ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › olnswamy ರವರ ಬ್ಲಾಗ್

ಅನುವಾದ ಅಕಾಡೆಮಿ ಏನು ಮಾಡಬಹುದು?

September 28, 2005 - 9:13am — olnswamy

ಗೆಳೆಯರೆ, ಇಂದು ಪತ್ರಿಕೆಗಳಲ್ಲಿ ಅನುವಾದ ಅಕಾಡೆಮಿಯನ್ನು ಕರ್ನಾಟಕ ಸರ್ಕಾರ ಆರಂಭಿಸಿರುವ ಬಗ್ಗೆ ಸುದ್ದಿ ಪ್ರಕಟವಾಗಿದೆ. ಸನುವಾದಕ್ಕಾಗಿಯೇ ಅಕಾಡೆಮಿಯೊಂದು ಸ್ಥಾಪನೆಗೊಂಡಿರುವುದು, ಬಹುಶಃ ಭಾರತೀಯ ಭಾಷೆಗಳಲ್ಲಿ ಇದೇ ಮೊದಲು.
ಈ ಅಕಾಡೆಮಿಗಾಗಿ ಯಾವ ಧ್ಯೇಯೋದ್ದೇಶಗಳನ್ನು ಸರ್ಕಾರ ಗೊತ್ತು ಮಾಡಿದೆಯೋ ತಿಳಿಯದು. ಇನ್ನೂ ಮೊದಲ ಸಭೆ ನಡೆಯಬೇಕಾಗಿದೆ.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯದಲ್ಲಿ ನಿಜವಾಗಿ ಆಸಕ್ತರಾದ ಸಂಪದ ಬಳಗದ ಸದಸ್ಯರು ಈ ಅಕಾಅಡೆಮಿ ಯಾವ ಕಾರ್ಯಗಳನ್ನು ಮಾಡಬಹುದೆಂಬ ಬಗ್ಗೆ ಸಲಹೆಗಳನ್ನು ನೀಡಿದರೆ ಉಪಕಾರವಾಗುತ್ತದೆ.
ಅಕಾಡೆಮಿಗಳೆಂದರೆ ಕೇವಲ ಬಹುಮಾನ ನೀಡುವ ಸಂಸ್ಥೆಗಳಾಗಿಬಿಟ್ಟಿರುವುದು ವಿಷಾದಕರ. ಬಹುಮಾನ ಮನ್ನಣೆಗಳನ್ನು ನೀಡುವುದು ಮುಖ್ಯವೇ ಆದರೂ ಅದೊಂದೇ ಕೆಲಸವಾಗಬಾರದು
ಕನ್ನಡಕ್ಕೆ ಉಪಯುಕ್ತವಾಗುವಂಥ ಯಾವ ಬಗೆಯ ಕೆಲಸಗಳನ್ನು ಭಾಷಾಂತರ ಅಕಾಡೆಮಿ ಕೈಗೆತ್ತಿಕೊಳ್ಳಬಹುದು ಎಂಬ ಬಗ್ಗೆ ಗೆಳೆಯರಿಂದ ಸಲಹೆ ಸೂಚನೆಗಳನ್ನು ನಿರೀಕ್ಷಿಸಿದ್ದೇನೆ. ನನ್ನನ್ನೂ ಈ ಅಕಾಡೆಮಿಯ ಒಬ್ಬ ಸದಸ್ಯನ್ನಾಗಿ ಸರ್ಕಾರ ನೇಮಿಸಿರುವುದಂರಿಂದ ಈ ಬಗ್ಗೆ ಸಹಜವಾಗಿಯೇ ನಿಮ್ಮ ಅನಿಸಿಕೆಗಳನ್ನು ತಿಳಿಯಲು ಆಸಕ್ತಿ, ಕುತೂಹಲ.
ಬರೆಯುವಿರಷ್ಟೆ?

~.~
  • olnswamy ರವರ ಬ್ಲಾಗ್
  • Login or register to post comments
  • 768 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 28, 2005 - 11:03am — ಪ್ರಶಾಂತ.ಪಂಡಿತ

ಅನುವಾದ ಅಕಾಡೆಮಿಯ ಬಗ್ಗೆ ...

ಪ್ರಶಾಂತ.ಪಂಡಿತ's picture

ಮೊದಲು ಸ್ವಾಮಿಯವರಿಗೆ ಅಭಿನಂದನೆಗಳು. ಅನುವಾದವೆಂದೊಡನೆ ನನಗೆ ಫಕ್ಕನೆ ನೆನಪಾದದ್ದು ನಿರಂಜನರ ಸಂಪಾದಕತ್ವದಲ್ಲಿ ಪ್ರಕಟವಾದ ವಿಶ್ವಕಥಾಕೋಶ. ನಾನು ಹೈಸ್ಕೂಲಿನಲ್ಲಿದ್ದಾಗ ಈ ಮಾಲಿಕೆಯ ಎಲ್ಲಾ ಪುಸ್ತಕಗಳನ್ನೂ ತಪ್ಪದೇ ಓದಿದ್ದೆ. ಇಂತಹ ಅಮೂಲ್ಯ ಕೃತಿಗಳನ್ನು ಪ್ರಕಟಿಸುವ ಕೆಲಸ ಅಗತ್ಯವಾಗಿ ಆಗಬೇಕಿದೆ. ಹಾಗೆಂದ ಮಾತ್ರಕ್ಕೆ ಕಥೆ ಕವನಗಳನ್ನು ಮಾತ್ರ ಅನುವಾದಿಸಬೇಕೆಂದು ಹೇಳುತ್ತಿಲ್ಲ. 'ಕನ್ನಡ'ದ ಮೂಲಕ ಜಗತ್ತಿನ ಅತ್ಯುತ್ತಮ ಕೃತಿಗಳನ್ನು ಗ್ರಹಿಸುವ ಕೆಲಸ ಆಗಬೇಕಿದೆ. ಇಂಗ್ಲಿಷ್ ಭಾಷೆಯಲ್ಲಿಂದು ಲಭ್ಯವಿರುವ ಕೃತಿಗಳ ವೈವಿಧ್ಯ, ವ್ಯಾಪ್ತಿ, ಮೌಲ್ಯಗಳನ್ನು ಗಮನಿಸಿದರೆ ನಮಗೆ, ಕನ್ನಡಿಗರಿಗೆ, ಇಂತಹ ಕೃತಿಗಳು ನಮ್ಮದೇ ಭಾಷೆಯಲ್ಲಿ ನಮ್ಮದೇ ಅನುಭವಗಳ ಮೂಲಕ ಗ್ರಹಿಸುವ ಅಗತ್ಯ ಎಷ್ಟಿದೆಯೆಂದು ತಿಳಿಯುತ್ತದೆ. ಏಕೆಂದರೆ, ಇಂಗ್ಲಿಷನಲ್ಲಿರುವ ಬಹುತೇಕ ಕೃತಿಗಳೂ ಬೇರೆ ಭಾಷೆಗಳಿಂದ ಅನುವಾದಗೊಂಡಿರುತ್ತವೆ. ಇನ್ನೊಂದು ಮುಖ್ಯ ವಿಚಾರ - ನಮಗೆ ಇತರೆ ಭಾರತೀಯ ಭಾಷೆಗಳಲ್ಲಿರುವ ಕೃತಿಗಳೂ ಸಿಗಬೇಕು. ಹಾಗೆಯೇ ಕನ್ನಡದ ಮಹತ್ವದ ಕೃತಿಗಳನ್ನು ಜಗತ್ತಿಗೆ ಪರಿಚಯಿಸುವ ಕೆಲಸ ಆಗಬೇಕು.

ಇವಿಷ್ಟು ನನ್ನ ಸಧ್ಯದ ಅನ್ನಿಸಿಕೆಗಳು. ಸ್ವಾಮಿಯವರನ್ನು ಹಾಗು ಅಕಾಡೆಮಿಯ ಎಲ್ಲಾ ಸದಸ್ಯರನ್ನು ಮತ್ತೊಮ್ಮೆ ಅಭಿನಂದಿಸುತ್ತಾ ನಿಮ್ಮೆಲ್ಲರಿಂದ ಒಳ್ಳೆಯ ಯೋಜನೆಗಳು ರೂಪುಗೊಂಡು ಅನುಷ್ಟಾನಕ್ಕೆ ಬರಲೆಂದು, ಕನ್ನಡಿಗರೆಲ್ಲರ ಬೆಂಬಲ, ಸಹಕಾರ ನಿಮ್ಮೊಂದಿಗಿರುತ್ತದೆಂದು ಆಶಿಸುತ್ತೇನೆ.

- ಪ್ರಶಾಂತ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 28, 2005 - 4:53pm — ravikh

ಅನುವಾದ ಹಾಗು ವ್ಯಾಖ್ಯಾನ...

ravikh's picture

ಆತ್ಮಿಯರೇ, ಅನುವಾದ ಅಕಾಡೆಮಿಯ ಆರಂಭಕ್ಕೆ ನನ್ನ ಅಭಿನಂದನೆಗಳು.
ನಾನು ಮುಖ್ಯವಾಗಿ ಕಾಣುವ ವಿಚಾರವೆಂದರೆ,
* ಆಕಾಡೆಮಿ, ಯಾವುದೇ ಕೃತಿಯ ಅನುವಾದದ ಹಾದಿಯಲ್ಲಿ ಅದರ ವ್ಯಕ್ತಿಗತ ವ್ಯಾಖ್ಯಾನವಾಗದಂತೆ (Interpretation) ಜಾಗರೂಕತೆವಹಿಸುವುದು ಅತ್ಯಗತ್ಯ.

ವಂದನೆಗಳೊಂದಿಗೆ,
ರವಿಶಂಕರ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 28, 2005 - 11:29am — beluru

ಅನುವಾದ ಅಕಾಡೆಮಿ

beluru's picture

ಹಲವು ವರ್ಷಗಳಿಂದ ಅನುವಾದ ಮಾಡಿಕೊಂಡೇ ಬಂದಿರುವ ನನಗೆ ಅನುವಾದ ಅಕಾಡೆಮಿ ಒಳ್ಳಯ ಯೋಜನೆಯಾಗಿ ಕಾಣುತ್ತಿದೆ. ಆದರೆ ಎಲ್ಲ ಅಕಾಡೆಮಿಗಳಂತೆ ಇದೂ ಸರ್ಕಾರದ ಒಂದು ಹಳೆ ಬಾವುಟ ಆಗದಿರಲಿ ಎಂದು ಆಶಿಸುವೆ.
ನಾನು ಪ್ರವಾಸ ಹೊರಡುವ ಗಡಿಬಿಡಿಯಲ್ಲಿರುವೆ. ಹೀಗಾಗಿ ನನ್ನ ಆಭಿಪ್ರಾಯ ಹಾಗೂ ಸಲಹೆಗಳನ್ನು ಅಕ್ಟೋಬರ್‌ ಮೂರನೇ ವಾರ ನೀಡುವೆ. ಸಮಕಾಲೀನ ಅಂದರೆ ಕಳೆದ ಒಂದು ದಶಕದ ಉತ್ತಮ ಕೃತಿಗಳನ್ನು ಅನುವಾದ ಮಾಡುವ ಬಗ್ಗೆ ತಾವು ಗಮನ ನೀಡಬಹುದೆ? ಯಾಕೆಂದರೆ ಇತ್ತೀಚೆಗೆ ಅನುವಾದ ಎಂದರೆ ಹಳೆಯ ಜನಪ್ರಿಯ ಪುಸ್ತಕವನ್ನು ಅನುವಾದಿಸುವುದೇ ಆಗಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 28, 2005 - 2:21pm — Gopinath Rao

ಒ ಏಲ್ ಎನ್

Gopinath Rao's picture

ಒ ಏಲ್ ಎನ್ ಸ್ವಾಮಿಯವರಿಗೆ ಅಭಿನಂದನೆಗಳು.

ಏನು ಮಾಡಬಹುದು ಅಂತ ಸಲಹೆ ಕೇಳಿದ್ದೀರಾ. ಪ್ರಾಮಾಣಿಕವಾದ ಆಶಯಕ್ಕೆ ನನ್ನ ಅಭಿಪ್ರಾಯ ಹೀಗಿದೆ:
೧. ಇಂಗ್ಲಿಷ್ ಹಾಗೂ ಹಿಂದಿ ಬಿಟ್ಟು ಇತರ ಭಾರತೀಯ ಭಾಷೆಯ ಸಾಹಿತ್ಯ ಕನ್ನಡಕ್ಕೆ ಅನುವಾದಗೊಳ್ಳ ಬೇಕು
(ಹಿಂದಿ ಇಂಗ್ಲಿಷ್ ಗಳನ್ನು ಬಿಡುವುದು ನಾವೆಲ್ಲ ಶಾಲೆಯಲ್ಲಿ ಕಲಿತಿದ್ದೇವೆ, ಬೇಕಿದ್ದರೆ ಮೂಲ ಲೇಖನಗಳನ್ನೇ ಓದಬಹುದು ಎಂಬ ಕಾರಣಕ್ಕಾಗಿ)
೨. ಕನ್ನಡದ ಉತ್ತಮ ಹಾಗೂ ಇತ್ತೀಚೆಗಿನ ಜನಪ್ರಿಯ ಹಾಗೂ ವೈಚಾರಿಕ ಸಾಹಿತ್ಯ ಮುಖ್ಯವಾಗಿ ಇಂಗ್ಲಿಷಿಗೆ ಹಾಗೂ ಹಿಂದಿಗೆ ಅನುವಾದಗೊಳ್ಳಬೇಕು.
(ಮುಖ್ಯವಾಗಿ ಹಿಂದಿ ಮತ್ತು ಇಂಗ್ಲಿಷಿಗೆ ಯಾಕೆ ಅಂದರೆ ಇದರಿಂದ ಬಹಳಷ್ಟು ಭಾರತೀಯರನ್ನು ತಲುಪಬಹುದು ಹಾಗೂ ಕನ್ನಡದ ರುಚಿ ಹಿಡಿಸಬಹುದು)
೩. ಪುಸ್ತಕಗಳ ಗುಣಮಟ್ಟ ಅತ್ಯುತ್ತಮವಾಗಿರಬೇಕಾದದ್ದು ಬಹಳ ಮುಖ್ಯ.
೪. ನಿಮ್ಮ ಒತ್ತು ಕನ್ನಡದ ಪುಸ್ತಕಗಳನ್ನು ಇತರ ಭಾಷೆಗೆ ಅನುವಾದಿಸುವುದರತ್ತ ಇರಲಿ.

ಮತ್ತೊಮ್ಮೆ ಅಭಿನಂದನೆಗಳು ಹಾಗೂ ಶುಭ ಹಾರೈಕೆಗಳು.
ಗೋಪೀನಾಥ ರಾವ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 28, 2005 - 7:20pm — pavanaja

ನನ್ನ ಅಭಿಪ್ರಾಯ

pavanaja's picture

ನನ್ನ ಅಭಿಪ್ರಾಯವನ್ನು ಎಲ್ಲರಿಂದ ಮೊದಲೇ ನಾನು ಇಲ್ಲಿ ದಾಖಲಿಸಿದ್ದೇನೆ. ಇನ್ನೇನಾದರೂ ನೆನಪಾದರೆ ಬರೆಯುತ್ತೇನೆ. ಉಳಿದಂತೆ ಈಗಾಗಲೇ ಹಲವರು ಬರೆದಿರುವ ಎಲ್ಲ ಅಭಿಪ್ರಾಯಗಳಿಗೆ ನನ್ನ ಸಹಮತವಿದೆ.

ಸಿಗೋಣ,
ಪವನಜ
-----------
Think globally, Act locally

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನಾಡಿನ ಜ್ವಲಂತ ಸಮಸ್ಯೆಗಳ ಬಗ್ಗೆ ಗಮನ ಹರಿಸಬೇಕೆಂದು ಆಗ್ರಹಿಸಿ ಕ.ರ.ವೇ. ಜುಲೈ 7 ರಂದು ಬೆಂಗಳೂರಿನಲ್ಲಿ ಜಾಥ ನಡೆಸಿತು
  • ಸಂಪದ ಏನು ಮಾಡಬಹುದು
  • ಪಾವೆಂ ಹೇಳಿದ ಕಥೆ
  • ’ಅನಿವಾಸಿ’ - ಈ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
  • ನಮಗೆ ರಿಮೇಕ್ ಪತ್ರಿಕೆ ಬೇಕೇ?
Syndicate content

ಲೇಖಕರು

olnswamy's picture

ಪರಿಚಯ

ಅಧ್ಯಾಪಕ, ಸಾಹಿತ್ಯ ವಿದ್ಯಾರ್ಥಿ, ಓದುಗ, ಲೇಖಕ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು-11
  • ಶಿವರಾಜ್ ಕುಮಾರ ಅಭಿಮಾನಿಗಳಿಗೆ ಮತ್ತೇರಿಸುವ ಚಿತ್ರ " ಮಾದೇಶ "
  • ಹಬ್ಬ ತಂದ ನೆನಪು...
  • ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
  • ಆಧುನಿಕ "ಬೇಡರ ಕಣ್ಣಪ್ಪ"..
  • ವೃತ್ತಿಜೀವನದ ಹಂತಗಳು...
  • ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
  • ಓದಿದ್ದು ಕೇಳಿದ್ದು ನೋಡಿದ್ದು-10
  • ಮೊದಲ ಚಿತ್ರ
  • ಬಿಗುಮಾನದ ಚಿತ್ರಗಳು
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 6:48am
  • kalpana
    ಉ: ಜೀವ ಕಾಯುವುದೇತಕೆ?
    September 7, 2008 - 5:19am
  • kalpana
    ಉ: ಮೊದಲ ಚಿತ್ರ
    September 7, 2008 - 1:48am
  • srivathsajoshi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 12:24am
  • yuvapremi
    ಉ: Splendours of Royal Mysore
    September 6, 2008 - 10:19pm
  • yuvapremi
    ಉ: ಮೊದಲ ಚಿತ್ರ
    September 6, 2008 - 10:11pm
  • ASHOKKUMAR
    ಉ: ಹಬ್ಬ ತಂದ ನೆನಪು...
    September 6, 2008 - 9:59pm
  • uniquesupri
    ಉ: ಜೀವ ಕಾಯುವುದೇತಕೆ?
    September 6, 2008 - 9:30pm
  • cmariejoseph
    ಉ: ಹಬ್ಬ ತಂದ ನೆನಪು...
    September 6, 2008 - 9:16pm
  • cmariejoseph
    ಉ: ಚಂದಿರನ ನೋಡಿದವ
    September 6, 2008 - 9:01pm
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 167 ಅತಿಥಿಗಳು ಆನ್ಲೈನ್ ಇರುವರು.


ಕನ್ನಡಕ್ಕೆ ಇಂಗ್ಲೀಷು ಕಿಂಚಿತ್ತು ಬೆರಸಲದ ಸಿನ್ನುಗಳ ಲಿಸ್ಟಿನಲಿ ಹೈಯೆಸ್ಟು ಅದರಿಂದ ಫನ್ನಿಗೂ ಮಿಕ್ಸದಿರು ಸರ್ವಜ್ಞ.

— ನಾ. ಕಸ್ತೂರಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator