ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › radha.kh ರವರ ಬ್ಲಾಗ್

ನಿದ್ರೆ ಬರದವರ ಬಗ್ಗೆ

July 17, 2007 - 11:00am — radha.kh

ಎರಡು ಘಟನೆಗಳು.

ಘಟನೆ ಒಂದು
------------
ಪಶ್ಚಿಮ ಬಂಗಾಳದ ೨೪-ಪರಗಣ ಜಿಲ್ಲೆಯ ಒಂದು ಹಳ್ಳಿ. ಅಲ್ಲಿನ ಶಾಲಾ ಬಾಲಕ ಸಾಮ್ರಾಟ್‌ ಮಂಡಲ್. ಆತ ಒಂದು ದಿನ ಶಾಲೆಯಿಂದ ಮನೆಗೆ ಬರುತ್ತಿದ್ದಾಗ ಕೆಲವರು ಅವನನ್ನು ಅಡ್ಡಗಟ್ಟಿ ಸೀಮೆ ಎಣ್ಣೆ ಸುರಿದು ಬೆಂಕಿ ಕೊಟ್ಟರು. ಆತ ಕಷ್ಟಪಟ್ಟು ಹೇಗೋ ತಪ್ಪಿಸಿಕೊಂಡು ಬೆಂಕಿ ಆರಿಸಿಕೊಂಡ. ಆತನ ಚಿಕ್ಕಪ್ಪ ಅದೇ ದಾರಿಯಲ್ಲಿ ಬರುತ್ತಿದ್ದವರು ಅವನನ್ನು ನೋಡಿ ಕೂಡಲೇ ಆಸ್ಪತ್ರೆಗೆ ಸೇರಿಸಿದ್ದರಿಂದ ಆತ ಬದುಕುಳಿದ. ಗಾಯಗಳಿಂದ ಸುಧಾರಿಸಿಕೊಳ್ಳಲು ಇನ್ನೂ ಆರು ತಿಂಗಳು ಬೇಕಾಗಬಹುದೇನೋ ಎಂದು ಡಾಕ್ಟರ್‌ ಹೇಳಿದ್ದಾರಂತೆ. ಹಾಗಾದರೆ, ಅವನನ್ನು ಕೊಲ್ಲಲು ಪ್ರಯತ್ನಿಸಿದವರು ಯಾರು? ಕೆಲವು ಮುಸ್ಲಿಂ ಗೂಂಡಾಗಳು. ಏಕೆ? ಅಲ್ಲಿನ ಹಿಂದೂಗಳನ್ನು ಬೆದರಿಸಿ ಅವರನ್ನು ಊರು ಬಿಡಿಸುವ ಪ್ರಯತ್ನ ಇದು. ಈಗ ಆ ಬಾಲಕನ ಕುಟುಂಬ ಇದ್ದ ‌ಅಲ್ಪ ಸ್ವಲ್ಪ ಜಮೀನನ್ನು ಮಾರಿ ಕೊಲ್ಕತಾದ ಸ್ಲಮ್‌ ಒಂದರಲ್ಲಿ ವಾಸಿಸುತ್ತಿದೆ, ಅವರ ನೆಂಟರ ಮನೆಯಲ್ಲಿ. ಮುಂದೇನು ಎಂಬುದು ಭಗವಂತನೆ ಬಲ್ಲ. ಜಮೀನು ಮಾರಿ ಬಂದ ಹಣವೆಲ್ಲಾ ಮಗನ ಚಿಕಿತ್ಸೆಗೆ ಬೇಕಾಗಬಹುದಂತೆ.

ಘಟನೆ ಎರಡು
------------
ಹನೀಫನನ್ನು ಆಸ್ಟ್ರೇಲಿಯಾದಲ್ಲಿ ಬಂಧಿಸಿದರು. ವಿಚಾರಣೆ ನಡೆಯುತ್ತಿದೆ. ಅತ್ತ ಬಂಧದನದ ಅವಧಿ ವಿಸ್ತರಣೆಯಾಗಿದೆ. ಲಂಡನ್ನಿನಲ್ಲೂ ತನಿಖೆ ಮುಂದುವರಿದಿದೆ.

ಈ ಎರಡೂ ಘಟನೆಗಳಿಗೆ ನಮ್ಮ ಪ್ರಧಾನಿ ಮಂತ್ರಿಯವರ ಹಾಗೂ ಮಾಧ್ಯಮದವರ ಪ್ರತಿಕ್ರಿಯೆಗಳಲ್ಲಿ ಮಾತ್ರ ಅಜಗಜಾಂತರ. ಮೊದಲ ಘಟನೆ ಹೆಚ್ಚಿನ ಪತ್ರಿಕೆಗಳಲ್ಲಿ ವರದಿಯಾಗಲೇ ಇಲ್ಲ. ಪ್ರಧಾನಿಯವರಿಂದ ಪ್ರತಿಕ್ರಿಯೆಯಿಲ್ಲ. ಎರಡನೇ ಘಟನೆ ಎಷ್ಟು ಕವರೇಜ್‌ ಪಡೆಯಿತು ಎಂಬುದು ತಮಗೆಲ್ಲ ತಿಳಿದೇ ಇದೆ. ಹನೀಫನ ಮನೆಯವರು ಅಳುವುದನ್ನು ನೋಡಿ ನಮ್ಮ ಪ್ರಧಾನಿಯವರಿಗೆ ನಿದ್ರೆ ಬರಲಿಲ್ಲ. ಅಷ್ಟೇ ಅಲ್ಲದೇ, ನ್ಯಾಯಬದ್ಧವಾದ ತನಿಖೆ ನಡೆಸುವಂತೆ ಆಸ್ಡ್ರೇಲಿಯಾದವರಿಗೆ ಹೇಳಿದೆ ನಮ್ಮ ಸರ್ಕಾರ. ಹನೀಫನಿಗೆ ಯಾರೂ ಸೀಮೆಣ್ಣೆ ಸುರಿದು ಬೇಂಕಿ ಕೊಡಲು ಯತ್ನಿಸಲಿಲ್ಲ. ತನಿಖೆ ನಡೆಯುತ್ತಿದೆ ಅಷ್ಟೇ. ಇನ್ನೂ ಶಿಕ್ಷೆಯಾಗಲಿಲ್ಲ. ಆದರೂ ಇಷ್ಟೊಂದು ಬೊಬ್ಬೆ. ಆದರೆ, ಸಾಮ್ರಾಟ್‌ ಮಂಡಲ್‌ನಂತಹವರದೆಷ್ಟೋ ಜನರು ನಿತ್ಯವೂ ಪಶ್ಚಿಮ ಬಂಗಾಳ, ಕೇರಳ, ಕಾಶ್ಮೀರಗಳಲ್ಲಿ ತೊಂದರೆಗೊಳಗಾಗುತ್ತಿದ್ದಾರೆ. ಯಾರೂ ಅವರ ಬಗ್ಗೆ ಮಾತನಾಡುವವರೇ ಇಲ್ಲ. ಪೇಪರ್‌ನವರಿಗೆ, ಟೀವಿಯವರಿಗೆ ಇದೊಂದು ಸುದ್ದಿಯಲ್ಲ. ಯಾಕೆಂದರೆ ಅವರೆಲ್ಲ ಹಿಂದೂಗಳು. ನಮ್ಮ ದೇಶದಲ್ಲಿ ಹಿಂದೂಗಳ ಜೀವಕ್ಕೆ ಬೆಲೆ ಕಡಿಮೆ. ಮುಸ್ಲಿಮರ ಜೀವಕ್ಕೆ ಬೆಲೆ ಜಾಸ್ತಿ. ಇದು ಬದಲಾಗುವುದು ಯಾವಾಗ? ಬಹುಶಃ ಜಾತಿ ಮತಗಳನ್ನು ಮೀರಿ ರಾಜಕೀಯ ಮಾಡುವ ಮಟ್ಟಕ್ಕೆ ನಮ್ಮ ರಾಜಕಾರಣಿಗಳು ಬೆಳೆದಾಗ. ತಾವಾಗೇ ಅವರಂತೂ ಬುದ್ಧಿ ಕಲಿಯುವುದಿಲ್ಲ. ನಾವೇ ಒಂದಾಗಿ ಅವರಿಗೆ ಪಾಠ ಕಲಿಸಬೇಕಷ್ಟೇ.

ಮಹಾಜನಗಳು ಏನಂತಾರೆ ಇದಕ್ಕೆ?

~.~
  • radha.kh ರವರ ಬ್ಲಾಗ್
  • Login or register to post comments
  • 415 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 17, 2007 - 12:57pm — jaiguruji

ಉ: ನಿದ್ರೆ ಬರದವರ ಬಗ್ಗೆ

jaiguruji's picture

ನಮ್ಮ ಪ್ರಧಾನಿಗಳ ಹೇಳಿಕೆ ಬಗ್ಗೆ ಹೆಚ್ಚಿಗೆ ಚರ್ಚಿಸಿ ಉಪಯೋಗವಿಲ್ಲ. ನನಗನಿಸುವಂತೆ ಅವರು ಹೇಳಿಕೆ ಕೊಟ್ಟ ಮೇಲೆಯೆ ವಿಚಾರ ಮಾಡುವದು..

ಮೊನ್ನೆಯ ಘಟನೆಗೆ ಅವರಿಗೆ ನಿದ್ದೆ ಬರದೆ ನಿಜವಾಗಲೂ ಒದ್ದಾಡಿರುವರು ಎಂದು ಕೊಂಡರೆ ಅವರು ..ನಮ್ಮ ದೇಶದಲ್ಲಿ ನಡೆಯುತ್ತಿರುವ ಘಟನೆಗಳನ್ನು ದಿನನಿತ್ಯ ಟಿ.ವಿ.ಯಲ್ಲಿ ನೋಡಿ ನಿದ್ರಾಹೀನತೆಯಿಂದ ಬಳಲಬೇಕಾಗಿತ್ತು..!! ಆದರೆ ಹಾಗಂತ ಎಲ್ಲಿಯೂ ವರದಿಯಾಗಿಲ್ಲ..

ನನಗನಿಸುವಂತೆ ನಮ್ಮ ಪ್ರಧಾನಿ ಆರೋಗ್ಯವಂತರಾಗೇ ಇದ್ದಾರೆ ಮತ್ತು ಹಾಗೇ ಇರಲಿ. "ನಿದ್ರೆ ಬರಲಿಲ್ಲ.." ಇತ್ಯಾದಿಗಳೆಲ್ಲಾ "ವೋಟ್ ಕೆ ನಾಮ್ ಪೆ" ಜಪಿಸಬೇಕಾದಂತಹ ನುಡಿಮುತ್ತುಗಳು Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 17, 2007 - 1:32pm — muralihr

ಉ: ನಿದ್ರೆ ಬರದವರ ಬಗ್ಗೆ

muralihr's picture

ನಿದ್ದೆ ಬ೦ದಿರಬಹುದು ಕನಸ್ಸ್ ಬಿದ್ದಿರಲಿಕ್ಕಿಲ್ಲಾ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 17, 2007 - 1:53pm — radha.kh

ಉ: ನಿದ್ರೆ ಬರದವರ ಬಗ್ಗೆ

radha.kh's picture

೧೬-೭-೨೦೦೭ರ ಪ್ರಜಾವಾಣಿಯಲ್ಲಿ ದಿನೇಶ್‌ ಅಮೀನಮಟ್ಟುರವರು ಬರೆದಿದ್ದಾರೆ. 'ನಮ್ಮ ಪ್ರಧಾನಿಗೆ ಹನೀಫ್‌ ಮನೆಯವರು ಅಳೋದು ನೋಡಿ ನಿದ್ರೆ ಬರಲಿಲ್ಲ, ಆದರೆ, ನಮ್ ದೇಶದಲ್ಲಿ ಬಹಳ ಜನರಿಗೆ ಭಯೋತ್ಪಾದನೆಯಿಂದಾಗಿ ನಿದ್ರೆಯಿಲ್ಲದ ಪರಿಸ್ಥಿತಿಯಿದೆ. ಅದರ ಬಗ್ಗೆ ನಮ್ ಪ್ರಧಾನಿಗೆ ಕಳಕಳಿ ಇಲ್ಲ' ಅಂತ. ತುಂಬಾ ಸರಿಯಾದ ಮಾತು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
  • ಎರಡು ಪ್ರತ್ಯೇಕ ಘಟನೆಗಳು ಮತ್ತು ರಾಜ್ಯ ಸರಕಾರದ ಆಷಾಡಬೂತಿತನ.
  • ಪ್ರಧಾನಿ ಪದೇ ಪದೇ ವಿದೇಶ ಪ್ರಯಾಣ ಗುಟ್ಟು ರಟ್ಟು
  • ದೀಪಾವಳಿ ಎಂಬ ಎರಡು ಕೊಲೆಗಳ ಹಬ್ಬ
  • ಸಂತೋಷ ಆಹಾ.. ಆಹಾ..
Syndicate content

ಲೇಖಕರು

radha.kh's picture

ಪರಿಚಯ

Software engineer by profession and a kannada writer by hobby.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು-11
  • ಶಿವರಾಜ್ ಕುಮಾರ ಅಭಿಮಾನಿಗಳಿಗೆ ಮತ್ತೇರಿಸುವ ಚಿತ್ರ " ಮಾದೇಶ "
  • ಹಬ್ಬ ತಂದ ನೆನಪು...
  • ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
  • ಆಧುನಿಕ "ಬೇಡರ ಕಣ್ಣಪ್ಪ"..
  • ವೃತ್ತಿಜೀವನದ ಹಂತಗಳು...
  • ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
  • ಓದಿದ್ದು ಕೇಳಿದ್ದು ನೋಡಿದ್ದು-10
  • ಮೊದಲ ಚಿತ್ರ
  • ಬಿಗುಮಾನದ ಚಿತ್ರಗಳು
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 6:48am
  • kalpana
    ಉ: ಜೀವ ಕಾಯುವುದೇತಕೆ?
    September 7, 2008 - 5:19am
  • kalpana
    ಉ: ಮೊದಲ ಚಿತ್ರ
    September 7, 2008 - 1:48am
  • srivathsajoshi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 12:24am
  • yuvapremi
    ಉ: Splendours of Royal Mysore
    September 6, 2008 - 10:19pm
  • yuvapremi
    ಉ: ಮೊದಲ ಚಿತ್ರ
    September 6, 2008 - 10:11pm
  • ASHOKKUMAR
    ಉ: ಹಬ್ಬ ತಂದ ನೆನಪು...
    September 6, 2008 - 9:59pm
  • uniquesupri
    ಉ: ಜೀವ ಕಾಯುವುದೇತಕೆ?
    September 6, 2008 - 9:30pm
  • cmariejoseph
    ಉ: ಹಬ್ಬ ತಂದ ನೆನಪು...
    September 6, 2008 - 9:16pm
  • cmariejoseph
    ಉ: ಚಂದಿರನ ನೋಡಿದವ
    September 6, 2008 - 9:01pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 156 ಅತಿಥಿಗಳು ಆನ್ಲೈನ್ ಇರುವರು.


ಭಾರತ ದಾತ್ಮ೦ ಕ೦ಗೆಡುತಿದೆ ಪರ
ಸಾರಸ್ವತ ಸ೦ಪದ ಭರದಿ೦
ತಾರಿ ಹೋಗಿತಿದೆ ತಾಯ್ನಾಡಿನ ಮನ
ಏರುವಿದೇ ಸ್ವಪ್ರತ್ಯಯದಿ೦

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator