ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › rajeshnaik111 ರವರ ಬ್ಲಾಗ್

ಇವರೂ ಕನ್ನಡಿಗರು!

October 5, 2006 - 1:19pm — rajeshnaik111

ಬೆಳಗಾವಿಗೆ ಸಂಬಂಧಿಸಿದಂತೆ ಅಕ್ಟೋಬರ್ ೪ರಂದು ಕನ್ನಡ ಪರ ಸಂಘಟನೆಗಳು ನೀಡಿದ ಬಂದ್ ಕರೆ ರಾಜ್ಯದ ಎಲ್ಲೆಡೆ ಬಹು ಯಶಸ್ವಿಯಾಗಿ ನಡೆದರೂ, ಬುದ್ಧಿವಂತರ(?) ನಾಡು ಎಂದೆನಿಸಿಕೊಳ್ಳುವ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬಂದ್-ಗೆ ಇದ್ದ ನೀರಸ ಪ್ರತಿಕ್ರಿಯೆ ಕಂಡು ಏನು ಎಂದುಕೊಳ್ಳಬೇಕೆಂದು ತಿಳಿಯಲಿಲ್ಲ. ನಟ ರಾಜ್ ತೀರಿಕೊಂಡಾಗ ಇಲ್ಲಿ ಯಾವುದೇ ಬಂದ್ ಇರಲಿಲ್ಲ. ಅದು ಸ್ವಾಗತಾರ್ಹ ಕೂಡಾ. ಒಬ್ಬ ವ್ಯಕ್ತಿ ತೀರಿಕೊಂಡ ಕಾರಣಕ್ಕಾಗಿ ಬಂದ್ ಮಾಡಿ ಏನೂ ಬೆಂಬಲಿಸಿದಂತಾಗುವುದಿಲ್ಲ.

ಆದರೆ ಕರ್ನಾಟಕದೆಲ್ಲೆಡೆ 'ಬೆಳಗಾವಿ ಬಿಟ್ಟುಕೊಡೆವು' ಎಂಬ ಏಕನೀತಿಯನ್ನು ಬೆಂಬಲಿಸಿ ಬಂದ್-ಗೆ ಸ್ವಯಂಪ್ರೇರಿತ ಬೆಂಬಲವನ್ನು ಬುದ್ಧಿವಂತರಾಗಿದ್ದೂ ಬುದ್ಧಿವಂತರೆಂದು ಕರೆಸಿಕೊಳ್ಳದ ಜನತೆ ನೀಡಿರುವಾಗ, ಕೇವಲ ವೈಯುಕ್ತಿಕವಾಗಿ ಉದ್ಧಾರವಾಗಿರುವ ಕಾರಣಕ್ಕಾಗಿ ಬುದ್ಧಿವಂತರೆಂದು ಕರೆಸಿಕೊಳ್ಳುವ ಬುದ್ಧಿವಂತರು(?) ನೀಡಿದ ಪ್ರತಿಕ್ರಿಯೆ ಬೇಸರ ತರುವಂತದ್ದು.

'ಗಡಿ ವಿವಾದದಿಂದ ನಮಗೇನು ಪ್ರಯೋಜನ?' ಎಂಬ ಶುದ್ಧ ಮೂರ್ಖ ಪ್ರಶ್ನೆ. (ಪಕ್ಕದ ಕಾಸರಗೋಡಿನ ಬಗ್ಗೆ ದಶಕಗಳಿಂದಲೂ ಇರುವ ವಿವಾದ 'ಗಡಿ' ಎಂಬ ವಿಷಯಕ್ಕೆ ಸಂಬಂಧಿಸಿದ್ದು ಎನ್ನುವುದನ್ನು ಈ ಬುದ್ಧಿವಂತರು ಮರೆತುಬಿಟ್ಟರೇ ?) 'ಮಹಾಜನ್ ವರದಿಯಿಂದ ನಮಗೇನು ಲಾಭ' ಎಂಬ ಇನ್ನೊಂದು ಅತೀ ಬುದ್ಧಿವಂತ ಪ್ರಶ್ನೆ. ಈ ಪ್ರಶ್ನೆಯಲ್ಲಿ 'ನಮಗೆ' ಎಂದರೆ 'ಕರ್ನಾಟಕಕ್ಕೆ' ಎಂದು ಭಾವಿಸಬೇಡಿ. ಇಲ್ಲಿ 'ನಮಗೆ' ಎಂದರೆ 'ತನಗೆ' ಎಂದರ್ಥ. 'ಸ್ವಾರ್ಥ'ತನದ ಉತ್ತುಂಗ!

ರಾಜ್ಯಮಟ್ಟದ, ರಾಷ್ಟ್ರಮಟ್ಟದ ವಿಚಾರಗಳು, ವಿವಾದಗಳು ತಮಗೆ ಸಂಬಂಧವಿಲ್ಲವೆಂಬಂತೆ ನಡೆಯುವ, ನುಡಿಯುವ ನನ್ನ ಉಡುಪಿ ಹಾಗೂ ಮಂಗಳೂರಿನ ಸಹಜೀವಿಗಳೊಂದಿಗೆ ನಾನು ಮೊದಲಿಂದಲೂ ಮೃದುವಾಗಿ ಕಿತ್ತಾಡಿಕೊಂಡೇ ಬಂದಿದ್ದೇನೆ. ಹಾಗೇನೆ ಕಾಲೆಳೆಯುತ್ತಾ ಇದ್ದೇನೆ ಕೂಡಾ.

ಬಿಜಾಪುರ, ಬಾಗಲಕೋಟೆ, ರಾಯಚೂರುಗಳಿಂದ ಹೊಟ್ಟೆಪಾಡಿಗಾಗಿ ಗುಳೇ ಬರುವ ಬಡ ಜನರನ್ನು ತುಚ್ಛವಾಗಿ ಕಾಣುವುದು, ಅವರನ್ನು ಗೇಲಿ ಮಾಡುವುದು, ಇತ್ಯಾದಿ ಮೊದಲಿಂದಲೂ ನಡೆದು ಬಂದಿದೆ. ಅವರೂ ಕೂಡಾ ತಮ್ಮಂತೆ ಕನ್ನಡಿಗರು ಎಂಬ ಕನಿಷ್ಟ ಪ್ರಜ್ನೆ ಇಲ್ಲದವರು ನನ್ನ ಸಹಜೀವಿಗಳು. ತಮಿಳುನಾಡು, ಕೇರಳಗಳಿಂದ ಬರುವವರನ್ನು ದೊರೆಗಳಂತೆ ಕಾಣುವುದು ಕೂಡಾ ಮೊದಲಿನಿಂದ ನಡೆದು ಬಂದ 'ಸಂಪ್ರದಾಯ'(?). ಯಾಕೆ ಹೀಗೆ? ಯಾಕೆಂದರೆ ಸ್ವಾಮಿ - ಉಡುಪಿ, ಮಂಗಳೂರು, ಬೆಂಗಳೂರು, ಮೈಸೂರು ಇಷ್ಟು ಮಾತ್ರ ಕರ್ನಾಟಕವೆಂದು ತಿಳಿದುಕೊಂಡವರಿಗೆ ಉಡುಪಿಯಾಚೆ ಉತ್ತರ ಕರ್ನಾಟಕವಿದೆ ಎಂಬುದನ್ನು ದೊಣ್ಣೆ ಹಿಡಿದು ಕಲಿಸಬೇಕೇನೋ.

ಕಳೆದ ಸಲ ಕೇವಲ ಹಾಸ್ಯ ಪ್ರಜ್ನೆಯಿಂದ ಉಚ್ಚಾರದ ಬಗ್ಗೆ ಬರೆದ ಲೇಖನವನ್ನು ಭಾವನಾತ್ಮಕವಾಗಿ ತೆಗೆದುಕೊಂಡ ಕೆಲವರು 'ಇವರೆಲ್ಲಾ ಕನ್ನಡಿಗರಲ್ಲವೇ' ಎಂದಿದ್ದರು. ಆಗಲೇ ಉತ್ತರ ನೀಡಬೇಕೆಂದಿದ್ದೆ. ಆದರೆ ಅವಕಾಶ ಈಗ ಸಿಕ್ಕಿತು. ನಾನು ಅತೀಯಾಗಿ ಕಾಲೆಳೆಯುವುದು ಕೂಡ ಇಲ್ಲಿನವರ ರಾಜ್ಯಮಟ್ಟದ ವಿವಾದಗಳ ಬಗ್ಗೆ ಇರುವ 'ಸ್ವಾರ್ಥ' ನೀತಿಯನ್ನು ನೋಡಿ ನೋಡಿ ಬೇಸತ್ತಿರುವುದರಿಂದಲೇ ವಿನಹ ಬೇರೆ ಯಾವ ಕಾರಣದಿಂದಲ್ಲ.

'ಇವರೆಲ್ಲಾ ಕನ್ನಡಿಗರಲ್ಲವೇ'? ನೋ ಡೌಟ್, ಉಡುಪಿ ಮತ್ತು ಮಂಗಳೂರಿನ ನಾಗರಿಕರೆಲ್ಲಾ ಕನ್ನಡಿಗರೇ..... ಐ ರಿಪೀಟ್ 'ಉಡುಪಿ ಮತ್ತು ಮಂಗಳೂರಿನ ನಾಗರಿಕರೆಲ್ಲಾ ಕನ್ನಡಿಗರೇ'. ಬಟ್ ಒನ್ಲಿ ಪ್ರಾಕ್ಟಿಕಲೀ, ನಾಟ್ ಲಾಜಿಕಲಿ.

~.~
  • rajeshnaik111 ರವರ ಬ್ಲಾಗ್
  • Login or register to post comments
  • 881 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 28, 2007 - 9:21pm — nandakishore_bhat

ಉ: ಇವರೂ ಕನ್ನಡಿಗರು!

nandakishore_bhat's picture

ನಮಸ್ಕಾರ ರಾಜೇಶ್ ಅವರೆ.

ಈ ಎಳೆಯನ್ನು ವೀಣಾ ಅವರ ಬ್ಲಾಗಿನಲ್ಲಿ ನೋಡಿ ಇಲ್ಲಿಗೆ ಓಡಿ ಬಂದೆ.

ನಿಮ್ಮ ಮಾತಿಗೆ ನನ್ನದು ನೂರಾಹತ್ತು ಪ್ರತಿಶತ ಒಪ್ಪಿಗೆ ಉಂಟು. ಉಡುಪಿಯವನೇ ಆಗಿರುವ ಒಬ್ಬ ಸಹೋದ್ಯೋಗಿ ಹೇಳಿದ್ದ - "ನಾವು ಮ್ಯಾಂಗ್ಲೋರ್‍ನವರು ಈ ಬ್ಯಾಂಗ್ಲೋರ್‌ನವರ ಹಾಗೆ ಯಾವತ್ತೂ ಗಲಾಟೆ ಮಾಡುದಿಲ್ಲ ಅಲ್ವ. ಎಷ್ಟು ಎಜೆಸ್ಟ್ ಮಾಡಿಕೊಂಡಿರ್ತೇವೆ. ಇಲ್ಲೆಲ್ಲ ಬರೀ ಕನ್ನಡ ಮಾರ್ರೆ. ನಮ್ಮೂರಲ್ಲಾದ್ರೆ ಇಂಗ್ಲಿಷು, ಹಿಂದಿ ಹೀಗೆ ಯಾವ ಭಾಷೆ ಬೇಕಿದ್ರೆ ಮಾತಾಡ್ತೇವೆ. ಇಲ್ಲಿನವರ ಹಾಗೆ ಗಡಿಗಡಿಗೆ ಬೊಬ್ಬೆ ಹೊಡಿಯುದಿಲ್ಲ ನೋಡಿ"....ನನಗೆ ಅವನ ಒಂದೊಂದು ಶಬ್ದ ಕೇಳಿದಾಗ್ಲೂ ಮೈ ಉರೀತಿತ್ತು. "ಹೌದು ಹಾಗೆ ಇರುದ್ರಿಂದ್ಲೇ ಮಂಗ್ಳೂರಲ್ಲಿ ಬೋರ್ಡು ಇಂಗ್ಲಿಷ್-ಮಲಯಾಳಿಯಲ್ಲಿ ಬರೆದಿರ್ತಾರೆ, ಕನ್ನಡವನ್ನು ಮೂಸುವವರಿಲ್ಲ" ಅಂದೆ. ಅವನಿಗೆ ನನ್ನನ್ನು ಅನಾಗರಿಕನೇನೋ ಎಂಬಂತೆ ನೋಡಿದ. ಮತ್ತೆ ಮಾತುಕತೆಯಿಲ್ಲ.

ಉಡುಪಿಯನ್ನು ಒಂದು ಸಲ ಸುತ್ತುಹಾಕಿ ಬನ್ನಿ ಸರ್. ಬರೀ ಬಿಲ್ಡಿಂಗುಗಳು, ಅಲ್ಲೆಲ್ಲ ಇಂಗ್ಲಿಷ್ ಬೋರ್ಡುಗಳು. ಮಣಿಪಾಲ ಅಂತೂ ಕೈಬಿಟ್ಟು ಹೋಗಿದೆ. ಮಾತೃಭಾಷೆಯ ಮೇಲೆ ಗೌರವ ಇಲ್ಲದವರು ಎಷ್ಟು ಬುದ್ಧಿವಂತರಾದ್ರೆ ಏನು ಬಂತು ಸರ್ ಪ್ರಯೋಜನ? ಬೇಜಾರಾಗುದಿಲ್ವ ಹೇಳಿ.

ಆದರೆ ಒಂದು ವಿಷಯ - ಕರವೇ ಅವರದ್ದು ಶಾಖೆ ಉಡುಪಿಯಲ್ಲೂ ಉಂಟಂತೆ. ಅದರಿಂದ ಏನಾದ್ರೂ ಒಳ್ಳೆದಾಗಬಹುದು ಅನ್ನುವ ಒಂದು ಆಸೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಬಂದ್
  • ಕಾವೇರಿ ಪ್ರತಿಭಟನೆ ಮತ್ತು ಕರಾವಳಿ ಜಿಲ್ಲೆಗಳು
  • ಉಡುಪಿ ಕನ್ನಡ ಸಾಹಿತ್ಯ ಸಮ್ಮೇಳನ-ಅಧ್ಯಕ್ಷತೆ ಮಹಿಳೆ ವಹಿಸಬೇಕೇ?
  • ಗುಳೇದಗುಡ್ಡ ಆಗಬೇಕಿತ್ತು...ಆದರೆ....
  • ದಿನ ಪತ್ರಿಕೆಯೂ ಪ್ರಾದೇಶಿಕ ಆವೃತ್ತಿಗಳೂ
Syndicate content

ಲೇಖಕರು

rajeshnaik111's picture

ಪರಿಚಯ

ಕನ್ನಡಿಗರೆಲ್ಲರಿಗೂ ನಮಸ್ಕಾರ. ನಾನು ರಾಜೇಶ್ ನಾಯ್ಕ. ಉಡುಪಿ ನಿವಾಸಿ. ಮಂಗಳೂರಿನಲ್ಲಿ ಜಾಹೀರಾತು ಸಂಸ್ಥೆಯೊಂದರಲ್ಲಿ ಉದ್ಯೋಗ. ಕನ್ನಡ ನಾಡು ಸುತ್ತುವ ಹಂಬಲ. ಹವ್ಯಾಸಿ ಚಾರಣಿಗ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು-11
  • ಶಿವರಾಜ್ ಕುಮಾರ ಅಭಿಮಾನಿಗಳಿಗೆ ಮತ್ತೇರಿಸುವ ಚಿತ್ರ " ಮಾದೇಶ "
  • ಹಬ್ಬ ತಂದ ನೆನಪು...
  • ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
  • ಆಧುನಿಕ "ಬೇಡರ ಕಣ್ಣಪ್ಪ"..
  • ವೃತ್ತಿಜೀವನದ ಹಂತಗಳು...
  • ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
  • ಓದಿದ್ದು ಕೇಳಿದ್ದು ನೋಡಿದ್ದು-10
  • ಮೊದಲ ಚಿತ್ರ
  • ಬಿಗುಮಾನದ ಚಿತ್ರಗಳು
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 6:48am
  • kalpana
    ಉ: ಜೀವ ಕಾಯುವುದೇತಕೆ?
    September 7, 2008 - 5:19am
  • kalpana
    ಉ: ಮೊದಲ ಚಿತ್ರ
    September 7, 2008 - 1:48am
  • srivathsajoshi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 12:24am
  • yuvapremi
    ಉ: Splendours of Royal Mysore
    September 6, 2008 - 10:19pm
  • yuvapremi
    ಉ: ಮೊದಲ ಚಿತ್ರ
    September 6, 2008 - 10:11pm
  • ASHOKKUMAR
    ಉ: ಹಬ್ಬ ತಂದ ನೆನಪು...
    September 6, 2008 - 9:59pm
  • uniquesupri
    ಉ: ಜೀವ ಕಾಯುವುದೇತಕೆ?
    September 6, 2008 - 9:30pm
  • cmariejoseph
    ಉ: ಹಬ್ಬ ತಂದ ನೆನಪು...
    September 6, 2008 - 9:16pm
  • cmariejoseph
    ಉ: ಚಂದಿರನ ನೋಡಿದವ
    September 6, 2008 - 9:01pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 163 ಅತಿಥಿಗಳು ಆನ್ಲೈನ್ ಇರುವರು.


ಕೆಟ್ಟ ಪ್ರಪಂಚವಿದು, ಸುಟ್ಟ ಕರಿ ನರಮನಸು ।
ಬಿಟ್ಟುಬಿಡಲರಿದದನು, ಕಟ್ಟಿಕೊಳೆ ಮಷ್ಟು ।।
ಮುಷ್ಟಿ ಮುಟ್ಟದವೋಲುಪಾಯದಿಂ ನೋಡದನು ।
ಗಟ್ಟಿ ಪುರುಳೇನಿಲ್ಲ -- ಮಂಕುತಿಮ್ಮ ।।

— ಡಿ.ವಿ.ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator