ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › Sampada Blogs › pallavi.dharwad ರವರ ಬ್ಲಾಗ್

ಜೀವ ಗಂಧ

ಎಲ್ಲರ ಬಂಧಿಸುವ ಎಳೆ ಹುಡುಕುತ್ತಾ...

ಅನಾಮಧೇಯರಾಗಿರುವ ಖುಷಿ!

June 1, 2008 - 1:20pm — pallavi.dharwad

ಒಮ್ಮೆ ಸುಮ್ಮನೇ ಯೋಚಿಸಿ ನೋಡಿ!

ನೀವು ಯಾವುದೋ ಜಾಗಕ್ಕೆ ಹೋಗುತ್ತೀರಿ. ಅಲ್ಲಿ ಜನ ನಿಮ್ಮನ್ನು ಮುತ್ತಿಕೊಳ್ಳುತ್ತಾರೆ. ನಿಮ್ಮ ಬಗ್ಗೆ ವಿಚಾರಿಸುತ್ತಾರೆ. ಆಟೊಗ್ರಾಫ್‌ ತೆಗೆದುಕೊಳ್ಳುತ್ತಾರೆ. ಫೋಟೊ ತೆಗೆಸಿಕೊಳ್ಳುತ್ತಾರೆ. ಕಾರ್ಯಕ್ರಮಗಳಿಗೆ ಬರುವಂತೆ ಒತ್ತಡ ಹೇರುತ್ತಾರೆ. ಅವರ ಪ್ರೀತಿ ಮೊದಮೊದಲು ಸಂತಸ ತಂದರೂ, ಕ್ರಮೇಣ ಕಿರಿಕಿರಿ ಶುರುವಾಗುತ್ತದೆ. ಯಾವ ಉದ್ದೇಶಕ್ಕೆ ನೀವು ಹೋಗಿರುತ್ತೀರೋ, ಅದನ್ನು ಬಿಟ್ಟು ಉಳಿದೆಲ್ಲದೂ ನಡೆಯುತ್ತಿರುತ್ತದೆ.

ಆದರೆ, ಈ ಜಾಗದಲ್ಲಿ ಇನ್ನೊಂದು ಚಿತ್ರಣ ಊಹಿಸಿ ನೋಡಿ!

ನೀವು ಹೋದ ಜಾಗದಲ್ಲಿ ಯಾರೂ ನಿಮ್ಮನ್ನು, ’ನೀವೇ’ ಎಂದು ಗುರುತಿಸುವುದಿಲ್ಲ. ನೀವು ಎಲ್ಲರನ್ನೂ ಸುಮ್ಮನೇ ಗಮನಿಸುತ್ತ ಹೋಗುತ್ತೀರಿ. ಅದರಲ್ಲಿ ಎಷ್ಟೋ ಜನರ ಬಗ್ಗೆ ನಿಮಗೆ ಚೆನ್ನಾಗಿ ಗೊತ್ತಿರುತ್ತದೆ. ಆದರೂ, ನೀವು ಅವರೊಂದಿಗೆ ಮಾತನಾಡುವುದಿಲ್ಲ. ಪರಿಚಯ ಮಾಡಿಕೊಳ್ಳುವುದಿಲ್ಲ. ಸುಮ್ಮನೇ ವಾತಾವರಣವನ್ನು ಅನುಭವಿಸುತ್ತ, ಸನ್ನಿವೇಶವನ್ನು ಅರ್ಥ ಮಾಡಿಕೊಳ್ಳುತ್ತ, ಹೋದ ಕೆಲಸವನ್ನು ಮುಗಿಸಿಕೊಂಡು ವಾಪಸ್ಸಾಗುತ್ತೀರಿ.

ಯಾವುದು ನಿಮಗೆ ಇಷ್ಟ?

ಆಯ್ಕೆ ನಿಮ್ಮದು. ನನ್ನನ್ನು ಕೇಳಿದರೆ, ಎರಡನೆಯದೇ ನನಗೆ ಇಷ್ಟ. ಜನ ಗುರುತಿಸುವುದು ಖುಷಿ ಕೊಡುತ್ತದೆ ನಿಜ. ಆದರೆ, ಕ್ರಮೇಣ ಅದು ನಮ್ಮ ಖಾಸಗಿತನವನ್ನು ಕಿತ್ತುಕೊಂಡು ಬಿಡುತ್ತದೆ. ಹಾಗಂತ, ಜನರಿಂದ ದೂರವಾಗಿ ಇರುವುದೂ ಸಾಧ್ಯವಿಲ್ಲ. ಪರಿಚಯದ ನಡುವೆ ಒಂದಿಷ್ಟು ಅನಾಮಧೇಯತೆ, ಸಂತೆಯೊಳಗೆ ಒಂಟಿತನ, ಗುಂಪಿನ ನಡುವೆ ಒಬ್ಬಂಟಿಯಾಗಿರುವುದು ಖುಷಿ ಕೊಡುತ್ತದೆ. ಯಾರೂ ನಮ್ಮನ್ನು ವಿಶೇಷವಾಗಿ ಗುರುತಿಸಲಿಲ್ಲ ಎಂಬ ನೋವಿಗಿಂತ, ಹಾಗೆ ದೂರವಾಗಿದ್ದುಕೊಂಡೇ ಎಲ್ಲವನ್ನೂ ಮನ ತಣಿಯೇ ಆಸ್ವಾದಿಸಬಹುದು.

ಏಕೋ ಇತ್ತೀಚೆಗೆ ಈ ವಿಚಾರವೇ ಮನಸ್ಸನ್ನು ತುಂಬಿಕೊಂಡಿದೆ.

ಯಾರೂ ಯಾರನ್ನೂ ವಿಶೇಷವಾಗಿ ಗುರುತಿಸುವುದು ಬೇಕಿಲ್ಲ ಅನಿಸುತ್ತದೆ. ಪರಿಚಯ ಇರಲಿ, ಗೌರವ ಇರಲಿ, ಆದರೆ ಅತ್ಯುತ್ಸಾಹ ಬೇಡ. ಅವರವರ ಖಾಸಗಿತನ ಅವರವರಿಗೆ ಇರಲಿ. ಅಭಿಮಾನ ವ್ಯಕ್ತಪಡಿಸಲು ಬೇರೆ ಮಾರ್ಗಗಳು ಸಾಕಷ್ಟಿವೆ.

ಟಿವಿ ತಾರೆಯರು, ಸಿನಿಮಾ ನಟ-ನಟಿಯರು, ಕ್ರೀಡಾಪಟುಗಳು ಅನಗತ್ಯ ಗಮನಕ್ಕೆ ಸಿಲುಕುತ್ತಾರೆ. ಅವರನ್ನು ಮುತ್ತಿಕೊಂಡು ಹಿಂಸಿಸುವುದಕ್ಕಿಂತ, ಅಭಿಮಾನ ಇದ್ದರೆ, ದೂರ ನಿಂತು ಮುಗುಳ್ನಗುವುದು ಉತ್ತಮವಲ್ಲವೆ?

- ಪಲ್ಲವಿ ಎಸ್‌.

  • ಅಭಿಮಾನ
  • ಒಂಟಿತನ
  • ಜನಪ್ರಿಯತೆ
  • ವ್ಯಕ್ತಿ
~.~
  • pallavi.dharwad ರವರ ಬ್ಲಾಗ್
  • Login or register to post comments
  • 327 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 3, 2008 - 11:33am — Akshaya rama K

ಉ: ಅನಾಮಧೇಯರಾಗಿರುವ ಖುಷಿ!

Akshaya rama K's picture

Nice.... Obbane tirugaadodu andre nangoo tumbaa ishta....
(sorry, nanna system yako Kannada support madta illa.. So "Kanglish" use madtaa iddene..)

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2008 - 10:02pm — pallavi.dharwad

ಉ: ಅನಾಮಧೇಯರಾಗಿರುವ ಖುಷಿ!

pallavi.dharwad's picture

ಕನ್ನಡದಲ್ಲಿ ಬರೆಯೋದು ಸುಲಭ. ಸಂಪದದಲ್ಲಿ ಅದಕ್ಕೆ ಸಂಬಂಧಿಸಿದ ಸಾಕಷ್ಟು ಮಾಹಿತಿ ಇದೆ. ವಿರಾಮವಾಗಿ ಹುಡುಕಿ.

ಒಬ್ಬರೇ ತಿರುಗೋದಕ್ಕಿಂತ, ಒಬ್ಬರೇ ಕೂತು ಕನ್ನಡ ಬರೆಯುವುದನ್ನು ರೂಢಿಸಿಕೊಳ್ಳಿ. ಇದು ನನ್ನ ಆತ್ಮೀಯ ಸಲಹೆ.

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 3, 2008 - 11:20pm — sushil

ಉ: ಅನಾಮಧೇಯರಾಗಿರುವ ಖುಷಿ!

sushil's picture

ತುಂಬ ಚೆನ್ನಾಗಿದೆ ವಿಷಯ.ಅದೆಷ್ಟು ಬಾರಿ ಹೀಗೆ ಅನಿಸಿದೆಯೋ.

ನಿಜ..ಯಾರ ಖಾಸಗಿತನಕ್ಕೂ ಅಡ್ಡಿ ಮಾಡುವ ಅಧಿಕಾರ ನಮಗಿಲ್ಲ.ನಾವೆಲ್ಲ ದಿನವೂ ಎಲ್ಲೆಲ್ಲೋ ಹೋಗಿ-ಬಂದು ಮಾಡುತ್ತಿರುತ್ತೇವೆ.ಯಾರದರೂ ಪರಿಚಯದವರು ಕಂಡರೆ ಮಾತು-ಕತೆ. ಇಲ್ಲಾ..ನಮ್ಮ ಪಾಡಿಗೆ ನಾವು ಸುತ್ತಲಿರುವ ಜನ,ವಾಹನ,ಮನೆಗಳು,ಗುಡಿ..ಹೀಗೆ ಕಂಡದ್ದೆಲ್ಲವನ್ನೂ ಆಸ್ವಾದಿಸುತ್ತಾ ನಡೆದುಬಿಡುತ್ತೇವೆ.ನಾನಂತೂ ಆಗಾಗ ಒಬ್ಬಂಟಿಯಾಗಿ ಇಷ್ಟವಾದ ಹಾಡು ಕೇಳುವ,ಇಷ್ಟವಾದುದನ್ನು ಮೆಲ್ಲುವ,ಮಳೆಯಲ್ಲಿ ನೆನೆಯುವ..ಹಲವಾರು ಅಮೃತಘಳಿಗೆಗಳನ್ನು ಆದಷ್ಟು ಆಸ್ವಾದಿಸುತ್ತಿರುತ್ತೇನೆ.

ಒಂದೊಮ್ಮೆ ನೆನೆಸಿಕೊಳ್ಳಿ..ಕೆಲಸ ಮುಗಿಸಿ ಮನೆಗೆ ಬಸ್ಸಿನಲ್ಲಿ ಹೋಗುತ್ತಿದ್ದೀರಿ ಹೊರಗೆ ಚೆಂದದ ಮಳೆ ಸುರಿಯುತ್ತಿದೆ.ಆಗ ತಾನೆ ಬರುತ್ತಿರುವ ಮಣ್ಣಿನ ವಾಸನೆ ಮನಸ್ಸಿಗೆ ಖುಷಿ ಕೊಡುತ್ತಿದೆ.ಮನೆ ಇನ್ನೂ ಸ್ವಲ್ಪ ದೂರವಿರುವಾಗಲೇ ಇಳಿಯುವ ಮನಸ್ಸಾಗುತ್ತದೆ.ರಸ್ತೆಯಲ್ಲಿ ನಿಮ್ಮ ಪಾಡಿಗೆ ನೀವು ಹಾಡು ಕೇಳುತ್ತಾ ಮಳೆಯಲ್ಲಿ ನೆನೆಯುತ್ತಾ ಪ್ರಕೃತಿಯನ್ನ ಆಸ್ವಾದಿಸುತ್ತಾ ನಡೆದುಬಿಡುತ್ತೀರಿ ನಿಮ್ಮ ಐಪಾಡ್ ನೆನೆಯುತ್ತಿದೆ ಎಂಬುದನ್ನೂ ಮರೆತು!!

ಅದೇ ರಸ್ತೆಯಲ್ಲೀಗ ದಿನವೂ ಸಿಗುವ ಗೆಳೆಯ ಸಿಕ್ಕು ಅದೇ ರಾಗ ಹಾಡತೊಡಗಿದರೆ ಸಹಜವಾಗಿಯೇ ಮನಸ್ಸಿಗೆ ಬೇಸರವಾಗುತ್ತದೆ.ಹೀಗಿರುವಾಗ ದಿನವೂ ನೂರಾರು ಜನರನ್ನು ಭೇಟಿ ಮಾಡುವ ಸ್ಟಾರ್ ಗಳಿಗೆ ಖಾಸಗೀಯತೆ ತುಂಬ ಬೇಕಿರುತ್ತದೆ.ಅವರ ಮನೆಗೆ ಕಾಲಿಟ್ಟು ಧೂಳು ಮಾಡುವುದು ಸರಿಯಲ್ಲ ಅಲ್ಲವೇ?

-ಸುಶೀಲ್.ಎಸ್.ಬಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2008 - 10:00pm — pallavi.dharwad

ಉ: ಅನಾಮಧೇಯರಾಗಿರುವ ಖುಷಿ!

pallavi.dharwad's picture

ನಿಜ ಸುಶೀಲ್‌,

ಏಕೋ ಕೆಲವೊಮ್ಮೆ ಮೌನ ತುಂಬ ಇಷ್ಟವಾಗುತ್ತದೆ. ಮಾತು ಸುತಾರಾಂ ಬೇಡ ಅನ್ನಿಸುತ್ತದೆ. ಹಾಗೆ ಸುಮ್ಮನಿದ್ದಿದ್ದನ್ನು ತಪ್ಪು ತಿಳಿದುಕೊಂಡವರಿದ್ದಾರೆ. ಆದರೆ ಮೌನ ಎಂಬುದು ಎಂಥಾ ಸಮೃದ್ಧ ಭಾಷೆ ಗೊತ್ತಾ?

ಮನಸ್ಸು ಮುದುಡಿದರೆ, ಮೌನಕ್ಕಿಂತ, ಏಕಾಂತಕ್ಕಿಂತ ಉತ್ತಮ ಔಷಧ ಇನ್ನೊಂದಿಲ್ಲ. ನಿಮ್ಮ ವಿಚಾರಗಳು ಚೆನ್ನಾಗಿವೆ. ನಮ್ಮ ಹಾಗೆ ವಿಚಾರ ಮಾಡುವ ಜನರನ್ನು ಕಂಡಾಗ, ನನ್ನ ಬಗ್ಗೆಯೇ ಆತ್ಮವಿಶ್ವಾಸ ಮೂಡುತ್ತದೆ.

ಬರೆಯುತ್ತಿರಿ. ಪ್ರತಿಕ್ರಿಯೆಗಳನ್ನಷ್ಟೇ ಅಲ್ಲ, ಸ್ವಂತ ಬರಹಗಳನ್ನೂ.

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಅನಾಮಧೇಯರಾಗಿರುವ ಖುಷಿ
  • ಅಕ್ಷರಗಳಿಂದ ದೂರ
  • Typical ನಲ್ಲನ ಒಲುಮೆಯಳಲು
  • ಕವಿತೆ ಬರೆಯೋಣ್ವಾ?
  • ಕವಿತೆ ಬರೆಯೋಣ್ವಾ?
Syndicate content

ಲೇಖಕರು

pallavi.dharwad's picture

ಪೂರ್ಣ ಹೆಸರು
ಪಲ್ಲವಿ ಎಸ್‌.

ಪರಿಚಯ

ಡಿಗ್ರಿ ಮುಗಿದಿದೆ. ಕೆಲಸದ ಗಾಣಕ್ಕೆ ಬೀಳಲು ಇಷ್ಟ ಇಲ್ಲ. ಆದ್ರೆ ಹಕ್ಕಿ ಹಾಡು, ಬೆಳ್ಳಂಬೆಳಿಗ್ಗೆ ಕರ್ನಾಟಕ ವಿಶ್ವವಿದ್ಯಾಲಯದ ಶಾಲ್ಮಲಾ ಕಣಿವೆಯಲ್ಲಿ ಸುತ್ತು ಹಾಕೋದು ಇಷ್ಟ. ಲೈನ್‌ ಬಜಾರ್‌ನಲ್ಲಿ ಅಡ್ಡಾಡುತ್ತ ಜನರನ್ನು ನೋಡ್ತಾ ಇರೋದು ಇಷ್ಟ. ಒಂಟಿ ಅನ್ನಿಸಿದಾಗ ಇಂಟರ್‌ನೆಟ್‌, ಕಂಪನಿ ಇದ್ದಾಗ ಸೋಮೇಶ್ವರ ದೇವಸ್ಥಾನ, ಕೆಲಗೇರಿ ಕೆರೆ. ಓದೋಕೆ ಇಷ್ಟ. ಇತ್ತೀಚಿಗೆ, ಬರೆಯೋದೂ ಇಷ್ಟ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಗುರುದತ್ ಎಂಬ ದುರಂತ ನಾಯಕ
  • ಸ್ವಲ್ಪನಗಿ
  • ಮೈಸೂರು ದಸರಾ ೨೦೦೮ ವೆಬ್ಕಾಸ್ಟ
  • ಪಾಪೆ ಸೆರೆ ಹಿಡಿಯೋದು ಸುಮ್ಮನೆ ಹಂಗೆ ಅಲ್ಲ!!
  • ಡೈರಿಯ ಕೆಲವು ಹಾಳೆಗಳು - ಭಾಗ ೯
  • ಅವಮಾನ್ ಅಂದರೆ ಯಾರು ? He man :-)
  • ನಾನು ಮರಾಠಿ ಕಲಿಯುವುದು, " ಅವ್ವಾಚೀ ಪರವಾನಗೀ ಇಲ್ಲಾ ; ಲಗ್ನ ಇಲ್ಲಾ ! "
  • ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
  • ಶಿವಮಣಿ ಎಂಬ ಅದ್ಭುತ ಪ್ರತಿಭೆ
  • ಹಿಮವದ್ ಗೋಪಾಲಸ್ವಾಮಿ ಬೆಟ್ಟ - ಪ್ರವಾಸ ಕಥನ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Rasikara Rajya
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 10, 2008 - 11:58pm
  • Rasikara Rajya
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 10, 2008 - 11:56pm
  • hpn
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 10, 2008 - 11:52pm
  • hamsanandi
    ಉ: ಸಂಗೀತ ನವರಾತ್ರಿ - ವಿಜಯ ದಶಮಿ
    October 10, 2008 - 11:17pm
  • hpn
    ಉ: ಪತನದ ಕತೆ
    October 10, 2008 - 10:16pm
  • Chetan.Jeeral
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೯
    October 10, 2008 - 10:10pm
  • hpn
    ಉ: ಪತನದ ಕತೆ
    October 10, 2008 - 10:07pm
  • hamsanandi
    ಉ: ಪತನದ ಕತೆ
    October 10, 2008 - 9:52pm
  • omshivaprakash
    ಉ: ಲಿನಕ್ಸಾಯಣ - ೨೨ - ಗ್ನೋಮ್ ಸಬ್ ಟೈಟಲ್ಸ್ - ದೃಶ್ಯಾವಳಿಯಲ್ಲಿ ಕನ್ನಡ
    October 10, 2008 - 9:30pm
  • hamsanandi
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 10, 2008 - 9:27pm
ಇನ್ನಷ್ಟು
ಈಗಿನಂತೆ 5 ಸದಸ್ಯರು ಮತ್ತು 62 ಅತಿಥಿಗಳು ಆನ್ಲೈನ್ ಇರುವರು.


ಏನಾದೊಡೆಯುಮಪ್ಪುದುಂಟು, ಸಿದ್ಧನಿರದಕೆ |
ಭಾನು ತಣುವಾದಾನು; ಸೋಮ ಸುಟ್ಟಾನು ||
ಕ್ಷೋಣಿಯೇ ಕರಗೀತು, ಜಗ ಶೂನ್ಯವಾದೀತು |
ಮೌನದಲಿ ಸಿದ್ಧನಿರು -- ಮಂಕುತಿಮ್ಮ ||

— ಡಿ ವಿ ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator