ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › Rohit ರವರ ಬ್ಲಾಗ್

ಜ್ಞಾನದೇವ ಮತ್ತು ಆಳಂದಿ

June 12, 2006 - 4:57pm — Rohit

ಪುಣೆಗೆ ಬಂದ ಹೊಸತರಲ್ಲಿ, ಮಾಹಿತಿಗೆಂದು ಪುಣೆಯ ಕುರಿತಾದ ಪ್ರವಾಸಿ ಮಾರ್ಗದರ್ಶಿಕೆಯೊಂದನ್ನು ಕೊಂಡುಕೊಂಡಿದ್ದೆ. ಅದರ ಮೂಲಕ ನನಗೆ ಆಳಂದಿಯ ಬಗ್ಗೆ ಮೊದಲು ತಿಳಿದದ್ದು. ನಂತರ ವಾರಾಂತ್ಯದ ರಜೆಯ ಸಂದರ್ಭಧಲ್ಲಿ ಒಂದು ಶನಿವಾರ ಆಳಂದಿಯನ್ನು ಭೇಟಿಮಾಡುವ ಸದವಕಾಶ ಒದಗಿ ಬಂತು. ಪುಣೆಯ ಈಶಾನ್ಯ ದಿಕ್ಕಿನಲ್ಲಿ , ೨೦ ಕಿಮೀಗಳಷ್ಟು ದೂರದಲ್ಲಿರುವ ಈ ಗ್ರಾಮ ಮಹಾರಾಷ್ಟ್ರದ ಸಾಂಸ್ಕೃತಿಕ ಹಾಗೂ ಧಾರ್ಮಿಕ ಇತಿಹಾಸದಲ್ಲಿ ಒಂದು ಪ್ರಮುಖ ಘಟ್ಟಕ್ಕೆ ಸಾಕ್ಷಿಯಾಗಿದೆ. ಸಹ್ಯಾದ್ರಿಯ ತಪ್ಪಲಿನಲ್ಲಿ ಹರಿಯುವ ಇಂದ್ರಾಯಿಣಿ ನದಿಯ ತಟದಲ್ಲಿದೆ. ಈ ಊರು. ಮರಾಠಿಗರಿಗೆ ಪಂಢರಾಪುರ, ತುಳಜಾಪುರ, ಕೊಲ್ಲಾಪುರ, ನಾಸಿಕದಷ್ಟೇ ಪ್ರಮುಖ ಯಾತ್ರಾಸ್ಥಳ ಈ ಆಳಂದಿ. ಮೊದಲೇ ಹೇಳಿದಂತೆ ಸಹ್ಯಾದ್ರಿ ತಪ್ಪಲಿನ ಕಪ್ಪು ಮಣ್ಣಿನ ಬಯಲಿನ ಆಳಂದಿ, ಮರಾಠೀ ಸಂತ ಕವಿ ಹಾಗೂ ಮರಾಠೀ ಭಾಷೆಯ ಮೊಟ್ಟಮೊದಲ ಪ್ರಮುಖ ಸಾಹಿತ್ಯಕೃತಿಯನ್ನು ರಚಿಸಿದ ಜ್ಞಾನದೇವನ ಸಂಜೀವನ ಸಮಾಧಿಯ ಸ್ಥಳ. ಜ್ಞಾನದೇವ ಹುಟ್ಟಿದ್ದು ೧೩ನೇ ಶತಮಾನದಲ್ಲಿ, ಇಂದಿನ ಅಹಮದ್ ನಗರ ಜಿಲ್ಲೆಯ ಆಪೆಗಾಂವ್ ಎಂಬ ಹಳ್ಳಿಯಲ್ಲಿ. ತಂದೆ ವಿಠಲ ಪಂತ, ಸಂಸಾರ ತೊರೆದು ವೈರಾಗ್ಯವನ್ನರಸಿ ಹೋಗಿದ್ದವರು. ಗುರುಗಳ ಮಾತಿನಂತೆ ಸಂಸಾರಜೀವನಕ್ಕೆ ಮರಳಬೇಕಾಯಿತು. ಆಗ ಸಮಾಜದಿಂದ ತಿರಸ್ಕಾರವನ್ನನುಭವಿಸಿದ ಅವರು ತಮ್ಮ ಮಡದಿ ರುಕ್ಮಿಣಿಬಾಯಿಯೊಡನೆ ಗಂಗಾನದಿಯಲ್ಲಿ ಮುಳುಗಿ ಪ್ರಾಣತ್ಯಾಗ ಮಾಡಿದರು. ಇಷ್ಟಾಗಿಯೂ ಅವರ ನಾಲ್ಕೂ ಮಕ್ಕಳ ಬಗ್ಗೆ ಸಮಾಜದ ತಿರಸ್ಕಾರ ಮುಂದುವರಿಯಿತು. ನೊಂದ ಜ್ಞಾನದೇವ ಸಾತ್ವಿಕ ತತ್ವಗಳನ್ನು ಆಲಿಂಗಿಸಿ ಸಂತನಂತೆ ಬಾಳತೊಡಗಿದ. ತನ್ನ ಕಿರು ಜೀವಿತಾವಧಿಯಲ್ಲೇ (ಆತ ತನ್ನ ೨೧ನೆಯ ವಯಸ್ಸಿನಲ್ಲೇ ಸಂಜೀವನ ಸಮಾಧಿ ಹೊಂದಿದ) ಅತ್ಯಂತ ಮಹತ್ವಪೂರ್ಣ ಕೊಡುಗೆಯನ್ನು ಮರಾಠೀ ಸಾಹಿತ್ಯಕ್ಕೆ ನೀಡಿದ್ದಾನೆ. 'ಜ್ಞಾನೇಶ್ವರಿ' ಎಂದೇ ಪ್ರಸಿದ್ಧವಾಗಿರುವ ಭಾವಾರ್ಥದೀಪಿಕೆಯೆಂದ ಭಗವದ್ಗೀತೆಯ ಬಗೆಗಿನ ಟೀಕೆ ಅವನ ಮಹತ್ವದ ಕೃತಿ. ಈ ಕೃತಿ, ಮೇಲೆ ಹೇಳಿದಂತೆ ಮರಾಠೀ ಭಾಷೆಯ ಮೊಟ್ಟಮೊದಲ ಮಹತ್ವದ ಕೃತಿ. ಅಲ್ಲದೆ, ತನ್ನ ವಿಚಾರತತ್ವ, 'ಚಿದ್ವಿಲಾಸವಾದ'ದ ಬಗ್ಗೆ ಅಮೃತಾನುಭವ ಎನ್ನುವ ಕೃತಿಯನ್ನೂ ರಚಿಸಿದ್ದಾನೆ. ಅಲ್ಲದೆ ಹಲವಾರು ಅಭಂಗಗಳನ್ನು ಕೊಡುಗೆಯಾಗಿ ನೀಡಿದ್ದಾನೆ. ಮಹಾರಾಷ್ಟ್ರದ ಸಂತ ಪರಂಪರೆಯ ಮೊದಲಿಗನೆಂದೇ ಇವನನ್ನು ಗುರುತಿಸಬಹುದಾಗಿದೆ. ಈತನ ಹಿರಿಯಣ್ಣ, ನಿವೃತ್ತಿನಾಥನು ನಾಥ ಸಂಪ್ರದಾಯದ ಪ್ರಮುಖ ಪ್ರವರ್ತಕನು. ತಪತಿ ತೀರಕ್ಕೆ ಹೋಗಿದ್ದಾಗ ಪ್ರವಾಹದಲ್ಲಿ ತಂಗಿ ಮುಕ್ತಾಯಿ ತೀರಿಕೊಂಡ ನಂತರ ಈತ ತ್ಯ್ರಂಬಕೇಶ್ವರದಲ್ಲಿ ಸಮಾಧಿ ಹೊಂದಿದನು. ತಮ್ಮ ಸೋಪಾನದೇವನು ಪುಣೆಯ ಬಳಿ ಸಸ್ವಾಡ ಎಂಬಲ್ಲಿ ಸಮಾಧಿ ಹೊಂದಿದನು. ಜ್ಞಾನದೇವನು ಮಾಡಿದನೆನ್ನಲಾದ ಹಲವಾರು ಪವಾಡಗಳು ಇಂದಿಗೂ ಜನಮಾನಸದಲ್ಲಿ ಪ್ರಚಲಿತವಾಗಿವೆ. ಆಧ್ಯಾತ್ಮಿಕತೆಯ ಪಾರಮ್ಯ, ಸಂಜೀವನ ಸಮಾಧಿಯನ್ನು ಹೊಂದಿದಾಗ ಆತನಿಗೆ ವಯಸ್ಸು ೨೧ ವರ್ಷಗಳಾಗಿತ್ತಷ್ಟೇ! ಇಂದಿನವರೆಗೂ ಮಹಾರಾಷ್ಟ್ರದ ಸಾಂಸ್ಕೃತಿಕ ಹಾಗೂ ಧಾರ್ಮಿಕ ಜೀವನದಲ್ಲಿ ಮಹತ್ವವನ್ನು ಪಡೆದಿರುವ "ಭಾಗವತಧರ್ಮ" ಹಾಗೂ "ವಾರಕರೀ" ಪಂಥಗಳ ಆದ್ಯ ಪ್ರತಿಪಾದಕನೂ ಜ್ಞಾನದೇವನೇ.(ಸಂತ ನಾಮದೇವನೂ ಇದೇ ಕಾಲಾವಧಿಯಲ್ಲಿ ಜೀವಿಸಿದ್ದ ಮತ್ತೊಬ್ಬ ವಾರಕರೀ ಸಂಪ್ರದಾಯದ ಪ್ರತಿಪಾದಕ). ಮರಾಠೀ ಭಾಷೆಯಲ್ಲಿ ವಾರಿ ಎಂದರೆ ತೀರ್ಥಯಾತ್ರೆ ಎಂದರ್ಥ. ವಾರಕರೀ ಎಂದರೆ ತೀರ್ಥಯಾತ್ರಿ ಎಂದು. ಪ್ರತಿ ವರ್ಷ ಆಳಂದಿಯಿಂದ ಆಷಾಢಮಾಸದಲ್ಲಿ ಪಂಢರಾಪುರಕ್ಕೆ ಜ್ಞಾನೇಶ್ವರ ಮಹಾರಾಜರ 'ಪಾಲಖೀ' ಹೊರಡುತ್ತದೆ. ಪುಣೆಯಲ್ಲಿ ಇದು ದೇಹುವಿನಿಂದ ಬರುವ 'ಸಂತ ತುಕಾರಾಂ' ಪಾಲಖೀಯನ್ನು ಸಂಧಿಸುತ್ತದೆ. ನಂತರ ಎರಡೂ ಪಲ್ಲಕ್ಕಿಗಳು ಬೇರೆ ಬೇರೆ ಮಾರ್ಗಗಳಲ್ಲಿ ಪಯಣಿಸಿ ಆಷಾಢ ಮಾಸದ ಮೊದಲ ಏಕಾದಶಿ* ಹೊತ್ತಿಗೆ ಪಂಢರಾಪುರವನ್ನು ಸೇರುತ್ತವೆ. ಆಷಾಢ ಮಾಸದ ಮೊದಲ ಏಕಾದಶಿ*ಯ ದಿನ ವಿಠಲನ ಆಸ್ಥಾನದಲ್ಲಿ ಮಹಾಉತ್ಸವ. ಇಂದಿಗೂ ಮಹಾರಾಷ್ಟ್ರದ ಮಹತ್ವದ ಸಾಂಸ್ಕೃತಿಕ ಧಾರ್ಮಿಕ ಸಂಪತ್ತು ಎಂದರೆ ಈ ಸಂತ ಪರಂಪರೆ. ಸಂತರ ಭೂಮಿ, ವೀರರ ಭೂಮಿ ಎಂದು ಮಹಾರಾಷ್ಟ್ರವನ್ನು ಸಂಭೋಧಿಸುವುದು ಅದಕ್ಕೇ. ಕೇಸರಿ ಬಾವುಟ ಹಿಡಿದು, ಸಣ್ಣ ಜೋಳಿಗೆ ಹೆಗಲಿಗೆ ನೇತುಹಾಕಿಕೊಂಡ, ಬಿಳಿಯ ಟೊಪ್ಪಿಧಾರಿ ವಾರಕಾರೀಗಳನ್ನು ಮಹಾರಾಷ್ಟ್ರದ ನಗರ-ಪಟ್ಟಣ-ಹಳ್ಳಿಗಳಲ್ಲಿ ಬಹಳ ಸಾಮಾನ್ಯವಾಗಿ ಕಾಣಬಹುದು. ಮರಾಠಿ ನೆಲದ ಹೃದಯದಂತಿರುವ ಪುಣೆಯ ಸುತ್ತಲಿನ ಯಾವುದೇ ವ್ಯಾಪರೀ ಸಂಸ್ಥೆ, ಹೊಟೆಲು, ಸರಕಾರೀ ದಫ್ತರಗಳಲ್ಲಿ, ಬಸ್ಸುಗಳಲ್ಲಿ ಈ ಸಂತರ ಪಟಗಳು ರಾರಾಜಿಸುತ್ತವೆ. ಕೊನೆಯದಾಗಿ, ಮರಾಠೀ ನೆಲದ ಈ ಸಂತ ಕವಿಯ ಜ್ಞಾನೇಶ್ವರಿಯಲ್ಲಿ ಅನೇಕ ಕನ್ನಡ ಶಬ್ದಗಳು ನುಸುಳಿವೆ. ಅಲ್ಲದೆ ಜ್ಞಾನೇಶ್ವರಿಯ ಮರಾಠೀ ಭಾಷೆಯು ಸಾಕಷ್ಟು ಕನ್ನಡದ ಪ್ರಭಾವವನ್ನು ಹೊಂದಿದೆ. ಇದಕ್ಕೆ ಕಾರಣ ಆ ಕಾಲದಲ್ಲಿ ಮಹಾರಾಷ್ಟ್ರದ ಆಡಳಿತಗಾರರಾದ ದೇವಗಿರಿಯ ಯಾದವರು ಕನ್ನಡಿಗರಾಗಿದ್ದುದು. ಅಲ್ಲದ, ಮುಸ್ಲಿಮರ ಆಗಮಕ್ಕೆ ಮೊದಲು ಮಹಾರಾಷ್ಟ್ರವನ್ನು ಆಳಿದವರೆಲ್ಲ ನಮ್ಮ ಕನ್ನಡ ರಾಜರುಗಳೇ.....ಹಾಗಾಗಿಯೇ ಇಂದಿಗೂ ಮರಾಠೀ ಭಾಷೆಯಲ್ಲಿ ಕನ್ನಡದ ಪ್ರಭಾವ ಢಾಳಾಗಿ ಎದ್ದು ಕಾಣುತ್ತದೆ.
*ಭೀಮನ ಅಮಾವಾಸ್ಯೆ ಎಂದು ತಪ್ಪಾಗಿ ಬರೆದಿದ್ದೆ. ತಪ್ಪನ್ನು ಗಮನಿಸಿ ಸರಿಪಡಿಸಿದ ಗೆಳತಿ ಕೌಮುದಿಕಿಯವರಿಗೆ ನನ್ನ ಧನ್ಯವಾದಗಳು.

