ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › Rohit ರವರ ಬ್ಲಾಗ್

ದೇಸಗತಿ ಭಾಷೆಗಳು (ಕನ್ನಡವೂ ಸೇರಿದಂತೆ ಎಲ್ಲಾ ದೇಸೀ ಭಾಷೆಗಳು)ಗಳ ಬಗೆಗೆ ಬಂಡವಾಳಶಾಹಿಯ ದಾರ್ಷ್ಟ್ಯ ಬಯಲು: ಶ್ರೀಯುತ ಶೇಖರ್‍ಪೂರ್ಣರ ಪ್ರತಿಕ್ರಿಯೆ

December 8, 2006 - 12:15pm — Rohit

ಗೆಳೆಯರೆ,

ದೇಸಗತಿ ಭಾಷೆಗಳು (ಕನ್ನಡವೂ ಸೇರಿದಂತೆ ಎಲ್ಲಾ ದೇಸೀ ಭಾಷೆಗಳು)ಗಳ ಬಗೆಗೆ ಬಂಡವಾಳಶಾಹಿಯ ಧೋರಣೆಗೆ ಮತ್ತೊಂದು ಸ್ಪಷ್ಟ ನಿದರ್ಶನ.
http://thatskannada.oneindia.in/news/2006/12/07/citi_bank.html

ಇದಕ್ಕೆ, 'ಕನ್ನಡಸಾಹಿತ್ಯ.ಕಾಂ'ನ ಸಂಸ್ಥಾಪಕರಾದ ಶ್ರೀಯುತ ಶೇಖರ್‍ಪೂರ್ಣರವರ ಪ್ರತಿಕ್ರಿಯೆ ಇಲ್ಲಿದೆ.

--------------------------ಪ್ರತಿಕ್ರಿಯೆ---------------------------------
ಸ್ನೇಹಿತರೆ,

ಇಂಗ್ಲಿಷ್ ಭಾಷಾ ಒಲವಿನ ಧೋರಣೆ ಪ್ರಾದೇಶಿಕ-ಸ್ಥಳೀಯ ಭಾಷೆಗಳನ್ನು "ನಾನ್-ಫಂಕ್ಷನಲ್" ಮಾಡಲು ಹೊರಟಿವೆ ಎನ್ನುವುದಕ್ಕೆ ಬೇಕಾದಷ್ಟು ಉದಾಹರಣೆಗಳು ದೊರಕುತ್ತವೆ. ಇಂತಹವುಗಳ ವಿರುದ್ಧ ವೈಯಕ್ತಿಕವಾಗಿ ಧ್ವನಿ ಎತ್ತುವುದರಿಂದ ಯಾವುದೇ ಪ್ರಯೋಜನವಂತೂ ಆಗುವುದಿಲ್ಲ- ಅದನ್ನು ಕಿರಿಕಿರಿ ಎಂದೋ, ಗೊಣಗಾಟವೆಂದೋ ಉದಾಸೀನ ಮಾಡಿ ಬಿಡುತ್ತಾರೆ. ದೌರ್ಭಾಗ್ಯದ ಸಂಗತಿ ಎಂದರೆ, ಕನ್ನಡಿಗರೂ ಸಹ "ಇಂಗ್ಲಿಷ್ ಕಾರ್ಯಶೀಲತೆಯನ್ನು" ಒಪ್ಪುವ ಮಟ್ಟಿಗೆ ``ಕನ್ನಡದ ಕಾರ್ಯಶೀಲತೆಯ ಬಗೆಗೆ ಸಂದೇಹಗಳನ್ನು ತೋರಿಸಿಬಿಡುವ ಆತುರಗಾರಿಕೆಯನ್ನು ತೋರಿಸುತ್ತಾ-ಒಮ್ಮೊಮ್ಮೆ ತಮ್ಮ ವಾದವನ್ನು ``ಕನ್ನಡದಿಂದ ಏನೂ ಪ್ರಯೋಜನವಿಲ್ಲ" ಎನ್ನುವ ಮಟ್ಟಕ್ಕೆ ಒಯ್ದುಬಿಡುವುದು. ``ಭಾಷೆಯೊಂದು ಎಲ್ಲ ಕ್ಷೇತ್ರಗಳಲ್ಲಿ ಸ್ವೀಕಾರಾರ್ಹವಾದರೆ'' ಅದಕ್ಕೆ ``ತನ್ನಂತೆ ತಾನೇ ಸಾಂಸ್ಕೃತಿಕ-ಆರ್ಥಿಕವಾದ ಶಕ್ತಿ" ಒದಗಿ ಬಂದು ಬಿಡುತ್ತದೆ. ಇಂತಹ ಶಕ್ತಿ ಕೇವಲ ಸಾಂಘಿಕವಾದ ಚಟುವಟಿಕೆಗಳಿಂದ ಮಾತ್ರ ಸಾಧ್ಯ. ಅದನ್ನು ಒಂದು ಗಂಭೀರವಾದ ವಿಷಯ ಸೂಚಿಯನ್ನಾಗಿ ಮಾಡಿ ಜನರ ಬೆಂಬಲ ಗಳಿಸುವತ್ತ ಚಟುವಟಿಕೆಗಳನ್ನು ರೂಪಿಸಬೇಕು. ಇಲ್ಲದಿದ್ದರೆ ನಮ್ಮೆಲ್ಲ ಬರವಣಿಗೆ, ಚಟುವಟಿಕೆಗಳು ಕೇವಲ ಕೊರಗಾಗಿ ಮಾತ್ರ ಉಳಿಯುತ್ತದೆ.

