Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › puchhappady ರವರ ಬ್ಲಾಗ್

puchhappady

ಸಾಹಿತ್ಯದ ಮನಕೆ ತಂಪೆರವ ಈ ಕ್ಷಣ

ಯಾತ್ರೆಯ , ಅನುಭವಗಳ ಮುಖಾಮುಖಿ

ಇದು ತಪ್ಪಲ್ವಾ....

January 18, 2008 - 10:57pm — puchhappady

ಮೊನ್ನೆ ಭಾನುವಾರ.

ಮದುವೆಯೊಂದಕ್ಕೆ ಹೋಗಿದ್ದೆ. ಅಲ್ಲಿಗೆ ಅಕ್ಕನ ಮಗನೂ ಬಂದಿದ್ದ.ಆತ ಇನ್ನೂ ೩ ನೇ ತರಗತಿ.ಮಕ್ಕಳಲ್ವಾ ನನಗೂ ಪ್ರೀತಿ.ಹಾಗಾಗಿ ಆತನಿಗೂ ನನ್ನಲ್ಲಿ ಹರಟುವುದೆಂದರೆ ಖುಷಿ.ಮೊನ್ನೆ ಆತ ಹರಟುತ್ತಾ ಕೇಳಿದ "ಮಾವ ಮೊನ್ನೆ ದೀಪಿಕಾ ಯುವರಾಜನೊಂದಿಗಿದ್ದಿರಬಹುದಾ?". ನನಗೆ ನಿಜವಾಗಲೂ ಆ ಬಗ್ಗೆ ಅಷ್ಟೊಂದು ಆಸಕ್ತಿಯಿದ್ದಿರಲಿಲ್ಲ. ಆದರೂ ಹುಡುಗ ಮತ್ತೆ ಮತ್ತೆ ಅದೇ ಸುದ್ದಿಗೇ ಬರುತ್ತಿದ್ದ.ನಾನು ಹಾರಿಕೆಯ,ಬಾಲಿಶವಾದ ಉತ್ತರ ನೀಡುತ್ತಲೇ ಬಂದೆ.ಮುಂದೆ ಆತನ ಪ್ರಶ್ನೆ ಹೀಗೆ ಬಂತು "ದೀಪಿಕಾ ಧೋನಿಗೆ ಮೋಸ ಮಾಡಿದ್ದು ಅಲ್ವಾ?".ಅದು ತಪ್ಪಲ್ವಾ? ಪೇಪರಲ್ಲಿ ಯಾಕೆ ಹೇಳುವುದಿಲ್ಲ ಅಂತ ನನ್ನಲ್ಲಿ ಕೇಳುತ್ತಲೇ ಹೋದ.ಆದರೆ ನಾನು ಇದಾವುದಕ್ಕೂ ಗಂಭೀರ ಉತ್ತರ ನೀಡುವ ಗೋಜಿಗೇ ಹೋಗಲಿಲ್ಲ. ಕೇವಲ ಹಾರಿಕೆಯ ಉತ್ತರ ನೀಡಿದೆ.

ಹುಡುಗನ ಈ ಪ್ರಶ್ನೆಯು ನನ್ನನ್ನು ಚಿಂತನೆಗೆ ಹಚ್ಚಿತು. ವಿಚಾರವನ್ನು ಮಂಥನ ನಡೆಸಿದಾಗ ೩ ನೇ ತರಗತಿಯ ಬಾಲಕನೊಬ್ಬ ಅಷ್ಟೊಂದು ಗಂಭೀರವಾಗಿ ಕ್ರಿಕೆಟ್ ಬಗ್ಗೆ,ಕ್ರಿಕೆಟ್ ತಾರೆಗಳ ಖಾಸಗೀ ಬದುಕಿನ ಬಗ್ಗೆ ಚಿಂತಿಸುತ್ತಾನೆಂದರೆ ಮಕ್ಕಳಿಗೆ ಕ್ರಿಕೆಟ್ ಬಗೆಗಿರುವ ನಂಟಿನ ಬಗ್ಗೆ ನಾವು ಗಂಭೀರವಾಗಿ ಗಮನಿಸಬೇಕಾಗಿದೆ.ಇಂದು ಕ್ರಿಕೆಟ್ ಜನಪ್ರಿಯ ಹಾಗೂ ಸಭ್ಯರ ಕ್ರೀಡೆ ಎಂಬ ಮಾತು ಸಮಾಜದಲ್ಲಿರುವುದು ಹೌದಾದರೂ ಮಕ್ಕಳ ಬಹುಪಾಲು ಸಮಯ ಕ್ರಿಕೇಟ್ ಮುಂದೆಯೇ ಕೆಟ್ಟು ಹೋಗುತ್ತಿದೆಯೇ? ಎಂದು ಚಿಂತಿಸಲು ಈಗ ಪರ್ವ ಕಾಲ.

ಈ ಮಾಂತ್ರಿಕ ಆಟದಿಂದಾಗಿ ಎಳೆಯ ಕಂದಮ್ಮಗಳ ಸಾಹಿತ್ಯದ , ಲವಲವಿಕೆಯ ದಾರಿ ಮುಚ್ಚಿಕೊಳ್ಳುತ್ತಿದೆಯೇ?. ಹಾಗೆಂದು ನನಗಂತೂ ಅನ್ನಿಸುತ್ತಿದೆ.ಬೆಳಗ್ಗೆದ್ದು ಕ್ರಿಕೇಟ್,ಕಾರ್ಟೂನ್ ನೆಟ್ ವರ್ಕ್ ಬಿಟ್ಟರೆ ಬೇರಾವುದೇ ಜಗತ್ತನ್ನು ಗಮನಿಸದ ಮಕ್ಕಳು ಮುಂದೆ ಈ ಸಮಾಜದಲ್ಲಿ ಕ್ರಿಕೇಟ್ ಭಾಷೆಯಲ್ಲೆ ಮಾತನಾಡಿಯಾರೇ ಎಂಬ ಆತಂಕ ನನ್ನಲ್ಲಿ ಮನೆ ಮಾಡಿದೆ. ಒಬ್ಬ ಚಿಕ್ಕ ಹುಡುಗ ಇಂದು ದೇಶ-ವಿದೇಶದ ಕ್ರಿಕೆಟ್ ತಾರೆಗಳ ಹೆಸರನ್ನು,ಅವರ ಖಾಸಗೀ ಬದುಕಿನ ಬಗ್ಗೆ ಹೇಳಿದಷ್ಟು ಸಲೀಸಾಗಿ ನಮ್ಮ ಆಸುಪಾಸಿನ ಸಂಗತಿಗಳ ಬಗ್ಗೆ ಹೇಳಲು ಶಕ್ತನಾಗುವುದಿಲ್ಲ ಅದೆಲ್ಲಾ ಬಿಡಿ ಪಾಠದ ಬಗ್ಗೆಯೂ ಹೇಳುದಿಲ್ಲ ಎಂದರೆ ನಮ್ಮ ಮಕ್ಕಳು ಎತ್ತ ಸಾಗುತ್ತಿದ್ದಾರೆ?.ಇದು ಮುಂದಿನ ಭವಿಷ್ಯಕ್ಕೆ ಸಹಕಾರಿಯಾದೀತೇ?.

ಭಾರತ ಸಂಸ್ಕೃತಿಯನ್ನು ನೋಡಿ. ಇಲ್ಲಿ ನಾಯಕರಾದವರು ಸರ್ವರಿಗೂ ಮಾರ್ಗದರ್ಶಕರಾಗಿರಬೇಕು.ಮಾರ್ಗದರ್ಶಕರಾಗಿದ್ದರು ಕೂಡಾ ಆದರೆ ಈಗ ಗಮನಿಸಿದರೆ ಬೆರಳೆಣಿಕೆಯ ನಾಯಕರ ದಾರಿಯನ್ನು ಬಿಟ್ಟರೆ ಬೇರೆ ಯವ ನಾಯಕರ ಹಾದಿ ಸರಿಯಾಗಿದೆ, ನಮ್ಮ ಎಳೆಯರಿಗೆ ಅವು ಹೇಗೆ ಮಾರ್ಗದರ್ಶಕವಾಗಿದೆ?. ಕ್ರಿಕೆಟ್ ತಾರೆಗಳನ್ನೆ ಗಮನಿಸಿ ಅವರ ಅಭಿಮಾನಿಗಳಿಗೆ ಅವರು ಹೇಗೆ ಮಾರ್ಗದರ್ಶಕರಾಗಿದ್ದಾರೆ? ಸಣ್ಣ ಹುಡುಗನಿಗೆ ಕೂಡ ತಾರೆಗಳ ಖಾಸಗಿ ಬದುಕು ಮುಖ್ಯವಾಗಿ ಬಿಡುತ್ತದೆ,ತಲೆ ಕೂದಲ ಅಲಂಕಾರದಿಂದ ಹಿಡಿದು ಪ್ರತಿಯೊಂದನ್ನು ಅನುಕರಿಸುವ ಅಭಿಮಾನಿಗಳಿರುವಾಗ ಸ್ವಲ್ಪ ಎಚ್ಚರವಿರಬೇಡವಾ?. ಸಾನಿಯಾ ಮಿರ್ಜಾ ಇರಬಹುದು, ತೆಂಡುಲ್ಕರ್ ,ಯುವರಾಜ್,ಧೋನಿ, ಅಥವಾ ಇನ್ನಾರೆ ಸ್ಟಾರ್ ಗಳಿರಬಹುದು ಎಳೆಯರಿಗೆ ಉತ್ತಮ ಮಾರ್ಗದರ್ಶರಾಗಿದ್ದರೆ ಚೆನ್ನಾಗಿತ್ತು.ಇಲ್ಲವಾದ್ರೆ ಚಿಕ್ಕ ಬಾಲಕರ ಮೇಲೂ ಪರಿಣಾಮ ಬೀರುವುದು ಅವರದೇ ಸಂಗತಿಗಳು.ಹಾಗಾಗಿ ನಾವು ಈಗಲೇ ಜಾಗೃತರಾಗಬೇಕು.

ನೋಡಿ ಕ್ರಿಕೆಟ್ ನಲ್ಲಿ ಎಷ್ಟೆಲ್ಲಾ ವಿವಾದಗಳು ನಡೆದವು.ಅದಕ್ಕೆಲ್ಲಾ ನಾವು ಎಷ್ಟು ಚರ್ಚಿಸಿದೆವು.ಏನಾದ್ರು ಫಲ ಸಿಕ್ಕಿತಾ?.ಆರಂಭದಲ್ಲಿ ಮ್ಯಾಚ್ ಬುಕ್ಕಿಂಗ್ ನಡೆದು ಹಲವು ವಿಚಾರಣೆಗಳು ನಡೆದ ನಂತರವೂ ಮತ್ತೆ ವಿವಿಧ ತಿರುವುಗಳು, ಮತ್ತೆ ವಿವಾದಗಳು,ಹೊಸ ಗೊಂದಲಗಳು ... ಬೇಡ.. ಮೊನ್ನೆ ಮೊನ್ನೆ ನಡೆದ ಮ್ಯಾಚ್ ನಲ್ಲಿ ಅಂಪೆರ್ರಿಂದಲೇ ಕೆಟ್ಟ ತೀರ್ಪು. ಅದಕ್ಕೆ ನಮ್ಮ ಜನ ರೊಚ್ಚಿಗೆದ್ದ ಪರಿ ನೋಡಿದರೆ ದಿಗಿಲು ಹುಟ್ಟಿಸುತ್ತದೆ.ಅಲ್ಲಿ ಅಂಪೆರ್ ಕೆಟ್ಟ ತೀರ್ಪು ನೀಡಿದ್ದು ತಪ್ಪು.ನಮ್ಮವರಿಗೆ ಮೋಸ ಆದದ್ದು ನಿಜ.ಅದಕ್ಕೆ ಹಾಗೆ ವಿರೋಧಿಸಬೇಕಾಗಿತ್ತಾ...? . ಅದೇ ನಮ್ಮ ದೇಶದ ಮೇಲೆ ನಡೆಯುತ್ತಿರುವ ದಬ್ಬಾಳಿಕೆ , ಕಾಶ್ಮೀರದಲ್ಲಿ ನಡೆಯುವ ಮಾರಣ ಹೋಮಗಳ ಬಗ್ಗೆ ಬೇಡ ನಮ್ಮ ಆಸುಪಾಸಿನಲ್ಲಿ ನಡೆಯುವ ಘಟನೆಗಳ ಬಗ್ಗೆ ಪ್ರತಿಕ್ರಿಯೆ ನೀಡುತ್ತೇವಾ..?

ಇಷ್ಟೆಲ್ಲಾ ಸಂಗತಿಗಳು ಕ್ರಿಕೇಟ್ ನಲ್ಲಿನಡೆಯುತ್ತಿರುವಾಗ ನಾವೆಲ್ಲಾ ಅದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ .ಯಾರಾದ್ರು ಸಿಕ್ರೆ ಮಾತನಾಡಲು ವಿಶ್ಯ ಇಲ್ದಿದ್ರೆ ಒಂದೆರಡು ಮಾತನಾಡಿ ಸುಮ್ಮನಿರುತ್ತೇವೆ.ಆದ್ರೆ ಮಕ್ಕಳು ನೋಡಿ ದಿನವಿಡೀ ಶಾಲೆ,ಮನೆ, ಎಲ್ಲೆಂದರಲ್ಲಿ ಅದೇ ಕ್ರಿಕೇಟ್ ಸುದ್ದಿಯನ್ನೇ ಮಾತನಾಡುತ್ತಿರುತ್ತಾರಲ್ಲಾ ಮೋಡಿಯ ಆಟ......ಅದು ನೋಡಿ!?. ಇದೆಲ್ಲಾ ನೋಡಿದ್ರೆ ನಾವೇ ಎಲ್ಲೋ ತಪ್ಪು ಮಾಡುತ್ತಿದ್ದೇವೆ ಅಂತ ಅನ್ಸಲ್ವಾ ನಿಮ್ಗೆ....?. ಏನಂತೀರಿ.....

  • ವಿಚಾರ
Ornamental seperator
  • puchhappady ರವರ ಬ್ಲಾಗ್
  • Login or register to post comments
  • 178 hits
  • Email this blog
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕ್ರಿಕೇಟ್ ಬಗ್ಗೆ ನಾವು ಯಾಕೆ ಇಷ್ಟೊಂದು ತಲೆಗೆಡಿಸಿಕೊಂಡಿದ್ದೇವೆ?
  • ಇಗೋ ಬಂತು ಕ್ರಿಕೆಟ್ ಸಮಯ
  • ವಿಶ್ವಕಪ್ ಕ್ರಿಕೆಟ್ ಜ್ವರ:ಇಳಿದೀತೇ?
  • ಕೊನೆಗೂ ಗೆದ್ದರು!
  • ಸ್ಲೆಡ್ಜಿಂಗ್ ಕಪ್-೨೦೦೭, ಫೈನಲ್ಸ್
Syndicate content

ಲೇಖಕರು

puchhappady's picture

ಪೂರ್ಣ ಹೆಸರು
ಮಹೇಶ್ ಪುಚ್ಚಪ್ಪಾಡಿ

ಪರಿಚಯ

ಗುತ್ತಿಗಾರು ಬಳಿಯ ಕಮಿಲದಲ್ಲಿ ವಾಸ. ಕೃಷಿಕ ಹಾಗೂ ಹವ್ಯಾಸಿ ಪತ್ರಕರ್ತ. ಹೊಸದಿಗಂತದ ಬಿಡಿಸುದ್ದಿ ವರದಿಗಾರ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
  • ಕಟಪಯಾದಿ ಸೂತ್ರ
  • ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
  • ಕೆಂಪು, ಕಣ್ಣು ಏನು ಪರಿಹಾರ..???
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • rameshbalaganchi
    ಉ: ನಾಡೋಜ ಎಂದರೆ.....
    May 16, 2008 - 10:31am
  • vikashegde
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 16, 2008 - 10:14am
  • srikanth
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 16, 2008 - 10:01am
  • ಶ್ರೀನಿಧಿ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 9:09am
  • hamsanandi
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:25am
  • keshavamurali
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:10am
  • ವೈಭವ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:04am
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:26pm
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:23pm
  • ವೈಭವ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 15, 2008 - 9:59pm
ಇನ್ನಷ್ಟು
ಈಗಿನಂತೆ 7 ಸದಸ್ಯರು ಮತ್ತು 14 ಅತಿಥಿಗಳು ಆನ್ಲೈನ್ ಇರುವರು.

ಕಣ್ಣಿಗೆ ಕಣ್ಣು ತತ್ವವು ಇಡೀ ಜಗತ್ತನ್ನು ಕುರುಡಾಗಿಸುವುದು

— ಮಹಾತ್ಮಾ ಗಾಂಧಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator