ಮಹಾಭಾರತದಲ್ಲಿ ಕರ್ಣ
"ಮಹಾಭಾರತದಲ್ಲಿ ನೆನೆಯುವಿರಾದರೆ ಒಂದೇ ಮನಸ್ಸಿನಿಂದ ಕರ್ಣನನ್ನು ನೆನೆ" ಎಂಬುದಾಗಿಯೂ ಹೇಳುತ್ತಾರೆ. ಆತ ನೀಚ ಕುಲದವ,ನಿರ್ಗತಿಕ ಆದರೂ ಅದ್ವಿತೀಯ ವೀರಾಧಿವೀರ ಮತ್ತು ದಾನಶೂರನು. ಆದರೇನು! ದೈವಬಲವಿದಲ್ಲದವನು. ಹೌದು, ಭೀಷ್ಮನನ್ನು ಬಿಟ್ಟರೆ ಅತಿರಥ ಮಹಾರಥರಲ್ಲಿ ಕರ್ಣನೆ ಪ್ರಪ್ರಥಮ. ದರ್ಯೋಧನ ದುರಳನಾದರೂ ಪಿತಾಮಹ ಭೀಷ್ಮ ಆತ ತಮಗೆ ತಾತ ಅತ್ಯಂತ ಹಿರಿಯನೆಂಬ ಕಾರಣಕ್ಕೂ ಮೊದಲು ಗೌರವಿಸಿ ಆತನಿಗೇ ಸೇನಾಧಿಪತ್ಯಕೊಡುತ್ತಾನೆ. ಕರ್ಣನಿಗೆ ದೈವಬಲ ಇರಲಿಲ್ಲ. ಅದೇ ಕಾರಣಕ್ಕೆ ತಾನು ಅದುವರೆಗೂ ಕಾಣದಿದ್ದ ತಾಯಿಯನ್ನು ಕಂಡಾಗಲೂ ಆ ತಾಯಿಯಿಂದಲೂ ಅವಕೃಪೆಗೊಳಗಾಗುತ್ತಾನೆ. ತಾಯಿ ಕುಂತಿ ಶ್ರೀ ಕೃಷ್ಣನ ಪ್ರೇರಣೆಯಿಂದ ಕರ್ಣನಿಗೆ ತೊಟ್ಟಬಾಣವನ್ನು ತೊಡಬೇಡ( ಯುದ್ಧ ಕಾಲದಲ್ಲಿ ಅದು ಸರ್ಪಾಸ್ತ್ರವಾಗಿ ಅವನನ್ನು ಕೆಣಕುತ್ತದೆ). ಅಷ್ಟು ಸಾಲದೇ ಪಂಚ ಪಾಂಡವರಲ್ಲಿ ಯಾರ ಜೀವವನ್ನೂ ತೆಗೆಯ ಬಾರದು ನೀನು ಎಂದೂ ಕೇಳುತ್ತಾಳೆ. ಆಗ ದುರ್ಯೋಧನನ ಉಪ್ಪು ಉಂಡು ಅವನ ಪ್ರಾಣ ಮಿತ್ರನಾಗಿದ್ದು ಅವನ ಕಡು ವೈರಿ ಅರ್ಜುನನ್ನು ಮಾತ್ರ ಬಿಡಲಾರೆನೆಂದೂ ಕರ್ಣ ಮಾತು ಕೊಡುತ್ತಾನೆ. ಮುಂದೆ ರಣರಂಗದಲ್ಲಿ ಅವನೂ ಭೀಮನೊಡನೆ ಗದಾಯುದ್ಧ ಮಾಡುತ್ತಾನೆ. ಹೋರಾಟದಲ್ಲಿ ಭೀಮ ಅವನತ ಮುಖಿಯಾಗಿಯಾದಾಗ ತನ್ನ ಗದೆ ಎತ್ತಿ ಇನ್ನೇನು ಅವನನ್ನು ಕೊಲ್ಲಬೇಕು, ಆಗ ತಾಯಿ ಕುಂತಿಗೆ ತಾನು ಕೊಟ್ಟ ವಾಗ್ದಾನ ನೆನಪಾಗುತ್ತದೆ. ಅರ್ಜುನನ್ನು ಕೊಲ್ಲಲು ಪ್ರಯತ್ನಿಸಿದಾಗಲು ಅವನ ಸಾರಥಿ ಕೃಷ್ಣನ ಕಪಟವೇ ಮೇಲುಗೈಯಾಗಿ ಬಿಡುತ್ತದೆ. ಹಾಗೆ ಕರ್ಣ ಅಪ್ರತಿಮ ಸಾಮರ್ಥ್ಯವುಳ್ಳವನೂ ವೀರಾಧಿ ವೀರನಾದರೂ ದೈವ ಬಲವಿಲ್ಲದೇನೆ ಗುರುಶಾಪ, ತಾಯಿಯ ಅವಕೃಪೆಯಿಂದ ಕಡೆಗೆ ಮರಣವನ್ನಪ್ಪುತ್ತಾನೆ.

- ritershivaram ರವರ ಬ್ಲಾಗ್
- Login or register to post comments
- 421 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ಉ: ಮಹಾಭಾರತದಲ್ಲಿ ಕರ್ಣ
ಕುವೆ೦ಪುರವರ ಕುಮಾರವ್ಯಾಸನ ಕರ್ಣವನ್ನು ಓದಿ , ಚೆನ್ನಾಗಿ ವಿಮರ್ಷೆ ಮಾಡಿದ್ದಾರೆ.
ಉ: ಮಹಾಭಾರತದಲ್ಲಿ ಕರ್ಣ
ಕುವೆಂಪುರವರ “ಕುಮಾರ ವ್ಯಾಸನ ಕರ್ಣವನ್ನು” ನಾನು ಓದಿಲ್ಲ. ಅನೇಕ ಮಹಾಭಾರತಗಳಿವೆ. ಅವು ಇಂದಿಗೂ ಹೊಸ ಹೊಸ ಬಗೆಗಳಲ್ಲಿ ರೂಪ ತಳೆಯುತ್ತಿವೆ. ಅವುಗಳಿಗೆ ಅನೇಕಾನೇಕ ವಿಮರ್ಶೆಗಳಿವೆ. ಸಮಸ್ತರಿಗೆ ಸಹಸ್ರ ಸಹಸ್ರ ದೃಷ್ಟಿಕೋನಗಳು!!
ಉ: ಮಹಾಭಾರತದಲ್ಲಿ ಕರ್ಣ
ನಾನು ವ್ಯಾಸ ಭಾರತದ ನೇರ ಅನುವಾದಗಳನ್ನು ಹೆಚ್ಚಾಗಿ ಓದಿಲ್ಲ. ಆದರೂ, ನಾರಾಯಣಾಚಾರ್ಯರ ಲೇಖನವೊಂದರಲ್ಲಿ, ಮೂಲ ಭಾರತದಲ್ಲಿ ಕರ್ಣನನ್ನು ಬಹಳ ಒಳ್ಳೆಯವನನ್ನಾಗಿ ಚಿತ್ರಿಸಿಲ್ಲ, ಅನ್ನುವ ನೆನಪು. ನಂತರದ ಕವಿಗಳು ಕರ್ಣನ ಪಾತ್ರಕ್ಕೆ ಹೆಚ್ಚು ಮೇಲ್ಮೆಯನ್ನು ತಂದುಕೊಟ್ಟಿದ್ದಾರೆ.
ಬಹುಶಃ ಭಾಸನ ಪ್ರಯತ್ನ ಈ ದಿಸೆಯಲ್ಲಿ ಮೊದಲಿರಬಹುದು. ಕರ್ಣಭಾರಂ ನ ಕರ್ಣ ಮನಸ್ಸಿನಲ್ಲಿ ನಿಲ್ಲುವ ದುರಂತನಾಯಕ. ಅಂದರೆ, ಮೂಲ ಭಾರತ ಬಂದ ಕೆಲವಾರು ಶತಮಾನಗಳಲ್ಲೇ ಅದರ ಮೇಲೆ ಹೊಸ ಪ್ರಯೋಗಗಳನ್ನು ಮಾಡಲು ಆರಂಭಿಸಿದರು ಎನ್ನಬಹುದು. ಭಾಸ ಸುಮಾರು ಕ್ರಿ.ಪೂ.೨೦೦ ರಿಂದ ಕ್ರಿ.ಶ.೩೦೦ ರ ಒಳಗೆ ಆಗಿಹೋದವನು ( ಈ ನಾಟಕವನ್ನು ಭಾಸನೇ ಬರೆದದ್ದು ನಿಜವಾದರೆ - ಏಕೆಂದರೆ, ಸ್ವಪ್ನನಾಟಕ, ಮತ್ತು ಪ್ರತಿಜ್ಞಾ ನಾಟಕಗಳನ್ನುಳಿದು ಉಳಿದ ನಾಟಕಗಳನ್ನು, ನಂತರದ ಯಾರೋ ನಾಟಕಕಾರ ಬರೆದಿರಬಹುದೆಂಬ ವಾದವೂ ಇದೆ).
ಕನ್ನಡದಲ್ಲಿ ಪಂಪ ಕರ್ಣನನ್ನು ಮೇಲಕ್ಕೇರಿಸಿ, ಕರ್ಣರಸಾಯನಮಲ್ತೆ ಭಾರತಂ ಎಂದಿದ್ದಾನಂತೆ. ಇನ್ನು ಕುಮಾರವ್ಯಾಸ ಅಂತೂ, ಕರ್ಣನನ್ನು ಭಾರೀ ದುರಂತನಾಯಕನನ್ನಾಗೇ ಮಾಡಿದ್ದಾನೆ.
-ಹಂಸಾನಂದಿ
ಉ: ಮಹಾಭಾರತದಲ್ಲಿ ಕರ್ಣ
ಹಂಸಾನಂದಿಯವರೇ, ಧನ್ಯವಾದಗಳು,
“ಮಹಾಭಾರತದಲ್ಲಿ ನೆನೆಯುವಿರಾದರೆ ಒಂದೇ ಮನಸ್ಸಿನಿಂದ ಕರ್ಣನನ್ನು ನೆನೆ” ಎಂಬುದಾಗಿ ಏಕೆ ಹೇಳಿದ್ದಾರೆ? ಎಂದು ಚಿಂತಿಸಿದಾಗ ನನಗೆ ಹೊಳೆಯುತ್ತದೆ- ಒಂದು ಹುಟ್ಟು ತಿಳಿಸುವ ಲೆಕ್ಕಾಚಾರಕ್ಕಿಂತ ಒಂದು ಸಾವು ಹೇಳಿ ಕೊಡುವ ಪಾಠ ದೊಡ್ಡದು. ಮಹಾಭಾರತದ ಒಂದೊಂದೇ ಪಾತ್ರಗಳನ್ನು ಮೊಲಾಧಾರವಾಗಿಟ್ಟುಕೊಂಡು ಪೂರ್ಣವಾಗಿ ಆ ಪುರಾವನ್ನೆ ಬರೆದವರೆಷ್ಟೋ ಮಂದಿ. ಹಾಗೆಯೆ ಕರ್ಣನ ಪಾತ್ರವನ್ನೇ ಪ್ರಧಾನವಾಗಿ ದೃಷ್ಟಿಕೋನದಲ್ಲಿಟ್ಟುಕೊಂಡು ಇಡೀ ಮಹಾಭಾರವನ್ನೇ ನೋಡಿದಾಗ, ಆ ದುರಂತ ನಾಯಕನ ಪಾತ್ರ ಮತ್ತು ಅದೇ ರೀತಿಯ ಅವನ ಮರಣದಿಂದ ನಾವು ಅರಿತುಕೊಳ್ಳವುದು ಬಹಳವಿದೆ ಎನಿಸತ್ತದೆ.
-ರೈಟರ್ ಶಿವರಾಂ