ಕಲ್ಯಾಣರಾಮನ್ ಎತ್ತಿರುವ ಪ್ರಶ್ನೆ ಕೇವಲ ಸಿಟಿ ಬ್ಯಾಂಕೊಂದಕ್ಕೆ ಮಾತ್ರ ಸೀಮಿತವಾಗುವುದಿಲ್ಲ. ಎಲ್ಲ ಬ್ಯಾಂಕುಗಳಿಗೂ (ಐಸಿಐಐ, ಹಾಂಗ್‌ಕಾಂಗ್ ಬ್ಯಾಂಕ್, ಎಸ್‌ಬಿಐ ಹೀಗೆ ಅನೇಕಾನೇಕ ಬ್ಯಾಂಕುಗಳಿವೆ) ಅನ್ವಯವಾಗುತ್ತದೆ. ಆದುದರಿಂದ ಕನ್ನಡವನ್ನು `ಕಾರ್ಯಶೀಲ ಸಾಧ್ಯತೆಯ (ಫಂಕ್ಷನಲ್) ಭಾಷೆ ಮಾಡಬೇಕಾದ ದೂರದೃಷ್ಟಿಯುಳ್ಳ ಯಾವುದೇ ಸಾಂಘಿಕ ಚಟುವಟಿಕೆಗೆ ಕನ್ನಡಸಾಹಿತ್ಯ.ಕಾಂನ ಬೆಂಬಲವಿದೆ. - ಈ ವಿಷಯವನ್ನು ಕನ್ನಡಸಾಹಿತ್ಯ.ಕಾಂ ಪರವಾಗಿ ಯಾರು ಬೇಕಾದರೂ ಎಲ್ಲಿ ಬೇಕಾದರೂ ಸಾರ್ವಜನಿಕವಾದ ಯಾವುದೇ ವೇದಿಕೆಯಲ್ಲಾದರೂ ಪ್ರಾತಿನಿಧಿಕವಾಗಿ ತಿಳಿಸಬಹುದು.

ಈ ಮೇಲಿನ ಸಂಗತಿಯನ್ನು ಕನ್ನಡಸಾಹಿತ್ಯ.ಕಾಂ ಪರವಾಗಿ ನೀವು ಉಳಿದೆಲ್ಲ ವೇದಿಕೆಗಳಲ್ಲಿ ತಿಳಿಸಿ ಎಂದು ನಿಮ್ಮಲ್ಲಿ ನನ್ನ ಕೋರಿಕೆ.

ಶೇಖರ್‌ಪೂರ್ಣ
ksctanda@gmail.com

~.~
  • Rohit ರವರ ಬ್ಲಾಗ್
  • Login or register to post comments
  • 651 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡಸಾಹಿತ್ಯ.ಕಾಂ ಅಭಿಯಾನಕ್ಕೆ ಮಹತ್ವದ ತಿರುವು - ಚಳಿಗಾಲದ ಅಧಿವೇಶನದಲ್ಲಿ ಚರ್ಚೆಗೆ ಕನ್ನಡಸಾಹಿತ್ಯ.ಕಾಂ ಮನವಿ....?
  • ಕನ್ನಡಸಾಹಿತ್ಯ.ಕಾಂ ಮನವಿಗೆ ಪ್ರೊ|| ಯು ಆರ್‍ ರಾವ್ ರವರಿಂದ ಬೆಂಬಲ
  • ಕನ್ನಡಸಾಹಿತ್ಯ.ಕಾಂ ರಾಷ್ಟ್ರೀಯ ಮಟ್ಟದ ವಿಚಾರಸಂಕಿರಣ - ಪೂರ್ವ‌ಭಾವಿ ಸಿದ್ಧತಾ ಸಭೆ
  • ಕನ್ನಡಸಾಹಿತ್ಯಡಾಟ್‌ಕಾಂ ಮನವಿಯ ಬಗೆಗೆ 'ಉದಯವಾಣಿ'ಯಲ್ಲಿ ಸುಧೀರ್ಘ ಲೇಖನ
  • ಕನ್ನಡಸಾಹಿತ್ಯ.ಕಾಂ ೮ನೇ ವಾರ್ಷಿಕೋತ್ಸವದ ವಿಚಾರಸಂಕಿರಣ
Syndicate content

ಲೇಖಕರು

Rohit's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಕಥೆ ಬರೆದದ್ದು ಹೀಗಿತ್ತು
  • ಶಾಸಕರ ರಾಜೀನಾಮೆ ಮತ್ತು ರಾಜಕೀಯ
  • ಪ್ರೀತಿಸಿರೋ...
  • ತನುಮನ
  • ವೈದ್ಯನಾರಾಯಣಕಥೆ
  • ಹೃದಯದ ಭಾವ
  • ಕನಸ್ಸು
  • ರಂಗಿನ ಚಿಟ್ಟೆ
  • ಚಿರನಿದ್ರೆ
  • ಸೋಲಿನ ಪತ್ತೆಗಾಗಿ ಸಂಶೋಧನೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • aniljoshi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 7, 2008 - 2:33am
  • aniljoshi
    ಉ: ಜಗನ್ನಾಥನ ತಬ್ಬಲಿ ಮಕ್ಕಳು
    July 7, 2008 - 2:22am
  • aniljoshi
    ಉ: ವೈದ್ಯನಾರಾಯಣಕಥೆ
    July 7, 2008 - 12:50am
  • ರೇಖಾ
    ಉ: ರಾಗಿ ಮುದ್ದೆ ಮಿಶಿನ್! (Finger Millet machine)
    July 6, 2008 - 11:43pm
  • ರೇಖಾ
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 6, 2008 - 11:26pm
  • ರೇಖಾ
    ಉ: ಲವ್ ಅಟ್ ಫಸ್ಟ್ ಸೈಟ್ ?
    July 6, 2008 - 11:21pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:16pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:13pm
  • ರೇಖಾ
    ಉ: ಬ್ರಹ್ಮ ಕಮಲ.
    July 6, 2008 - 11:12pm
  • ರೇಖಾ
    ಉ: ಕಣ್ಣು ನೋಡೇ ಗೌರಿ
    July 6, 2008 - 11:07pm
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 20 ಅತಿಥಿಗಳು ಆನ್ಲೈನ್ ಇರುವರು.


ತಣ್ಣನೆ ಮನದಿ೦ ತಣ್ಣಮಾನಸಕೆ
ಮಣ್ಣಿನ ಕ೦ಪಿದು ಹರಡುತಿದೆ
ಬಣ್ಣದ ಮಾತೊಳು ಬ್ರಹ್ಮವನಾತ್ಮಕೆ
ಉಣ್ಣಬಡಿಸಿಯೌತಣಿಸುತಿದೆ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator