. ಏನಂತೀರ ದೇವ್ರು ?
    May 21, 2008 - 7:52pm
  • Sunil Jayaprakash
    ಉ: ಹೆಲ್ಮೆಟ್ ಇದ್ರೆ ಸಾಕಾ.. ???
    May 21, 2008 - 7:34pm
  • ವೈಭವ
    ಉ: ಕಲಿತರೆ ಹೀಗೆ...
    May 21, 2008 - 7:32pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 9 ಅತಿಥಿಗಳು ಆನ್ಲೈನ್ ಇರುವರು.

ಸ್ವಾಭಾವಿಕವ ಮರೆತು ನಭಕೇಣಿ ಹೂಡುವುದುಮ್ ।
ಅಭಾಸವನು ಸತ್ಯವೆಂದು ಬೆಮಿಸುವುದುಮ್ ।।
ಸೌಭಾಗ್ಯಗಳನರಸಿ ದೌರ್ಭಾಗ್ಯಕ್ಕೀಡಹುದುಮ್ ।
ಅಭಿಶಾಪ ನರಕುಲಕೆ -- ಮಂಕುತಿಮ್ಮ ।।

— ಡಿ.ವಿ.ಜಿ.

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator