ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › Sampada Blogs › pallavi.dharwad ರವರ ಬ್ಲಾಗ್

ಜೀವ ಗಂಧ

ಎಲ್ಲರ ಬಂಧಿಸುವ ಎಳೆ ಹುಡುಕುತ್ತಾ...

ಏಕೆ ಹೀಗೆ ಅನಿಸುತ್ತದೆಯೋ!

May 20, 2008 - 4:10pm — pallavi.dharwad

ಬೆಳ್ಳಂಬೆಳಿಗ್ಗೆ ವಾಕಿಂಗ್‌ ಹೋದಾಗ, ಸುತ್ತ ಮುತ್ತ ತುಂಬಿರುವ ಶಾಂತಿ, ನಿರಾಳತೆ, ಸೊಬಗನ್ನು ನೋಡಿ ನಿಮಗೆ ಏನು ಅನ್ನಿಸುತ್ತದೆ?

ಇದರ ಹಿಂದೆ ಯಾವುದೇ ಎಳೆ ಇದೆ. ಅದೇ ಇವೆಲ್ಲವನ್ನೂ ಬಂಧಿಸಿದೆ. ಒಂದಕ್ಕೆ ಇನ್ನೊಂದನ್ನು ಆಸರೆಯಾಗಿ ಮಾಡಿದೆ ಎಂದು ಅನಿಸುವುದಿಲ್ಲವಾ? ನಾನಂತೂ ಪ್ರತಿಯೊಂದು ಸೊಗಸಿನ ಹಿಂದೆ, ನೋವಿನ ಹಿಂದೆ ಇಂಥದೊಂದು ಎಳೆ ಹುಡುಕುತ್ತಲೇ ಡಿಗ್ರಿ ಮುಗಿಸಿದೆ. ಹಲವಾರು ಗೆಳತಿಯರೊಂದಿಗೆ ಈ ಬಗ್ಗೆ ಚರ್ಚಿಸಿ ಬೈಸಿಕೊಂಡೆ. ವಯಸ್ಸಿಗೆ ತಕ್ಕ ಹಾಕಿರಬೇಕು ಎಂದು ಬುದ್ಧಿ ಹೇಳಿಸಿಕೊಂಡೆ. ವಯಸ್ಸಿಗೆ ತಕ್ಕಂತೆ ಇರುವುದು ಅಂದರೆ ಏನು? ನಮ್ಮ ಯೋಚನೆಗಳನ್ನು ವಯಸ್ಸು ನಿರ್ಧರಿಸಬೇಕೆ ಅಥವಾ ನಮ್ಮ ನಮ್ಮ ವಿಚಾರಗಳೆ?

ಇಂತಹ ಪ್ರಶ್ನೆಗಳು ನಿಮ್ಮನ್ನೂ ಕಾಡಿವೆಯೆ? ಇವೆಲ್ಲ ಘಟನೆಗಳ ಹಿಂದೆ, ಪೋಣಿಸಿಟ್ಟಂತಹ ಬೆಳವಣಿಗೆಗಳ ಹಿಂದೆ ಯಾವುದೋ ಒಂದು ಶಕ್ತಿ ಇದೆ ಎಂದು ಅನಿಸುತ್ತಿಲ್ಲವೆ? ದೇವರೆನ್ನಿ, ಪ್ರಕೃತಿ ಎನ್ನಿ, ಅಥವಾ ಭೌತಶಾಸ್ತ್ರದ ನಿಯಮಗಳು ಎನ್ನಿ, ಒಂದು ವಿಶಿಷ್ಟ ಶಕ್ತಿ ಖಂಡಿತ ಇದೆ. ಅದನ್ನು ನೆನೆದರೆ ಅಚ್ಚರಿಯಾಗುತ್ತದೆ. ಅಲ್ಲವೆ?

ನನ್ನ ವಾದವನ್ನು ನೀವು ಖಂಡಿಸಬಹುದು. ಬೆಂಬಲಿಸಬಹುದು. ಒಂದು ಆರೋಗ್ಯಕರ ಚರ್ಚೆಗೆ ಕಾರಣವಾಗಬಹುದು. ಆದರೆ ನನ್ನ ಮನಸ್ಸು ಮಾತ್ರ ಆ ಎಳೆಯನ್ನೇ ಎಲ್ಲೆಡೆ ಕಾಣುತ್ತ ಹೊಸ ಅರ್ಥವನ್ನು ಕಂಡುಕೊಳ್ಳುತ್ತ ಇದೆ. ಅದೆಲ್ಲ ಹೋಗಲಿ, ಬಾಬು ಸಿಂಗ್‌ ಠಾಕೂರ್‌ ಪೇಢಾ ತಿಂದಾಗಾದರೂ ನಿಮಗೆ ಇಂತಹ ಅನುಭವ ಆಗಿರಲಿಲ್ಲವೆ? ಹೇಳಿ?

- ಪಲ್ಲವಿ ಎಸ್‌.

  • ವೈಯಕ್ತಿಕ
~.~
  • pallavi.dharwad ರವರ ಬ್ಲಾಗ್
  • Login or register to post comments
  • 364 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 22, 2008 - 11:24am — ಹರೀಶ್

ಉ: ಏಕೆ ಹೀಗೆ ಅನಿಸುತ್ತದೆಯೋ!

ಹರೀಶ್'s picture

ನಿಜ ಪಲ್ಲವಿ ಅವರೇ ನಾವು ಪ್ರತಿಯೊ೦ದು ಅಚ್ಚರಿ, ರೋಮಾ೦ಚನಕಾರಿ ಅಥವಾ ಮನಸ್ಸಿಗೆ ಇಷ್ಟವಾಗುವ ಸ೦ಗತಿಗಳನ್ನು ಕ೦ಡಾಗ ಅವು ಯಾವುದೂ ಮೂಲಕ್ಕೆ ಜೋಡಿಸಿಕೊ೦ಡ೦ತೆ ಭಾಸವಾಗುತ್ತೆ.
ವಯಸ್ಸಿಗೆ ತಕ್ಕಂತೆ ಇರುವುದು ಅಂದರೆ ಏನು? ಇದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ..ಏಕೆ೦ದರೆ ಆ ರೀತಿಯ ಆಲೋಚನೆಗಳು ನಮ್ಮನ್ನು ಭಾವ ಜೀವಿಗಳಾಗಲು ಬಿಡುವುದಿಲ್ಲ ..ಹಾಯಾಗಿ ಬೆಳ್ಳಂಬೆಳಿಗ್ಗೆ ವಾಕಿಂಗ್‌ ಎ೦ಜಾಯ್ ಮಾಡಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 26, 2008 - 1:43pm — pallavi.dharwad

ಉ: ಏಕೆ ಹೀಗೆ ಅನಿಸುತ್ತದೆಯೋ!

pallavi.dharwad's picture

ಇದು ತಲೆ ಕೆಡಿಸಿಕೊಂಡ ವಿಚಾರವಲ್ಲ ಹರೀಶ್‌. ಮನಸ್ಸಿಗೆ ಅನ್ನಿಸಿದ್ದು, ಅಷ್ಟೇ. ನೀವೇ ಹೇಳಿದಂತೆ, ಅಚ್ಚರಿ, ರೋಮಾಂಚನಕಾರಿ ಅಥವಾ ಮನಸ್ಸಿಗೆ ಇಷ್ಟವಾದ ಸಂಗತಿಗಳನ್ನು ಕಂಡಾಗ ಅವು ಯಾವುದೋ ಮೂಲಕ್ಕೆ ಜೋಡಿಸಿಕೊಂಡಂತೆ ಭಾಸವಾಗುತ್ತದೆ ಎಂದೇ ಅಲ್ಲವೆ? ನನಗೆ ಅನ್ನಿಸಿದ್ದೂ ಇಂಥದೇ ಇರಬೇಕಲ್ಲವೆ? ಇದರಲ್ಲಿ ತಲೆ ಕೆಡಿಸಿಕೊಳ್ಳುವಂಥದ್ದು ಏನೂ ಇಲ್ಲ. ಮನಸ್ಸು ಅರಳಿಸುವಂಥದ್ದು ಇದು.

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 7, 2008 - 4:53am — mallik

ಉ: ಏಕೆ ಹೀಗೆ ಅನಿಸುತ್ತದೆಯೋ!

mallik's picture

ಈ ಎಳೆ ಹುಡುಕುದೂ ಒಂದ್ ಥರ ಮಜಾ, ಆದ್ರ ಏನ್ ಮಾಡುದು ಅದರ ಬಗ್ಗೆ ವಿಚಾರ ಮಾಡ್ಕೋಂತ ಮಾಡ್ಕೋಂತ ಹೋದ್ರ ಬರೇ confusion ಅ! ನಾನೂ ಯಾವಾಗಲೂ ಅದರ ಬಗ್ಗೆನ ವಿಚಾರ ಮಾಡ್ಕೋಂತ ಇರ್ತಿದ್ದ್ಯ...ಆದ್ರ ಸ್ವಲ್ಪ difference ಏನ್ ಅಂತ ಅಂದ್ರ, ನಾನು ಮನುಷ್ಯ ಮತ್ತು ಇನ್ನೊಬ್ಬ ಮನುಷ್ಯ ಇವರ ನಡುವಿನ ಎಳೆ ಬಗ್ಗೆ ಜಾಸ್ತಿ ವಿಚಾರ ಮಾಡ್ತಿದ್ದ್ಯ. ಹುಡುಕ್ಕೊಂತ ಹೋದಾಗ ಒಳ್ಳೆ ಅನುಭವಾ ನೂ ಆಗ್ಯಾವು, ಆ ಎಲ್ಲ ಒಳ್ಳೆದನ್ನ ಮರಸು ಅಂಥ ಕೆಟ್ಟನೂ ಆಗ್ಯಾವು. ಎಳೆ ಕಡಕೊಂಡು ನಾ ಹೋಗೇ ಹೊಕ್ಕೆನಿ ಅನ್ನವ್ರಿಗೆ ತಡಿಯಾಕ್ ಬರುದಿಲ್ಲ.

ಆದ್ರ ಒಂದ್ ಮಾತ್ರ ಖರೆ, ಗಾಂಧಿ ಭವನದಿಂದ ನಮ್ಮ ಕಂಪ್ಯೂಟರ್ ಡಿಪಾರ್ಟ್ಮೆಂಟ್ ತನ ಆ ಹಸರ್ ನೋಡ್ಕೊಂತ, ದಾರ್ಯಾಗ ಆ ಅದ್ಭುತ K.U.D ಲೈಬ್ರರಿ ನೋಡ್ಕೊಂತ 2 ವರ್ಷ ಮಟ ದಿನಾ ಲೂ ಹೊಕ್ಕಿದ್ದೆ, ಡಿಪಾರ್ಟ್ಮೆಂಟ್ ಕಡೆನ ಅಜ್ಜನ ಕ್ಯಾಂಟೀನ್ ನ್ಯಾಗ ಮಸ್ತ್ ಗಿರ್ಮಿಟ್ ತಿನ್ಬೇಕಾದ್ರ ಒಂದ್ ಒಂದ್ ಸೇಲ್ ನಂಗ ಹಂಗಾ ಅನ್ನಿಸ್ತಿತ್ತು...ಏನೋ ಎಳೆ ಐತಿ ಅಂತ. ಯಾವ್ ಎಳೆ? ಎಲ್ಲೇ ಐತಿ? ಹೆಂಗ ಐತಿ? ಅನೂದು ಇನ್ನೂ ಸಿಕ್ಕಿಲ್ಲ...ಆದ್ರ ನಾ ಬರೆ ಆ ಗಿರ್ಮಿಟ್ ಸಂಭಂದ ಇನ್ನು ಅಲ್ಲೇ ಹೊಕ್ಕಿರತೆನಿ...ಹೊದಾಗ್ ಒಂದ್ ಸಲ again ತಲಿಯಾಗ್ ಅದಾ ವಿಚಾರ ಬರತಾವು. ಇವತ್ತ ನಿಮ್ಮ ಇ ಬ್ಲಾಗ್ ಓದಿ ಇವೆಲ್ಲ ನೆನಪಾತು. ನೆನಪಿಸಿ ಕೊಟ್ಟಿದ್ದಕ್ಕ ಥಾಂಕ್ಸ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 8, 2008 - 6:59pm — pallavi.dharwad

ಉ: ಏಕೆ ಹೀಗೆ ಅನಿಸುತ್ತದೆಯೋ!

pallavi.dharwad's picture

ನನ್ನ ಬರವಣಿಗೆ ನಿಮಗೆ ಹಳೆಯ ದಿನಗಳನ್ನು ನೆನಪಿಸಿತೇ? ಕೇಳಿ ಖುಷಿಯಾಯಿತು. ನೀವೂ ಬರೀರಿ. ಇಂಥ ಅನುಭವಗಳು ಕೊಡೋ ಸುಖಾನೇ ಬೇರೆ.

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಏಕೆ ಹೀಗೆ ಅನಿಸುತ್ತದೆಯೋ!
  • ಮುಂದೆ ನೀ ಹೋದಾಗ... (ಸಿಗರೇಟ್...!) ಹಿಂದೆ ನಾ ಬರುವೆ ಚಿನ್ನ...(ಟೂ... ವೀಲ್ಹರ್‍)
  • ನಮ್ಮ ಮೂಗಿನ ನೇರಕ್ಕೆ
  • ಏ.ಟಿ.ಎಂ ನ ಸರದಿಯಲ್ಲಿ ನಿಂತಾಗ-ರಘೋತ್ತಮ್ ಕೊಪ್ಪರ
  • ಮನಸ್ಸು
Syndicate content

ಲೇಖಕರು

pallavi.dharwad's picture

ಪೂರ್ಣ ಹೆಸರು
ಪಲ್ಲವಿ ಎಸ್‌.

ಪರಿಚಯ

ಡಿಗ್ರಿ ಮುಗಿದಿದೆ. ಕೆಲಸದ ಗಾಣಕ್ಕೆ ಬೀಳಲು ಇಷ್ಟ ಇಲ್ಲ. ಆದ್ರೆ ಹಕ್ಕಿ ಹಾಡು, ಬೆಳ್ಳಂಬೆಳಿಗ್ಗೆ ಕರ್ನಾಟಕ ವಿಶ್ವವಿದ್ಯಾಲಯದ ಶಾಲ್ಮಲಾ ಕಣಿವೆಯಲ್ಲಿ ಸುತ್ತು ಹಾಕೋದು ಇಷ್ಟ. ಲೈನ್‌ ಬಜಾರ್‌ನಲ್ಲಿ ಅಡ್ಡಾಡುತ್ತ ಜನರನ್ನು ನೋಡ್ತಾ ಇರೋದು ಇಷ್ಟ. ಒಂಟಿ ಅನ್ನಿಸಿದಾಗ ಇಂಟರ್‌ನೆಟ್‌, ಕಂಪನಿ ಇದ್ದಾಗ ಸೋಮೇಶ್ವರ ದೇವಸ್ಥಾನ, ಕೆಲಗೇರಿ ಕೆರೆ. ಓದೋಕೆ ಇಷ್ಟ. ಇತ್ತೀಚಿಗೆ, ಬರೆಯೋದೂ ಇಷ್ಟ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ವಾಪಾಸ್ ಬಂದುಬಿಟ್ಟೆ...!
  • ಸ್ವಲ್ಪ ಖುಷಿ... ಸ್ವಲ್ಪ ದುಃಖ... ಈ ಬ್ಲಾಗ್‌ಗಳು....
  • ಕನಸು ಕದ್ದ ಹುಡುಗಿ...
  • ಚೌರದವನ ಕಷ್ಟ ಸುಖ
  • ಇ೦ದಿನಿ೦ದ ಸ೦ಪದ ಬಳಗದಲ್ಲಿ ನಾನೂ ಒಬ್ಬ
  • ಹನ್ನೊಂದು ಅಡಿ ಎತ್ತರದ ತಂಬೂರಿ!
  • ಓದಿದ್ದು ಕೇಳಿದ್ದು ನೋಡಿದ್ದು-46 ಅರ್ಥಶಾಸ್ತ್ರದಲ್ಲಿ ನೋಬೆಲ್ ವಿಜೇತ,ಪ್ರಶಸ್ತಿಯ ಹಣವನ್ನು ಎಲ್ಲಿ ಹೂಡಲಿದ್ದಾರೆ?
  • ಗುರುದತ್ ಎಂಬ ದುರಂತ ನಾಯಕ
  • ಸ್ವಲ್ಪನಗಿ
  • ಮೈಸೂರು ದಸರಾ ೨೦೦೮ ವೆಬ್ಕಾಸ್ಟ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • palachandra
    ಉ: ಕುಮಾರ ಪರ್ವತದಲ್ಲಿ ಚಾರಣ
    October 11, 2008 - 10:14pm
  • ಚನ್ನಬಸವಪುತ್ತೂರ್ಕರ್
    ಉ: ಇ೦ದಿನಿ೦ದ ಸ೦ಪದ ಬಳಗದಲ್ಲಿ ನಾನೂ ಒಬ್ಬ
    October 11, 2008 - 9:40pm
  • rajeshnaik111
    ಉ: ಕುಮಾರ ಪರ್ವತದಲ್ಲಿ ಚಾರಣ
    October 11, 2008 - 9:25pm
  • vijayp
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 9:20pm
  • mowna
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 7:04pm
  • hpn
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 6:29pm
  • anivaasi
    ಉ: ಪತನದ ಕತೆ
    October 11, 2008 - 6:06pm
  • anivaasi
    ಉ: ಪತನದ ಕತೆ
    October 11, 2008 - 6:05pm
  • anivaasi
    ಉ: ಪತನದ ಕತೆ
    October 11, 2008 - 5:50pm
  • venkatesh
    ಉ: (ಈಚಲುಮರಗಳು) ಪಾಮ್ ಮರಗಳು, ಹಾಗೂ ನೀರಿನ-ಬುಗ್ಗೆಗಳು !
    October 11, 2008 - 5:00pm
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 47 ಅತಿಥಿಗಳು ಆನ್ಲೈನ್ ಇರುವರು.


ಒಲವಿನ ನೋವುಗಳು ಅದರ ಸಂತೋಷಗಳಿಗಿಂತ ಸವಿಯಾಗಿರುತ್ತವೆ.

— ಜಾನ್ ಡ್ರೈಡನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator