ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › ravikreddy ರವರ ಬ್ಲಾಗ್

IT ಗೆ ಬಂತು ಆಪತ್ತು ! ?

March 21, 2008 - 10:09am — ravikreddy

ಹಿಂದೊಮ್ಮೆ (ಅಂದರೆ ಕೇವಲ ಏಳು ವರ್ಷಗಳ ಹಿಂದೆ!) ಬೆಂಗಳೂರಿನ ಐಟಿ ಹುಡುಗರ ಎದೆ ಒಮ್ಮೆ ಭಯದಿಂದ ಕಂಪಿಸಿತ್ತು. ಈಗ ಮತ್ತೆ ಆ ಕಂಪನ ಆರಂಭವಾಗಿದೆ. ಅಷ್ಟೇನೂ ಜೀವನಾನುಭವ ಇಲ್ಲದ (ಮುಖ್ಯವಾಗಿ ವಯಸ್ಸಿನ ಕಾರಣದಿಂದಾಗಿ), ಕೇವಲ ಒಳ್ಳೆಯ ದಿನಗಳನ್ನೆ ನೋಡುತ್ತ ಬಂದವರಿಗೆ ಈಗಿನ ಸದ್ಯದ ಸ್ಥಿತಿಯಲ್ಲಿ ಪ್ರಳಯದ ಭಾವನೆಗಳು ಸಹಜ. ಆದರೆ, ಈ ಶತಮಾನ ವಯಸ್ಸಿನ ಆಧುನಿಕ ಅರ್ಥವ್ಯವಸ್ಥೆಯಲ್ಲಿ ಲೇಯಾಫ್, ಹೈರಿಂಗ್ freeze, ನಿರುದ್ಯೋಗ, ಮತ್ತೆ ರಾಕೆಟ್ ವೇಗದಲ್ಲಿ ಮುನ್ನುಗ್ಗುವಿಕೆ, ಇವೆಲ್ಲ ಇದ್ದದ್ದೆ. ಈ ಪ್ರಳಯವಲ್ಲದ, ಆದರೆ ನಿರಾಶಾದಾಯಕ ದಿನಗಳಲ್ಲಿ ನಮ್ಮ ಮನಸ್ಥಿತಿ ಹೇಗಿರುತ್ತದೆ ಎನ್ನುವುದು ಬರಲಿರುವ ದಿನಗಳನ್ನು ನಿರ್ದೇಶಿಸುತ್ತದೆ.

2002 ರಲ್ಲಿ ಕೇವಲ 2400 ಜನ ಉದ್ಯೋಗಿಗಳನ್ನು ಹೊಂದಿದ್ದ ನಷ್ಟದಲ್ಲಿದ್ದ ಉದ್ದಿಮೆ NGEF ಅನ್ನು ಮುಚ್ಚುವಷ್ಟರಲ್ಲಿ ಕರ್ನಾಟಕ ಸರ್ಕಾರಕ್ಕೆ ಸಾಕಾಗಿ ಹೋಗಿತ್ತು. ಆದರೆ ಈಗ 2,80,000 ಉದ್ಯೊಗಿಗಳನ್ನು ಹೊಂದಿರುವ ಭಾರತದ ಮೂರು ಅತಿದೊಡ್ಡ ಐಟಿ ಕಂಪನಿಗಳು ತಮ್ಮಲ್ಲಿ ಬೆಂಚ್ ಮೇಲೆ ಇರುವವರನ್ನು ಉಳಿತಾಯದ ಕಾರಣ ಕೊಟ್ಟು ಲೇಯಾಫ್ ಮಾಡಿದರೆ ಸಾಕು NGEF ನ ಒಟ್ಟು ಉದ್ಯೋಗಿಗಳ ಇಪ್ಪತ್ತರಷ್ಟು ಜನ ಮನೆಗೆ ಹೋಗಬೇಕಾಗುತ್ತದೆ. ಇನ್ನು ಎಲ್ಲರೂ ಅದೆ ಮಾಡಿದರೆ ಲಕ್ಷಾಂತರ ಜನ ಆಗಿಬಿಡುತ್ತಾರೆ. NGEF ಉದ್ಯೋಗಿಗಳ ಪರವಾಗಿ ಪ್ರತಿಭಟನೆಗಳಾದವು. ಅಸೆಂಬ್ಲಿಯಲ್ಲಿ ವಿರೋಧ, ಗದ್ದಲಗಳೆಲ್ಲ ದಾಖಲಾದವು. ಆದರೆ ಐಟಿ ಹುಡುಗರ ಪರವಾಗಿ ಅಂತಹುದೇನೂ ಆಗುವುದಿಲ್ಲ. ಯಾಕೆ ಎನ್ನುವುದಕ್ಕೆ ಅನೇಕ ಕಾರಣಗಳಿವೆ.

ನನ್ನ ಈ ವಾರದ ಅಂಕಣ ಲೇಖನ, ಬೆಂಗಳೂರಿನ ರಿಯಲ್ ಎಸ್ಟೇಟ್, ಭಾರತದ ಐಟಿ ಇಂಡಸ್ಟ್ರಿಯ ಏಳುಬೀಳುಗಳು, ಆಗಿಹೋದ ಇತಿಹಾಸ, ಜಾಗತಿಕ ಅರ್ಥವ್ಯವಸ್ಥೆಯಲ್ಲಿ ಆಗುತ್ತಲೆ ಇರುವ ಏರಿಳಿತಗಳು, corrections, ಇತ್ಯಾದಿಗಳ ಕುರಿತು ಇದೆ. ಪೂರ್ಣ ಲೇಖನ ಇಲ್ಲಿದೆ:

http://amerikadimdaravi.blogspot.com/2008/03/blog-post_20.html



ವಿಡಿಯೊ ಪ್ರಸ್ತುತಿ ಭಾಗ - 1



ವಿಡಿಯೊ ಪ್ರಸ್ತುತಿ ಭಾಗ - 2

~.~
  • ravikreddy ರವರ ಬ್ಲಾಗ್
  • Login or register to post comments
  • 342 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 21, 2008 - 10:13pm — hamsanandi

ಉ: IT ಗೆ ಬಂತು ಆಪತ್ತು ! ?

hamsanandi's picture

ರವಿ,

ಬರಹ ಸಮಯೋಚಿತವಾಗಿದೆ.

-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 21, 2008 - 11:32pm — bachi

ಉ: IT ಗೆ ಬಂತು ಆಪತ್ತು ! ?

bachi's picture

ನಾನು ಬೆಂಗಳೂರಿನ ಐ.ಟಿ. ಕಂಪನಿಯೊಂದರಲ್ಲಿ ಕಳೆದ ನಾಲ್ಕು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. 2002ರಲ್ಲಿ ಇಂಜಿನಿಯರಿಂಗ್ ಮುಗಿಸಿದಾಗ, ಕಲಸಕ್ಕಾಗಿ ಪರದಾಡಿದ "ಆ ದಿನಗಳ‌" ನೆನಪು ಎನ್ನೂ ಮಾಸಿಲ್ಲ. ಈಗ ಮತ್ತೊಂಮ್ಮೆ "ಸ್ಲೋ ಡೌನ್" ಎಂಬ ಭೂತ ದರ್ಶನ!ನಿಮ್ಮ ಬರಹವನ್ನೋದಿ ಸ್ವಲ್ಪ ಧೈರ್ಯ ತಂದುಕೊಂಡೆ. ತುಂಬ ಧನ್ಯವಾದಗಳು.

ಆದರೆ ನನ್ನದೊಂದು ಪ್ರಶ್ನೆ - ಬ್ರಜಿಲ್, ಚೀನ, ರಷಿಯಾ ಮುಂತಾದ ರಾಷ್ಟ್ರಗಳು "ಹೊರ ಗುತ್ತಿಗೆ"ಯನ್ನು ಪಡೆಯುವುದರಲ್ಲಿ ಭಾರತದ ಜೊತೆ ಪೈಪೋಟಿ ನಡೆಸಿವೆ. ರಾಜಕೀಯವಾಗಿ ಭಾರತ್ತಕ್ಕಿಂತ ಬಲವಾಗಿರುವ ಇವು, ರಸ್ತೆ ಮುಂತಾದ ಸವಲತ್ತುಗಳನ್ನು ಬೆಂಗಳುರಿಗಿಂತ ಉತ್ತಮವಾಗಿ ನೀಡುತ್ತಿವೆ. ಹೀಗಿರುವಾಗ, ಐ.ಟಿ. ಹುದ್ದೆಗಳು ನಮಲ್ಲಿ ಕ್ರಮೇಣ ಕಡಿಮೆಯಾಗುವುದಿಲ್ಲವೇ? ಈಗ ಉತ್ತುಂಗದಲ್ಲಿರುವ ಐ.ಟಿ. ಮುಂದಿನ 5 ವರ್ಷಗಳಲ್ಲಿ ಇಳಿಮುಖವಾಗಿ, ನಶಿಸಿಹೋಗದಿದ್ದರರೂ ಕೂಡ, ಒoದು ಹಂತಕ್ಕೆ ಬಂದು stabilize ಆಗುತ್ತದೆ ಎಂದು ನನ್ನ ಭವನೆ. ನೀವೇನಂತೀರಿ?

ಬಾchi - www.sumneblog.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 22, 2008 - 3:09pm — mahesha

ಉ: IT ಗೆ ಬಂತು ಆಪತ್ತು ! ?

mahesha's picture

ರವಿರೆಡ್ಡಿಗಾರು Smiling

"ಬೆಂಗಳೂರಿನ ಐಟಿ ಹುಡುಗರ ಎದೆ ಒಮ್ಮೆ ಭಯದಿಂದ ಕಂಪಿಸಿತ್ತು"

ನೋಡಂಡಿ, ಈ ಸಾಲು ಸರಿಯಿಲ್ಲ... ಬೆಂಗಳೂರಿನ ಅಯ್.ಟಿ ಹುಡುಗರ ಎದೆಗಳು ಒಮ್ಮೆ ಬಯದಿಂದ ಕಂಪಿಸಿದ್ವು. Smiling ತಮಾಸೆಗೆ...

ಆದ್ರೂ ನೀವು ಹುಡುಗ/ಹುಡುಗಿಯರ ಇಲ್ವೇ ಹುಡುರ Smiling ಎದೆಗಳು ಎಂದು ಲಿಂಗ-ತಾರತಮಯವನ್ನು ತೋರಸದಿರಿ...( ಮೊನ್ಮನ್ನೇ ಮಯಿಳಾ ದಿನಾಸರಣೆ ಆಯ್ತಲ್ಲ.. ಅದರ ಗುಂಗು Smiling )

ಏನೊಪ್ಪ ಹಿರಿಯರು, ಅನುಬವದವರು ನೀವು.. ನಾನಿನ್ನು ಪಿಳ್ಳೆ.. ನಂಗೆ ಹೆದರ್‍ಕೆ ಇದ್ದೇ ಅಯ್ತೆ...

ಅದ್ ಸರಿಯಂಡಿ, ನೀವ್ ಯಾಕೆ ಬರೆದು ಬರೆದದನ್ನೆಲ್ಲ ವಿಡಿಯೋ ಹಾಕ್ತೀರಂಡಿ? [ ನಿಜಂಗಾ ನಂಗೆ ಕುತೂಹಲ... ]

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 22, 2008 - 6:50pm — ravikreddy

ಉ: IT ಗೆ ಬಂತು ಆಪತ್ತು ! ?

ravikreddy's picture

ಮಹೇಸಣ್ಣ,
ಈ ಐಡಿಯ ಹೆಂಗೆ ಬಂದಿದ್ದು ಅಂತ ಶುರು ಮಾಡಿದಾಗಲೆ ಬರೆದಿದ್ದೆ ಕಣಣ್ಣ.
http://www.sampada.net/blog/ravikreddy/24/07/2007/5097

"ಸ್ನೇಹಿತರೆ,

ಇವತ್ತು ತಾನೆ CNN ಮತ್ತು ಯೂಟ್ಯೂಬ್ ಸಹಯೋಗದಲ್ಲಿ ಅಮೇರಿಕದಲ್ಲಿ ಡೆಮಾಕ್ರಟಿಕ್ ಪಕ್ಷದ ಪ್ರೈಮರಿ ಸ್ಪರ್ಧಾಳುಗಳ ಚರ್ಚೆ ನಡೆದಿದೆ. ವಿಡಿಯೋ ತಂತ್ರಜ್ಞಾನಕ್ಕೆ ಒಗ್ಗಿಹೋಗಿರುವ ಯುವ ಜನತೆಯನ್ನು ರಾಜಕೀಯ ಚರ್ಚೆಗಳಿಗೆ ಆಹ್ವಾನಿಸುವ ಪ್ರಯತ್ನ ಇದು. ಬರವಣಿಗೆ ಬೋರಾದ ಅಥವ ಬೇಡವಾದ ಜನ ಪಾಶ್ಚಾತ್ಯ ದೇಶಗಳಲ್ಲಿ ಇಂದು ಯೂಟ್ಯೂಬ್‍ನಿಂದಾಗಿ ವಿಡಿಯೋ ಬ್ಲಾಗ್‍ಗಳಿಗೆ ಇಳಿದಿದ್ದಾರೆ. ಅನೇಕ ವಿಷಯಗಳ ಬಗ್ಗೆ ತಮ್ಮ ವಿಡಿಯೋ ಕಾಮೆಂಟ್‍ಗಳನ್ನು, ಪ್ರತ್ಯುತ್ತರಗಳನ್ನು ನೀಡುತ್ತಿದ್ದಾರೆ.
ಉದಾ:
News & Politics ವಿಭಾಗ: http://youtube.com/categories_portal?c=25&e=1

ಇವನ್ನೆಲ್ಲ ಗಮನಿಸುವಾಗ, ನನಗೆ ಕನ್ನಡದಲ್ಲಿ ಯಾವುದೇ ವಿಡಿಯೋ ಬ್ಲಾಗಿಂಗ್, ಕಾಮೆಂಟ್ ಕಾಣಿಸಲಿಲ್ಲ. ನಾನು ಪ್ರತಿ ವಾರ ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿ ಬರೆಯುವ "ಅಮೇರಿಕದಿಂದ ರವಿ" ಅಂಕಣವನ್ನೆ ಯಾಕೆ ಇಲ್ಲಿ ವಾಚಿಸಬಾರದು ಎಂದುಕೊಂಡು ಇಂದು ಒಂದು ವಿಡಿಯೊ ಅಪ್‍ಲೋಡ್ ಮಾಡಿದ್ದೇನೆ. ಇದು ಇನ್ನೂ ಪರಿಣಾಮಕಾರಿಯಾಗಿ ಬರಬೇಕಾದರೆ ನಾನು ಇನ್ನೂ ಅನೇಕ ಎಡಿಟಿಂಗ್ ತಂತ್ರಗಳನ್ನು ಕಲಿಯಬೇಕು. ಬಹುಶಃ ಕಲಿಯುತ್ತಾ ಕಲಿಯುತ್ತಾ ಆಗಬಹುದೇನೊ.
http://www.youtube.com/ravikrishnareddy07

ಇದಕ್ಕಾಗಿಯೆ http://amerikadimdaravi.blogspot.com ಶುರು ಮಾಡಿ, ಅಲ್ಲಿ ಲಿಂಕ್ ಕೊಟ್ಟಿದ್ದೇನೆ. ವಾರವಾರವೂ ಅದನ್ನು ಅಪ್‍ಡೇಟ್ ಮಾಡುವ ಇರಾದೆ ಸದ್ಯದ್ದು." - July 24, 2007

ಹೇಳಬೇಕೆಂದರೆ, ಓದೋರ್ಗಿಂತ ಕೇಳೋರೆ ಜಾಸ್ತಿ ಜನ ಅವ್ರೆ ಕಣಣ್ಣ.
http://www.youtube.com/profile_videos?user=ravikrishnareddy07&p=v

ಆಮೇಲೆ ಅಲ್ಲಿನೂ ಬಾಳ ಜನ ಕಾಮೆಂಟೂ ಮಾಡ್ತಾರೆ. ಒಂದೊಂದ್ ಸಲ ಚೆನ್ನಾಗಿ ಮಂಗಳಾರತೀನು ಎತ್‍ತಾರೆ. ಅವರ್ಗೇಳ್ತೀವಿ, ಇವರ್ಗೇಳ್ತೀವಿ, ಹುಸಾರ್ ಅಂತಾರೆ.
http://www.youtube.com/profile_videos?user=ravikrishnareddy07&p=d

ಏನೊ ಒಂತರ ಭಯ ಹುಟ್ಗಂಡದೆ ಅಣ್ಣೊ. ಅದ್ರಾಗೆ ನೀನೂ ಹಿಂಗಂದ್ಬುಟ್ಟೆ ಶಾನೇ ಬೇಜಾರಾಗೋಯ್ತು. ತಾವೆ ಹಿಂಗೆಲ್ಲ ಕ್ವೊಸ್ಚನ್ ಮಾಡಿದ್ರೆ ಹೆಂಗೆ ಅಂತೀನಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 23, 2008 - 12:07am — mahesha

ಉ: IT ಗೆ ಬಂತು ಆಪತ್ತು ! ?

mahesha's picture

"ತಾವೆ ಹಿಂಗೆಲ್ಲ ಕ್ವೊಸ್ಚನ್ ಮಾಡಿದ್ರೆ ಹೆಂಗೆ ಅಂತೀನಿ."

ರೆಡ್ಡಿಗಾರು ಬೇಜಾರ್‍ ಬೇಡ್ರೀ... ನಂಗೆ ದಿಟವಾಗಲೂ ಆ ಕುತುಕ ಇತ್ತಂಡಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಗಾಳಿಪಟ
  • ಕನ್ನಡದ ಸತ್ಯನ ಲವ್ವು ತಮಿಳುನಾಡು, ಆಂದ್ರ, ಮಾರಾಶ್ಟ್ರ, ಡೆಲ್ಲಿಯಾಗೆ
  • ಹುಬ್ಬಳ್ಳಿಯ ಕಾರ್ಯಕ್ರಮದಲ್ಲಿ ಪ್ರತಾಪ್ ಸಿಂಹ
  • ಆಶ್ಡೆನ್ ಪ್ರಶಸ್ತಿ
  • ಪತ್ರ ಬರೆಯಲಾ?ಇಲ್ಲ ಚಿತ್ರ ಬಿಡಿಸಲಾ? - ಅರಮನೆ
Syndicate content

ಲೇಖಕರು

ravikreddy's picture

ಪೂರ್ಣ ಹೆಸರು
ರವಿ ಕೃಷ್ಣಾ ರೆಡ್ಡಿ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಪ್ರೌಢಲೇಖನಗಳ ರಹಸ್ಯ
  • ವಿಪಿನಸಂವಾದ
  • ನನ್ನ ಅನುನಾಯಿ
  • ನೆನಪುಗಳು
  • ಕನಸಾ,,,,,,,,,,,,,,,,
  • ಶರಣರ ಬದುಕನ್ನು ಮರಣದಲ್ಲಿ ನೋಡು
  • ಸೇತುವೆ ಇತ್ತಂತೆ ರಾಮನೇ ಒಡದನಂತೆ....!
  • ಗೂಡು...
  • ಮುತ್ತಿನ-ಶೃಂಗಾರ
  • ನಾನಿರುವುದೆ ನಿಮಗಾಗಿ :REMIX
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 11:51pm
  • srinivasps
    ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
    July 24, 2008 - 11:49pm
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:48pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 11:40pm
  • ಗಣೇಶ
    ಉ: ಗೂದೆ ಹಣ್ಣು
    July 24, 2008 - 11:40pm
  • uniquesupri
    ಉ: ಮಾಧ್ಯಮಗಳು ಸ್ವಯಂ ನಿಯಂತ್ರಣ ಅನುಸರಿಸಲಿ
    July 24, 2008 - 11:39pm
  • uniquesupri
    ಉ: ಇದು ಬರಿ ಬೆಳಗಲ್ಲೋ...
    July 24, 2008 - 11:37pm
  • srinivasps
    ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
    July 24, 2008 - 11:12pm
  • srinivasps
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 11:06pm
  • ಗಣೇಶ
    ಉ: ಗೂದೆ ಹಣ್ಣು
    July 24, 2008 - 10:56pm
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 29 ಅತಿಥಿಗಳು ಆನ್ಲೈನ್ ಇರುವರು.


ನದಿ, ಪರ್ವತ, ನೀರು ಹೀಗೆ ಯಾವುದು ನೋಡಲು ಸಿಕ್ಕರೂ (ನಿಸರ್ಗ) ಅದು ಹರಿದರ್ಶನವೆಂದೇ ತಿಳಿಯಬೇಕು

— ಭಾಗವತ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator