ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › rashmi_pai ರವರ ಬ್ಲಾಗ್

ಹಸಿರು ಬೆಳೆಸಿ, ಉಸಿರು ಉಳಿಸೋಣ!

June 5, 2008 - 9:42am — rashmi_pai

ಭೂಮಿಯ ತಾಪಮಾನ ಹೆಚ್ಚಾಗುತ್ತಾ ಬರುತ್ತಿದೆ. ಜಲಾಶಯಗಳು ಬತ್ತುತ್ತಿವೆ. ಹವಾಮಾನ ವೈಪರೀತ್ಯ!ಇವೆಲ್ಲದಕ್ಕೂ ಹಸಿರುಮನೆ ಅನಿಲದ ಹೊರ ಹೊಮ್ಮುವಿಕೆ ಅಧಿಕವಾಗಿರುವುದೇ ಕಾರಣ ಎಂಬುದಾಗಿ ತಜ್ಞರು ಈಗಾಗಲೇ ವರದಿ ನೀಡಿದ್ದಾರೆ. ಸದ್ಯ ಹಸಿರು ಮನೆ ಪರಿಣಾಮದ ಬಗ್ಗೆ ಭಾರತೀಯರು ಈ ಮೊದಲು ತಲೆಕೆಡಿಸಿಕೊಂಡಿಲ್ಲ. ಹೆಚ್ಚುತ್ತಿರುವ ನಗಕರೀಕರಣ, ಕಾಡುಗಳ ನಾಶ ಎಲ್ಲವೂ ವಾತಾವರಣದಲ್ಲಿ ಅಂಗಾರಾಮ್ಲ, ಮಿಥೇನ್ ಮೊದಲಾದ ಅನಿಲಗಳು ತುಂಬಿಕೊಳ್ಳಲು ಕಾರಣವಾಗಿದೆ. ನಮ್ಮೀ ವಾತಾವರಣವನ್ನು ರಕ್ಷಿಸುವ, ವಾತಾವರಣ ಮಲಿನೀಕರಣದ ಬಗ್ಗೆ ಜಾಗರೂಕತೆ ಮೂಡಿಸುವ ಸಲುವಾಗಿ ವರ್ಷಂಪ್ರತಿ ಪರಿಸರ ದಿನಾಚರಣೆಯನ್ನು ಜಗತ್ತಿನಾದ್ಯಂತ ಹಮ್ಮಿಕೊಳ್ಳಲಾಗುತ್ತದೆ. ಸಂಯುಕ್ತ ರಾಷ್ಟ್ರ ಪರಿಸರ ಯೋಜನೆಯು ಈ ಬಾರಿ co2 kick the Habit! ಎಂಬ ಧ್ಯೇಯವಾಕ್ಯನ್ನು ಘೋಷಿಸಿದ್ದು, ಅಂಗಾರಾಮ್ಲದ ಪ್ರಮಾಣವನ್ನು ಕಡಿಮೆ ಮಾಡುವಂತೆ ಜನರಲ್ಲಿ ಕೇಳಿಕೊಂಡಿದೆ. ಅದೇ ರೀತಿ ಭಾರತ ಸರಕಾರವು ಜೀವಂತಿಕೆ ಮತ್ತು ಬೆಳವಣಿಗೆಯತ್ತ ಸಾಗಲು c02 pick right ಎಂಬ ಧ್ಯೇಯ ವಾಕ್ಯವನ್ನು ಘೋಷಿಸಿದೆ.

