ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ › Sampada Blogs › olnswamy ರವರ ಬ್ಲಾಗ್

ಸ್ವಾತಂತ್ರ್ಯವೆಂದರೆ ಭಯ ಮತ್ತು ನಮಗೆ ಸ್ವಾತಂತ್ರ್ಯವೇ ಇಲ್ಲ

August 13, 2005 - 9:16pm — olnswamy

ಫಿಯರ್ ಆಫ್ ಫ್ರೀಡಂ ಎಂಬುದು ಎರಿಕ್ ಫ್ರಾಂ ಎಂಬ ಲೇಖಕನ ಒಂದು ಪುಸ್ತಕದ ಹೆಸರು. ನಿಜವಾಗಿ ನಮಗೆಲ್ಲ ಸ್ವಾತಂತ್ರ್ಯವೆಂದರೆ ಭಯ. ಸ್ವಂತವಾಗಿ ಆಲೋಚಿಸುವ, ಕ್ರಿಯೆಯಲ್ಲಿ ತೊಡಗುವ, ನಮ್ಮ ಕ್ರಿಯೆಗಳಿಗೆ, ಬದುಕಿಗೆ ನಾವೇ ಜವಾಬ್ದಾರರಾಗುವ ಸ್ವಾತಂತ್ರ್ಯವನ್ನು ಹೊಂದುವುದಕ್ಕೆ ನಮಗೆಲ್ಲ ಭಯ. ಹಿರಿಯರು ಹೇಳಿದಂತೆ, ನಮ್ಮ ಸಂಸ್ಕೃತಿ ಹೇಳಿದಂತೆ, ಶಿಕ್ಷಣ ಕಲಿಸಿದಂತೆ, ನಮ್ಮ ಸುತ್ತಲ ಹತ್ತು ಜನ ಇರುವಂತೆ ಬದುಕುವುದು ನಮಗೆಲ್ಲ ಸುಲಭ ಮತ್ತು ಇಷ್ಟ. ಸ್ವತಂತ್ರವಾಗಬೇಕೆಂಬ ಆಸೆ, ಕಲ್ಪನೆಗಳು ಮಾತ್ರ ನಮ್ಮಲ್ಲಿವೆ. ನಮ್ಮ ಪ್ರತಿಯೊಂದು ಕೆಲಸಕ್ಕೂ ನಮ್ಮ ಮನಸ್ಸು ಸಮರ್ಥನೆಯನ್ನು ಹುಡುಕುತ್ತಲೇ ಇರುವಾಗ, ಬೇರೆಯವರ ಒಪ್ಪಿಗೆಯನ್ನು ಅಪೇಕ್ಷಿಸುತ್ತ ನಿರೀಕ್ಷಿಸುತ್ತ ಇರುವಾಗ ಸ್ವತಂತ್ರವಾಗುವುದು ಹೇಗೆ ಸಾಧ್ಯ? ಸ್ವತಂತ್ರವಾಗಿರುವಂತೆ ತೋರಿಸಿಕೊಳ್ಳುವವರನ್ನು ಒಪ್ಪುತ್ತೇವೆ, ನಿಜವಾಗಿ ಸ್ವತಂತ್ರವಾಗಿರುವವರನ್ನು ದ್ವೇಷಿಸುತ್ತೇವೆ, ಅಲ್ಲವೆ?
ನಮಗೆ ಸ್ವಾತಂತ್ರ್ಯವೇ ಇಲ್ಲ ಎಂಬುದು ಕಂಬಾರರ ಕನ್ನಡ ಕವಿತೆಯೊಂದರ ಸಾಲು. ನಮ್ಮ ಆಲೋಚನೆಗಳು ನಮ್ಮವಲ್ಲ, ನಮ್ಮ ವಿಚಾರಗಳು ನಮ್ಮವಲ್ಲ, ನಮ್ಮ ಕನಸುಗಳು ನಮ್ಮವೇ ಅಲ್ಲ, ನಮ್ಮ ಆತಂಕಗಳು ನಮ್ಮವೇ ಅಲ್ಲ, ನಮ್ಮ ದೇಹ ನಮ್ಮ ಇಷ್ಟದಂತೆ ಇರುವುದಿಲ್ಲ, ನಮ್ಮ ಮನಸ್ಸು ನಮ್ಮ ಬುದ್ಧಿಯಮಾತು ಕೇಳುವುದಿಲ್ಲ. ನಮ್ಮೊಳಗೆ ತುಂಬಿಕೊಂಡಿರುವುದೆಲ್ಲ, ನಮ್ಮ ವ್ಯಕ್ತಿತ್ವಕ್ಕೆ ಕಾರಣವಾಗಿರುವುದೆಲ್ಲ ಬೇರೆಯವರು, ಅಪ್ಪ, ಅಮ್ಮ, ಸಮಾಜ, ಶಿಕ್ಷಣ, ಭಾಷೆ, ನಮಗೆ ಇಷ್ಟವಾದ ರಾಜಕೀಯ ಪಕ್ಷ, ಸಂಸ್ಕೃತಿ ಇತ್ಯಾದಿಗಳು ನಮ್ಮೊಳಗೆ ತಿದ್ದಿರುವುದಲ್ಲದೆ ಬೇರೇನೂ ಅಲ್ಲ. ನಾವು ನಿಜವಾಗಿ ಸ್ವತಂತ್ರರಾಗಬೇಕೆಂದರೆ ಯಾವುಯಾವುದನ್ನೆಲ್ಲ ಮುಖ್ಯ, ನಮ್ಮದು ಎಂದುಕೊಂಡಿದ್ದೇವೆಯೋ ಅವನ್ನೆಲ್ಲ ನೀಗಿಕೊಳ್ಳಬೇಕಲ್ಲವೆ? ವಚನಕಾರರು ಹೇಳುವಂತೆ "ನಿರಾವಲಂಬಿ"ಗಳು ಆಗಬೇಕಲ್ಲವೆ? ಹಾಗೆ ಯಾವ ಮಾನಸಿಕ ಅವಲಂಬನೆಯೂ ಇಲ್ಲದೆ, ಸ್ವತಂತ್ರರಾಗುವುದಕ್ಕೆ ನಮಗೆ ನಿಜವಾಗಿಯೂ ಸಾಧ್ಯವಿದೆಯೋ ಅಥವ ಸ್ವಾತಂತ್ರ್ಯವೆಂಬುದು ಕೇವಲ ಸಾಧಿಸಲಾಗದ ಆದರ್ಶವೋ? ಸ್ವಾತಂತ್ರ್ಯದಿನದ ಸಮಯದಲ್ಲಿ ಈ ಯೋಚನೆಗಳು ಕಳವಳ ಹುಟ್ಟಿಸುತ್ತವೆ. ಮತ್ತೆ ಇಲ್ಲಿ ಹೇಳಿರುವ ಮಾತುಗಳು ಕೂಡ ಎಲ್ಲೆಲ್ಲೋ ನಾನು ಓದಿ ತಿಳಿದದ್ದೇ ಅನ್ನುವ ಸಂಗತಿ ಸ್ವಾತಂತ್ರ್ಯ ಎಷ್ಟು ಕಷ್ಟ ಅನ್ನುವುದನ್ನೇ ಹೇಳುವಂತಿದೆ!

~.~
  • olnswamy ರವರ ಬ್ಲಾಗ್
  • Login or register to post comments
  • 999 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 22, 2005 - 12:34pm — Nandu

Opputtene, aadare...

Nandu's picture

Hello Mr Swamy,

I am nandu, had met you with Belagere tata.

I cant help but empathise this feeling of yours. Its so true. A similar thought process hit me when i recently visited the US.

There I had to face a completely different environment where people lived and thought very differently.

This setup made me realise that we all live with fixed thinking patterns. Patterns which are inculcated in us by our brought up. Digging deeper i felt that the Indian brought up makes people more dependent on the environment.

Namma swatantryavannu naavu baalyadalle kaledukollutteve. Doddavaraadante adu bhayavaagi parinamisutte enisuttade.

I was faced with situations which i had never envisaged before. And i had no one to help me out. This forced me to think for myself and find my own solutions. And believe me the whole experience left me with a sense of elation. May be i was breaking the bonds i had imposed on myself for so long.

Monne DVG yavara essay oduttidde. Avara ondu suggestion bahala ishta vaayitu. That to develop an overall personality people need to travel to different countries and read up on their histories. From my personal experience i can say - this is very true.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 22, 2005 - 1:54pm — hpn

ಕನ್ನಡದಲ್ಲಿ ಬರೆಯಿರಿ

hpn's picture

ಸಾಧ್ಯವಾದಷ್ಟೂ ಕನ್ನಡದಲ್ಲಿ ಬರೆಯಿರಿ. ಕನ್ನಡದಲ್ಲಿ ಬರವಣಿಗೆ ಉತ್ತೇಜಿಸುವುದಕ್ಕೆ ಹುಟ್ಟು ಹಾಕಿರುವಂತದ್ದು ಈ ಪ್ರಾಜೆಕ್ಟ್. ಆಂಗ್ಲದಲ್ಲಿ ಬರೆದ ಕಾಮೆಂಟುಗಳಿಗೆ ಕತ್ತರಿ ಬೀಳುವುದು.

ಕನ್ನಡದಲ್ಲಿ ಹೇಗೆ ಟೈಪ್ ಮಾಡುವುದು ಎಂಬುದರ ಬಗ್ಗೆ ಮಾಹಿತಿ ಬೇಕಿದ್ದರೆ FAQ ಓದಿ.

--

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 25, 2005 - 7:24pm — Nandu

ಓಕೆ

Nandu's picture

ಇನ್ನು ಮೇಲೆ ಕನ್ನಡದಲ್ಲೆ ಬರೆಯುತ್ತೇನೆ. Laughing out loud

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಇರಿ ಆನಂದದೇ
  • ಇರಿ ಆನಂದದೇ
  • ಇಂದಿನ ನಮ್ಮ ತವಕ ತಲ್ಲಣಗಳು
  • ಕನ್ನಡವೇ ಜಾತಿ-ಧರ್ಮ-ದೇವರು ?
  • ಕನ್ನಡ ಕಣ್ಮಣಿ ಡಾ||ರಾಜ್ ರವರಿಗೆ ಇಂದು ಎಪ್ಪತ್ತೊಂಬತ್ತು ವರ್ಷಗಳು
Syndicate content

ಲೇಖಕರು

olnswamy's picture

ಪರಿಚಯ

ಅಧ್ಯಾಪಕ, ಸಾಹಿತ್ಯ ವಿದ್ಯಾರ್ಥಿ, ಓದುಗ, ಲೇಖಕ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಸಾಂಗರ್, ರಾಜಸ್ಥಾನ

(ಫೋಟೋ: ಸಿ ಎಸ್ ಶಾರದಾ ಪ್ರಸಾದ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಸ್ನೇಹ ಬ೦ಧನ
  • ಓದಿದ್ದು ಕೇಳಿದ್ದು ನೋಡಿದ್ದು-51 (kann)ADIGA
  • "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
  • ದೊಡ್ಡವರ ದೊಡ್ಡತನ
  • ಕೈ ಕೊಟ್ಟ ಜೆಟ್ ಏರ್
  • ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
  • ಈ ರೀತಿ ನಿಮ್ಮ ಮನೇಲಿ ಆದರೆ ನೀವು ಏನು ಮಾಡ್ತೀರಿ?
  • ನೂರು ಕನ್ನಡಿಗಳ ದೇಗುಲ
  • ಇವತ್ತು ಕೈ ತೊಳೆಯುವ ದಿನವಂತೇ...!!!
  • ನಿಮ್ಮ ಬ್ರೌಸರ್‌ನಲ್ಲಿಯೇ ಬಿಸಿ ಬಿಸಿ ಸುದ್ದಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • mowna
    ಉ: ಕನ್ನಡಿಗ ಅರವಿಂದ ಅಡಿಗಗೆ ಬೂಕರ್ ಗರಿ
    October 16, 2008 - 12:10pm
  • ASHOKKUMAR
    ಉ: ಸೈಕಲ್ ರಿಕ್ಷಾಗೆ ಸೌರಶಕ್ತಿ
    October 16, 2008 - 12:05pm
  • gurubaliga
    ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
    October 16, 2008 - 12:05pm
  • mahesha
    ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
    October 16, 2008 - 12:01pm
  • savithasr
    ಉ: 'ಸಂಪದಿಗ' ಪುಲ್ಲಿಂಗ ಆದರೆ..ಸ್ತ್ರೀಲಿಂಗ ಏನಾಗುತ್ತೆ?
    October 16, 2008 - 12:00pm
  • gurubaliga
    ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
    October 16, 2008 - 11:57am
  • ರಾಮಕುಮಾರ್
    ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
    October 16, 2008 - 11:54am
  • shylaswamy
    ಉ: ನಾನು ಯಾವ ಕಾಲದಲ್ಲಿ ಇದ್ದೇನೆ...!?
    October 16, 2008 - 11:51am
  • savithasr
    ಉ: 'ಸಂಪದಿಗ' ಪುಲ್ಲಿಂಗ ಆದರೆ..ಸ್ತ್ರೀಲಿಂಗ ಏನಾಗುತ್ತೆ?
    October 16, 2008 - 11:51am
  • mahesha
    ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
    October 16, 2008 - 11:48am
ಇನ್ನಷ್ಟು
ಈಗಿನಂತೆ 20 ಸದಸ್ಯರು ಮತ್ತು 183 ಅತಿಥಿಗಳು ಆನ್ಲೈನ್ ಇರುವರು.


ಕೇಡಿಗನ ಭಕ್ತಿ ನಿಜವೆಂದು ನಂಬದಿರು| ಮಠದೊಳಗಣ ಬೆಕ್ಕು ಸಾತ್ವಿಕ ಜೀವನ ನಡೆಸಿದರೂ ಇಲಿಯ ಕಂಡರೆ ಪುಟನೆಗೆದು ಓಡುತ್ತದೆ

— ದೇವರ ದಾಸಿಮಯ್ಯ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator