December 15, 2009 - 1:01am
ನನ್ನ ಗೆಳೆಯರೊಬ್ಬರಿಗೆ ಕೆಂಪೇಗೌಡನ ಬಗ್ಗೆ ಸ್ವಲ್ಪ ಮಾಹಿತಿ ಬೇಕಾಗಿದೆ. ಸಂಪದ ಸೂಕ್ತ ಸ್ಥಳವೆಂದು ಇಲ್ಲಿ ಬರೆಯುತ್ತಿದ್ದೇನೆ.
ಘಟನೆ/ಕಥೆಯ ಸಾರಾಂಶ ಇದು - ಅವರ ತಲೆಮಾರಿನ ಹಿರಿಯರ ಮನೆಯಲ್ಲಿ (ನೆಲಮಂಗಲ ಬಳಿ ಮೋಟಗಾನಹಳ್ಳಿ) ಕೆಂಪೇಗೌಡ ಎನ್ನುವವರು ಕೆಲಸಕ್ಕೆ ಇದ್ದರು. ಹೊಲದಲ್ಲಿ ನಿಧಿ ದೊರೆಯಿತು. "ನಿಧಿ ನನ್ನದು" - "ಇಲ್ಲಾ ನನ್ನದು" ಎನ್ನುವ ಕಲಹದ ಬದಲು "ಇದು ನಿಮಗೆ ಸೇರಿದ್ದು" - "ಇಲ್ಲಾ ಇದು ನಿಮ್ಮದೇ" ಎನ್ನುವ ಮಾತು ಕೇಳಿತು. ಇಬ್ಬರ ಹೃದಯ ಸಂಪನ್ನತೆಯೂ ದೊಡ್ಡದು!
ನಾನು ಬಹಳ ಹಿಂದೆ ಇದೇ ರೀತಿಯ ಘಟನೆಯ ಕುರಿತು ಎಲ್ಲೋ ಓದಿದ್ದೆ. ಆದರೆ ವ್ಯಕ್ತಿ,ವಿವರಗಳು ಮತ್ತು ಪುಸ್ತಕದ ನೆನಪಿಲ್ಲ.
ಮಾಗಡಿ ಕೆಂಪೇಗೌಡನ ಬಗೆಗಿನ ಪುಸ್ತಕ/ಐತಿಹ್ಯ/ಕಥೆಗಳಲ್ಲಿ ಈ ಕುರಿತ ಮಾಹಿತಿ ಯಾರಿಗಾದರೂ ತಿಳಿದಿದೆಯೇ? ತಿಳಿದವರು ಪುಸ್ತಕದ ವಿವರಗಳನ್ನು ತಿಳಿಸಲು ಸಾಧ್ಯವೇ? ಮುಂಚಿತವಾಗಿ ಧನ್ಯವಾದಗಳು.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:





ಪ್ರತಿಕ್ರಿಯೆಗಳು
ಉ: ಮಾಗಡಿ ಕೆಂಪೇಗೌಡ ಮತ್ತು ನಿಧಿ - ಮಾಹಿತಿ ಬೇಕಾಗಿದೆ
ಕೆಂಪೇಗೌಡರ ಬಗೆಗಿನ ಈತಿಹ್ಯದಲ್ಲಿ ಈ ರೀತಿ ಇರುವುದು ಕಾಣೆ.
ನಾನು ಒದಿದ್ದು "ವಾರಪತ್ರಿಕೆ" ಎಂಬ weekly ನಲ್ಲಿ ನಾನು ಒಂದನೆಯ ತರಗತಿಯಲ್ಲಿದ್ದಾಗ. ಅದು ಅಲೆಕ್ಸಾಂಡರ್ ಭಾರತಕ್ಕೆ ದಂಡೆತ್ತಿ ಬಂದಾಗ ನಡೆಯುವ ಘಟನೆ!