~.~
  • Rohit ರವರ ಬ್ಲಾಗ್
  • Login or register to post comments
  • 1514 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 12, 2006 - 10:53pm — ahoratra

ಮಹರಾಷ್ಟ್ರದಲ್ಲಿ ಜ್ಞಾನದೇವ ಅಂದರೆ ಭಕ್ತಿಭಾವಪರವಶರಾಗುತ್ತಾರೆ ಜನ.

ahoratra's picture

ರೋಹಿತರೆ,

ಒಳ್ಳೆ ಲೇಖನಿ ಹೊಂದಿದ್ದೀರಿ ನೀವು, ಖುಷಿಯಾಯಿತು. ಓದಬೇಕೆನ್ನಿಸುವ ಭಾಷೆ. ಮತ್ತೂ ಬರೆಯಿರಿ ಸಂಪದವ ಬೆಳೆಸಿರಿ.

ಅಹೋರಾತ್ರ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 13, 2006 - 7:05pm — koumodiki

tiddupadi

koumodiki's picture

Rohit, ondu tiddupadi, warkari ashada masada modala ekadashi andu pandarpur seruttare bheemana amavasyege alla.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 14, 2006 - 10:01am — Rohit

ಧನ್ಯವಾದಗಳು

Rohit's picture

ಧನ್ಯವಾದಗಳು ಕೌಮುದಿಕಿಯವರೆ....ತಪ್ಪನ್ನು ಸರಿಪಡಿಸಿದ್ದೇನೆ.

ಮೆಚ್ಚಿಗೆಯ ಮಾತುಗಳಿಗೆ ಧನ್ಯವಾದಗಳು ಅಹೋರಾತ್ರ ಅವರೆ.

ರೋಹಿತ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮರಾಠೀ ಮತ್ತು ಕನ್ನಡದ ಸಂಬಂಧ - ಅಂತರ್ಜಾಲದ ಸತ್ಯ ಇತ್ಯಾದಿ
  • ಎಂಥ ನಾಡಿದು ಎಂಥ ಕಾಡಾಯಿತೋ
  • ಉತ್ತರ ಕರ್ನಾಟಕದಲ್ಲಿ ಕನ್ನಡದ ಕಥೆ -೩
  • ಉತ್ತರಕರ್ನಾಟಕದಲ್ಲಿ ಕನ್ನಡದ ಕಥೆ -೧
  • ಇಂದೇ ನೋಡಲು ಮರೆಯದಿರಿ ಈ ಲಿಂಕನ್ನು
Syndicate content

ಲೇಖಕರು

Rohit's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಚುಕ್ಕಿಗಳಂತ ಹಲ್ಲು
  • ಹಗಲು-ಇರುಳು
  • ನಿನ್ನ ಪೂಜೆಗೆ ಬಂದ ಮಹದೇಸ್ವರಾ
  • ನುಡಿ ಚಿತ್ರ ಬರೆಯಲು ಕಲಿತಿದ್ದು
  • ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
  • ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೧)
  • ನೆನೆವುದೆನ್ನ ಮನ ಕರ್ನಾಟಕ ದೇಶವಮ್
  • ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
  • ನೀಲಿ ಹಲ್ಲು ಇರುವ ಜಂಗಮ ದೂರವಾಣಿ ಯಂತ್ರ
  • ಮೊಬೈಲ್ ಕಥೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ನೀತಾ
    ಉ: Abroad ಅನ್ನೋ ಮಾಯೆ...
    July 9, 2008 - 6:21pm
  • Deeparavishankar
    ಉ: ಬೈಟೊ ಕಾಫಿ !!! - ೧
    July 9, 2008 - 6:10pm
  • ಸಂಗನಗೌಡ
    ಉ: ಅಬ್ಬಾ!
    July 9, 2008 - 6:01pm
  • yuvapremi
    ಉ: ವರದಕ್ಷಿಣೆ;/ಪ್ರದಕ್ಷಿಣೆ;
    July 9, 2008 - 5:55pm
  • ನೀತಾ
    ಉ: Abroad ಅನ್ನೋ ಮಾಯೆ...
    July 9, 2008 - 5:53pm
  • yuvapremi
    ಉ: ಮುಕ್ತ...ಮುಕ್ತ...ಸಾಹಿತ್ಯ ಬೇಕು...
    July 9, 2008 - 5:46pm
  • veena
    ಉ: ಸುಮ್ನೆ 1 ಮದ್ವೆ ಬ್ಲಾಗು :)
    July 9, 2008 - 5:41pm
  • girish.rajanal
    ಉ: ಹಣ "investment"
    July 9, 2008 - 5:03pm
  • cmariejoseph
    ಉ: ಕನ್ನಡ ರಸಪ್ರಶ್ನೆ:೯
    July 9, 2008 - 4:50pm
  • cmariejoseph
    ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
    July 9, 2008 - 4:47pm
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 34 ಅತಿಥಿಗಳು ಆನ್ಲೈನ್ ಇರುವರು.


ಕೋಪವೆಂಬುದು ಮೂರ್ಖತನದಲ್ಲಿ ಆರಂಭಗೊಂಡು ಪಶ್ಚಾತ್ತಾಪದಲ್ಲಿ ಅಂತ್ಯಗೊಳ್ಳುತ್ತದೆ

— ಪ್ರಚಲಿತ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator