ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ ಬಗ್ಗೆ ನನ್ನ ಲೇಖನ
ಎಲ್ಲರಿಗೂ ನಮಸ್ಕಾರ,
ಬಹುದಿನಗಳ ನಂತರ ಇಲ್ಲಿ ಬರೆಯುತ್ತಿದ್ದೇನೆ.
ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡದ ಸರಿಯಾದ ಅಳವಡಿಕೆ ಮತ್ತು ಶಿಷ್ಟತೆ ಬಗ್ಗೆ ಸಲಹೆ ನೀಡಲು ಸಮಿತಿಯೊಂದನ್ನು ಕರ್ನಾಟಕ ಸರಕಾರವು ಹಿಂದೊಮ್ಮೆ ನೇಮಿಸಿತ್ತು. ಆ ಸಮಿತಿ ತನ್ನ ವರದಿ ನೀಡಿ ಅದರಂತೆ ಕೆಲವು ಅಧಿಸೂಚನೆ ಹೊರಡಿಸಿದ್ದು, ನುಡಿ ಎಂಬ ತಂತ್ರಾಶವನ್ನು ತಯಾರಿಸಿ ಬಿಡುಗಡೆ ಮಾಡಿದ್ದು -ಇವೆಲ್ಲ ಈಗ ಇತಿಹಾಸ. ಆದರೆ ಯುನಿಕೋಡ್ ಜಗತ್ತಿನಲ್ಲಿ ನುಡಿ ತನ್ನ ಪ್ರಸ್ತುತತೆಯನ್ನು ಕಳೆದುಕೊಳ್ಳುತ್ತದೆ. ಇದಕ್ಕೆ ಕಾರಣ ವಿಂಡೋಸ್ ಎಕ್ಸ್ಪಿ ಮತ್ತು ಲಿನಕ್ಸ್ಗಳಲ್ಲಿ ಕಾರ್ಯಾಚರಣೆಯ ವ್ಯವಸ್ಥೆಯಲ್ಲೇ ಕನ್ನಡ ಯುನಿಕೋಡ್ ಬಳಸಲು ಬೇಕಾದ ಎಲ್ಲ ಸವಲತ್ತುಗಳು ಲಭ್ಯವಿವೆ. ಲಿನಕ್ಸ್ನಲ್ಲಿ ನುಡಿ ಕೆಲಸ ಮಾಡುವುದೂ ಇಲ್ಲ.
ಈ ಸಂದರ್ಭದಲ್ಲಿ ಒಂದು ಸರಳವಾದ ಲೇಖನವನ್ನು ಬರೆದುಕೊಡಿ ಎಂದು ಉಷಾಕಿರಣ ಪತ್ರಿಕೆಯ ಜಯರಾಮ ಅಡಿಗರ ಕೋರಿಕೆ ಮೇರೆಗೆ ನಾನು ಒಂದು ಲೇಖನ ಬರೆದು ಕೊಟ್ಟಿದ್ದೆ. ಅದನ್ನು ಈಗ ನನ್ನ ತಾಣದಲ್ಲಿ ಓದಬಹುದು. ದಯವಿಟ್ಟು ಓದಿ ಚರ್ಚೆಯಲ್ಲಿ ಭಾಗವಹಿಸಿ. ಈಗಾಗಲೇ ಒಂದಿಬ್ಬರು ತಮ್ಮ ಅಭಿಪ್ರಾಯ ದಾಖಲಿಸಿದ್ದಾರೆ.
ಸಿಗೋಣ,
ಪವನಜ

- pavanaja ರವರ ಬ್ಲಾಗ್
- Login or register to post comments
- 1014 hits
- Email this blog





RSS:
ಪ್ರತಿಕ್ರಿಯೆಗಳು
ಒಂದು ಸಲಹೆ
ನಿಮ್ಮ ಲೇಖನವನ್ನು ಓದಿದೆ. ಅದು ಚೆನ್ನಾಗಿದೆ. ಸಂಪದದ ಲೇಖನ ವಿಭಾಗ ಇಲ್ಲವೇ ಸಂಪದದಲ್ಲಿ ಇರುವ ನಿಮ್ಮ ಬ್ಲಾಗ್ ನಲ್ಲಿ ಹಾಕಿದರೆ ಸಂಪದ ಸದಸ್ಯರೂ ಈ ಕುರಿತ ಚರ್ಚೆಯಲ್ಲಿ ಭಾಗವಹಿಸಬಹುದು ಎಂಬುದು ನನ್ನ ಅನಿಸಿಕೆ.
ಇಸ್ಮಾಯಿಲ್
ಲೇಖನದ ಮುಂದಿನ ಭಾಗ
ಈ ಲೇಖನದ ಮುಂದುವರೆದ ಭಾಗವಾಗಿ ಯುನಿಕೋಡ್ -ಮಿಥ್ಯೆ ಮತ್ತು ವಾಸ್ತವ ಎಂಬ ಶೀರ್ಷಿಕೆಯ ಲೇಖನ ಇಂದು ಉಷಾಕಿರಣದಲ್ಲಿ ಪ್ರಕಟವಾಗಿದೆ. ಅದನ್ನು ವಿಶ್ವಕನ್ನಡದಲ್ಲೂ ಓದಬಹುದು. ನಿಮ್ಮ ಸಲಹೆ ಟೀಕೆಗಳಿಗೆ ಸ್ವಾಗತ.
ಸಿಗೋಣ,
ಪವನಜ
-----------
Vishva Kannada
Think globally, Act locally