ಒಂದು ಭಾಷೆ ಯಾವುದೇ ರಾಜ್ಯಕ್ಕಿಂತ ಪುರಾತನ ಮತ್ತು ಅನಿವಾರ್ಯವಾದುದು.

— ಜೇಮ್ಸ್ ಬ್ರಾಡ್‌ಸ್ಕಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

rajeshnaik111 ರವರ ಬ್ಲಾಗ್

ಕೊನೆಯಲ್ಲಿ ಎಡವಿದ ಕರ್ನಾಟಕ - ೨

ಈ ಋತುವಿನ (೨೦೦೯-೧೦) ಆರಂಭದಲ್ಲಿ ಕರ್ನಾಟಕ ರಣಜಿ ತಂಡದ ಆಯ್ಕೆಗಾರರು ಕೆಲವು ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡರು. ಯಾವುದೇ ಶಿಫಾರಸುಗಳಿಗೆ ಕಿವಿಗೊಡದಿರುವುದು (ಆದರೂ ಅಖಿಲ್ ಬದಲು ಸ್ಟುವರ್ಟ್ ಬಿನ್ನಿ ಮತ್ತು ಉದಿತ್ ಪಟೇಲ್ ಆಯ್ಕೆಗೊಂಡದ್ದು ಆಶ್ಚರ್ಯ), ತಳವಾಗಿ ಬೇರೂರಿದ ಕೆಲವು ಆಟಗಾರರನ್ನು ಕೈಬಿಡುವುದು, ಯುವಕರಿಗೆ ಮನ್ನಣೆ ನೀಡುವುದು, ಹೊಸ ಕೋಚ್ ಮತ್ತು ಸಹಾಯಕ ಕೋಚ್ ನೇಮಿಸುವುದು ಮತ್ತು ರಾಜ್ಯ ತಂಡದ ಚುಕ್ಕಾಣಿಯನ್ನು ರಾಹುಲ್ ದ್ರಾವಿಡ್-ಗೆ ನೀಡುವುದು.

ಅಶೋಕಾನಂದ್, ಸಯ್ಯದ್ ಕಿರ್ಮಾನಿ, ರಘುರಾಮ್ ಭಟ್ ಮತ್ತು ರಂಗರಾವ್ ಅನಂತ್ ಇವರೇ ನಾಲ್ಕು ಆಯ್ಕೆಗಾರರು. ನಾಲ್ವರೂ ಕರ್ನಾಟಕಕ್ಕೆ ಆಡಿ ಅನುಭವವುಳ್ಳವರು. ಕಳೆದ ಏಳೆಂಟು ವರ್ಷಗಳಲ್ಲಿ ರಾಜ್ಯ ತಂಡದಲ್ಲಿ ಹೆಚ್ಚೇನು ಬದಲಾವಣೆಯಿರಲಿಲ್ಲ. ಒಂದೆರಡು ಆಟಗಾರರನ್ನು ಹೊರತುಪಡಿಸಿದರೆ ಉಳಿದವರೆಲ್ಲಾ ಮೊದಲಿದ್ದವರೇ. ಹೀಗಾಗಿ ಕರ್ನಾಟಕ ಆರಕ್ಕೇರದೆ ಮೂರಕ್ಕಿಳಿಯದೇ ಅಲ್ಲೇ ನಡುವಿನಲ್ಲಿ ತೂಗುಯ್ಯಾಲೆ ಆಡುತ್ತಾ ಉಳಿದುಬಿಟ್ಟಿತು. ಇದನ್ನು ಬದಲಾಯಿಸಲು ಸ್ವಲ್ಪ ಹೆಚ್ಚೇ ರಿಸ್ಕ್ ತಗೊಂಡ ಆಯ್ಕೆಗಾರರು ಕೆಲವರನ್ನು ಕೈಬಿಟ್ಟು ಯುವಕರಿಂದಲೇ ತಂಡವನ್ನು ತುಂಬಿಬಿಟ್ಟರು. ಇದೊಂದು ಮಾಸ್ಟರ್ ಸ್ಟ್ರೋಕ್ ನಿರ್ಣಯವಾಗುತ್ತೆಂದು ಯಾರಿಗೂ ಅರಿವಿರಲಿಲ್ಲ. ಆದರೆ ಆಯ್ಕೆಗಾರರು ರಿಸ್ಕ್ ತಗೊಂಡದ್ದನ್ನು ಮೆಚ್ಚಬೇಕು. ಏನಾದರೂ ಅದ್ಭುತ ಘಟಿಸಬೆಕಾದರೆ ಅಷ್ಟೇ ಮಹತ್ವದ ನಿರ್ಣಯ ಆ ಅದ್ಭುತದ ಹಿಂದೆ ಇರುತ್ತೆ. ಕರ್ನಾಟಕ ಫೈನಲ್ ತನಕ ಧಾವಿಸಿ ಬಂದುದರ ಹಿಂದೆ ಇರುವ ಪ್ರಮುಖ ಕಾರಣವೂ ಇದೇ - ಯುವಕರಿಗೆ ಮನ್ನಣೆ.  ಮುಂದೆ ಓದಿ »

ಕೊನೆಯಲ್ಲಿ ಎಡವಿದ ಕರ್ನಾಟಕ - ೧

ಗೆಳೆಯ ಸುಪ್ರೀತ್ ಮತ್ತು ನನ್ನದು ಯಾವಾಗಲೂ ರಣಜಿ ಟ್ರೋಫಿ ಪಂದ್ಯಗಳ ಬಗ್ಗೆನೇ ಮಾತು. ರಣಜಿ ಟ್ರೋಫಿ ಫೈನಲ್ ಪಂದ್ಯದ ಮುನ್ನಾ ದಿನ ನಾವಿಬ್ಬರು ದೂರವಾಣಿ ಮೂಲಕ ಕೊರೆದೇ ಕೊರೆಯುತ್ತಿದ್ದೆವು. "ರಾಜಾ, ಏನ್ ಚಾನ್ಸ್ ಕೊಡ್ತೀಲೆ ಕರ್ನಾಟಕಕ್ಕೆ" ಎಂದು ಸುಪ್ರೀತ್ ಕೇಳಿದಾಗ ನಾನಂದೆ, "೨೦ ಪರ್ಸೆಂಟ್. ಅಷ್ಟೇಲೇಪ್ಪಾ. ದ್ರಾವಿಡ್ ಇದ್ದಿದ್ರೆ ೮೦ ಪರ್ಸೆಂಟ್ ಚಾನ್ಸ್ ಇತ್ತ್ ನೋಡ" ಅಂದೆ. ಅದೇ ಪ್ರಶ್ನೆಯನ್ನು ಆತನಿಗೆ ನಾನು ಕೇಳಿದಾಗ ಆತನ ಪ್ರಕಾರ ದ್ರಾವಿಡ್ ಇದ್ರೆ ಕರ್ನಾಟಕ ರಣಜಿ ಚಾಂಪ್ಸ್ ಆಗೋದು ನಿಶ್ಚಿತವಾಗಿತ್ತು. ಅಷ್ಟೇ ಅಲ್ಲದೆ ಅಮಿತ್ ವರ್ಮಾ ಮತ್ತು ಗೌತಮ್ ಟೆನ್ಶನ್ ಪಾರ್ಟಿಗಳು. ದ್ರಾವಿಡ್ ಇದ್ರೆ ಮಾತ್ರ ಸರಿಯಾಗಿ ಆಡೋರು ಎಂದ ಸುಪ್ರೀತ್. ಈಗ ದ್ರಾವಿಡ್ ಇಲ್ಲಾ ಅಂದ್ರೆ ನೋ ಚಾನ್ಸ್ ಎಟ್ ಆಲ್. ಆತ ಅಂದಿದ್ದೇ ನಿಜವಾಯ್ತು.

ಲೀಗ್ ಪಂದ್ಯಗಳಲ್ಲಿ ಎದುರಾಳಿಗಳನ್ನು ಮನಬಂದಂತೆ ಗೋಳಾಡಿಸಿಕೊಂಡು ಜಯಭೇರಿ ಬಾರಿಸುತ್ತಾ ಬಂದಿದ್ದ ರಾಜ್ಯದ ಯುವ ಬ್ಯಾಟ್ಸ್-ಮನ್ನುಗಳು ನಾಕ್ ಔಟ್ ಹಂತ ಬಂದಾಗ ನರ್ವಸ್ ಆಟ ಆಡಲು ಆರಂಭಿಸಿದರು.  ಮುಂದೆ ಓದಿ »

ಕರ್ನಾಟಕ ಪ್ರಿಮಿಯರ್ ಲೀಗ್

ಅನಿಲ್ ಕುಂಬ್ಳೆ ಮತ್ತು ಜಾವಗಲ್ ಶ್ರೀನಾಥ್ ಏನೇ ಹೇಳಲಿ. ರಾಹುಲ್ ದ್ರಾವಿಡ್ ದೂರಾನೇ ಉಳಿಯಲಿ. ಬೃಜೇಶ್ ಪಟೇಲ್ ಮತ್ತು ಒಡೆಯರ್ ಎಷ್ಟೇ ಕಚ್ಚಾಡಿಕೊಳ್ಳಲಿ. ಕರ್ನಾಟಕ ಪ್ರಿಮಿಯರ್ ಲೀಗ್ ಪ್ರಥಮ ಆವೃತ್ತಿ ಯಶಸ್ಸನ್ನು ಗಳಿಸಿದ್ದಂತು ಹೌದು. ಬರೀ ಬೆಂಗಳೂರು, ಮೈಸೂರು ಮತ್ತು ಧಾರವಾಡ ಲೀಗ್ ಗಳಲ್ಲಿ ಆಡುತ್ತಾ ಇದ್ದ ಹಲವಾರು ಪ್ರತಿಭಾವಂತ ಆಟಗಾರರ ಪರಿಚಯವಂತೂ ರಾಜ್ಯದ ಕ್ರಿಕೆಟ್ ಪ್ರೇಮಿಗಳಿಗೆ ಆಯಿತು. ದೇಶದಲ್ಲೇ ರಾಜ್ಯ ಮಟ್ಟದಲ್ಲಿ ಇಂತಹ ಪ್ರಯೋಗ ಮಾಡಿ ರಿಸ್ಕ್ ತೆಗೆದುಕೊಂಡು ಯಶಸ್ವಿ ಆಗಿದ್ದಕ್ಕೆ ಕೆ.ಎಸ್.ಸಿ.ಎಗೆ ಅಭಿನಂದನೆಗಳು. ಉಳಿದ ರಾಜ್ಯಗಳ ಕ್ರಿಕೆಟ್ ಮಂಡಳಿಗಳು ಕೆಪಿಎಲ್-ನ್ನು ಕುತೂಹಲದಿಂದ ಗಮನಿಸುತ್ತಿದ್ದರು. ಈಗ ಪ್ರತಿ ರಾಜ್ಯದಲ್ಲೂ ಇದೇ ತರಹದ ಲೀಗ್-ಗಳು ಹುಟ್ಟಿಕೊಂಡರೆ ಆಶ್ಚರ್ಯವಿಲ್ಲ.  ಮುಂದೆ ಓದಿ »

ಕರ್ನಾಟಕ ಕ್ರಿಕೆಟ್ ೧೦ - ರಾಬಿನ್ ಉತ್ತಪ್ಪ

ತನ್ನ ೧೭ರ ಹರೆಯದಲ್ಲೇ ರಾಜ್ಯ ತಂಡಕ್ಕೆ ಆಡುವ ಮೂಲಕ ರಣಜಿಗೆ ಪಾದಾರ್ಪಣೆ ಮಾಡಿದವರು ರಾಬಿನ್ ಉತ್ತಪ್ಪ. ಫರೀದಾಬಾದಿನಲ್ಲಿ ಹರ್ಯಾನ ವಿರುದ್ಧ ಚೊಚ್ಚಲ ಪಂದ್ಯದಲ್ಲಿ ೩೨ ಎಸೆತಗಳನ್ನು ಎದುರಿಸಿ ೪೦ ಓಟಗಳನ್ನು ಗಳಿಸಿದರು. ಈಗಲೂ ಅದೇ ರೀತಿಯಲ್ಲಿ ಆಡುತ್ತಿದ್ದಾರೆ. ರಾಬಿನ್ ಒಬ್ಬ ಶಾಟ್-ಲೆಸ್ ವಂಡರ್. ಈತನಲ್ಲಿರುವುದೇ ನಾಲ್ಕೈದು ರೀತಿಯ ಹೊಡೆತಗಳು. ಅದನ್ನೇ ಬಂಡವಾಳ ಮಾಡಿಕೊಂಡು ಈವರೆಗೆ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದರು. ಆದರೆ ಇನ್ನು ಮುಂದೆ ತನ್ನ ಆಟವನ್ನು ಗಣನೀಯವಾಗಿ ಸುಧಾರಿಸದಿದ್ದರೆ, ಕ್ರಿಕೆಟಿಗನೊಬ್ಬನಿಗೆ ’ಬ್ರೆಡ್ ಎಂಡ್ ಬಟರ್’ ಎನ್ನುವ ಹೊಡೆತಗಳನ್ನು ತನ್ನ ಆಟದಲ್ಲಿ ಅಳವಡಿಸಕೊಳ್ಳದಿದ್ದರೆ ದೇಶೀಯ ಕ್ರಿಕೆಟ್ ಪಂದ್ಯಗಳಲ್ಲೇ ಜೀವನ ಕಳೆಯುವ ಸಾಧ್ಯತೆಗಳಿವೆ.

ರಾಜ್ಯ ತಂಡಕ್ಕೆ ಅರುಣ್ ಕುಮಾರ್ ನಂತರ ಒಬ್ಬ ಸಮರ್ಥ ಆರಂಭಿಕ ಆಟಗಾರನಾಗಿ ದೊರಕಿದವರು ರಾಬಿನ್. ಆಟದ ಶೈಲಿ ವೇಗವಾಗಿ ರನ್ ಗಳಿಸುವುದು. ಬೌಂಡರಿ ಮತ್ತು ಸಿಕ್ಸರ್ ಬಾರಿಸುವುದೇ ರನ್ ಗಳಿಸಲು ಇರುವ ಏಕೈಕ ದಾರಿ ಎಂಬ ಮನೋಭಾವ. ರಾಜ್ಯಕ್ಕೆ ಆಡಿದ ಆರಂಭದ ದಿನಗಳಲ್ಲಿ ’ಬೌಲರ್ಸ್ ಅಸ್ಸಾಸಿನ್’ ಎಂಬ ಹೆಸರು ಉತ್ತಪ್ಪನಿಗಿತ್ತು. ಈಗೀಗ ರಾಬಿನ್ ಆಡುತ್ತಿರುವ ಪರಿ ನೋಡಿದರೆ ಇದೇ ಬೌಲರುಗಳು ’ರಾಬಿನ್ಸ್ ಅಸ್ಸಾಸಿನ್ಸ್’ಗಳಾಗಿದ್ದಾರೆ ಎನ್ನಬಹುದೇನೋ.  ಮುಂದೆ ಓದಿ »

ಯೆರೆ ಗೌಡ - 100 ರಣಜಿ ಪಂದ್ಯಗಳ ಗೌರವ

ಯೆರೆ ಗೌಡ ಈಗ ೧೦೦ ರಣಜಿ ಪಂದ್ಯಗಳ ಸರದಾರ. ಕೆಳೆದೆರಡು ಋತುಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಈಗ ಮತ್ತೆ ರೈಲ್ವೇಸ್-ಗೆ ಮರಳಿದ್ದಾರೆ. ಉದ್ಯೋಗ ನೀಡಿರುವ ರೈಲ್ವೇಸ್ ಬಾಸ್-ಗಳು ಈ ಬಾರಿ ರೈಲ್ವೇಸ್ ಪರವಾಗಿಯೇ ಆಡಬೇಕೆಂದು ತಾಕೀತು ಮಾಡಿರುವಾಗ ಬೇರೆ ದಾರಿ ಕಾಣದೆ ಯೆರೆ ಕರ್ನಾಟಕವನ್ನು ಬಿಟ್ಟು ಮತ್ತೆ ರೈಲ್ವೇಸ್ ಕಡೆ ತೆರಳಿದ್ದಾರೆ.  ಮುಂದೆ ಓದಿ »

Syndicate content