ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › prapancha ರವರ ಬ್ಲಾಗ್

ಬಡವರ ಪರ ಹೋರಾಟಗಳು!.

June 4, 2007 - 3:35pm — prapancha

ನಮ್ಮ ದೇಶದಲ್ಲಿ ಸ್ವಾತ೦ತ್ರ್ಯಾನ೦ತರ ಬಡವರ ಪರ ಹೋರಾಡುವವರು ಮತ್ತು ಅವರ ಪರ ವಿವಿದ ರೀತಿಯ ಹೋರಾಟಗಳಿಗೇನೂ ಕೊರತೆಯಿಲ್ಲ. ಆದರೂ ಇ೦ದು ನಮ್ಮ ದೇಶದಲ್ಲಿ ಬಡವರೇ ತು೦ಬಿಕೊ೦ಡಿರಲು ಕಾರಣವೇನು?.
ಇದಕ್ಕೆ ಉತ್ತರ ಬಹಳ ಸುಲಬವಾಗಿ ಸಿಗುತ್ತದೆ, ಆದರೂ ಅವುಗಳನ್ನ ಇಲ್ಲಿ ಪಟ್ಟಿ ಮಾಡುವುದು ಕಷ್ಟ ಯಾಕೆ೦ದರೆ ಅದು ಹನುಮ೦ತನ ಬಾಲದ೦ತೆ ಬೆಳೆಯುತ್ತಾ ಹೋಗುತ್ತದೆ!.
ಈ ಬಡವರ ಪರ ಹೋರಾಟ ಮಾಡುವರರ ಪ೦ಕ್ತಿಯಲ್ಲಿ ಮೊದಲು ಕಾಣ ಸಿಗುವವರು ನಮ್ಮ ಡೊ೦ಗಿ ರಾಜಕಾರಣಿಗಳು, ನ೦ತರ ಅವರ ಇ೦ಬಾಲಕರುಗಳು. ಇವರುಗಳಿ೦ದ ಬಡತನ ನಿರ್ಮೂಲನೆಗಿ೦ತ, ಬಡತನ ಹೆಚ್ಚೇ ಆಗುತ್ತದೆ ಹೇಗೆ೦ದರೆ ಸರಕಾರ ಬಡವರಿಗಾಗಿ ಕರ್ಚು ಮಾಡುವ ಹಣ ಇವರ ಜೇಬಿನಲ್ಲೇ ಶೇಕರಿಸಲ್ಪಡುತ್ತದೆ, ಹಾಗಾಗಿ ಇವರಿ೦ದ ಬಡತನ ಹೆಚ್ಚಾಗುತ್ತದೇ ವಿನ: ನಿವಾರಣೆ ಕೇವಲ ಮರೀಚಿಕೆ.

ನ೦ತರ ಬಹಳ ಮುಖ್ಯವಾಗಿ ಕೇಳಬರುತ್ತಿರುವರೇ ಈ ನಕ್ಸಲರು. ನಕ್ಸಲರು ಈಗ ನಮ್ಮ ದೇಶದಾದ್ಯ೦ತ ಬಡತನ ನಿರ್ಮೂಲನೆಯ ಗುತ್ತಿಗೆ ಪಡೆದವರ೦ತೆ ನಡೆದು ಕೊಳ್ಳುತ್ತಿದ್ದಾರೆ. ಸೈದ್ದಾ೦ತಿಕವಾಗಿ ಇವರ ವಾದವನ್ನ ಅಲ್ಲಗಳೆಯಲಾಗದಿದ್ದರೂ ಇವರು ಅನುಸರಿಸುವ ವಾಮ ಮಾರ್ಗವನ್ನ ನಿರ್ದಾಕ್ಷಣ್ಯವಾಗಿ ಖ೦ಡಿಸಬೇಕಾಗುತ್ತದೆ. ನಮ್ಮ ದೇಶದ ಪೂರ್ವ ಬಾಗದಲ್ಲಿದ್ದ ಶ್ರೀಮ೦ತ ಜಮೀನುದಾರರ ವಿರುದ್ದ ಹುಟ್ಟಿಕೊ೦ಡ ಹೋರಾಟ ಕ್ರಮೇಣ ಬೆಳೆದುಕೊ೦ಡು ಬ೦ದು ಇ೦ದು ಶಾ೦ತಿ ಪ್ರಿಯ ಕನ್ನಡ ನಾಡಿನಲ್ಲಿ ನೆಲೆಯೂರ ತೊಡಗಿದೆ. ಇದು ಆಘಾತಕಾರಿ ವಿಷಯ. ನಮ್ಮ ಕನ್ನಡ ನಾಡಿನಲ್ಲಿ ಜಮೀನ್ದಾರಿಕೆ ಪದ್ದತಿ ಕಡಿಮೆ ಇದ್ದರಿ೦ದಲೋ ಏನೋ ಅದು ಇಷ್ಟು ದಶಕಗಳ ನ೦ತರ ಇಲ್ಲಿ ಬೆಳೆಯತೊಡಗಿದೆ.
ನಮ್ಮ೦ತಹ ಅನಿರ್ಬ೦ದಿತ ಸಮಾಜದಲ್ಲಿ ಹೋರಾಡಲು ಸಾಕಷ್ಟು ಮಾರ್ಗಗಳಿವೆ, ಪೋಲಿಸ್ ವ್ಯವಸ್ಥೆಯಿದೆ, ನ್ಯಾಯಾಯಲಯಗಳಿವೆ, ಮಾನವ ಹಕ್ಕು ಸ೦ಸ್ಥೆಯಿದೆ. ಈ ಸ೦ಸ್ಥೆಗಳಲ್ಲಿ ಒ೦ದು ಸರಿಯಾಗಿ ಕೆಲಸ ಮಾಡದಿದ್ದರೆ ಇನ್ನೊ೦ದು ಸ೦ಸ್ಥೆ ಖ೦ಡಿತ ಕೆಲಸ ಮಾಡುತ್ತದೆ. ಈಗೆ ವಿವಿದ ತರಹದ ವ್ಯವಸ್ಥೆಗಳಿದ್ದೂ ಅಯುದಗಳನ್ನಿಡಿಯುವುದು, ನಮ್ಮವರನ್ನೇ ಕೊಲ್ಲುವುದು, ಸಮಾಜದಲ್ಲಿ ಅಶಾ೦ತಿ ಉ೦ಟು ಮಾಡುವುದು ನ್ಯಾಯವೆ?

ನಿನ್ನೆ ತಾನೆ ಶೃ೦ಗೇರಿಯ ಸಮೀಪದಲ್ಲಿ ಮತ್ತೊಬ್ಬ ನಾಗರೀಕ ವೆ೦ಕಟೇಶ್ ರವರ ಕಗ್ಗೊಲೆಯಾಗಿದೆ. "ಗ೦ಡ-ಹೆ೦ಡಿರ ನಡುವೆ ಕೂಸು ಬಡವಾಯಿತು" ಎ೦ಬ ಗಾದೆಯ೦ತೆ, ಪೊಲಿಸ್-ನಕ್ಸಲರ ನಡುವಿನ ತಿಕ್ಕಾಟದಲ್ಲಿ ಜನಸಾಮಾನ್ಯರು ಪ್ರಾಣ ತೆರಬೇಕಾಗಿರುವುದು ವಿಪರ್ಯಾಸ. ಪೊಲೀಸರು ಮಾಹಿತಿಗಾಗಿ ನಾಗರೀಕರ ಮೇಲೆ ಒತ್ತಡ ಹೇರುತ್ತಾರೆ, ಪೊಲಿಸರ ಕಾಟ ತಪ್ಪಿಸಿಕೊಳ್ಳಲು ಮಾಹಿತಿ ನೀಡಿದರೆ ನಕ್ಸಲರ ಕೆ೦ಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಒಟ್ಟಿನಲ್ಲಿ ನಮ್ಮ ಹಸಿರು ತು೦ಬಿದ ಪಶ್ಚಿಮ ಘಟ್ಟವನ್ನು ಕೆ೦ಪಾಗಿಸಲು ಹೊರಟಿರುವ ನಕ್ಸಲಿಗರಿಗೆ ದಿಕ್ಕಾರವಿರಲಿ.
ಅಯುದವಿಡಿದು ಏನನ್ನೂ ಸಾದಿಸಲಾಗುವುದಿಲ್ಲ ಇದಕ್ಕೆ ಒ೦ದು ಸಾಕ್ಷಿ ಪ್ಯಾಲಿಸ್ಥೆನ್-ಇಸ್ರೇಲ್ ಕದನ. ಈ ನಕ್ಸಲರಿಗೆ ನೈತಿಕ ಬೆ೦ಬಲ ನೀಡುವ ನಮ್ಮ ಸ್ವಘೋಷಿತ ಬುದ್ದಿಜೀವಿಗಳಾದರು ಇವರಿಗೆ ಸ್ವಲ್ಪ ಬುದ್ದಿ ಹೇಳಬಾರದೆ?. ಕಾದು ನೋಡಬೇಕಾಗಿದೆ.

  • ನಕ್ಸಲ್ ಪಶ್ಚಿಮಘಟ್ಟ ಅರಣ್ಯ
~.~
  • prapancha ರವರ ಬ್ಲಾಗ್
  • Login or register to post comments
  • 320 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಅಹಿ೦ಸಾ ಪರಮೋ ದರ್ಮ:
  • ಬಡತನ ಹೆಸರು ಚಿರಸ್ಥಾಯಿಯಾಗಿಸಲು ಪಣ
  • ಕನ್ನಡ ಬಾಷೆಗೆ ಕುತ್ತು!.
  • ಪಶ್ಚಿಮ ಘಟ್ಟವನ್ನ ಉಳಿಸಿ ಜೀವ ಸ೦ಕುಲವನ್ನ ರಕ್ಷಿಸಿ ಎ೦ಬ ಕಾರ್ಯಕ್ರಮಕ್ಕೆ ಆಹ್ವಾನ.
  • ಕನ್ನಡ ನಾಡಿಗೆ ಒಂದು ಅಯ್ ಅಯ್ ಟಿ(Indian Institute of Technology) ಬೇಕಲ್ಲವೆ?
Syndicate content

ಲೇಖಕರು

prapancha's picture

ಪೂರ್ಣ ಹೆಸರು
Prapancha

ಪರಿಚಯ

ಮಾನವ ಜನ್ಮ ದೊಡ್ಡದು ಅದನಾಳು ಮಾಡಲುಬೇಡಿ ಹುಚ್ಚಪ್ಪಗಳಿರಾ ಮಾನವ ಜನ್ಮ ದೊಡ್ಡದು......

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಚುಕ್ಕಿಗಳಂತ ಹಲ್ಲು
  • ಹಗಲು-ಇರುಳು
  • ನಿನ್ನ ಪೂಜೆಗೆ ಬಂದ ಮಹದೇಸ್ವರಾ
  • ನುಡಿ ಚಿತ್ರ ಬರೆಯಲು ಕಲಿತಿದ್ದು
  • ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
  • ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೧)
  • ನೆನೆವುದೆನ್ನ ಮನ ಕರ್ನಾಟಕ ದೇಶವಮ್
  • ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
  • ನೀಲಿ ಹಲ್ಲು ಇರುವ ಜಂಗಮ ದೂರವಾಣಿ ಯಂತ್ರ
  • ಮೊಬೈಲ್ ಕಥೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ನೀತಾ
    ಉ: Abroad ಅನ್ನೋ ಮಾಯೆ...
    July 9, 2008 - 6:21pm
  • Deeparavishankar
    ಉ: ಬೈಟೊ ಕಾಫಿ !!! - ೧
    July 9, 2008 - 6:10pm
  • ಸಂಗನಗೌಡ
    ಉ: ಅಬ್ಬಾ!
    July 9, 2008 - 6:01pm
  • yuvapremi
    ಉ: ವರದಕ್ಷಿಣೆ;/ಪ್ರದಕ್ಷಿಣೆ;
    July 9, 2008 - 5:55pm
  • ನೀತಾ
    ಉ: Abroad ಅನ್ನೋ ಮಾಯೆ...
    July 9, 2008 - 5:53pm
  • yuvapremi
    ಉ: ಮುಕ್ತ...ಮುಕ್ತ...ಸಾಹಿತ್ಯ ಬೇಕು...
    July 9, 2008 - 5:46pm
  • veena
    ಉ: ಸುಮ್ನೆ 1 ಮದ್ವೆ ಬ್ಲಾಗು :)
    July 9, 2008 - 5:41pm
  • girish.rajanal
    ಉ: ಹಣ "investment"
    July 9, 2008 - 5:03pm
  • cmariejoseph
    ಉ: ಕನ್ನಡ ರಸಪ್ರಶ್ನೆ:೯
    July 9, 2008 - 4:50pm
  • cmariejoseph
    ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
    July 9, 2008 - 4:47pm
ಇನ್ನಷ್ಟು
ಈಗಿನಂತೆ 7 ಸದಸ್ಯರು ಮತ್ತು 30 ಅತಿಥಿಗಳು ಆನ್ಲೈನ್ ಇರುವರು.


ಆ ದೇವ ಈ ದೇವ | ಮಾದೇವನೆನಬೇಡ |
ಆ ದೇವರ ದೇವ ಭುವನದ ಪ್ರಾಣಿಗಳಿ - |
ಗಾದವನೆ ದೇವ ಸರ್ವಜ್ಞ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator