ಆಗ್ರಹ
ಮನದಿ ಬಚ್ಚಿಟ್ಟ ನೆನಪುಗಳು
ಮರುಕಳಿಸುತ್ತವೆ
ನಗೆಯಿಲ್ಲದ ಮುಖಗಳಲ್ಲಿ
ವಿಷಾದದ ಗೆರೆ ಇಣುಕುವಾಗ
ಅತೃಪ್ತ ಮನದಲ್ಲಿ
ನೂರಾರು ಬಯಕೆಗಳು
ಹುಚ್ಚೆದ್ದು ಕುಣಿವಾಗ
ನೆಲ- ಆಗಸಕ್ಕೆ ಅಂತರವಿಲ್ಲವೆನುವಿರಿ
ನೀವು...
ಕಿರುನಗೆಯೊಂದ ಸೂಸಲು
ಅಷ್ಟೊಂದು ಚಿಂತೆಯೇಕೆ?
ಇಹಲೋಕದ ನಾಲ್ಕು ದಿನದ
ಜೀವನದ ಪಯಣದೊಳು
ಬಡವ ಬಲ್ಲಿದನೆಂದು
ಭೇದ ಕಾಣುವಿರೇಕೆ
ಮಂದಹಾಸಕ್ಕೂ ಇದೆಯೇ
ಮೇಲು ಕೀಳು?
ಸ್ವಾರ್ಥಿಗಳು ನೀವು
ತುಟಿಯಂಚಿನ ಮುಗುಳ್ನಗೆಗೂ
ಲಾಭ ಲೆಕ್ಕ ಹಾಕುವಿರಲ್ಲಾ!
ಹಂಬಲದ ಓಟದಲಿ
ಸುಸ್ತಾಗಿ ಕುಳಿತಾಗ
ಬೆವರ ಹನಿ ಇಬ್ಬನಿಯಾಗಿಸಿದ
ನಮ್ಮತ್ತ ಕಣ್ಣು ಹಾಯಿಸಿ ನೋಡಿ
ಕಷ್ಟ ದುಃಖಗಳ ಕಂಬಳಿಯ ಹೊದ್ದಿಹೆವು
ಬಡತನದ ನಡುಕದಲ್ಲಿಯೂ
ಬದುಕ ಬೇಕಿದೆ ನಮಗೆ, ನಿಮ್ಮೆಡೆಯಲಿ
ಮನಸ್ಸು ಕಲ್ಲಾಗಿಸಿ
ಹರಿವ ತೊರೆಯ ಮುಂದಿನ ಹುಲ್ಲಾಗಿ
ನಿಮ್ಮ ಎದೆಯಂಗಳದಿ
ಮುಳ್ಳು ಬೇಲಿಯೊಳು ಕಂಪಸೂಸುವ
ನಗುವ ಮಲ್ಲಿಗೆಯಾಗಿ.

- rashmi_pai ರವರ ಬ್ಲಾಗ್
- Login or register to post comments
- 191 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಆಗ್ರಹ
"ಬದುಕ ಬೇಕಿದೆ ನಮಗೆ, ನಿಮ್ಮೆಡೆಯಲಿ
ಮನಸ್ಸು ಕಲ್ಲಾಗಿಸಿ
ಹರಿವ ತೊರೆಯ ಮುಂದಿನ ಹುಲ್ಲಾಗಿ
ನಿಮ್ಮ ಎದೆಯಂಗಳದಿ
ಮುಳ್ಳು ಬೇಲಿಯೊಳು ಕಂಪಸೂಸುವ
ನಗುವ ಮಲ್ಲಿಗೆಯಾಗಿ." ................ ಗಟ್ಟಿ ಸಾಲುಗಳಿವು. (ನೋವನ್ನು ಚೆಂದ ಅನ್ನೋದಾದ್ರೂ ಹೇಗೆ ಎಂಬ ಕಳವಳ ಸದಾ ನನ್ನನ್ನು ಕಾಡುತ್ತಲೆ ಇದೆ, ಇರುತ್ತದೆ.)... ಅಭಿನಂದನೆ ರಶ್ಮಿ.
ಜಯಲಕ್ಷ್ಮೀ.ಪಾಟೀಲ್.
ಉ: ಆಗ್ರಹ
thanx..