ಪ್ರಸ್ತುತ ವಾತಾವರಣದಲ್ಲಿ ಕಾರ್ಬನ್ ಡೈ ಆಕ್ಸೈಡ್ ಅಥವಾ ಅಂಗಾರಾಮ್ಲದ ಪರಿಣಾಮವು ಏರಿಕೆಯಾಗುತ್ತಾ ಬರುತ್ತಿದೆ. ಆ ಕಾರಣದಿಂದಾಗಿ ಭೂಮಿಯ ತಾಪಮಾನವು ಏರುತ್ತಿದ್ದು, ಕಾಲಕ್ಕನುಗುಣವಾಗಿ ಮಳೆ ಬರದೆ ಹವಾಮಾನ ವೈಪರೀತ್ಯವು ಕಂಡು ಬರುತ್ತಿದೆ. ಇದೀಗ ಪರಿಸರ ವಿಜ್ಞಾನಿಗಳ ಸಲ್ಲಿಸಿದ ವರದಿಯ ಪ್ರಕಾರ ಭೂಮಿಯಲ್ಲಿ ಅಂಗಾರಾಮ್ಲದ ಅತ್ಯಧಿಕವಾದ ಸಾನಿಧ್ಯಕ್ಕೆ ಐದು ರಾಷ್ಟ್ರಗಳು ಕಾರಣವಾಗಿವೆ. ಇದರಲ್ಲಿ ಭಾರತವೂ ಸೇರಿಕೊಂಡಿದೆ. ಪ್ರಗತಿಪರ ರಾಷ್ಟ್ರಗಳು ಅತ್ಯಧಿಕ ಅಂಗಾರಾಮ್ಲವನ್ನು ವಾತಾವರಣಕ್ಕೆ ಬಿಡುಗಡೆ ಮಾಡುತ್ತವೆ ಎಂಬುದು ಗಮನಿಸಬೇಕಾದ ಅಂಶ. ಸಂಯುಕ್ತ ರಾಷ್ಟ್ರಗಳು ಜಗತ್ತಿನಲ್ಲೇ ಅತ್ಯಧಿಕ ಅಂಗಾರಾಮ್ಲವನ್ನು ಪರಿಸರಕ್ಕೆ ಹೊರ ಹೊಮ್ಮಿಸುವ ದೇಶವಾಗಿದೆ. ಪ್ರಸಕ್ತ ದೇಶದಿಂದ ಬಿಡುಗಡೆಯಾಗುವ ಅಂಗಾರಾಮ್ಲದ ಪರಿಮಾಣವು 19.8% ಆದರೆ ಚೀನಾವು 17.7% ಅಂಗಾರಾಮ್ಲ ಹೊರಸೂಸುವುದರಲ್ಲಿ ಎರಡನೇ ಸ್ಥಾನವನ್ನು ಗಳಿಸಿಕೊಂಡಿದೆ. ಅದೇ ರೀತಿ ರಷ್ಯಾವು 5.4, ಭಾರತ 4.7 ಮತ್ತು ಜಪಾನ್ 4.1 ಪ್ರತಿಶತ ಅಂಗಾರ ಬಿಡುಗಡೆಯೊಂದಿಗೆ ನಂತರದ ಮೂರು ಸ್ಥಾನಗಳನ್ನು ಗಳಿಸಿಕೊಂಡಿದೆ. ತಜ್ಞರ ಪ್ರಕಾರ 2009ನೇ ಇಸವಿಯ ವೇಳೆಗೆ ಚೀನಾವು ಮೊದಲ ಸ್ಥಾನಕ್ಕೇರಬಹುದು ಎಂಬುದಾಗಿದೆ.ಇದೀಗ ಭಾರತದಿಂದ ಹೊರ ಸೂಸುವಂತಹ ಅಂಗಾರದ ಪರಿಣಾಮವು ಧುತ್ತನೆ ಏರಿಕೆಯಾಗುತ್ತಾ ಬರುತ್ತಿದೆ. ಕಾಡುಗಳ ನಾಶ, ನಗರೀಕರಣ, ಪಳೆಯುಳಿಕೆ ಇಂಧನಗಳ ಉರಿಸುವಿಕೆ, ಹೆಚ್ಚುತ್ತಿರುವ ವಾಹನಗಳ ಹೊಗೆಯಿಂದಾಗಿ ಪರಿಸರವು ಮಲಿನವಾಗುತ್ತಾ ಬರುತ್ತಿದೆ ಎಂಬುದು ತಜ್ಞರ ಅಭಿಪ್ರಾಯ. 2000 ಮತ್ತು 2007ನೇ ನಡುವಿನ ಕಾಲಾವಧಿಯಲ್ಲಿನ ಅಂಗಾರಾಮ್ಲದ ಪ್ರಮಾಣದ ಏರಿಕೆಯನ್ನು ಗಮನಿಸಿದರೆ ಪ್ರತಿವರ್ಷವೂ 2ppmನಷ್ಟು ಇದು ಅಧಿಕವಾಗುತ್ತಿದೆ. ಕೈಗಾರಿಕಾ ಕ್ರಾಂತಿ ಆರಂಭವಾಗುವುದಕ್ಕಿಂತ ಮೊದಲು 280ppm ನಷ್ಟು ಇದ್ದ ಅಂಗಾರದ ಪ್ರಮಾಣವು 2007ನೇ ಇಸವಿಯ ಅಂಕಿಅಂಶದ ಪ್ರಕಾರ 384 ppm ಆಗಿ ಏರಿಕೆಯಾಗಿದೆ.

ವಿಜ್ಞಾನ ಮತ್ತು ಪರಿಸರ ಕೇಂದ್ರ (cse) ಪ್ರಕಾರ ದ್ವಿಚಕ್ರವಾಹನಗಳು ಅಧಿಕವಾಗಿ ಅಂಗಾರಾಮ್ಲವನ್ನು ಹೊರ ಸೂಸುತ್ತವೆ. 2002 ರಿಂದ 2007ರ ನಡುವಿನ ಕಾಲಾವಧಿಯಲ್ಲಿ ಕಾರುಗಳು 73% ಅಂಗಾರಾಮ್ಲ ಬಿಡುಗಡೆ ಮಾಡಿದರೆ, ದ್ವಿಚಕ್ರ ವಾಹನಗಳು 61% ವನ್ನು ಹೊರಸೂಸುತ್ತವೆ, ಆದರೆ ಸಂಚಾರಿ ಬಸ್‌ಗಳು ಕೇವಲ 20% ಅಂಗಾರಾಮ್ಲವನ್ನು ಹೊರಸೂಸುತ್ತವೆ. ಇದೀಗ ಹಸಿರುಮನೆ ಅನಿಲದ ಅತ್ಯಧಿಕ ಹೊರಸೂಸುವಿಕೆಯಿಂದ ಜಗತ್ತೆಲ್ಲ ತಲ್ಲಣಗೊಂಡಿದ್ದು, ಇದು ಮಾನವನ ಜೀವನದ ಮೇಲೆ ಅತೀವ ಪರಿಣಾಮವನ್ನು ಬೀರಲಿದೆ. ಪ್ರಕೃತಿದತ್ತವಾದ ವಾಯು ಸಿಗದೆ ಕಷ್ಟ ಪಡಬೇಕಾದ ಪರಿಸ್ಥಿತಿ ಬಂದೊದಗುವ ಮೊದಲೇ ಪರಿಸರವಾಸಿಗಳೆಲ್ಲರೂ ಜಾಗೃತರಾಗಬೇಕು. ತ್ಯಾಜ್ಯಗಳನ್ನು ಬಿಸಾಡುವ ಬದಲು ಅವುಗಳನ್ನು ಉಪಯುಕ್ತ ಕಾರ್ಯಗಳಿಗಾಗಿ ಬಳಸಬೇಕು.ಅದೇ ರೀತಿ ಜೈವಿಕ ಗೊಬ್ಬರದ ತಯಾರಿ, ಜೈವಿಕ ಅನಿಲ ಮೊದಲಾದವುಗಳ ಯೋಜನೆಯಲ್ಲಿ ಸಕ್ರಿಯವಾದರೆ ಮಾತ್ರ ತ್ಯಾಜ್ಯದ ಹೊರೆ ಕಡಿಮೆಯಾಗುವಂತೆ ಮಾಡಬಹುದು.ಇತ್ತ ಹೆಚ್ಚುತ್ತಿರುವ ಇ-ತ್ಯಾಜ್ಯಗಳೂ ಸಮಸ್ಯೆಯನ್ನುಂಟು ಮಾಡಿದರೆ ಅವುಗಳನ್ನು ರೀಸೈಕಲ್ ಮಾಡುವ ಬಗೆಗಿನ ಕಾರ್ಯವೂ ಮುಂದುವರಿಯುತ್ತಿದೆ.ಪರಿಸರ ಸಂರಕ್ಷಣೆಯಲ್ಲಿ ಭಾರತ ಸರಕಾರದ ಧ್ಯೇಯವಾಕ್ಯದಂತೆ ಸೂಕ್ತವಾದನ್ನು ಆರಿಸಿ, ಪರಿಸರ ಸಂರಕ್ಷಣೆಯಲ್ಲಿ ಭಾಗಿಗಳಾಗಬೇಕು. ಎರಡು ಹೆಜ್ಜೆಗೂ ವಾಹನ ಬಳಸುವ ನಾವು ನಡೆದು ಕೊಂಡು ಹೋದರೆ ಇಂಧನವೂ ಲಾಭ, ಆರೋಗ್ಯಕ್ಕೂ ಉತ್ತಮ, ಪರಿಸರ ಸಂರಕ್ಷಣೆಯೂ ಆಗುತ್ತದೆ ಎಂಬುದನ್ನು ಯಾಕೆ ಚಿಂತಿಸುತ್ತಿಲ್ಲ?. ಕೈಗಾರಿಕಾ ಕೇಂದ್ರಗಳಿಂದ ಹೊರ ಸೂಸುವ ಬೃಹತ್ ಮಲಿನ ವಾಯುಗಳ ಮುಂದೆ ನಮ್ಮ ವಾಹನಗಳಿಂದ ಹೊರಬಿಡುವ ಹೊಗೆಯೇನು ಮಹಾ ಎಂದು ಚಿಂತಿಸುವ ಬದಲು ಮಾನವನ ಅಸ್ತಿತ್ವ ಉಳಿಯಬೇಕಾದರೆ ಪರಿಸರವನ್ನು ಹೇಗೆ ಕಾಪಾಡಿಕೊಳ್ಳಬಹುದು ಎಂಬುದಾಗಿ ಆಲೋಚಿಸಬೇಕು. ಹಾಗೆಯೇ ಕಾರ್ಯ ಪ್ರವೃತ್ತರಾಗಬೇಕು. ಆದಷ್ಟು ಗಿಡ ಮರಗಳನ್ನು ಬೆಳೆಸಿ ಪ್ರಕೃತ್ತಿಯನ್ನು ಹಸನುಗೊಳಿಸಬೇಕು. ಪರಿಸರ ಸಂರಕ್ಷಣೆಯ ದಿನಾಚರಣೆಯನ್ನು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತಗೊಳಿಸದೆ ಅನವರತ ಶ್ರಮದಲ್ಲಿ ತೊಡಗಿಸಿಕೊಳ್ಳಬೇಕು.ಅಂತೂ ಒಟ್ಟಿನಲ್ಲಿ, ಪರಿಸರ ಮಲಿನೀಕರಣಕ್ಕೆ ಕಾರಣವಾಗುವ ವಸ್ತುಗಳ ಬಗ್ಗೆ ಜಾಗೃತರಾಗಿರಿ. ಈ ನಿಟ್ಟಿನಲ್ಲಿ ಪರಿಸರದ ಉಳಿವಿಗಾಗಿ ಹೋರಾಡಲು ಸಿದ್ಧರಾಗೋಣ. ಬನ್ನಿ, ಹಸಿರುಮನೆ ಅನಿಲ ಪರಿಣಾಮದಿಂದ ಉಸಿರು ಕಟ್ಟುವ ಮೊದಲು ಪರಿಸರವನ್ನು ಹಸಿರಾಗಿಸೋಣ.

  • ಲೇಖನ
~.~
  • rashmi_pai ರವರ ಬ್ಲಾಗ್
  • Login or register to post comments
  • 147 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಬಿಸಿಯೇರುತ್ತಿರುವ ಭೂಮಿಯ ತಾಪಮಾನ ಮತ್ತು ಅಮೇರಿಕಾದ ಪರಿಸರ-ವಿರೋಧಿ ನೀತಿ:
  • ಪರಿಸರ ಪ್ರೇಮಿ
  • ಇಂದು ವಿಶ್ವ ಪರಿಸರ ದಿನ - Do I care?
  • ಅಳಿಲು ಸೇವೆ.
  • ಪರಿಸರ ಸಂರಕ್ಷಣೆ ನಮ್ಮೇಲ್ಲರ ಹೊಣೆ
Syndicate content

ಲೇಖಕರು

rashmi_pai's picture

ಪೂರ್ಣ ಹೆಸರು
Rashmi Pai

ಪರಿಚಯ

ನನ್ನ ಊರು ಗಡಿನಾಡಾದ ಕಾಸರಗೋಡು. ಪ್ರಸ್ತುತ ಬೆಂಗಳೂರಿನಲ್ಲಿ ಕೆಲಸದಲ್ಲಿದ್ದೇನೆ. ಸಾಹಿತ್ಯ, ಕಲೆಗಳಲ್ಲಿ ಆಸಕ್ತಿ ಹೊಂದಿರುವುದರೊಂದಿಗೆ ಕತೆ, ಕವಿತೆ, ಭಾಷಣ ಮೊದಲಾದವುಗಳಲ್ಲಿ ನನ್ನನ್ನು ತೊಡಗಿಸಿಕೊಳ್ಳುತ್ತೇನೆ. ನನ್ನ ನೆಚ್ಚಿನ ಗೆಳೆಯನಾದ ಪ್ರಕೃತಿಯೊಂದಿಗೆ ಒಡನಾಟ ನಡೆಸುವುದು ಹಾಗೂ ಸ್ವಪ್ನಲೋಕದಲ್ಲಿ ವಿಹರಿಸುವುದೆಂದರೆ ನನಗಿಷ್ಟ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • IT - ಸಿಂಪ್ಟಮ್ಸ
  • ಬಿಟ್ಟು ಹೋದವಳಿಗಾಗಿ
  • ಶಾಲೆಗಳು, ಸ್ಪರ್ಧಾತ್ಮಕ ಜಗತ್ತು..
  • ನೀರವತೆ!
  • ಓದಿದ್ದು ಕೇಳಿದ್ದು ನೋಡಿದ್ದು-9
  • ಓ, ಬನ್ನಿ, ಸೋದರರೆ, ಬೇಗ ಬನ್ನಿ!
  • ನನ್ನ ನೆನಪು ನಿನಗೆ ಬರೋದೇ ಇಲ್ಲವಾ ?
  • ನಿನ್ನ ಕನಸಿನ ಸಿನೆಮಾದಲ್ಲಿ ಹಾರ ಹಾಕಿಸಿಕೊಂಡ ಫೋಟೋವಿನ ಪಾತ್ರ..!
  • ಹೊಗಳುವದಿಲ್ಲ ನಾ ನಿನ್ನ, ಕೇಳು ಒಮ್ಮೆ ಈ ಸಲಹೆಯನ್ನ.
  • ಲಿನಕ್ಸಾಯಣ - ೧೭- ಫೇಸ್ಟ್ ಬಿನ್ (pastebin) ಬಗ್ಗೆ ಗೊತ್ತಾ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • savithasr
    ಉ: IT - ಸಿಂಪ್ಟಮ್ಸ
    September 5, 2008 - 4:16pm
  • savithasr
    ಉ: ನೀರವತೆ!
    September 5, 2008 - 3:57pm
  • vikashegde
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 5, 2008 - 3:52pm
  • gururajkodkani
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 5, 2008 - 3:48pm
  • veeravenki
    ಉ: ಬಿಟ್ಟು ಹೋದವಳಿಗಾಗಿ
    September 5, 2008 - 2:54pm
  • yogeshkrbhat1
    ಉ: ಬಿಟ್ಟು ಹೋದವಳಿಗಾಗಿ
    September 5, 2008 - 2:41pm
  • savithru
    ಉ: ಮಾರತ್ತಳ್ಳಿ ಸೇತುವೆಯ ಮೇಲೆ ಅನಿವಾಸಿಯ ಪೋನು
    September 5, 2008 - 2:30pm
  • yogeshkrbhat1
    ಉ: ಪದಬೆಳಗು: ೩: ಸಜ್ಜನ
    September 5, 2008 - 2:28pm
  • anil.ramesh
    ಉ: ಬಿಟ್ಟು ಹೋದವಳಿಗಾಗಿ
    September 5, 2008 - 2:27pm
  • ASHMYA
    ಉ: ನೀರವತೆ!
    September 5, 2008 - 2:17pm
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 61 ಅತಿಥಿಗಳು ಆನ್ಲೈನ್ ಇರುವರು.


ಉತ್ತಮ ಗುರು ತನ್ನ ಶಿಷ್ಯರಿಂದಲೇ ಕಂಡು ಹಿಡಿಯಲ್ಪಡುತ್ತಾನೆ. ಯಾವ ಶಿಷ್ಯ ಗುರುವಿಗಿಂತ ಮುಂದೆ ಹೋಗುತ್ತಾನೋ ಅವನೇ ಉತ್ತಮ ಗುರು.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator